ಟೆಕ್ ಟಾನಿಕ್: ಫೋನ್ ಸ್ಕ್ರೀನ್‌ನಿಂದ ಕಣ್ಣು ರಕ್ಷಣೆ

ಸ್ಮಾರ್ಟ್ ಫೋನ್ ಬಂದಾಗಿನಿಂದ ಕನ್ನಡಕಧಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ಬಹುಶಃ ಎಲ್ಲರ ಗಮನಕ್ಕೆ ಬಂದಿರಬಹುದು. ಮಕ್ಕಳು ಸಣ್ಣ ವಯಸ್ಸಿನಲ್ಲೇ ಅವಿರತವಾಗಿ ಗೇಮ್ಸ್ ಆಡುತ್ತಾ ಫೋನ್ ಸ್ಕ್ರೀನ್‌ನ ಬೆಳಕಿಗೆ ಕಣ್ಣನ್ನು ಹೆಚ್ಚು ಹೊತ್ತು ಒಡ್ಡುವುದರಿಂದ ಕಣ್ಣಿಗೆ ಹಾನಿಯಾಗುವುದು ಸಾಕಷ್ಟು ಸಂಶೋಧನೆಗಳಿಂದ ದೃಢಪಟ್ಟಿದೆ. ಇದಕ್ಕೆ ಕಾರಣ, ಸ್ಕ್ರೀನ್‌ನಿಂದ ಹೊರ ಸೂಸುವ ಬ್ಲೂ ರೇ ಅಥವಾ ನೀಲ ಕಿರಣಗಳು. ಕಣ್ಣುಗಳಿಗೆ ಒಂದಿಷ್ಟಾದರೂ ರಕ್ಷಣೆ ನೀಡಲೆಂದು ಹೆಚ್ಚಿನ ಫೋನ್ ತಯಾರಿಕಾ ಕಂಪನಿಗಳು ಈಗ ವ್ಯವಸ್ಥೆ ಮಾಡಿಕೊಂಡಿವೆ. ಅದನ್ನು ಬಳಸಿಕೊಳ್ಳಿ. ಫೋನ್‌ನ ಸೆಟ್ಟಿಂಗ್ಸ್ ಮೆನುವಿನಲ್ಲಿ…

Rate this:

Google Lens: ಟೈಪಿಂಗ್ ಬೇಡ; ಮೊಬೈಲ್ ಕ್ಯಾಮೆರಾ ತೋರಿಸಿ, ಮಾಹಿತಿ ತಿಳಿಯಿರಿ!

ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ – ಎಐ) ಎಂಬುದು ಮನುಷ್ಯನಿಗೆ ಸವಾಲೊಡ್ಡುತ್ತಲೇ ಇದೆ. ತಂತ್ರಜ್ಞಾನದ ಪರಾಕಾಷ್ಠೆಯಿದು. ಒಂದು ಯಂತ್ರಕ್ಕೆ ನಾವು ಎಲ್ಲವನ್ನೂ ಒಮ್ಮೆ ಕಲಿಸಿಬಿಟ್ಟರೆ ಸಾಕು, ಅದು ಹೆಚ್ಚಿನದನ್ನು ಕಲಿತುಕೊಂಡು ನಮ್ಮನ್ನೇ ಮೂಲೆಗುಂಪು ಮಾಡಬಲ್ಲಷ್ಟು ಸಾಮರ್ಥ್ಯ ಹೊಂದಿರುತ್ತದೆ. ತಂತ್ರಜ್ಞಾನದ ಅಪಾಯವೇ ಇದು. ಅತಿಯಾದ ಅವಲಂಬನೆ ಆಗಿಬಿಟ್ಟರೆ, ಮನುಷ್ಯನಿಗೆ ಮಾತ್ರವೇ ಇರುವ ಅತ್ಯಂತ ಅಪೂರ್ವ ಬುದ್ಧಿಮತ್ತೆಯ ಪ್ರಗತಿ ಕುಂಠಿತವಾಗಬಹುದು. ಉದಾಹರಣೆಗೆ, ಯಾವುದಾದರೂ ಸ್ಪೆಲ್ಲಿಂಗ್ ಗೊತ್ತಿಲ್ಲವೋ ಅಥವಾ ನಾಲ್ಕೈದ್ಲಿ ಎಷ್ಟೆಂಬ ಮಗ್ಗಿ ಗೊತ್ತಿಲ್ಲವೋ? ಗೂಗಲ್‌ನಲ್ಲಿ ಹಾಕಿಬಿಟ್ಟರೆ ತಕ್ಷಣ ಉತ್ತರ ಸಿಗುತ್ತದೆ.…

Rate this:

ನಿನ್ನನ್ನು ಮರೆಯುವ ಬಗೆ ಎಂತು…

ಹೌದು, ಈಗೀಗ ನಿನ್ನನ್ನು ಮರೆತೇ ಬಿಟ್ಟಿದ್ದೇನೆ. ಕಾರಣ, ಮನಸ್ಸು ಗಟ್ಟಿ ಮಾಡಿಕೊಂಡಿದ್ದೇನೆ. ನನ್ನ ಬದುಕಿನ ಅಮೂಲ್ಯ ಸಮಯವನ್ನು ನಿನಗಾಗಿ ವ್ಯಯಿಸಿದೆ, ನೀನಿಲ್ಲದೆ ನನಗೇನಿದೆ ಅಂತ ಪರಿತಪಿಸಿದೆ… ಫಲ ಸಿಕ್ಕಿತೇ? ಊಹೂಂ, ವ್ಯರ್ಥವಾಗಿ ನನ್ನೆಲ್ಲ ಬದುಕಿನ ಅಮೂಲ್ಯ ಕ್ಷಣಗಳನ್ನು ಕಳೆದೆನಲ್ಲಾ ಎಂಬ ಕೊರಗು ನನ್ನನ್ನು ಈಗಲೂ ಕಾಡುತ್ತಿದೆ. ನೀನಂತೂ ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ತೃಣಸಮಾನದಷ್ಟು ಗೋಜಿಗೂ ಹೋಗಲಿಲ್ಲ. ನಿನ್ನ ಒಡನಾಟ ಶುರುವಾದಾಗಿನಿಂದ ನನಗಂತೂ ನಿನ್ನದೇ ಧ್ಯಾನ. ಮನೆಯಲ್ಲಿ ಸ್ನಾನಕ್ಕೆ ಹೋದಾಗಲೂ, ತಿಂಡಿ ತಿನ್ನುತ್ತಿರುವಾಗಲೂ ನಿನ್ನದೇ ನೆನಪು. ನಿನ್ನೊಡನೆ…

Rate this:

ಆಧಾರ್‌ಗೆ ಮೊಬೈಲ್, ಪ್ಯಾನ್ ಕಾರ್ಡ್ ಲಿಂಕ್: OTP ಕೊಟ್ಟು ಮೋಸ ಹೋಗದಿರಿ

ಜನಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ (ವಿಜಯ ಕರ್ನಾಟಕ ಅಂಕಣ): 06 ಜೂನ್ 2017 ಅವಿನಾಶ್ ಬಿ. ಆಧಾರ್ ಕಾರ್ಡ್ ಎಂಬುದು ನಮ್ಮ ಜೀವನದಲ್ಲಿ ಎಷ್ಟು ಹಾಸುಹೊಕ್ಕಾಗಿದೆ ಎಂದರೆ, ಇದು ಕೇವಲ ನಮ್ಮ ಗುರುತನ್ನು ತಿಳಿಯಪಡಿಸುವ ಕಾರ್ಡ್ ಆಗಿ ಮಾತ್ರವೇ ಉಳಿದಿಲ್ಲ. ಜತೆಗೆ, ಸರಕಾರಿ ಸೇವಾ ಸೌಲಭ್ಯಗಳನ್ನು ಪಡೆಯುವುದು, ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವುದು, ಬ್ಯಾಂಕ್ ಖಾತೆ, ಪಾಸ್‌ಪೋರ್ಟ್… ಹೀಗೆ ಎಲ್ಲ ದಾಖಲೆಗಳಿಗೂ ಮೂಲಾಧಾರವಾಗುತ್ತಿದೆ. ಈಗಂತೂ ಹೊಸದಾಗಿ ಸಿಮ್ ಕಾರ್ಡ್ ಖರೀದಿಸಲು ಇದು ಬೇಕೇ ಬೇಕು. ದೊಡ್ಡ ಮೌಲ್ಯದ ಹಳೆಯ…

Rate this:

ಆ್ಯಪ್ ಜತೆಗೆ ಒಂದು ದಿನ

ಕಾಮಿಸಿದ್ದನ್ನು ನೀಡುವ ಕಾಮಧೇನುವಾಗಿ, ಕಲ್ಪಿಸಿದ್ದನ್ನು ಧುತ್ತನೇ ಮುಂದಿಡುವ ಕಲ್ಪವೃಕ್ಷವಾಗಿ, ಚಿಂತಿಸಿದ್ದನ್ನು ಕೊಡುವ ಚಿಂತಾಮಣಿಯಾಗಿ ಅಭೀಪ್ಸಿತಾರ್ಥ ಸಿದ್ಧಿದಾಯಕವಾಗಿ, ಮನೋವೇಗದಿಂದ ಕೆಲಸ ಈಡೇರಿಸಬಲ್ಲ ಸಾಮರ್ಥ್ಯ ತಂತ್ರಜ್ಞಾನಕ್ಕಿದೆ. ಆ್ಯಪ್ ಅಂತ ಸ್ವೀಟಾಗಿ, ಕ್ಯೂಟಾಗಿ ಎಲ್ಲರ ನಾಲಿಗೆಯಲ್ಲಿ ಕುಣಿದಾಡುತ್ತಿರುವ ಈ ಅಪ್ಲಿಕೇಶನ್‌ಗಳೆಂಬ ಭ್ರಾಮಕ ಜಗತ್ತಿನಲ್ಲಿ ಏನಿದೆ, ಏನಿಲ್ಲ? ನಮ್ಮೊಂದು ದಿನದ ಬದುಕಿನ ಬಹುತೇಕ ಎಲ್ಲ ಕ್ಷಣಗಳನ್ನೂ ಈ ಆ್ಯಪ್‌ಗಳೇ ನಿಭಾಯಿಸಬಹುದು. ನಾವು ನೀವು ಸಾಮಾನ್ಯವಾಗಿ ಬಳಸುವ ಫೇಸ್‌ಬುಕ್, ವಾಟ್ಸಾಪ್, ಹ್ಯಾಂಗೌಟ್ಸ್ ಮುಂತಾದವನ್ನು ಹೊರಗಿಟ್ಟು ಇನ್ನೂ ಕೆಲವು ಆ್ಯಪ್‌ಗಳು ನಮ್ಮನ್ನು ಹೇಗೆ ಮುನ್ನಡೆಸುತ್ತವೆ? ಹೀಗೆ…

Rate this:

ಸ್ಮಾರ್ಟ್‌ಫೋನ್ ಕಳೆದುಹೋದಾಗ ಇದನ್ನೂ ಪ್ರಯತ್ನಿಸಿ ನೋಡಿ…

ನಾವು ಅಷ್ಟು ಆಸ್ಥೆಯಿಂದ, ನಮ್ಮೆಲ್ಲಾ ಬೇಕು ಬೇಡಗಳನ್ನು ತುಂಬಿಸಿದ್ದ ಸ್ಮಾರ್ಟ್‌ಫೋನ್ ಕಳೆದು ಹೋದರೆ ಆಗುವ ಚಡಪಡಿಕೆ ಯಾರಲ್ಲೂ ಹೇಳಿಕೊಳ್ಳಲಾಗದು. ಅಷ್ಟೊಂದು ಅಮೂಲ್ಯ ಮಾಹಿತಿಗಳನ್ನು ನಾವು ಅದಕ್ಕೆ ಊಡಿಸಿಬಿಟ್ಟಿರುತ್ತೇವೆ. ಎಲ್ಲ ಲಾಗಿನ್‌ಗಳು, ಪಾಸ್‌ವರ್ಡ್‌ಗಳು, ಕ್ರೆಡಿಟ್-ಡೆಬಿಟ್ ಕಾರ್ಡ್ ವಿವರಗಳು ಎಲ್ಲವೂ ಅದರಲ್ಲಿ ಶೇಖರವಾಗಿರುವಾಗ ಹೃದಯವೇ ಬಾಯಿಗೆ ಬಂದಂತಾಗುತ್ತದೆ. ಹೊಸದಾಗಿ ಫೋನ್ ಕೊಂಡುಕೊಂಡರಂತೂ ಎಲ್ಲೋ ಮರೆತು ಬಿಟ್ಟು ಬಂದಾಗ ಆಗುವ ಯಾತನೆ ಹೇಳತೀರದು. ನಮ್ಮ ಕಣ್ಣ ದೃಷ್ಟಿಯಿಂದ ಮರೆಯಾದ ಫೋನನ್ನು ಹುಡುಕುವುದು ಹೇಗೆ ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆ. ಫೋನ್‌ನ ಐಎಂಐಇ…

Rate this:

ಮೊಬೈಲ್ ಒನ್‌ನಲ್ಲಿ ಏನಿದೆ, ಹೇಗಿದೆ: ಕ್ವಿಕ್ ರಿಯಾಲಿಟಿ ಚೆಕ್

ಅವಿನಾಶ್ ಬಿ.ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಮೊಬೈಲ್-ಒನ್ ಅಪ್ಲಿಕೇಶನ್ ಒಂದೇ ಮಾತಿನಲ್ಲಿ ಹೇಳುವುದಾದರೆ, ‘ಆ್ಯಪ್‌ಗಳ ಗುಚ್ಛ’. ಹಲವಾರು ಆ್ಯಪ್‌ಗಳ ಬದಲು ಇದೊಂದನ್ನೇ ಡೌನ್‌ಲೋಡ್ ಮಾಡಿಕೊಂಡರೆ, ಹಲವು ಸೇವೆಗಳಿಗೆ ಇಲ್ಲಿಂದಲೇ ಪ್ರವೇಶ ಪಡೆಯಬಹುದು. ಜನಸಾಮಾನ್ಯರ ಕೈಯಲ್ಲಿರಬಹುದಾದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‍‌ಗೆ ಹೋಗಿ Karnataka Mobileone ಅಂತ ಟೈಪ್ ಮಾಡಿ ಸರ್ಚ್ ಮಾಡಿದಾಗ ಈ ಆ್ಯಪ್ ಲಭ್ಯವಾಗುತ್ತದೆ. Mobile ಮತ್ತು one ಮಧ್ಯೆ ಸ್ಪೇಸ್ ಇರಬಾರದು. ಸ್ಪೇಸ್ ನೀಡದಿದ್ದರೆ, ಕರ್ನಾಟಕ ಸರಕಾರದ ಲಾಂಛನವಿರುವ ಬೇರೊಂದು ಆ್ಯಪ್ ಕಾಣಿಸಿಕೊಳ್ಳುತ್ತದೆ. ಸುಮಾರು…

Rate this:

ನಿಮ್ಮ ಫೋನ್ ಲಾಲಿಪಾಪ್‌ಗೆ ಅಪ್‌ಗ್ರೇಡ್ ಆಯಿತೇ? ಇದನ್ನು ತಿಳಿದುಕೊಳ್ಳಿ

ಅವಿನಾಶ್ ಬಿ.ಆಂಡ್ರಾಯ್ಡ್ ಫೋನುಗಳ ಕಾರ್ಯಾಚರಣಾ ವ್ಯವಸ್ಥೆಯ (ಒಎಸ್) ತಾಜಾ ಆವೃತ್ತಿ 5.0 ಅಂದರೆ ಲಾಲಿಪಾಪ್‌ಗೆ ಅಪ್‌ಗ್ರೇಡ್ ಆಗಲು ಹಲವರು ಕಾಯುತ್ತಿದ್ದಾರೆ. ಗೂಗಲ್ ನೆಕ್ಸಸ್ ಸರಣಿಯ ಸಾಧನಗಳ ಬಳಿಕ, ಮೋಟೋರೋಲ ಹಾಗೂ ಉಳಿದ (ಸ್ಯಾಮ್ಸಂಗ್, ಹೆಚ್‌ಟಿಸಿ, ಎಲ್‌ಜಿ, ಸೋನಿ ಇತ್ಯಾದಿ) ಬ್ರ್ಯಾಂಡ್‌ಗಳ ಕಿಟ್‌ಕ್ಯಾಟ್ ಸಾಧನಗಳಿಗೆ ಇದು ಅಪ್‌ಗ್ರೇಡ್ ಆಗಲಿದೆ. ಈಗಾಗಲೇ ಅಪ್‌ಗ್ರೇಡ್ ಆಗಿರುವ ಕೆಲವೇ ಸಾಧನಗಳಲ್ಲಿ ನೆಕ್ಸಸ್ 7 ಟ್ಯಾಬ್ಲೆಟ್ ಒಂದಾಗಿದ್ದು, ನಾನೂ ಅಪ್‌ಗ್ರೇಡ್ ಮಾಡಿಕೊಂಡಿದ್ದೇನೆ. ತಟ್ಟನೇ ಗೋಚರವಾದ ಕೆಲವೊಂದು ವೈಶಿಷ್ಟ್ಯಗಳು ಹಾಗೂ ಬದಲಾಯಿಸಿಕೊಳ್ಳಬಹುದಾದ ಸೆಟ್ಟಿಂಗ್ ಬಗ್ಗೆ ಇಲ್ಲಿ…

Rate this:

ಸ್ಮಾರ್ಟ್‌ಫೋನ್ ಸ್ಕ್ರೀನ್ ಕ್ಲೀನ್ ಆಗಿರಿಸಿಕೊಳ್ಳಿ…

ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ 92- ಸೆಪ್ಟೆಂಬರ್ 8, 2014ಟಚ್ ಸ್ಕ್ರೀನ್ ಇರುವ ಸ್ಮಾರ್ಟ್‌ಫೋನ್‌ಗಳು ಈಗ ಕಡಿಮೆ ದರದಲ್ಲಿ ಕೈಗೆಟಕುತ್ತಿವೆ. ಇಂಟರ್ನೆಟ್ ಜತೆಗೆ, ಕೈ ಬೆರಳಿಂದ ಸ್ಕ್ರೀನ್ ಸ್ಪರ್ಶಿಸಿದರೆ ಎಲ್ಲ ಕೆಲಸ ಮಾಡುವುದೇ ಈ ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯ. ಆದರೆ, ಅವುಗಳನ್ನು ಎಚ್ಚರಿಕೆಯಿಂದ ಬಳಸದಿದ್ದರೆ ಆರೋಗ್ಯ ಸಂಬಂಧಿತ ಸಮಸ್ಯೆಯೂ ಉಂಟಾಗಬಹುದು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಶಾಲೆಗಳಲ್ಲಿ ಉಗುರು ಕತ್ತರಿಸಿ ಸ್ವಚ್ಛವಾಗಿಟ್ಟಿರುತ್ತಾರೆಯೇ, ಕೈಗಳಲ್ಲಿ ಕೊಳೆಯಿದೆಯೇ, ಬಾಯಿಗೆ ಕೈ ಹಾಕುತ್ತಾರೆಯೇ ಎಂದೆಲ್ಲಾ ಪರೀಕ್ಷಿಸುವ ಜವಾಬ್ದಾರಿಯನ್ನು ಶಾಲಾ ಮಂತ್ರಿಮಂಡಲದ ‘ಆರೋಗ್ಯ ಸಚಿವರಿಗೆ’ ವಹಿಸುವ…

Rate this:

ಹಳೆಯ ಸ್ಮಾರ್ಟ್‌ಫೋನ್ ವಿಲೇವಾರಿಗೆ ಮುನ್ನ

ಮಾಹಿತಿ @ ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ ಜುಲೈ 14, 2014 ಈಗಿನ ಆಕರ್ಷಕ ಕೊಡುಗೆಗಳು, ಕ್ಷಣಕ್ಷಣಕ್ಕೆ ಬದಲಾಗುತ್ತಿರುವ ತಂತ್ರಜ್ಞಾನ, ಇರುವ ಸಾಫ್ಟ್‌ವೇರ್‌ನ ಉನ್ನತೀಕರಣ… ಇವುಗಳೆಲ್ಲವುಗಳಿಂದಾಗಿ ಜನರಲ್ಲಿ ಸ್ಮಾರ್ಟ್‌ಫೋನ್ ಬಗ್ಗೆ ವಿಶೇಷ ಆಕರ್ಷಣೆ. ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಎಕ್ಸ್‌ಚೇಂಜ್ ಮಾಡಿಸಲೆಂದು ಹೋದಾಗ ದೊರೆಯುವ ಮೌಲ್ಯ ತೀರಾ ಕಡಿಮೆಯೇ ಆದರೂ, ಭರ್ಜರಿ ಕೊಡುಗೆ ನೀಡಲಾಗುತ್ತಿದೆಯೆಂಬ ಪ್ರಚಾರಕ್ಕೆ ಮರುಳಾಗಿ, ಹೊಸ ಸ್ಮಾರ್ಟ್‌ಫೋನ್ ಕೊಳ್ಳುವವರೂ ಸಾಕಷ್ಟು ಮಂದಿ ಇದ್ದಾರೆ. ಅಗ್ಗದ ದರದಲ್ಲಿ ಅತ್ಯುನ್ನತ ತಂತ್ರಜ್ಞಾನ ಲಭ್ಯವಿರುವ ಆಂಡ್ರಾಯ್ಡ್ ಫೋನ್‌ಗಳ ಬಳಕೆದಾರರು ಫೋನ್ ಬದಲಿಸುವ…

Rate this: