ಆನ್‌ಲೈನ್‌ನಲ್ಲಿ ಯಕ್ಷಗಾನ ಜಾಗೃತಿ: ಕೊರೊನಾಸುರ ಕಾಳಗ

ಕರಾವಳಿ ಜನರ ಜೀವನಾಡಿಯಾಗಿರುವ ಯಕ್ಷಗಾನವನ್ನೂ ಕೊರೊನಾ ವೈರಸ್ ಬಿಟ್ಟಿಲ್ಲ. ಪ್ರತಿದಿನ ನೂರಾರು, ಸಾವಿರಾರು ಜನ ಸೇರುವ ಯಕ್ಷಗಾನ ಪ್ರದರ್ಶನಗಳು ನಿಂತಿವೆ, ಅದನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿರುವ ಕಲಾವಿದರು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ, ಅವರು ಸುಮ್ಮನೆ ಕುಳಿತಿಲ್ಲ. ಅಚಾನಕ್ ಆಗಿ ಸಿಕ್ಕ ಬಿಡುವಿನ ಸಮಯವನ್ನು ಜನರ ಬದುಕನ್ನು ಕಸಿದುಕೊಳ್ಳುತ್ತಿರುವ ಕೊರೊನಾ ವೈರಸ್ ಹರಡದಂತೆ ಜನಜಾಗೃತಿ ಮೂಡಿಸಲು ಬಳಸಿಕೊಂಡಿದ್ದಾರೆ. ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಬ್ರೇಕ್ ಬಿದ್ದಾಗ ಕಲಾವಿದರೆಲ್ಲರೂ ಮನೆ ಸೇರಬೇಕಾಯಿತು. ಜನತಾ ಕರ್ಫ್ಯೂ ಹಿಂದಿನ ದಿನವಾದ ಮಾ.21ರ ಶನಿವಾರ ಮನೆಯಲ್ಲಿ…

Rate this:

ಕೊರೋನಾ ವೈರಸ್: ಯಕ್ಷಗಾನ ಹಾಡುಗಳ ಮೂಲಕ ಜನಜಾಗೃತಿ

ಬೆಂಗಳೂರು: ಕರಾವಳಿಯ ಜೀವನಾಡಿಯೇ ಆಗಿರುವ ಯಕ್ಷಗಾನ ಜನ ಜಾಗೃತಿಯಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಮಹಾಮಾರಿಯಂತಹಾ ಕಾಯಿಲೆಗಳು ಬಂದಾಗ ಅದರ ಬಗ್ಗೆ ಜನಜಾಗೃತಿ ಮೂಡಿಸುವ ಏಡ್ಸ್ ಅಸುರ ಸಂಹಾರದಂತಹಾ ಯಕ್ಷಗಾನ ಪ್ರಸಂಗಗಳನ್ನೇ ಪ್ರದರ್ಶಿಸಿ ಸೈ ಅನ್ನಿಸಿಕೊಂಡ ಯಕ್ಷಗಾನ ರಂಗವು ಈಗ ಜಾಗತಿಕವಾಗಿ ಆತಂಕ ಮೂಡಿಸಿರುವ ಕೊರೊನಾ ವೈರಸ್‌ಗೂ ಸ್ಪಂದಿಸಿದೆ. ದಕ್ಷಿಣೋತ್ತರ ಕನ್ನಡ ಜಿಲ್ಲೆಗಳು ಮತ್ತು ಕಾಸರಗೋಡು, ಮಲೆನಾಡು ಪ್ರದೇಶಗಳಲ್ಲಿ ಮನರಂಜನೆಯೊಂದಿಗೆ ಮಾಹಿತಿಯನ್ನೂ, ಪೌರಾಣಿಕ ಅರಿವನ್ನೂ ಪ್ರಸಾರ ಮಾಡುತ್ತಿರುವ ಯಕ್ಷಗಾನ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾವಿದರಿಗೂ ಕೊರೋನಾ ವೈರಸ್ ಬಿಸಿ ತಟ್ಟಿದೆ.…

Rate this:

ಬಡಗು ತಿಟ್ಟಿನ ರಂಗಸ್ಥಳದಲ್ಲಿ ಲೀಲಾ ಬೈಪಾಡಿತ್ತಾಯ

ಯಕ್ಷಗಾನ ಕ್ಷೇತ್ರದಲ್ಲಿ ಪ್ರಮುಖ ಹೆಸರು ನನ್ನಮ್ಮ ಲೀಲಾ ಬೈಪಾಡಿತ್ತಾಯ. ಮೂಲತಃ ತೆಂಕು ತಿಟ್ಟಿನವರಾದರೂ, ಬಡಗು ಯಕ್ಷಗಾನ ರಂಗಸ್ಥಳದಲ್ಲಿ ಅವರು (ಶ್ರೀಕೃಷ್ಣ ಪಾರಿಜಾತ ಪ್ರಸಂಗ) ಭಾವಪೂರ್ಣವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಮದ್ದಳೆಯಲ್ಲಿ ನಮ್ಮ ತಂದೆ ಹರಿನಾರಾಯಣ ಬೈಪಾಡಿತ್ತಾಯ, ಚೆಂಡೆಯಲ್ಲಿ ತೆಂಕು-ಬಡಗಿನ ನುಡಿತಗಳನ್ನು ಕರಗತ ಮಾಡಿಕೊಂಡಿರುವ ಶಿವಾನಂದ ಕೋಟ. ಇದು 2015ರಲ್ಲಿ ಕಾರ್ಕಳದಲ್ಲಿ ಯಕ್ಷ ಚಂದ್ರಿಕೆ ಶಶಿಕಾಂತ ಶೆಟ್ಟರು ಆಯೋಜಿಸಿದ ಆಟ.

Rate this:

ಬೆಳೆಯುವ ಸಿರಿ: ಯಕ್ಷ ಪಂಚಮಿ

ಆಧುನಿಕ ಸ್ಮಾರ್ಟ್ ಫೋನ್ ಯುಗದಲ್ಲಿ ಮಕ್ಕಳನ್ನು ನಮ್ಮ ಕಲೆ, ಸಂಸ್ಕೃತಿಯತ್ತ ಒಲಿಸಿ ಕರೆತರುವುದು ಪೋಷಕರ ಅತಿದೊಡ್ಡ ಸವಾಲಿನ ವಿಷಯವೇ. ಎಳಸು ಮನದ ಅವರ ಅದ್ಭುತ ಪ್ರತಿಭೆಯನ್ನು ಸೂಕ್ತ ದಿಕ್ಕಿಗೆ ತಿರುಗಿಸಿದರೆ ಚಿಕ್ಕ ವಯಸ್ಸಿನಲ್ಲೇ ಮೇರು ಸಾಧನೆ ಮಾಡಬಹುದೆಂಬುದಕ್ಕೆ ಉದಾಹರಣೆ 8ರ ಹರೆಯದ ಪಂಚಮಿ ಅಡಿಗ. ಈ ಪುಟಾಣಿ ಯಕ್ಷಗಾನವನ್ನೇನೂ ನೋಡಿದವಳಲ್ಲ. ಮನೆಯಲ್ಲಿ ಯಕ್ಷಗಾನ ಕ್ಯಾಸೆಟ್ ಅಥವಾ ಸಿಡಿ ಹಾಕಿ ಆಸ್ವಾದಿಸುತ್ತಿದ್ದರು. ಅಂಬೆಗಾಲಿಡುತ್ತಾ, ಆಡುತ್ತಿದ್ದ ಈ ಹುಡುಗಿಯ ಮನಸ್ಸು ಕೂಡ ಯಕ್ಷಗಾನದ ತಾಳ ಹಾಗೂ ಲಯಕ್ಕೆ ಒಳಗಿಂದೊಳಗೇ ಕುಣಿಯುತ್ತಿತ್ತು…

Rate this:

ನಾರಿಯ ತುಮುಲ ಬಿಂಬಿಸಿದ ಶೂರ್ಪನಖಾ

ಅವಿನಾಶ್ ಬೈಪಾಡಿತ್ತಾಯ ಪ್ರತಿಯೊಬ್ಬ ನಾರಿಯ ಮನದೊಳಗೆ ಸೂಕ್ಷ್ಮ ಸಂವೇದನೆಯಿದೆ, ಅದನ್ನು ಅರಿಯುವಲ್ಲಿ ಪುರುಷ ವಿಫಲನಾದಾಗ, ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿಯಾಗಬಲ್ಲಳು ಎಂಬ ದೃಷ್ಟಿಕೋನದೊಂದಿಗೆ, ರಾಮಾಯಣದ ವಿಶಿಷ್ಟ ಪಾತ್ರ ಶೂರ್ಪನಖಿಯ ಮತ್ತೊಂದು ಮುಖವು ಬೆಂಗಳೂರು ರಂಗಶಂಕರದಲ್ಲಿ ಇತ್ತೀಚೆಗೆ ಅನಾವರಣಗೊಂಡಿತು. ಉಡುಪಿಯ ವಲ್ಲರಿ ಕಡೆಕಾರ್ ಅವರ ಸಂಯೋಜನೆಯೊಂದಿಗೆ, ಯಕ್ಷಗಾನ-ನಾಟಕ ಸಮ್ಮಿಳಿತದೊಂದಿಗೆ, ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದೊಂದಿಗೆ ಮೂಡಿ ಬಂದಿರುವ ‘ಶೂರ್ಪನಖಾ – ದಿ ಅನ್‌ಸೀನ್ ಫೇಸ್’, ‘ವೇಷ’, ‘ಅಕ್ಷಯಾಂಬರ’ ಮುಂತಾದವುಗಳ ಸಾಲಿನಲ್ಲಿ ಬೆಂಗಳೂರಿನ ರಂಗಶಂಕರದಲ್ಲಿ ಯಕ್ಷಗಾನ…

Rate this:

ಕನ್ನಡ ಅಸ್ಮಿತೆ: ಅಚ್ಚಗನ್ನಡ ಸಾಹಿತ್ಯದ ಮೌನ ಸೇವಕರು: ಯಕ್ಷಗಾನ ಪ್ರಸಂಗ ಡಿಜಿಟಲೀಕರಣ

ಬೆಂಗಳೂರು: ಕನ್ನಡ ಪದಗಳನ್ನೇ ಬಳಸುತ್ತಾ, ಉಳಿಸುತ್ತಾ, ಬೆಳೆಸುತ್ತಿರುವ ರಾಜ್ಯದ ರಮ್ಯಾದ್ಭುತ ಮನರಂಜನಾ ಕಲೆ ಯಕ್ಷಗಾನ. ಇಲ್ಲಿ ಪೌರಾಣಿಕ, ಸಾಮಾಜಿಕ, ಕಾಲ್ಪನಿಕ ಕಥಾನಕಗಳು ಹಾಡುಗಳ ರೂಪದಲ್ಲಿ,ಸಾಹಿತ್ಯ ಲೋಕ ಪ್ರವೇಶಿಸಿ, ಸದ್ದಿಲ್ಲದೇ ಕನ್ನಡ ಅಸ್ಮಿತೆಯನ್ನು ಕಾಪಿಡುತ್ತಾ ಬಂದಿವೆ. ನಿರ್ದಿಷ್ಟ ಕಥಾನಕವೊಂದು ‘ಪ್ರಸಂಗ’ ಪುಸ್ತಕವಾಗಿ ಮುದ್ರಿತವಾಗಿ ಬೆಳಕಿಗೆ ಬಂದವು ಸಾಕಷ್ಟಿವೆ. ಆದರೆ, ಸರ್ವಾಂಗ ಸುಂದರ ಕಲೆಯಾದ ಯಕ್ಷಗಾನವಿಂದು ಉತ್ತುಂಗಕ್ಕೇರುತ್ತಿದ್ದರೆ, ಶತಮಾನಗಳಷ್ಟು ಇತಿಹಾಸವಿರುವ ಯಕ್ಷಗಾನದಲ್ಲಿ ಬಾಯಿಂದ ಬಾಯಿಗೆ ವರ್ಗಾವಣೆಯಾದ, ಹಸ್ತ ಪ್ರತಿಗಳಲ್ಲಷ್ಟೇ ಕಾಣಸಿಕ್ಕ ಅದೆಷ್ಟೋ ಪ್ರಸಂಗಗಳನ್ನು ಮುಂದಿನ ಪೀಳಿಗೆಗೆ ಕಾಯ್ದಿಡಬೇಕಾದ ಜವಾಬ್ದಾರಿಯೂ ಇದೆ.…

Rate this:

ಇ-ಕಾಲದ ಯಕ್ಷಗಾನ: ಬಾಹುಬಲಿ V/s ವಜ್ರಮಾನಸಿ

ಕಳೆದ ವರ್ಷ ಬಾಹುಬಲಿ-1 ಚಿತ್ರ ಯಕ್ಷಗಾನಕ್ಕೆ ಬಂದುಯಶಸ್ವಿಯಾಯಿತು. ಇದೀಗ ಬಾಹುಬಲಿ-2 ಕೂಡ ಯಕ್ಷರಂಗಕ್ಕೆ ಬರಲು ಸಜ್ಜುಗೊಂಡಿದೆ. ಹೀಗೆ ಸದಾ ಬದಲಾವಣೆಗಳಿಗೆ ತೆರೆದುಕೊಂಡು ಯಶಸ್ವಿಯಾದ ಕಾರಣಕ್ಕೇ ಈ ಕಲೆ ಇಂದಿಗೂ ಜನಪ್ರಿಯ. ಯಕ್ಷಕಲೆಯ ಈ ನಿತ್ಯನೂತನತೆಯ ರಹಸ್ಯ ಇಲ್ಲಿದೆ. * ಅವಿನಾಶ್ ಬೈಪಾಡಿತ್ತಾಯ ಒಂದು ಡೈಲಾಗ್ ಹೇಳಲು ಮೂರ್ನಾಲ್ಕು ಬಾರಿ ಶಾಟ್ ಚಿತ್ರೀಕರಣ, ಆ್ಯಕ್ಷನ್, ಕಟ್; ಅಥವಾ ಹಲವು ಬಾರಿ ಪ್ರಾಕ್ಟೀಸ್… ಇದು ಸಿನಿಮಾ, ನಾಟಕ ಮತ್ತಿತರ ರಂಗ-ಪ್ರದರ್ಶನವೊಂದರ ಯಶಸ್ಸಿನ ಮೂಲ. ಕಥೆಗೆ ಅನುಗುಣವಾಗಿ, ಆ ಕ್ಷಣದಲ್ಲಿ ಇನ್‌ಸ್ಟೆಂಟ್…

Rate this:

ಬೆಳಗೊಳದಾ ಮಡಿಲಲ್ಲಿ: ಅವಳಿ ಸಂತೋಷ, ಮತ್ತೊಂದಿಷ್ಟು ವಿಷಾದ

81ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನನ್ನ ಮಟ್ಟಿಗೆ ಎರಡು ಸಂಗತಿಗಳಿಗೆ ಅತ್ಯಂತ ವಿಶೇಷವಾದದ್ದು. ಆದರೆ ಅಲ್ಲಿಗೆ ದಿಢೀರನೇ ಹೋಗಿ ನೋಡಿದಾಗ ಆದ ಅನುಭವವಂತೂ ನಮ್ಮ ತೆರಿಗೆ ಹಣ ಈ ಪರಿಯಾಗಿ ಪೋಲಾಗುತ್ತಿದೆಯಲ್ಲಾ ಎಂಬ ವಿಷಾದ ಭಾವ. ಮೊದಲು ಆ ಎರಡು ವಿಷಯಗಳ ಬಗ್ಗೆ… ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರ ಆಸ್ಥೆಯಿಂದ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ‘ವಿಜ್ಞಾನ ತಂತ್ರಜ್ಞಾನ’ಕ್ಕೂ ಅವಕಾಶ ಸಿಕ್ಕಿರುವುದು, ಬಹುಶಃ ಈ ಬರವಣಿಗೆಯ ಚರಿತ್ರೆಯಲ್ಲಿ ವಿಜ್ಞಾನ-ತಂತ್ರಜ್ಞಾನಕ್ಕೆ ಸಿಕ್ಕ…

Rate this:

ಕಾಫಿ ಟೇಬಲ್ ಬುಕ್‌ನಲ್ಲಿ ದೇವಿ ಮಹಾತ್ಮೆ ಯಕ್ಷಗಾನ

[ಭಾನುವಾರದ ವಿಜಯ ಕರ್ನಾಟಕದಲ್ಲಿ ಕೃತಿಯ ಬಗ್ಗೆ ಇಣುಕುನೋಟ] ಕೃತಿ: ದೇವಿ ಮಹಾತ್ಮೆ, Coffee Table Book ಲೇ: ಸದಾನಂದ ಹೆಗಡೆ ಹರಗಿ ಪ್ರಕಾಶನ: ರವಿಶ್ರೀ ಆರ್ಟ್ ಪ್ರೊಮೋಶನ್ ಫೌಂಡೇಶನ್, ಕುಳಾಯಿ ಪುಟಗಳು: 64 ಬೆಲೆ: ರೂ. 250/- ಯಕ್ಷಗಾನ ಎಂದರೆ ಅದೊಂದು ಕಲೆ ಮಾತ್ರವಲ್ಲ, ಬಣ್ಣದ ಲೋಕವೂ ಆಗಿರುವ ಜೀವನ ಶೈಲಿಯನ್ನು ರೂಪಿಸಬಲ್ಲ, ಬದುಕಿನಲ್ಲಿ ಶಿಸ್ತು ತರಿಸಬಲ್ಲ, ಸಮಾಜಕ್ಕೊಂದು ಒಳ್ಳೆಯ ಸಂದೇಶ ನೀಡಬಲ್ಲ ಮಾಧ್ಯಮವದು. ಕನ್ನಡ ಕರಾವಳಿಯ ಮಣ್ಣಿನ ಕಣ ಕಣದಲ್ಲಿಯೂ ಹಾಸುಹೊಕ್ಕಾಗಿರುವ ಯಕ್ಷಗಾನದ ಸೊಗಡು ಈಗ…

Rate this: