<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	xmlns:georss="http://www.georss.org/georss" xmlns:geo="http://www.w3.org/2003/01/geo/wgs84_pos#" xmlns:media="http://search.yahoo.com/mrss/"
	>

<channel>
	<title>ಬದಲಾವಣೆಯೇ ಜಗದ ನಿಯಮ</title>
	<atom:link href="http://avisblog.wordpress.com/feed/" rel="self" type="application/rss+xml" />
	<link>http://avisblog.wordpress.com</link>
	<description>ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ....!</description>
	<lastBuildDate>Thu, 26 Nov 2009 08:50:32 +0000</lastBuildDate>
	<generator>http://wordpress.com/</generator>
	<language>kn</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
	<cloud domain='avisblog.wordpress.com' port='80' path='/?rsscloud=notify' registerProcedure='' protocol='http-post' />
<image>
		<url>http://www.gravatar.com/blavatar/9701f986d559015106126a8cb06126e4?s=96&#038;d=http://s.wordpress.com/i/buttonw-com.png</url>
		<title>ಬದಲಾವಣೆಯೇ ಜಗದ ನಿಯಮ</title>
		<link>http://avisblog.wordpress.com</link>
	</image>
	<atom:link rel="search" type="application/opensearchdescription+xml" href="http://avisblog.wordpress.com/osd.xml" title="ಬದಲಾವಣೆಯೇ ಜಗದ ನಿಯಮ" />
		<item>
		<title>26/11: ಉಗ್ರ ಕಸಬ್ ಕೈಗೆ ಸಿಗದೇಹೋಗಿದ್ದಿದ್ದರೆ?</title>
		<link>http://avisblog.wordpress.com/2009/11/26/2611-mumbai-attack/</link>
		<comments>http://avisblog.wordpress.com/2009/11/26/2611-mumbai-attack/#comments</comments>
		<pubDate>Thu, 26 Nov 2009 08:49:24 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/2009/11/26/2611-%e0%b2%89%e0%b2%97%e0%b3%8d%e0%b2%b0-%e0%b2%95%e0%b2%b8%e0%b2%ac%e0%b3%8d-%e0%b2%95%e0%b3%88%e0%b2%97%e0%b3%86-%e0%b2%b8%e0%b2%bf%e0%b2%97%e0%b2%a6%e0%b3%87%e0%b2%b9%e0%b3%8b%e0%b2%97%e0%b2%bf/</guid>
		<description><![CDATA[ಸರಿಯಾಗಿ ಒಂದು ವರ್ಷದ ಹಿಂದೆ, ಏನೋ ಪಟಾಕಿ ಸಿಡಿದಿರಬೇಕು ಅಥವಾ ಅಗ್ನಿ ಆಕಸ್ಮಿಕ ಸಂಭವಿಸಿರಬೇಕು ಇಲ್ಲವೇ ಗ್ಯಾಂಗ್ ವಾರ್ ನಡೆಯುತ್ತಿರಬೇಕು ಎಂಬಂತೆ ಆರಂಭದಲ್ಲಿ ಶಂಕೆ ಹುಟ್ಟಿಸಿದ್ದ ಘಟನೆಯೊಂದು ಬೃಹತ್ತಾಗಿ ಬೆಳೆದು ಭಾರತದ ಸಾರ್ವಭೌಮತೆಗೇ ಸವಾಲೊಡ್ಡಿದ ಪ್ರಕರಣವಾಗಿಬಿಟ್ಟಿತು. ಕೇವಲ 10 ಮಂದಿ ಪಾಕಿಸ್ತಾನೀ ಪ್ರೇರಿತ ಉಗ್ರಗಾಮಿಗಳು ಇಡೀ ದೇಶದ ಸಾರ್ವಭೌಮತೆಯನ್ನೇ ಒತ್ತೆಯಾಳಾಗಿರಿಸಿಕೊಂಡು ಅರುವತ್ತೆರಡು ಗಂಟೆಗಳ ಕಾಲ ನಿದ್ದೆಗೆಡಿಸುವಲ್ಲಿ ಸಫಲರಾಗಿದ್ದರು. ಈ ಉಗ್ರರ ಅಟ್ಟಹಾಸಕ್ಕೆ 175ರಷ್ಟು ಮಂದಿ ಅಮಾಯಕರು ಪ್ರಾಣ ಕಳೆದುಕೊಂಡರು. ಇದು ಭಾರತದ ಪ್ರತಿಷ್ಠೆಯ ಮೇಲೆ, ಅದರ ಸಹಿಷ್ಣುತಾ [...]<img alt="" border="0" src="http://stats.wordpress.com/b.gif?host=avisblog.wordpress.com&blog=154345&post=293&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p>ಸರಿಯಾಗಿ ಒಂದು ವರ್ಷದ ಹಿಂದೆ, ಏನೋ ಪಟಾಕಿ ಸಿಡಿದಿರಬೇಕು ಅಥವಾ ಅಗ್ನಿ ಆಕಸ್ಮಿಕ ಸಂಭವಿಸಿರಬೇಕು ಇಲ್ಲವೇ ಗ್ಯಾಂಗ್ ವಾರ್ ನಡೆಯುತ್ತಿರಬೇಕು ಎಂಬಂತೆ ಆರಂಭದಲ್ಲಿ ಶಂಕೆ ಹುಟ್ಟಿಸಿದ್ದ ಘಟನೆಯೊಂದು ಬೃಹತ್ತಾಗಿ ಬೆಳೆದು ಭಾರತದ ಸಾರ್ವಭೌಮತೆಗೇ ಸವಾಲೊಡ್ಡಿದ ಪ್ರಕರಣವಾಗಿಬಿಟ್ಟಿತು. ಕೇವಲ 10 ಮಂದಿ ಪಾಕಿಸ್ತಾನೀ ಪ್ರೇರಿತ ಉಗ್ರಗಾಮಿಗಳು ಇಡೀ ದೇಶದ ಸಾರ್ವಭೌಮತೆಯನ್ನೇ ಒತ್ತೆಯಾಳಾಗಿರಿಸಿಕೊಂಡು ಅರುವತ್ತೆರಡು ಗಂಟೆಗಳ ಕಾಲ ನಿದ್ದೆಗೆಡಿಸುವಲ್ಲಿ ಸಫಲರಾಗಿದ್ದರು. ಈ ಉಗ್ರರ ಅಟ್ಟಹಾಸಕ್ಕೆ 175ರಷ್ಟು ಮಂದಿ ಅಮಾಯಕರು ಪ್ರಾಣ ಕಳೆದುಕೊಂಡರು. ಇದು ಭಾರತದ ಪ್ರತಿಷ್ಠೆಯ ಮೇಲೆ, ಅದರ ಸಹಿಷ್ಣುತಾ ಭಾವದ ಮೇಲೆ ಮತ್ತು ಅದರ &#8216;ಎಲ್ಲರೂ ಒಳ್ಳೆಯವರೆ&#8217; ಎಂಬ ನಂಬಿಕೆಯ ಮೇಲೊಂದು ಕಪ್ಪು ಚುಕ್ಕೆ. ಈ ದಾಳಿಗೀಗ ಒಂದು ವರ್ಷ.</p>
<p>ಕೆಲವು ಸಂಗತಿಗಳು ಹೀಗೆಯೇ ಆಗಿಬಿಡುತ್ತದೆ. ಭಾರತದ ನೀತಿಯೂ ಇದಕ್ಕೆ ಹೊರತಾಗಿಲ್ಲ &#8211; We can forgive, but forget too! ಕೇವಲ ಹತ್ತು ಮಂದಿ ಯುವಕರು ಇಡೀ ದೇಶದ ಸಾಮರ್ಥ್ಯಕ್ಕೇ ಸವಾಲೊಡ್ಡಿದ ಸಂದರ್ಭದಲ್ಲಿ, ನಮ್ಮ ಮಹಾನ್ ಯೋಧರು, ಪೊಲೀಸರು ಸಾಹಸದಿಂದ ಹೋರಾಡಿ, ಅವರಲ್ಲಿ ಕೆಲವರು ವೀರಮರಣವನ್ನಪ್ಪಿದಾಗ, ಸಹಜವಾಗಿ ರಾಜಕಾರಣಿಗಳತ್ತ ಜನಾಕ್ರೋಶ ತಿರುಗಿತ್ತು. ರಕ್ಷಣಾ ಪಡೆಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದ, ದೇಶಾದ್ಯಂತ ಅದುವರೆಗಿನ ಅವಧಿಯಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆಯುತ್ತಲೇ ಇದ್ದರೂ ಕೂಡ, ಪೊಲೀಸ್ ಬಲವನ್ನು ಮೇಲ್ದರ್ಜೆಗೇರಿಸುವಲ್ಲಿ, ಮತ್ತು ಉಗ್ರಗಾಮಿ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರುವಲ್ಲಿ ಸರಕಾರ ವಿಫಲವಾಗಿದ್ದಕ್ಕೆ ಅಲ್ಲಿ ಆಕ್ರೋಶ ಮಡುಗಟ್ಟಿತ್ತು ಮತ್ತು ಅದು ಸ್ಫೋಟಗೊಂಡಿತು.</p>
<p>ತೀರಾ ವಿಷಾದನೀಯ ಸಂಗತಿಯೆಂದರೆ, ಅದೇ ವಿಷಾದ ಇನ್ನೂ ಮಾಸಿಲ್ಲ, ಆದರೆ ಆ ಆಕ್ರೋಶ ಮಾತ್ರ ತಣಿದಿದೆ! ಯಾಕೆ? ಈ ದುರಂತ ಘಟನೆ ನಡೆದು ಒಂದು ವರ್ಷವಾದರೂ, &#8220;ಉಗ್ರಗಾಮಿಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ, ಟೆರರ್ ನೆಟ್ವರ್ಕನ್ನು ನಿರ್ನಾಮ ಮಾಡದಿದ್ದರೆ ನೋಡಿ&#8230;&#8221; ಅಂತ ನಾವಿನ್ನೂ ಪಾಕಿಸ್ತಾನಕ್ಕೆ ಎಚ್ಚರಿಸುತ್ತಲೇ ಇದ್ದೇವೆ. ಎಡಬಿಡಂಗಿಗಳ ಕೈಯಲ್ಲಿ ಆಡಳಿತ ಮಾಡಿಸಿಕೊಂಡು ನರಳುತ್ತಿರುವ, ಐಎಸ್ಐ, ಸೇನಾಪಡೆಗಳ ಕಪಿಮುಷ್ಟಿಯಲ್ಲಿ ನಲುಗುತ್ತಿರುವ ಪಾಕಿಸ್ತಾನವೋ&#8230;. &#8220;ಮಾಡ್ತೀವಿ ಮಾಡ್ತೀವಿ, ಮತ್ತಷ್ಟು ಸಾಕ್ಷ್ಯಾಧಾರ ಕೊಡಿ&#8221; ಎಂದು ಹೇಳುತ್ತಲೇ, 365 ದಿನಗಳನ್ನು ವ್ಯರ್ಥ ಮಾಡಿ ಅಬ್ಬಬ್ಬಾ ಎಂದು ನಿಟ್ಟುಸಿರುಬಿಟ್ಟಿದೆ. ನಾವು &#8220;ಪಾಕಿಗೆ ಬುದ್ಧಿ ಹೇಳಿ&#8221; ಎಂದು ಅಮೆರಿಕದ ಬಾಗಿಲು ಬಡಿದಾಗ, ಅಮೆರಿಕವೂ &#8216;ಕ್ರಮ ಕೈಗೊಳ್ಳಿ&#8217; ಎಂದು ಪಾಕಿಗೆ ಎಚ್ಚರಿಸಿ ಕೈತೊಳೆದುಕೊಳ್ಳುತ್ತದೆ. ಒಂದೆರಡು ದಿನಗಳ ಬಳಿಕ ಪೂರ್ವಸ್ಥಿತಿಗೆ ಮರಳುತ್ತದೆ. ಒಮ್ಮೆ ಉಗ್ರರು ನಮ್ಮವರಲ್ಲ ಎನ್ನುತ್ತಾ, ಜಾಗತಿಕ ಒತ್ತಡ ಹೆಚ್ಚಾದಾಗ, ಹೌದು ಅವರು ನಮ್ಮವರು ಎಂದು ಆಗಾಗ್ಗೆ ಹೇಳಿಕೆ ಬದಲಿಸುತ್ತಿರುವುದನ್ನು ನಾವು ಅಸಹಾಯಕತೆಯಿಂದ ನೋಡುತ್ತಿರುತ್ತೇವೆ. ಪಾಕಿಸ್ತಾನದಲ್ಲಿ ಯಾರೊಂದಿಗೆ ಮಾತನಾಡಬೇಕೆಂದೇ ತಿಳಿಯುತ್ತಿಲ್ಲ ಎಂಬ ಮಾತೂ ನಮ್ಮ ಪ್ರಧಾನಿಗಳ ಬಾಯಿಂದಲೇ ಬಂದಿದೆ!</p>
<p>ಇತ್ತ ಕಡೆ ನೋಡಿದರೆ, ಮುಂಬೈ ದಾಳಿಯ ಸಂದರ್ಭ ಎಡಬಿಡಂಗಿತನ ಪ್ರದರ್ಶಿಸಿದ್ದಕ್ಕಾಗಿ, ಸರಕಾರದ ವಿರುದ್ಧದ ಜನಾಕ್ರೋಶ ತಣಿಸುವುದಕ್ಕಾಗಿ ಆರ್.ಆರ್.ಪಾಟೀಲ ಎಂಬ ಗೃಹಮಂತ್ರಿಯ ರಾಜೀನಾಮೆ ಪಡೆದಿದ್ದ ಅಲ್ಲಿನ ಆಡಳಿತವು, ಸರಿಯಾಗಿ 11 ತಿಂಗಳ ಬಳಿಕ ಮತ್ತೆ ಅವರನ್ನೇ ಗೃಹ ಮಂತ್ರಿ ಸ್ಥಾನದಲ್ಲಿ ತಂದು ಕೂರಿಸಿದೆ. ಮತ್ತು ಅವರು ಇಂದಿನಿಂದ ಹೇಳುತ್ತಾ ಬಂದಿದ್ದನ್ನೇ ಈಗಲೂ ಹೇಳುತ್ತಿದ್ದಾರೆ- ಉಗ್ರರ ದಾಳಿ ಮಟ್ಟ ಹಾಕಲು ನಾವು ಸರ್ವ ಸಮರ್ಥರಾಗಿದ್ದೇವೆ ಅಂತ.</p>
<p>ಅದೇ ಒಬ್ಬ ಉಗ್ರಗಾಮಿ, ಅಮೀರ್ ಅಜ್ಮಲ್ ಕಸಬ್ ಎಂಬ ನರಹಂತಕನನ್ನು ನಮ್ಮ ಮುಂಬೈ ಪೊಲೀಸರು ಪ್ರಾಣ ತ್ಯಾಗ ಮಾಡಿ, ಪ್ರಾಣವನ್ನೇ ಪಣವಿಟ್ಟು ಸೆರೆ ಹಿಡಿದದ್ದು ಕೂಡ ವ್ಯರ್ಥವಾಯಿತೇ ಎಂಬ ಶಂಕೆಗೂ ಕಾರಣವಾಗಿದೆ. ಯಾಕೆ? ಈ ಪಡಪೋಶಿ ಹುಳುವಿನ ರಕ್ಷಣೆಗೆ ದಿನಕ್ಕೆ 85 ಲಕ್ಷ ರೂಪಾಯಿಯನ್ನು ಭಾರತ ಸರಕಾರ ವ್ಯಯ ಮಾಡಬೇಕಾಗಿ ಬಂದಿದೆ! ಒಂದು ವರ್ಷವಾದರೂ ವಿಚಾರಣೆ ಪೂರ್ಣಗೊಂಡಿಲ್ಲ ಮತ್ತು ಕೈಗೆ ಸಿದ್ದ ಪಕ್ಕಾ ಸಾಕ್ಷ್ಯವನ್ನಿಟ್ಟುಕೊಂಡು ನಮಗೆ ಏನು ಮಾಡಲೂ ಸಾಧ್ಯವಾಗುತ್ತಿಲ್ಲ! ಎಂದರೆ ಇದು ನಮ್ಮ ವ್ಯವಸ್ಥೆಯ ದುರಂತವೆಂದೇ ಹೇಳದೇ ವಿಧಿಯಿಲ್ಲ. ಒಂದಿಡೀ ವರ್ಷದಲ್ಲಿ ಅವನಿಗಾಗಿ ಖರ್ಚು ಮಾಡಿದ ಅಂದಾಜು 31 ಕೋಟಿ ರೂಪಾಯಿ ಹಣವನ್ನು, ಅದೇ ನಮ್ಮ ಪೊಲೀಸ್/ರಕ್ಷಣಾ ಪಡೆಗಳ ಆಧುನೀಕರಣಕ್ಕೆ ಮತ್ತು ನಿದ್ದೆ ಮಾಡಿದಂತೆ ತೋರುತ್ತಿದ್ದ ಗುಪ್ತಚರ ದಳವನ್ನು ಬಲಪಡಿಸಲು ವ್ಯಯಿಸಿದ್ದರೆ ಒಂದಿಷ್ಟಾದರೂ ಉಪಕಾರವಾಗುತ್ತಿತ್ತು.</p>
<p>ಈ ಮಾತು ಯಾಕೆ ಹೇಳಬೇಕಾಯಿತೆಂದರೆ, ಕೇಂದ್ರ ಗೃಹ ಸಚಿವ ಚಿದಂಬರಂ ಮೊನ್ನೆ ಮೊನ್ನೆ ಟಿವಿ ಚಾನೆಲ್‌ನಲ್ಲಿ ಹೇಳಿದ್ದು: ಪೊಲೀಸ್, ನೇಮಕಾತಿ, ತರಬೇತಿ, ಆಧುನಿಕ ಶಸ್ತ್ರಾಸ್ತ್ರಗಳ ಖರೀದಿ, ತಂತ್ರಜ್ಞಾನದ ಅಳವಡಿಕೆ ಮತ್ತು ಸಿಬ್ಬಂದಿ ನಿರ್ವಹಣೆಗಾಗಿ ಬಜೆಟ್‌ನಲ್ಲಿ ಗಂಭೀರ ಅನ್ನಿಸಬಹುದಾದ ಕೊರತೆ ಈಗಲೂ ಇದೆ!</p>
<p>ಈ ಕಸಬ್ ಮತ್ತು ಸ್ನೇಹಿತರು ಒಂದು ಯಾಂತ್ರಿಕ ದೋಣಿಯಲ್ಲಿ ಕರಾಚಿಯಿಂದ ಮುಂಬಯಿವರೆಗೆ ರಾಜಾರೋಷವಾಗಿ, ಎಕೆ-47, ಆರ್‌ಡಿಎಕ್ಸ್ ಮುಂತಾದ ಸ್ಫೋಟಕಗಳೊಂದಿಗೆ ಬಂದಾಗ, ಅವರನ್ನು ಪ್ರಶ್ನಿಸುವವರೇ ಇರಲಿಲ್ಲ ಮತ್ತು ಅವರು ಭಾರತದಂತಹಾ ಬಲಿಷ್ಠ ರಾಷ್ಟ್ರವನ್ನೇ ನಡುಗುವಂತೆ ಮಾಡಿದರು ಎಂಬುದಕ್ಕಿಂತ ದೊಡ್ಡ ನಾಚಿಕೆಗೇಡಿನ ಸಂಗತಿಯಿದೆಯೇ?</p>
<p>ಖಂಡಿತವಾಗಿಯೂ ಆತನನ್ನು ಜೀವಂತವಾಗಿರಿಸಬೇಕು ಎಂಬುದು ಸರಿಯೇ. ಆದರೆ, ನೇರಾನೇರ ಅರೋಪಗಳಿದ್ದರೂ, ಅಷ್ಟೊಂದು ಜನರ ಮಾರಣ ಹೋಮ ಮಾಡಿ, ಒಂದು ದೇಶಕ್ಕೇ ಅಪಾಯ ತಂದೊಡ್ಡಿದಾತನಿಗೆ ಈ ನೆಲದ ಕಾನೂನಿನ ಅನುಸಾರ ಸೂಕ್ತ ಶಿಕ್ಷೆ ವಿಧಿಸಿ ಕೈತೊಳೆದುಕೊಳ್ಳಲು ವಿಳಂಬವೇಕೆ? ಎಂಬುದು ಇಲ್ಲಿ ಮೂಡುತ್ತಿರುವ ಪ್ರಶ್ನೆ. ಎಲ್ಲೀವರೆಗೆ ಎಂದರೆ, ವೆಬ್‌ದುನಿಯಾದಲ್ಲಿ ಒಂದೆಡೆ ಓದುಗರು &#8211; ಅವನಿಗೆ ಒಂದೈದಾರು ವರ್ಷ ಶಿಕ್ಷೆ ವಿಧಿಸಿ, ಆತ ಬಿಡುಗಡೆಗೊಂಡ ಮೇಲೆ ಅವನಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ಕೊಟ್ಟು ಚುನಾವಣೆಗೆ ನಿಲ್ಲಿಸುತ್ತದೆ ಎಂದು ಕಾಮೆಂಟ್ ಹಾಕುವವರೆಗೆ! ಇದು ಈ ರೀತಿ ಕಾಮೆಂಟ್ ಮಾಡಿದ ಒಬ್ಬರ ಧ್ವನಿಯಲ್ಲ, ಉಗ್ರಗಾಮಿಗಳ ದಾಳಿಯಲ್ಲೂ ರಾಜಕೀಯ ಮಾಡುತ್ತಿದ್ದ ರಾಜಕಾರಣಿಗಳ ನಡೆ-ನುಡಿಗಳನ್ನು ಗಮನವಿಟ್ಟು ನೋಡುತ್ತಿರುವ ಪ್ರಜ್ಞಾವಂತರ ನುಡಿಯೂ ಹೌದು. ಇದೇ ಮಾತು ಸಂಸತ್ ಮೇಲೆ ದಾಳಿ ನಡೆಸಿದ ಅಫ್ಜಲ್ ಗುರು ಎಂಬ ಪಾತಕಿಗೆ ಸಂಬಂಧಿಸಿಯೂ ಕೇಳಿಬರುತ್ತಿದೆ. 2001ರ ಡಿಸೆಂಬರ್ 13ರಂದು ನಡೆದ ಸಂಸತ್ ದಾಳಿ ಪ್ರಕರಣದಲ್ಲಿ ಅಫ್ಜಲ್ ಗುರು ಅಪರಾಧಿ ಎಂದು ಸಾಬೀತಾಗಿ, ಗಲ್ಲು ಶಿಕ್ಷೆಯನ್ನೂ ವಿಧಿಸಲಾಗಿದೆ. ಇದು ನಡೆದು ಐದಾರು ವರ್ಷಗಳೇ ಕಳೆದರೂ ಗಲ್ಲು ಶಿಕ್ಷೆ ಜಾರಿಯಾಗಿಲ್ಲ. ಮತ್ತು ಇದಕ್ಕೆ ಅಂದಿನ ಗೃಹ ಸಚಿವ ಶಿವರಾಜ್ ಪಾಟೀಲ್ ಕೊಟ್ಟಿದ್ದ ಉತ್ತರವಿನ್ನೂ ಓದುಗರ ಮನಸ್ಸಿನ ಮೂಲೆಯಲ್ಲಿರಬಹುದು. &#8216;ಅಫ್ಜಲ್ ಗಲ್ಲಿಗೇರಿಸಿದರೆ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ಬೇಸರವಾಗಬಹುದು, ಉಭಯ ರಾಷ್ಟ್ರಗಳ ಶಾಂತಿ ಪ್ರಕ್ರಿಯೆಗೆ ಭಂಗವಾಗಬಹುದು&#8217; ಎಂಥಾ ಮನಸ್ಥಿತಿ!</p>
<p>ಇಂಥದ್ದೇ ದಾಳಿ ಬೇರೆ ದೇಶದಲ್ಲಿ ನಡೆದಿದ್ದರೆ ಎಂಬ &#8220;&#8230;ರೆ&#8221; ಬಗ್ಗೆ ಯೋಚಿಸಿ ನೋಡಿ. ಉದಾಹರಣೆಗೆ ಅಮೆರಿಕದಲ್ಲಾಗುತ್ತಿದ್ದರೆ, ಈಗ ಪಾಕಿಸ್ತಾನದ ಪರಿಸ್ಥಿತಿ ಹೇಗಿರುತ್ತಿತ್ತು? </p>
<p>ಅದೆಲ್ಲಾ ಒತ್ತಟ್ಟಿಗಿರಲಿ. ಹಲವಾರು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಒಬ್ಬ ಉಗ್ರಗಾಮಿ, ಕಟ್ಟಾ ಪಾಕಿಸ್ತಾನೀಯ ಎಂಬುದು ಪರಿಪೂರ್ಣವಾಗಿ ಸಾಬೀತಾದ ಉಗ್ರಗಾಮಿ ಅಮೀರ್ ಅಜ್ಮಲ್ ಕಸಬ್ ಏನಾದರೂ ಜೀವಂತವಾಗಿ ಸೆರೆ ಸಿಕ್ಕದೇ ಹೋಗಿರುತ್ತಿದ್ದರೆ? ಜೀವಂತ ಸಾಕ್ಷಿಯಿರುವಾಗಲೂ ಏನೂ ಮಾಡಲು ಸಾಧ್ಯವಾಗಿಲ್ಲ, ಇನ್ನು ಸಾಕ್ಷಿಯಿಲ್ಲದೆ ಏನಾದರೂ ಮಾಡಬಹುದಾಗಿತ್ತೇ? ಕಸಬ್ ತಪ್ಪೊಪ್ಪಿಗೆ ಹೊರತಾಗಿ ಬೇರೆ ಯಾವ ಸಾಕ್ಷಿಯನ್ನು ಹಿಡಿಯಲು ನಮ್ಮ ಸರಕಾರ ಶಕ್ತವಾಗಿದೆ? ಈ ದಾಳಿಯೊಂದು ಅತ್ಯುತ್ತಮವಾಗಿ ಯೋಜಿಸಿದ, ಅತ್ಯುತ್ತಮವಾಗಿ ಸಂಘಟಿಸಿದ ಮತ್ತು ಅತ್ಯುತ್ತಮವಾಗಿ ಅನುಷ್ಠಾನಗೊಳಿಸಿದ ಪ್ಲಾನ್. ಇದರ ಕುರಿತು ತನಿಖೆ ನಡೆಸಲು ಮಹಾರಾಷ್ಟ್ರ ಸರಕಾರವು ಮಾಜಿ ಗೃಹ ಕಾರ್ಯದರ್ಶಿ ಎಸ್.ಡಿ.ಪ್ರಧಾನ್ ನೇತೃತ್ವದ ಆಯೋಗವನ್ನು ರಚಿಸಿದೆ. ಅದು ವರದಿ ಮಂಡಿಸಿದ್ದರೆ ಅದನ್ನು ಇನ್ನೂ ಬಹಿರಂಗಪಡಿಸಿಲ್ಲವೇಕೆ? ಹಾಗಿದ್ದರೆ, ಭಾರತ ಸರಕಾರವು, ಪ್ರತಿಪಕ್ಷ ಬಿಜೆಪಿಯ ಗಟ್ಟಿ ಧ್ವನಿ ಉಡುಗಿಹೋದ ಕಾರಣದಿಂದಾಗಿ, ವ್ಯವಸ್ಥೆಯೊಳಗಿನ ಹುಳುಕುಗಳನ್ನು, ಲೋಪ ದೋಷಗಳನ್ನು ಜನರಿಗೆ ತಿಳಿಯದಂತೆ ಮಾಡಲು ಯತ್ನಿಸುತ್ತಿದೆಯೇ? ಮುಂಬೈ ಪೊಲೀಸ್ ಅಧಿಕಾರಿಗಳ ಒಳಗಿನ ವೈಮನಸ್ಯ, ಭಿನ್ನಾಭಿಪ್ರಾಯಗಳು ಹೇಗೆ ಕಾರ್ಯಾಚರಣೆ ಮೇಲೆ ಪ್ರಭಾವ ಬೀರಿದವು ಎಂದು ಮಾಜಿ ಪೊಲೀಸ್ ಅಧಿಕಾರಿ ಹಸನ್ ಗಫೂರ್ ಮಾಡಿದ ಆರೋಪಗಳನ್ನು ಅಲ್ಲಿಗೇ ಅಡಗಿಸಿದ್ದೇಕೆ? ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್‌ಜಿ) ಮಾಜಿ ಮುಖ್ಯಸ್ಥ ಜಿ.ಕೆ. ದತ್ ಹೇಳಿರುವಂತೆ ಗುಪ್ತಚರ ವ್ಯವಸ್ಥೆಯಲ್ಲಿನ ಕೊರತೆಯನ್ನು ಪರಿಗಣಿಸಿಲ್ಲವೇಕೆ?</p>
<p>ಮತ್ತು ಯಾವ ಆಧಾರದಲ್ಲಿ, ಈ ಹತ್ತು ಮಂದಿ ಉಗ್ರಗಾಮಿಗಳ ಹೊರತಾಗಿ ಬೇರೆ ಯಾವುದೇ ಉಗ್ರಗಾಮಿಗಳು ಇದರಲ್ಲಿ ಭಾಗಿಯಾಗಿಲ್ಲ ಎಂದು ಸರಕಾರವು ದೃಢ ನಿಲುವು ಹೊಂದಿದೆಯೇ ಅಥವಾ ಈ ಸಾಧ್ಯತೆಯ ಕುರಿತು ಏನಾದರೂ ಯೋಚನೆ ಮಾಡಿದೆಯೇ? ದೇಶದೊಳಗೆ ಇನ್ನೂ ಸಕ್ರಿಯವಾಗಿರುವ ಸಿಮಿ, ಹುಜಿ, ಇಂಡಿಯನ್ ಮುಜಾಹಿದೀನ್ ಉಗ್ರರು ಸಾಕಷ್ಟು ಸಂಖ್ಯೆಯಲ್ಲಿ ಅವಿತಿದ್ದಾರೆ. ಇವರಿಂದಲೂ 26/11 ಉಗ್ರರಿಗೆ ಸಹಾಯ ದೊರೆತಿದ್ದಿರಬಹುದಲ್ಲವೇ? ದೇಶದೊಳಗಿದ್ದುಕೊಂಡೇ ದೇಶದ್ರೋಹಿ ಕಾರ್ಯ ಮಾಡುತ್ತಿರುವವರ ಬಗ್ಗೆ ತಲೆಕೆಡಿಸಿಕೊಂಡಿಲ್ಲವೇಕೆ?</p>
<p>ಪಾಕಿಸ್ತಾನೀಯನೇ ಆಗಿದ್ದ ಡೇವಿಡ್ ಕೋಲ್ಮನ್ ಹೆಡ್ಲಿ (ಮೂಲ ಹೆಸರು ದಾವೂದ್ ಗಿಲಾನಿ) ಮತ್ತು ತಹಾವ್ವುರ್ ಹುಸೇನ್ ರಾಣಾ ಎಂಬವರಿಬ್ಬರನ್ನು ಅಮೆರಿಕದ ಎಫ್‌ಬಿಐ ಬಂಧಿಸಿ, ಅವರಿಗೂ 26/11ಗೂ ನೇರ ಸಂಬಂಧವಿರುವ ಕುರಿತು ಸಾಕ್ಷ್ಯಾಧಾರಗಳನ್ನು ನೀಡುತ್ತಲೇ ಇದೆ. ಅವರಿಬ್ಬರೂ ಸಾಕಷ್ಟು ಬಾರಿ ಭಾರತದೊಳಕ್ಕೆ ಬಂದು, ಈ ದಾಳಿಯನ್ನು ರೂಪಿಸಿದ್ದಾರೆ, ಹೆಡ್ಲಿ ಒಬ್ಬ ಪಾಕ್ ರಾಜತಾಂತ್ರಿಕನ ಪುತ್ರ ಎಂಬ ಕುರಿತಾಗಿಯೂ ಮಾಹಿತಿ ನೀಡುತ್ತಲೇ ಇದೆ. ಆ ಬಳಿಕ ಇಟಲಿಯಲ್ಲಿ ಇಬ್ಬರನ್ನು ಇದೇ ದಾಳಿಗೆ ಸಂಬಂಧಿಸಿ, ಉಗ್ರಗಾಮಿಗಳಿಗೆ ಸಹಾಯ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ. ನಮ್ಮ ಭಾರತದೊಳಗೆ ಅವರೇನು ಮಾಡಿದರು ಎಂಬುದನ್ನೆಲ್ಲಾ ನಮಗೆ ವಿದೇಶೀ ತನಿಖಾ ಏಜೆನ್ಸಿಗಳು ಹೇಳಬೇಕು! ನಮಗದು ಗೊತ್ತೇ ಇಲ್ಲ. ಗೊತ್ತಾದರೂ, ಇವುಗಳ ಬಗ್ಗೆ ಧಾವಂತದಿಂದ, ಕ್ಷಿಪ್ರವಾಗಿ ಗಮನ ಹರಿಸಬೇಕಾಗಿದ್ದ ಭಾರತದ ಆಡಳಿತಗಾರರಿಗೆ ಪುರುಸೊತ್ತಿಲ್ಲ!</p>
<p>ಕಳೆದ ಒಂದು ವರ್ಷಗಳಲ್ಲಿ ನಮ್ಮನ್ನಾಳುವವರಿಂದ ಭರವಸೆಗಳ ದೊಡ್ಡ ನದಿಯೇ ಹರಿದಿದೆ. ರಾಷ್ಟ್ರೀಯ ರಕ್ಷಣಾ ಪಡೆ, ತೀರ ರಕ್ಷಣಾ ಪಡೆ, ಭಯೋತ್ಪಾದನಾ ನಿಗ್ರಹ ಪಡೆ, ನೌಕಾಪಡೆಗಳ ನಡುವಣ ಸಮನ್ವಯ ಕೊರತೆಯೇ ಇದಕ್ಕೆಲ್ಲಾ ಕಾರಣವೆಂಬುದು ಜಗಜ್ಜಾಹೀರಾದಾಗ, ಸಮನ್ವಯಕ್ಕೊಂದು ಮಲ್ಟಿ ಏಜೆನ್ಸಿ ಸೆಂಟರ್ (ಎಂಎಸಿ) ಸ್ಥಾಪನೆಗೆ ಘೋಷಿಸಲಾಗಿತ್ತು. ಅದು ಸ್ಥಾಪನೆಯಾಗಿ ಒಂದಿಷ್ಟು ಕೆಲಸ ಮಾಡಿದೆ. ಅದು ಬಿಟ್ಟರೆ, ಅಮೆರಿಕದ ಎಫ್‌ಬಿಐ ಮಾದರಿಯ ತನಿಖಾ ತಂಡ ರಚನೆಯ ಘೋಷಣೆಯು ಕೇವಲ ಘೋಷಣೆಯಾಗಿ ಉಳಿದಿದೆ. ಉಗ್ರರ ದಾಳಿಯಲ್ಲಿ ಬದುಕುಳಿದವರಲ್ಲಿ ಕೆಲವರಿಗೆ ಮಾತ್ರವೇ ಪರಿಹಾರ ದೊರೆತಿದೆ. ಸಮುದ್ರ ತಟದ ಗುಂಟ ಗಸ್ತು ನಡೆಸಲು ತೀರ ರಕ್ಷಣಾ ಪಡೆಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಬೋಟ್‌ಗಳನ್ನು ಒದಗಿಸಲಾಗಿಲ್ಲ. ಫೋರ್ಸ್ ಒನ್ ಎಂಬ ಮಾನಸಿಕವಾಗಿ, ದೈಹಿಕವಾಗಿ ಅತ್ಯಂತ ಬಲಿಷ್ಠವಾಗಿರುವ ಎನ್ನಲಾದ ಪಡೆ ರಚಿಸಲಾಗಿದೆ, ಆದರೆ ಮೊನ್ನೆ ಮಂಗಳವಾರ ಅದರ ಉದ್ಘಾಟನಾ ದಿನದಂದೇ ಕೆಲವು ಫೋರ್ಸ್ ಒನ್ ಕಮಾಂಡೋಗಳು ಪೆರೇಡ್ ನಡುಸ್ತಿದ್ದ ವೇಳೆ ಮೂರ್ಛೆ ತಪ್ಪಿ ಕೆಳಗೆ ಬಿದ್ದಿದ್ದರು. ಈ ಬಗ್ಗೆ ಸರಕಾರ ಏನು ಹೇಳುತ್ತದೆ?</p>
<p>ಒಂದಂತೂ ಸತ್ಯ. ಮುಂಬೈ ಮೇಲಿನ ದಾಳಿ ಕೇವಲ ದಾಳಿಯಾಗಿರಲಿಲ್ಲ. ಇದೊಂದು ಜಾಗತಿಕ ಭಯೋತ್ಪಾದನೆಯ ಮತ್ತೊಂದು ಮುಖವಾಗಿತ್ತು. ಮತ್ತು ಜಗತ್ತೇ ನಮ್ಮ ಬೆಂಬಲಕ್ಕಿತ್ತು. ಇಷ್ಟೆಲ್ಲ ಇದ್ದರೂ ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಸರ್ವ ಅವಕಾಶಗಳನ್ನೂ ನಾವು ಕೈಯಾರೆ ಕಳೆದುಕೊಂಡೆವು.</p>
<p>ಕೊನೆಗೆ, ಕಸಬ್ ಎಂಬ ಕಸ ಸಿಕ್ಕಿಬಿದ್ದದ್ದು ವ್ಯರ್ಥವಾಗದಿರಲಿ, ರಾಷ್ಟ್ರದ ಸಾರ್ವಭೌಮತೆಗೆ ಸವಾಲೊಡ್ಡಿದ ಸಂಗತಿಯಲ್ಲೂ &#8216;ಶಾಂತಿ&#8217; ಎನ್ನುತ್ತಾ ಬದ್ಧತೆಯಿಂದ ಹಿಂದೆ ಸರಿಯದಿರಲಿ ಮತ್ತು ನಾಗರಿಕರನ್ನು ಆ ಮೂಲಕ ದೇಶದ ಸಾರ್ವಭೌಮತೆಯನ್ನು ರಕ್ಷಿಸಲು ಹೋರಾಡಿ ಪ್ರಾಣತ್ಯಾಗ ಮಾಡಿದ ವೀರ ಯೋಧರು, ಪೊಲೀಸರ ಬಲಿದಾನ ನಿರರ್ಥಕವಾಗದಂತೆ ಸರಕಾರ ನೋಡಿಕೊಳ್ಳಲಿ.<br />
[<a href="http://kannada.webdunia.com/newsworld/news/current/0911/26/1091126040_1.htm">ವೆಬ್‌ದುನಿಯಾಕ್ಕೆ ಬರೆದದ್ದು</a>]</p>
  <a rel="nofollow" href="http://feeds.wordpress.com/1.0/gocomments/avisblog.wordpress.com/293/"><img alt="" border="0" src="http://feeds.wordpress.com/1.0/comments/avisblog.wordpress.com/293/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/293/"><img alt="" border="0" src="http://feeds.wordpress.com/1.0/delicious/avisblog.wordpress.com/293/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/293/"><img alt="" border="0" src="http://feeds.wordpress.com/1.0/stumble/avisblog.wordpress.com/293/" /></a> <a rel="nofollow" href="http://feeds.wordpress.com/1.0/godigg/avisblog.wordpress.com/293/"><img alt="" border="0" src="http://feeds.wordpress.com/1.0/digg/avisblog.wordpress.com/293/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/293/"><img alt="" border="0" src="http://feeds.wordpress.com/1.0/reddit/avisblog.wordpress.com/293/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=293&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/11/26/2611-mumbai-attack/feed/</wfw:commentRss>
		<slash:comments>0</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>
	</item>
		<item>
		<title>ಗಣಿಧಣಿ, ಸಿಎಂ ಗೆಲ್ಲಲಿಲ್ಲ; ಮತದಾರ, ಬಿಜೆಪಿ ಸೋತರು!</title>
		<link>http://avisblog.wordpress.com/2009/11/10/reddy-yaddy_karnataka-politic/</link>
		<comments>http://avisblog.wordpress.com/2009/11/10/reddy-yaddy_karnataka-politic/#comments</comments>
		<pubDate>Tue, 10 Nov 2009 13:29:52 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/?p=291</guid>
		<description><![CDATA[ಕಳೆದ ಎರಡು ವಾರಗಳಿಂದ ರಾಜ್ಯ ಬಿಜೆಪಿಯ ಮೇಲೆರಗಿದ್ದ ಗಣಿ ಪ್ರವಾಹದಲ್ಲಿ ಸಿಎಂ ಬದುಕು ಮೂರಾಬಟ್ಟೆಯಾಗಿ ಹೋಯಿತು &#8211; ಭಾರೀ ಪ್ರವಾಹದಿಂದ ಉತ್ತರ ಕರ್ನಾಟಕದ ಜನತೆಯ ಬದುಕಿನಂತೆ! ಯಡಿಯೂರಪ್ಪ ಇನ್ನು ಮುಂದೆ ಕೇವಲ &#8216;ಮುಖ್ಯಮಂತ್ರಿ&#8217; ಎಂಬ ಪದವಿಗಷ್ಟೇ ಸೀಮಿತ. ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ, ಗಣಿ ಧಣಿಯನ್ನೊಳಗೊಂಡ ಸಮನ್ವಯ ಸಮಿತಿಯೇ ಇನ್ನು ಮುಖ್ಯಮಂತ್ರಿಯ ಪವರ್ ಹೊಂದಿರುತ್ತದೆ! ಯಾವುದೇ ಪ್ರಮುಖ ನಿರ್ಣಯಗಳು, ಅಧಿಕಾರಿಗಳ ವರ್ಗಾವಣೆ, ಖಾತೆ ಹಂಚಿಕೆ ಮುಂತಾದವೆಲ್ಲವೂ ಈ ಸಮನ್ವಯ ಸಮಿತಿಯದ್ದೇ ಕೆಲಸ. ನೂರಾರು ಕೇಸ್ ಎದುರಿಸುತ್ತಿರುವವರು &#8216;ಗೌರವಾನ್ವಿತ&#8217; ಸಚಿವರಾಗಿ [...]<img alt="" border="0" src="http://stats.wordpress.com/b.gif?host=avisblog.wordpress.com&blog=154345&post=291&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p>ಕಳೆದ ಎರಡು ವಾರಗಳಿಂದ ರಾಜ್ಯ ಬಿಜೆಪಿಯ ಮೇಲೆರಗಿದ್ದ ಗಣಿ ಪ್ರವಾಹದಲ್ಲಿ ಸಿಎಂ ಬದುಕು ಮೂರಾಬಟ್ಟೆಯಾಗಿ ಹೋಯಿತು &#8211; ಭಾರೀ ಪ್ರವಾಹದಿಂದ ಉತ್ತರ ಕರ್ನಾಟಕದ ಜನತೆಯ ಬದುಕಿನಂತೆ! ಯಡಿಯೂರಪ್ಪ ಇನ್ನು ಮುಂದೆ ಕೇವಲ &#8216;ಮುಖ್ಯಮಂತ್ರಿ&#8217; ಎಂಬ ಪದವಿಗಷ್ಟೇ ಸೀಮಿತ. ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ, ಗಣಿ ಧಣಿಯನ್ನೊಳಗೊಂಡ ಸಮನ್ವಯ ಸಮಿತಿಯೇ ಇನ್ನು ಮುಖ್ಯಮಂತ್ರಿಯ ಪವರ್ ಹೊಂದಿರುತ್ತದೆ! ಯಾವುದೇ ಪ್ರಮುಖ ನಿರ್ಣಯಗಳು, ಅಧಿಕಾರಿಗಳ ವರ್ಗಾವಣೆ, ಖಾತೆ ಹಂಚಿಕೆ ಮುಂತಾದವೆಲ್ಲವೂ ಈ ಸಮನ್ವಯ ಸಮಿತಿಯದ್ದೇ ಕೆಲಸ. ನೂರಾರು ಕೇಸ್ ಎದುರಿಸುತ್ತಿರುವವರು &#8216;ಗೌರವಾನ್ವಿತ&#8217; ಸಚಿವರಾಗಿ ಮುಂದುವರಿಯುತ್ತಾರೆ, ಒಂದೇ ಒಂದು ಕ್ರಿಮಿನಲ್ ಕೇಸ್ ಇಲ್ಲದ ಶೋಭಾ ಕರಂದ್ಲಾಜೆ ಸಚಿವ ಪದವಿ ತ್ಯಾಗ ಮಾಡಬೇಕಾಗುತ್ತದೆ ಮತ್ತು ಇಂಥದ್ದನ್ನೆಲ್ಲಾ ಕರ್ನಾಟಕದ ಜನತೆ ಸಹಿಸಿಕೊಳ್ಳಬೇಕಾಗುತ್ತದೆ!</p>
<p>ಇದರೊಂದಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿ ಸರಕಾರಕ್ಕೆ ಹೆಬ್ಬಾಗಿಲು ತೆರೆದಿಟ್ಟ ಕರ್ನಾಟಕದಲ್ಲಿಯೂ ಬಿಜೆಪಿ ಭವಿಷ್ಯ ಮಸುಕಾಗುವ ಸಾಧ್ಯತೆಗಳಿಗೆ ಭದ್ರ ಬುನಾದಿಯೊಂದನ್ನು ತೋಡಲಾಗಿದೆ!</p>
<p>ತಥಾಕಥಿತ &#8216;ಹೈಕಮಾಂಡ್&#8217; ಹೆಸರಿನಲ್ಲಿ ದೆಹಲಿಗೆ ಹೋಗಿ ಸಂಧಾನ ಮಾಡಿಸಿಕೊಂಡು, ಭಿನ್ನಮತದ ಬೆಂಕಿಗೆ ತಣ್ಣೀರು ಹಾಕಿಕೊಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊನೆಯಲ್ಲಿ ಹಾಗೂ ಹೀಗಾ ವಾಪಸಾಗಿದ್ದಾರೆ. ಆದರೆ, ಇದು ಸಂಧಾನವಲ್ಲ, ಮುಖ್ಯಮಂತ್ರಿ ಸ್ಥಾನಕ್ಕಾದ ಅವಮಾನ. ರಾಜ್ಯದ ಒಂದು ಶ್ರೇಷ್ಠ ಹುದ್ದೆಯಲ್ಲಿರುವ ಮುಖ್ಯಮಂತ್ರಿ, ತನ್ನ &#8216;ಭಿನ್ನ ಮತ&#8217;ವುಳ್ಳ ಸಚಿವರನ್ನು &#8216;ಬನ್ನಿ, ಸಮಸ್ಯೆ ಪರಿಹರಿಸಿಕೊಳ್ಳೋಣ&#8217; ಅಂತ ಮಾತುಕತೆಗೆ ಕರೆದರೆ ಅವರು ಬರಲೊಲ್ಲರು, ಬಿಜೆಪಿಯ ಕೇಂದ್ರೀಯ ನಾಯಕಮಣಿಗಳು ನೇರಾನೇರ ಸಂಧಾನ ಮಾಡಿಸಲು ವಿಫಲರಾದರು, ಆದರೆ &#8216;ತಾಯಿ&#8217; ಸುಷ್ಮಾ ಸ್ವರಾಜ್ ಒಂದು ಮಾತು ಹೇಳಿದ ತಕ್ಷಣ ಬಂದರು, ಮಾತುಕತೆ ನಡೆಸಿದರು, ಸಮಸ್ಯೆ ಪರಿಹಾರವಾಯ್ತು. ಅದು ಹೇಗೆ ಸಾಧ್ಯ?</p>
<p>ರಾಜ್ಯದಲ್ಲಿ ಅವರೇ ಮುಖ್ಯಮಂತ್ರಿ ಎಂದು ಚುನಾವಣೆಯಲ್ಲಿ ಬಿಂಬಿಸಿದ್ದ, ತಮ್ಮ ಮನೆಯೊಡೆಯನೇ ಆಗಿರುವ ಯಡಿಯೂರಪ್ಪರ ಮಾತಿಗೆ ಬೆಲೆ ನೀಡಿಲ್ಲ, ಕೇಂದ್ರದಲ್ಲಿಯೂ ಪಕ್ಷದ ಪರಮೋಚ್ಚ ನಾಯಕ ರಾಜನಾಥ್ ಸಿಂಗ್ ಮಾತಿಗೆ ಸೊಪ್ಪಿಲ್ಲ, ಹಿರಿಯ ತಲೆ ಆಡ್ವಾಣಿ ದನಿಗೆ ಬಲವಿಲ್ಲ, ರಾಜ್ಯದ ಬಿಜೆಪಿ ವ್ಯವಹಾರಗಳ ಉಸ್ತುವಾರಿ ಅರುಣ್ ಜೇಟ್ಲಿಯ ನುಡಿಗೆ ಕಿವಡೆ ಕಾಸಿನ ಕೀಮತ್ತಿಲ್ಲ. ಹಾಗಿದ್ದರೆ ಸುಷ್ಮಾ ಮಾತಿನಿಂದ ಇದು ಹೇಗೆ ಸಾಧ್ಯವಾಯಿತು?</p>
<p>ತಮ್ಮನ ಕೈಯಲ್ಲಿ ಹೊಡೆಸಿಕೊಂಡ ಅಣ್ಣನ ಸ್ಥಿತಿ ಯಡಿಯೂರಪ್ಪರದು. ಅವರೇನೋ ಅವಮಾನ ಸಹಿಸಿಕೊಂಡು ವಾಪಸಾಗಿದ್ದಾರೆ. ರೆಡ್ಡಿಗಳ ಬೇಡಿಕೆಗಳಲ್ಲಿ ಒಂದಾಗಿದ್ದ ಶೋಭಾ ತಲೆದಂಡವೂ ಆಗಿದೆ. ಆದರೆ, ಅಧಿಕಾರಯುತವಾಗಿಯೇ ಮಾತನಾಡುತ್ತಿದ್ದ ಬಿಎಸ್‌ವೈ ಧ್ವನಿ ಮಾತ್ರ ಉಡುಗಿ ಹೋಗಿದೆ. ಇನ್ನು ಮುಂದೆ ಸರಿಯಾಗಿ ಕೆಲಸ ಮಾಡದ ಶಾಸಕರು, ಅಧಿಕಾರಿಗಳ ಮೇಲೆ ಅವರಿಗೆ ಯಾವುದೇ ಹಿಡಿತವಿರಲಾರದು, ಯಾವುದೇ ರೀತಿ ಕ್ಷಿಪ್ರ, ನಿಷ್ಠುರ ಕ್ರಮ ಕೈಗೊಳ್ಳುವುದು ಸಾಧ್ಯವಿಲ್ಲ. ಅದಕ್ಕೆ &#8216;ತಾಯಿ&#8217; ನೇತೃತ್ವದ ಸಮನ್ವಯ ಸಮಿತಿಯ ಗೋಣು ಅಲ್ಲಾಡಬೇಕು!</p>
<p>ಹೌದು, ಯಾವುದಕ್ಕೂ ಜಗ್ಗದೇ ಇದ್ದ ಈ ಗಣಿ ಧಣಿಗಳು ಕೊನೆಗೊಂದು ಭಾನುವಾರದ ರಜಾ ದಿನದಂದು ಹೇಳಹೆಸರಿಲ್ಲದಂತೆ &#8216;ಏನಿಲ್ಲ, ಏನಿಲ್ಲ, ನಮ್ಮ ನಿಮ್ಮ ನಡುವೆ ಏನೇನಿಲ್ಲ&#8217; ಅಂತ ಮುಖ್ಯಮಂತ್ರಿ ಜೊತೆ, &#8216;ತಾಯಿ&#8217; ಸಮ್ಮುಖದಲ್ಲಿ ಕೈ ಕುಲುಕಿದ್ದೆಂತು?</p>
<p>ಬ್ಲ್ಯಾಕ್‌ಮೇಲ್ ರಾಜಕಾರಣ ಮಾಡುವ ಮೂಲಕ, ತಮ್ಮ ರಾಜಕೀಯ ಪ್ರಜ್ಞೆಗಿಂತಲೂ ವ್ಯಾವಹಾರಿಕ ಪ್ರಜ್ಞೆಯನ್ನು ಢಾಳಾಗಿ ಹರಿಯಬಿಡುತ್ತಿರುವ, 50 ಶಾಸಕರ ಬೆಂಬಲ ತಮ್ಮಲ್ಲಿದೆ ಎಂದುಕೊಳ್ಳುತ್ತಾ, ಮುಖ್ಯಮಂತ್ರಿ ಪದವಿಯ ಮೇಲೇ ಕಣ್ಣಿಟ್ಟಿರುವ ಬಳ್ಳಾರಿ ಸುತ್ತಮುತ್ತ ಕೋಟ್ಯಂತರ ರೂಪಾಯಿ ಗಣಿ ಉದ್ದಿಮೆ ನಡೆಸುತ್ತಿರುವ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಅಣ್ಣ, ಕಂದಾಯ ಸಚಿವ ಕರುಣಾಕರ ರೆಡ್ಡಿ ಮತ್ತು ಸಂಬಂಧಿಕ, ಆರೋಗ್ಯ ಸಚಿವ ಶ್ರೀರಾಮುಲು, ಯಡಿಯೂರಪ್ಪ ಬದಲಾವಣೆ ಹೊರತು, ಉಳಿದೆಲ್ಲ ಬೇಡಿಕೆಗಳನ್ನೂ ಈಡೇರಿಸಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ &#8216;ತಾಯಿ&#8217;ಯ ಕೃಪಾ ಕಟಾಕ್ಷ.</p>
<p><strong>ರಾಜ್ಯ ಬಿಜೆಪಿಗೆ ಹೊಸ ಹೈಕಮಾಂಡ್ &#8211; &#8216;ತಾಯಿ&#8217;! </strong></p>
<p>ಗಣಿ ಧಣಿಗಳ ಬ್ಲ್ಯಾಕ್‌ಮೇಲ್ ರಾಜಕಾರಣ ಮತ್ತು ಅದಕ್ಕೆ ಕೇಂದ್ರದಲ್ಲಿರುವ ಬಿಜೆಪಿಯೊಳಗಿನ ಭಿನ್ನಮತದ, ಅವ್ಯವಸ್ಥೆಯ, ಗೊಂದಲ. ಎರಡೂ ಬೆರಕೆಯಾದರೆ ರಾಜಕೀಯ ಪರಿಸ್ಥಿತಿ ಹೀಗಾಗುತ್ತದೆ. ಅಷ್ಟೇ! ತಮ್ಮದೇ ಪಕ್ಷದ ಸರಕಾರವೊಂದು ಉರುಳುವ ಹಂತದಲ್ಲಿರುವಾಗ, ಅದರ ಪರಿಪೂರ್ಣ ಲಾಭ ಪಡೆದುಕೊಳ್ಳುವುದು ಹೇಗೆ ಎಂಬ ನಾಯಕಮಣಿಗಳ ಲೆಕ್ಕಾಚಾರವೂ ಇದರಲ್ಲಿ ಸೇರಿರಬಹುದೆಂಬ ಶಂಕೆ ಥಟ್ಟನೇ ಉದ್ಭವವಾಗಿದೆ.</p>
<p>ಹೈಕಮಾಂಡ್ ಎಂದರೆ ಯಾರು? ಅದರರ್ಥ ಏನು? ಎಂಬ ಪ್ರಶ್ನೆಯೂ ಉದ್ಭವಿಸಲು ಈ &#8216;ಬ್ಲ್ಯಾಕ್‌ಮೇಲ್ ರಾಜಕಾರಣ&#8217; ಕಾರಣವಾಗಿದೆ. ಬಿಜೆಪಿ ಹೈಕಮಾಂಡ್ ಎಂದರೆ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರೇ? ಲೋಕಸಭೆಯ ಪ್ರತಿಪಕ್ಷ ನಾಯಕ, ಪಕ್ಷದ ಹಿರಿತಲೆ ಲಾಲ್ ಕೃಷ್ಣ ಆಡ್ವಾಣಿಯೇ ಅಥವಾ ಕರ್ನಾಟಕದ ವ್ಯವಹಾರಗಳ ಉಸ್ತುವಾರಿ ವಹಿಸಿಕೊಂಡಿರುವ ಅರುಣ್ ಜೇಟ್ಲಿಯೇ? ಊಹೂಂ&#8230; ಅವರ‌್ನ ಬಿಟ್, ಇವರ‌್ನ ಬಿಟ್, ಇವರ‌್ಯಾರ್ ಸುಷ್ಮಾ ಸ್ವರಾಜ್ ಎಂಬ &#8216;ತಾಯಿ&#8217;?</p>
<p>&#8220;ನನ್ನನ್ನು ನಿಮ್ಮ ಮನೆಮಗಳೆಂದು ಮನೆ ತುಂಬಿ ಹರಸಿ, ವಿದೇಶೀ ಸೊಸೆಗೆ ಅವಕಾಶ ನೀಡಬೇಡಿ&#8221; ಎಂದು ಬಳ್ಳಾರಿಯಲ್ಲಿ ಹತ್ತು ವರ್ಷಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಕಣಕ್ಕಿಳಿದು, ಕರ್ನಾಟಕ ರಾಜಕಾರಣ ರಂಗದಲ್ಲಿ, ರಾಜ್ಯದ ಜನತೆಯ ಮನದಲ್ಲಿ ಸ್ಥಾನ ಪಡೆಯಲು ಹವಣಿಸಿದ್ದರು ಸುಷ್ಮಾ ಸ್ವರಾಜ್. ಮೈತುಂಬಾ ಸೆರಗುಹೊದ್ದು, ಎರಡೂ ಕೆನ್ನೆಗಳಿಗೆ ಅರಶಿನ ಲೇಪಿಸಿಕೊಂಡು, ದೊಡ್ಡ ಕುಂಕುಮ ತಿಲಕವಿಟ್ಟು, ಮುಡಿ ತುಂಬಾ ಹೂವು ಮುಡಿದು, ನಾನು ಅಚ್ಚ ಭಾರತೀಯ ಮಹಿಳೆ, ನಾನು ಮುತ್ತೈದೆ ಮುತ್ತೈದೆ ಎನ್ನುತ್ತಾ ಚುನಾವಣಾ ಪ್ರಚಾರ ಸಭೆಗಳಲ್ಲಿ, ವಿಧವೆ ಸೋನಿಯಾ ಗಾಂಧಿಯನ್ನು ಅಣಕಿಸಿದ್ದು ಮಾತ್ರವಲ್ಲದೆ, ಸೋನಿಯಾ ಪ್ರಧಾನಿಯಾದರೆ, ತಲೆ ಬೋಳಿಸಿ ಬಿಳಿ ಸೀರೆಯುಡುತ್ತೇನೆಂದು ಹೇಳಿದ್ದ ಈ ಸುಷ್ಮಾ ಸ್ವರಾಜ್ ಮಾಡಿದ್ದು ಭಾರತೀಯ ನಾರಿ ಕುಲಕ್ಕೆ ಅವಮಾನ ಎಂಬ ಕೂಗು ಕೂಡಾ ಎದ್ದಿತ್ತು. ಇದೀಗ ಕರ್ನಾಟಕದ ಬಿಜೆಪಿಯ ಪಾಲಿಗೆ ಹೊಸ &#8216;ಅಧಿ ನಾಯಕಿ&#8217;ಯಾಗಿ ಮೂಡಿಬಂದಿದ್ದಾರೆ, ಅಥವಾ ಬಿಂಬಿಸಿಕೊಂಡಿದ್ದಾರೆ!</p>
<p>ಬಳ್ಳಾರಿಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಇದೇ ಗಣಿ ಧಣಿಗಳು ಸುಷ್ಮಾಗೆ ಪರಿಪೂರ್ಣ ಸಹಕಾರ ನೀಡಿದ್ದರು. ಅಂದಿನಿಂದ ಈ ಗಣಿ ರೆಡ್ಡಿಗಳ ಮತ್ತು ಸುಷ್ಮಾ ಸಂಬಂಧ ಆತ್ಮೀಯವಾಗಿ ಬೆಳೆದಿತ್ತು. ರೆಡ್ಡಿಗಳು ಕೂಡ ಸುಷ್ಮಾರನ್ನು &#8216;ತಾಯೀ&#8217; ಎಂದೇ ಸಂಬೋಧಿಸುತ್ತಾರೆ. ಅಂದಿನಿಂದ ಕರ್ನಾಟಕಕ್ಕೆ ಆಗೀಗ್ಗೆ ಭೇಟಿ ನೀಡುತ್ತಿದ್ದ ಸುಷ್ಮಾ, ವರ ಮಹಾಲಕ್ಷ್ಮೀ ಪೂಜೆಗೆ ಅಲ್ಲಲ್ಲಿ, ವಿಶೇಷವಾಗಿ ಬಳ್ಳಾರಿಯಲ್ಲಿ ಪ್ರತಿವರ್ಷ ಹಾಜರಾಗುತ್ತಿದ್ದರು, ಅಚ್ಚ ಭಾರತೀಯ ನಾರಿ ಎಂಬಂತಹ ಬಿರುದಿನೊಂದಿಗೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದ ವಿದಿಶಾ ಕ್ಷೇತ್ರದಲ್ಲಿ ಸುಷ್ಮಾ ಸೋಲಿನ ಆತಂಕ ಎದುರಿಸುತ್ತಿದ್ದಾಗ, ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯು ನಾಮಪತ್ರ ಹಿಂತೆಗೆತದಲ್ಲಿಯೂ ಈ ಗಣಿ ಧಣಿಗಳ ಕೈವಾಡವಿತ್ತು ಎಂಬುದು ಮಧ್ಯಪ್ರದೇಶ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.</p>
<p>ಈಗ ಕರ್ನಾಟಕ ಸಮಸ್ಯೆಯನ್ನು &#8220;ಕ್ಷಣ ಮಾತ್ರದಲ್ಲಿ&#8221; ಪರಿಹರಿಸಿದ ಖ್ಯಾತಿ ಹೊಂದಿರುವ ಸುಷ್ಮಾ ಸ್ವರಾಜ್, ರಾಜ್ಯ ಬಿಜೆಪಿಗೆ ಅಘೋಷಿತವಾಗಿ ಹೊಸ ಉಸ್ತುವಾರಿ.</p>
<p><strong>ಆಪರೇಶನ್ ಕಮಲ ಫಲ? </strong></p>
<p>ರಾಜ್ಯದಲ್ಲಿ ನಡೆದ &#8216;ಆಪರೇಶನ್ ಕಮಲ&#8217; ಈಗ ಫಲ ಕೊಡುತ್ತಿದೆ. 2008 ಮೇ ಚುನಾವಣೆಗಳಲ್ಲಿ 110 ಸ್ಥಾನ ಗೆದ್ದಿದ್ದ ಬಿಜೆಪಿಗೆ ಬಹುಮತಕ್ಕೆ ಬೇಕಿದ್ದುದು ಇನ್ನು ಮೂರೇ ಸ್ಥಾನಗಳು. ಇದಕ್ಕಾಗಿ ಆರು ಸ್ವತಂತ್ರ ಅಭ್ಯರ್ಥಿಗಳ ಬೆಂಬಲಕ್ಕೆ ಗಣಿ ಧಣಿಗಳ ಸಹಾಯ ಪಡೆದಿದ್ದ ಯಡಿಯೂರಪ್ಪ, ಸರಕಾರಕ್ಕೆ ಅಗತ್ಯ ಬೇಕಿರುವ ಸಂಖ್ಯಾಬಲ ಕೂಡಿಸಿಕೊಂಡು ಆಗಲೇ ಸುಮ್ಮನಿದ್ದು ಬಿಡಬಹುದಿತ್ತು.</p>
<p>ಆದರೆ, ಈ ಸಂಖ್ಯಾಬಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಧಾವಂತದಲ್ಲಿ ಸರಣಿ ಅಪರೇಶನ್ ಕಮಲ ಮಾಡಿದ ಈ ಗಣಿ ಧಣಿಗಳು, ಬಳ್ಳಾರಿ ಸುತ್ತಮುತ್ತ ಮತ್ತು ಆಂಧ್ರದ ಆಸುಪಾಸಿನಲ್ಲಿ ಭೂಗರ್ಭವನ್ನೇ ಕೆದಕಿ ಗಣಿ ಅಗೆಯುವಂತೆ, ಬೇರೆ ಪಕ್ಷಗಳ ಶಾಸಕರನ್ನೆಲ್ಲಾ ಅಗೆದಗೆದು ತಂದು ತಂದು ಸುರುವಿದರು. ಅವರಿಗೆ ಮಂತ್ರಿಗಿರಿ ಕೊಡಿಸಿದರು.</p>
<p>ಇದರಿಂದಾಗಿ ಪಕ್ಷದೊಳಗೆ, ಸರಕಾರದೊಳಗೆ ಗಣಿ ರೆಡ್ಡಿಗಳ ವರ್ಚಸ್ಸು, ಪ್ರಭಾವ ಹೆಚ್ಚಿಸಿ, ಯಡಿಯೂರಪ್ಪ ಅವರ ತಲೆಗಿಂತಲೂ ಮೇಲೆ ಬೆಳೆದುಬಿಟ್ಟಿತು. ಯಡಿಯೂರಪ್ಪರೇ ಮುಖ್ಯಮಂತ್ರಿ ಎಂದು ಮತ ಯಾಚಿಸಿ ಗೆದ್ದಿದ್ದ ಇದೇ ರೆಡ್ಡಿ ಮತ್ತವರ 50ರಷ್ಟಿದೆ ಎಂದು ಹೇಳಲಾಗುತ್ತಿರುವ ಶಾಸಕರ ಗಡಣ, ಈಗ ಅವರನ್ನೇ ತೆಗೆಯಿರಿ ಎಂಬಷ್ಟರ ಮಟ್ಟಿಗೆ ಬೆಳೆದದ್ದು ಇದೇ ಹಣ ಬಲದಿಂದ.</p>
<p><strong>ಸಮಸ್ಯೆಯೇ ಪರಿಹಾರ! </strong></p>
<p>ಇದುವರೆಗೆ &#8216;ಶಿಸ್ತಿನ ಪಕ್ಷ&#8217; ಎಂಬ ಹೆಸರು ಹೊತ್ತುಕೊಂಡಿದ್ದ ಬಿಜೆಪಿ, ಜಿನ್ನಾ ಬಗ್ಗೆ ಒಂದು ಪುಸ್ತಕ ಬರೆದಿದ್ದಕ್ಕಾಗಿ ಜಸ್ವಂತ್ ಸಿಂಗ್ ಅವರಂತಹ ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷದಿಂದಲೇ ಉಚ್ಚಾಟಿಸಿದ್ದ ಬಿಜೆಪಿ, ಇಡೀ ಸರಕಾರವನ್ನೇ ಅಲ್ಲಾಡಿಸುತ್ತಿದ್ದ ರೆಡ್ಡಿ ಸಹೋದರರ ಅಶಿಸ್ತಿನ ನಡವಳಿಕೆ ವಿರುದ್ಧ ಕ್ರಮವನ್ನೇಕೆ ತೆಗೆದುಕೊಳ್ಳಲಾರದೇ ಹೋಯಿತು? </p>
<p>ಇದು ಕೇಂದ್ರೀಯ ನಾಯಕತ್ವದ ಎಡಬಿಡಂಗಿತನ. ಯಡಿಯೂರಪ್ಪ ಕೈಗೆ ಪೂರ್ಣಾಧಿಕಾರ ಕೊಡುವ ಬದಲು, ರಾಜಕೀಯ ಬ್ಲ್ಯಾಕ್‌ಮೇಲಿಂಗ್‌ಗೆ ಮತ್ತಷ್ಟು ಅವಕಾಶ ಮಾಡಿಕೊಟ್ಟು, ಯಡಿಯೂರಪ್ಪ ಅವರ ಕೈ ಕಟ್ಟಿ ಹಾಕುವ ಮೂಲಕ, ರಾಜ್ಯದ ಜನತೆಯನ್ನೇ ಕತ್ತಲಲ್ಲಿಟ್ಟಿತು ಬಿಜೆಪಿ. ಅಶಿಸ್ತು ಎಂದು ಬಣ್ಣಿಸಲು ಸಕಲ ಪದಗಳು, ಸರ್ವ ಅರ್ಹತೆಗಳೂ ಇರುವ &#8216;ಮಹಾನ್ ಜನಸೇವಾ ಕಾರ್ಯ&#8217; ಮಾಡಿದ್ದ ಈ ರೆಡ್ಡಿಗಳನ್ನು ಮೊದಲು ಸಚಿವ ಪಟ್ಟದಿಂದ ಕಿತ್ತು ಹಾಕಿ, ಆ ಮೇಲೆ ವಿಚಾರಣೆ ನಡೆಸಬಹುದಿತ್ತಲ್ಲ&#8230; ಹಾಗೆ ಯಾಕೆ ಆಗಲಿಲ್ಲ?</p>
<p>ಯಾವುದೇ ಶಾಸಕರು ಮತ್ತೊಂದು ಚುನಾವಣೆಗೆ ಸಿದ್ಧರಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಿರುವಾಗ, ವಿಧಾನಸಭೆ ವಿಸರ್ಜನೆಗೂ ಸಿದ್ಧ, ಆದರೆ ಈ ರೀತಿಯ ಅಶಿಸ್ತು ಇರಬಾರದು ಎಂಬ ದಿಟ್ಟ ಎಚ್ಚರಿಕೆ ನೀಡಲು ಬಿಜೆಪಿಯ ಕೇಂದ್ರೀಯ ನಾಯಕತ್ವಕ್ಕೆ ಸಾಧ್ಯವಾಗಲಿಲ್ಲವೇಕೆ? ಈಗ ಸಮಸ್ಯೆಗೆ ಸಮಸ್ಯೆಯನ್ನೇ ಪರಿಹಾರ ಎಂದು &#8216;ಕಂಡು ಹುಡುಕಿರುವುದು&#8217; ಖಂಡಿತವಾಗಿಯೂ ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.</p>
<p><strong>ಈ ಸಂಧಾನವಲ್ಲದ ಸಂಧಾನದ ಹಿಂದಿನ ಮಸಲತ್ತೇನು? </strong></p>
<p>ಸಾಂವಿಧಾನಿಕ ಅಧಿಕಾರ ಇದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಈ ರೀತಿ ಯಾಕೆ ಹತಾಶರಾದರು? ಎಲ್ಲ ಅಧಿಕಾರವಿದ್ದರೂ ರೆಡ್ಡಿಗಳ ಈ ಬ್ಲ್ಯಾಕ್‌ಮೇಲ್ ಎದುರು ಸೋತು, ನಿರಾಶರಾಗಿ, &#8216;ಅಬ್ಬ, ಹೇಗಾದರೂ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆ&#8217; ಎಂಬಂತಹ ಪುನೀತ ಭಾವ ಹೊಂದಿದರು? ಹೇಳಿ ಕೇಳಿ ನಿಷ್ಠುರ ನಡೆ-ನುಡಿಯ ಮುಖ್ಯಮಂತ್ರಿಯೇಕೆ ಇಷ್ಟು ದುರ್ಬಲರಾದರು? ಈ ಪ್ರಶ್ನೆಗಳು ಪ್ರಶ್ನೆಯಾಗಿಯೇ ಉಳಿದಿವೆ. ಒಟ್ಟಿನಲ್ಲಿ ಈ ರಾಜಿಯಿಲ್ಲದ, ಒಳಗೊಳಗೇ ಕುದಿಯುವಿಕೆ ಮುಂದುವರಿಸಲು ಅವಕಾಶ ಮಾಡಿಕೊಟ್ಟ ಸಂಧಾನದ ಹಿಂದಿರುವ ನಿಜವಾದ ಮಸಲತ್ತೇನಿತ್ತು? ಎಂಬುದನ್ನು ತಿಳಿಯಲು ರಾಜ್ಯದ ಮತದಾರರಿಗೆ ಅಧಿಕಾರವಿದೆ, ಹಕ್ಕಿದೆ.</p>
<p>ಒಂದಷ್ಟು ಹಣ ಬಲ ಹಿಡಿದುಕೊಂಡು, ಇಡೀ ರಾಜ್ಯ ಸರಕಾರವೊಂದನ್ನು ಬಹುತೇಕ ಎರಡು ವಾರಗಳ ಕಾಲ ನಿಷ್ಕ್ರಿಯವಾಗುವಂತೆ ಮಾಡಿದ್ದು ಸಣ್ಣ &#8216;ಸಾಧನೆ&#8217;ಯೇನಲ್ಲ. ಅತ್ತಕಡೆಯಿಂದ ಪ್ರಧಾನ ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ನ ನಿಗೂಢವಾದ &#8216;ಮೌನ&#8217;ವೇ ಎಂದು ಹೇಳಬಹುದಾದ ಪ್ರತಿಕ್ರಿಯೆ, ಜೆಡಿಎಸ್‌ನ &#8216;ಎಚ್ಚರಿಕೆಯ&#8217; ಪ್ರತಿಸ್ಪಂದನೆ, ಪ್ರವಾಹ ಸಂತ್ರಸ್ತರು ಅಶನ-ವಸನಕ್ಕಾಗಿ ಆಗಸಕ್ಕೆ ಕೈಮುಗಿದು ಬಯಲಲ್ಲೇ ಗೋಗರೆಯುತ್ತಿದ್ದ ಹೊತ್ತಿನಲ್ಲಿ ರಾಜ್ಯ ಸರಕಾರವೇ ರೆಡ್ಡಿಗಳ ಕೈಯಲ್ಲಿ ನಲುಗುತ್ತಿದ್ದಾಗ, ದಿವ್ಯ ಮೌನ ವಹಿಸಿದ್ದ ರಾಜ್ಯಪಾಲರು&#8230; ಇವೆಲ್ಲ ಬೆಳವಣಿಗೆಗಳನ್ನು ಕಂಡಾಗ ಖಂಡಿತಾ ಇದರ ಹಿಂದೆ ಏನೋ ಇದೆ ಎಂದು ಅನ್ನಿಸುತ್ತಿಲ್ಲವೇ?</p>
<p>ಕೇಂದ್ರೀಯ ಮಟ್ಟದಲ್ಲಿಯೂ ಬಿಜೆಪಿಯ ಪರಿಸ್ಥಿತಿ ಗೊಂದಲದ ಮುದ್ದೆ. ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಆಡ್ವಾಣಿ ಅವರು ಈ ವರ್ಷಾಂತ್ಯದಲ್ಲಿ ಬಿಜೆಪಿಗೆ ಹೊಸ ಅಧ್ಯಕ್ಷನ ಆಯ್ಕೆಯ ಬಳಿಕ ರಾಜೀನಾಮೆ ನೀಡುತ್ತಾರೆ ಎಂಬ ಸುಳಿವಿದೆ. ವಯಸ್ಸಾಯಿತು, ರಾಜಕೀಯ ಸಾಕು ಎಂಬ ಇರಾದೆ ಇದ್ದಿರಬಹುದು. ಈಗ ಆಡ್ವಾಣಿಯವರ ಸ್ಥಾನ ಮತ್ತು ರಾಜನಾಥ್ ಸಿಂಗ್ ಅವರ ಸ್ಥಾನ ತುಂಬಲು ಪಕ್ಷದಲ್ಲಿ ಒಳಗಿಂದೊಳಗೆ ಮೇಲಾಟ ಆರಂಭವಾಗಿದೆ. ಇದುವರೆಗೆ ರಾಜ್ಯದ ಉಸ್ತುವಾರಿ ವಹಿಸಿದ್ದ ಅರುಣ್ ಜೇಟ್ಲಿ ಮತ್ತು ಸುಷ್ಮಾ ನಡುವಿನ ವಿರಸ ಹೊಸದೇನಲ್ಲ. ಅವರಿಬ್ಬರೂ ಭವಿಷ್ಯದ ನಾಯಕರು ಎಂದೂ ಕರೆಯಲಾಗುತ್ತದೆ.</p>
<p>ಹೀಗಾಗಿ ದಕ್ಷಿಣ ಭಾರತದ ಏಕೈಕ ಬಿಜೆಪಿ ಸರಕಾರದ ಮೇಲೆ ಹಿಡಿತ ಸಾಧಿಸಿದರೆ, ತನ್ನ &#8216;ಆ&#8217; ಮಹತ್ವಾಕಾಂಕ್ಷೆಗೆ ಪೂರಕ ಎಂದು ಸುಷ್ಮಾ ಈಗಿಂದೀಗಲೇ ಇಟ್ಟಿಗೆ ಕಟ್ಟುತ್ತಿದ್ದಾರೆಯೇ? ಬಿಜೆಪಿ ಅಧಿಕಾರವಿರುವ ಗುಜರಾತ್ ಬಿಡಿ, ಅಲ್ಲಿ ನರೇಂದ್ರ ಮೋದಿ, ಆಡ್ವಾಣಿ ಇದ್ದಾರೆ, ಏನೂ ಮಾಡಲಾಗದು. ಇನ್ನು ಮಧ್ಯಪ್ರದೇಶ, ಅದು ತನ್ನದೇ ರಾಜ್ಯ. ಕರ್ನಾಟಕವನ್ನೂ ಸೆಳೆದುಕೊಂಡರೆ, ತನಗೇ ಹೆಚ್ಚು ಬಲ ಎಂಬ ಲೆಕ್ಕಾಚಾರವೇ ಕಾರಣವೇ? ಒಂದು ರಾಜ್ಯದ, ಸರಕಾರದ ಅಸ್ತಿತ್ವದ ಸಮಸ್ಯೆಯನ್ನು, ತನ್ನ ಪರವಾಗಿ ತಿರುಗಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಯೇನಾದರೂ ಬಂದರೆ ಇದಕ್ಕೆ ಕರ್ನಾಟಕದ ಪ್ರಹಸನ ಉತ್ತರವಾದೀತೇ?</p>
<p><strong>ಗಣಿಧಣಿಗಳೂ ಗೆಲ್ಲಲಿಲ್ಲ, ಸಿಎಮ್ಮೂ ಗೆಲ್ಲಲಿಲ್ಲ, ಬಿಜೆಪಿ ಸೋತಿದೆ&#8230;</strong></p>
<p>ಇಷ್ಟೆಲ್ಲ ಪ್ರಶ್ನೆಗಳ ನಡುವೆ, &#8216;ಇದೆಲ್ಲ ನಾಟಕ&#8217; ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿರುವುದರಲ್ಲಿ ಕೂಡ ಹುರುಳಿಲ್ಲದಿಲ್ಲ ಎಂಬ ಅನಿಸಿಕೆ ಬರುವುದಿಲ್ಲವೇ?</p>
<p>ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಸಂಸದ ಎಚ್.ವಿಶ್ವನಾಥ್ ಅವರ ಹೇಳಿಕೆಯನ್ನು ಗಮನಿಸಬೇಕು. &#8216;ರೆಡ್ಡಿಗಳನ್ನು ಮಟ್ಟಹಾಕಲೇಬೇಕು. ಇಲ್ಲದಿದ್ದಲ್ಲಿ ರಾಜ್ಯಕ್ಕೆ ಉಳಿಗಾಲವಿಲ್ಲ. ಈ ಕ್ರಮಕ್ಕೆ ರಾಜ್ಯ ಸರಕಾರವನ್ನು ಎಲ್ಲರೂ ಬೆಂಬಲಿಸಬೇಕು&#8217; ಎಂದವರು ಕಳೆದ ವಾರಾಂತ್ಯ ಮೈಸೂರಿನಲ್ಲಿ ನೀಡಿದ್ದರು. ಇದು ನೈತಿಕ ರಾಜಕಾರಣ. ರಾಜ್ಯದ ಅಭಿವೃದ್ಧಿ ಬಗೆಗಿನ ಚಿಂತನೆ.</p>
<p>ಮಾತೆತ್ತಿದರೆ &#8216;ನಮಗೆ ಜನ ಹಿತ ಮುಖ್ಯ, ಜನಸೇವೆಯೇ ನಮ್ಮ ಗುರಿ&#8217; ಎಂಬಂತಹಾ ವಾಕ್ಯಗಳನ್ನು ಉದುರಿಸುತ್ತಿದ್ದ ರೆಡ್ಡಿ ಸಹೋದರರು, ಇದುವರೆಗೆ ಯಾವುದೇ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗದಿರುವ ಶೋಭಾ ಕರಂದ್ಲಾಜೆಯನ್ನು ಸಂಪುಟದಿಂದ ಕೈಬಿಡುವಂತೆ ಹಠ ಹೂಡಿದ್ದು, ಸ್ವತಃ ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್ ಅವರನ್ನು ಎತ್ತಂಗಡಿ ಮಾಡಿಸುವಂತೆ ಒತ್ತಾಯಿಸಿದ್ದು, ಅದಿರು ಲಾರಿಗಳ ಮೇಲೆ ತಲಾ 1000 ರೂ. ಸುಂಕ ಹೇರಿದ್ದನ್ನು ವಿರೋಧಿಸಿದ್ದು (ಇದೇ ಹಣವನ್ನು ಅದಿರು ಲಾರಿಗಳು ಕುಲಗೆಡಿಸಿದ್ದ ರಸ್ತೆಗಳ ಅಭಿವೃದ್ಧಿಗೋ, ಅಥವಾ ಅವು ಎಸಗುವ ನಿತ್ಯ ಅಪಘಾತದಲ್ಲಿ ಕೊಂಚ ಪರಿಹಾರ ಹಣಕ್ಕೋ ಬಳಸಬಹುದು!) ಯಾವ &#8216;ಜನ ಹಿತ&#8217; ಕಾರ್ಯ?</p>
<p>ಲೋಕಸಭೆ ಚುನಾವಣೆಯ ಸೋಲಿನ ಬಳಿಕವೂ ಬಿಜೆಪಿ ಯಾವುದೇ ರಾಜ್ಯಗಳಲ್ಲಿ ಚೇತರಿಸಿಕೊಳ್ಳದಿರುವುದಕ್ಕೆ ಪಕ್ಷದ ಇಂಥದ್ದೇ ಕ್ರಮಗಳು ಕಾರಣ ಎಂಬುದು ಅದರ ಕೇಂದ್ರೀಯ ನಾಯಕತ್ವದ ಅರಿವಿಗೆ ಬರುವಾಗ ಬಹುಶಃ ಸಮಯ ಮೀರಿರುತ್ತದೆ!</p>
<p>ಒಟ್ಟಿನಲ್ಲಿ, ಈ ರೀತಿ ಲಾಬಿ ನಡೆಸುವ, ಭೂಮಿಯ ಗರ್ಭ ಅಗೆಯುತ್ತಾ ಜೇಬು ತುಂಬಿಕೊಳ್ಳುವ, ನಾನೇ ಜನರ ಉದ್ಧಾರಕ ಎನ್ನುತ್ತಾ ಗರಿ ಗರಿ ನೋಟು ಹಂಚುವ ರಾಜಕಾರಣಿಗಳಾಗಿ ಪರಿವರ್ತನೆಗೊಳ್ಳುವ ಕಟ್ಟಾ ಉದ್ಯಮಿಗಳಿಗೆ, ಅವರ ಜನಮರುಳು ಮಾತುಗಳಿಗೆ, ಹೆಂಡ-ಸೀರೆ-ನೋಟಿಗೆ ಜನರು ಮರುಳಾಗುತ್ತಿರುವವರೆಗೆ ಮತದಾರನಿಗೆ ಮಾತ್ರ ಇದೇ ಅವಸ್ಥೆ ಕಟ್ಟಿಟ್ಟ ಬುತ್ತಿ.<br />
[<a href="http://kannada.webdunia.com/newsworld/news/current/0911/09/1091109050_1.htm">ವೆಬ್‌ದುನಿಯಾದಲ್ಲಿ ಪ್ರಕಟವಾಗಿದೆ</a>]</p>
  <a rel="nofollow" href="http://feeds.wordpress.com/1.0/gocomments/avisblog.wordpress.com/291/"><img alt="" border="0" src="http://feeds.wordpress.com/1.0/comments/avisblog.wordpress.com/291/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/291/"><img alt="" border="0" src="http://feeds.wordpress.com/1.0/delicious/avisblog.wordpress.com/291/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/291/"><img alt="" border="0" src="http://feeds.wordpress.com/1.0/stumble/avisblog.wordpress.com/291/" /></a> <a rel="nofollow" href="http://feeds.wordpress.com/1.0/godigg/avisblog.wordpress.com/291/"><img alt="" border="0" src="http://feeds.wordpress.com/1.0/digg/avisblog.wordpress.com/291/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/291/"><img alt="" border="0" src="http://feeds.wordpress.com/1.0/reddit/avisblog.wordpress.com/291/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=291&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/11/10/reddy-yaddy_karnataka-politic/feed/</wfw:commentRss>
		<slash:comments>2</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>
	</item>
		<item>
		<title>ರಂಗಸ್ಥಳದಿಂದ ನಿರ್ಗಮಿಸಿದ ಯಕ್ಷಗಾನದ &#8216;ಮಹಾಬಲ&#8217;</title>
		<link>http://avisblog.wordpress.com/2009/10/30/keremane-mahabala-hegade/</link>
		<comments>http://avisblog.wordpress.com/2009/10/30/keremane-mahabala-hegade/#comments</comments>
		<pubDate>Fri, 30 Oct 2009 05:02:48 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/?p=289</guid>
		<description><![CDATA[ಕರ್ನಾಟಕದ ಕರಾವಳಿಯ ಗಂಡುಕಲೆಯೆನಿಸಿದ ಯಕ್ಷಗಾನದ ಅಗ್ರಗಣ್ಯ ಸರ್ವೋತ್ಕೃಷ್ಟ ಕಲಾವಿದರಲ್ಲೊಬ್ಬರಾದ ಕೆರೆಮನೆ ಮಹಾಬಲ ಹೆಗಡೆ ಅವರ ನಿಧನದೊಂದಿಗೆ ಬಡಗುತಿಟ್ಟಿನ ಪರಂಪರೆಯ ಕೊಂಡಿಯೊಂದು ಕಳಚಿಬಿದ್ದಂತಾಗಿದೆ.
ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಕಲಾವಿದ ಅಳಿದರೂ ಕಲೆಗೆ ಅಳಿವಿಲ್ಲ ಎಂಬೊಂದು ಸತ್ಯವಾಕ್ಯದ ಹಿಂದೆ ಧಾವಿಸಿದರೆ ಧುತ್ತನೇ ಎದುರಾಗುವ ಹೆಸರು ಕೆರೆಮನೆ ಎಂಬ ಅಗ್ರಗಣ್ಯ ಯಕ್ಷಗಾನ ಕುಟುಂಬ. ಅಂಥ ಪರಂಪರೆಯ ಅನರ್ಘ್ಯ ಕೊಂಡಿಯಾಗಿದ್ದ, ಯಕ್ಷಗಾನ ಮಾತ್ರವಲ್ಲದೆ, ಸಂಗೀತ, ಭಜನೆ, ನಾಟಕ, ಭಜನೆ&#8230; ಹೀಗೆ ಜೀವನವನ್ನು ಬೆಳಗಬಲ್ಲ ಕಲೆಗಳ ಹೂರಣದಲ್ಲಿ ಮಿಂದೆದ್ದು ಅವುಗಳಲ್ಲಿಯೂ ಮಹಾಬಲರೆನ್ನಿಸಿಕೊಂಡ ಕೆರೆಮನೆ ಮಹಾಬಲ ಹೆಗಡೆ [...]<img alt="" border="0" src="http://stats.wordpress.com/b.gif?host=avisblog.wordpress.com&blog=154345&post=289&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p>ಕರ್ನಾಟಕದ ಕರಾವಳಿಯ ಗಂಡುಕಲೆಯೆನಿಸಿದ ಯಕ್ಷಗಾನದ ಅಗ್ರಗಣ್ಯ ಸರ್ವೋತ್ಕೃಷ್ಟ ಕಲಾವಿದರಲ್ಲೊಬ್ಬರಾದ ಕೆರೆಮನೆ ಮಹಾಬಲ ಹೆಗಡೆ ಅವರ ನಿಧನದೊಂದಿಗೆ ಬಡಗುತಿಟ್ಟಿನ ಪರಂಪರೆಯ ಕೊಂಡಿಯೊಂದು ಕಳಚಿಬಿದ್ದಂತಾಗಿದೆ.</p>
<p>ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಕಲಾವಿದ ಅಳಿದರೂ ಕಲೆಗೆ ಅಳಿವಿಲ್ಲ ಎಂಬೊಂದು ಸತ್ಯವಾಕ್ಯದ ಹಿಂದೆ ಧಾವಿಸಿದರೆ ಧುತ್ತನೇ ಎದುರಾಗುವ ಹೆಸರು ಕೆರೆಮನೆ ಎಂಬ ಅಗ್ರಗಣ್ಯ ಯಕ್ಷಗಾನ ಕುಟುಂಬ. ಅಂಥ ಪರಂಪರೆಯ ಅನರ್ಘ್ಯ ಕೊಂಡಿಯಾಗಿದ್ದ, ಯಕ್ಷಗಾನ ಮಾತ್ರವಲ್ಲದೆ, ಸಂಗೀತ, ಭಜನೆ, ನಾಟಕ, ಭಜನೆ&#8230; ಹೀಗೆ ಜೀವನವನ್ನು ಬೆಳಗಬಲ್ಲ ಕಲೆಗಳ ಹೂರಣದಲ್ಲಿ ಮಿಂದೆದ್ದು ಅವುಗಳಲ್ಲಿಯೂ ಮಹಾಬಲರೆನ್ನಿಸಿಕೊಂಡ ಕೆರೆಮನೆ ಮಹಾಬಲ ಹೆಗಡೆ ಇಂದು ನಮ್ಮನ್ನಗಲಿದ್ದಾರೆ.</p>
<p>ಸಿನಿಮಾ, ಟಿವಿ ಮುಂತಾದ ಆಧುನಿಕ ದೃಶ್ಯಮಾಧ್ಯಮಗಳಂತೆ ಉತ್ತೇಜಕ ಪರಿಕರಗಳನ್ನು ಬಳಸುವ ಸ್ವಾತಂತ್ರ್ಯವೂ, ಔಚಿತ್ಯವೂ ಇಲ್ಲದಂತಹ ಯಕ್ಷಗಾನ ರಂಗದಲ್ಲಿ ಪ್ರೇಕ್ಷಕವರ್ಗದ ಚಿತ್ತೋಭಿವ್ಯಕ್ತಿಯಲ್ಲಿ ಶಾಶ್ವತ ಸ್ಥಾನ ಪಡೆಯಬೇಕಿದ್ದರೆ, ಕಲಾವಿದನಾದವನೊಬ್ಬ ತನ್ನೆಲ್ಲ ಸಾಮರ್ಥ್ಯವನ್ನು, ಕೌಶಲ್ಯವನ್ನು ಒರೆಗೆ ಹಚ್ಚಬೇಕಾಗುತ್ತದೆ. ಕೆರೆಮನೆ ಮಹಾಬಲರು ರಂಗದಲ್ಲಿ ಸಾಕ್ಷಾತ್ಕರಿಸುತ್ತಿದ್ದ ಪೌರಾಣಿಕ ಪಾತ್ರಗಳಾದ ಅಶ್ವತ್ಥಾಮ, ಭೀಷ್ಮ, ಬಲರಾಮ, ದ್ರೋಣ, ದಶರಥ, ರಾವಣ, ಕಂಸ, ಕೌರವ, ಅರ್ಜುನ, ಸುಧನ್ವಗಳ ಪಾತ್ರ ಪೋಷಣೆಯ ಸವಿಯುಂಡವರಂತೂ, ಮಹಾಬಲರಿಗೆ ಮಹಾಬಲರೇ ಸಾಕ್ಷಿ ಎಂದುಕೊಳ್ಳಬಹುದು. ಅಂಥ ಛಾಪು, ಛಾತಿ ಮೂಡಿಸಿದ್ದರು ಕೆರೆಮನೆ ಮಹಾಬಲ ಹೆಗಡೆ.</p>
<p>ಪಾತ್ರ ಯಾವುದೇ ಇರಲಿ, ಆ ಪಾತ್ರದ ವ್ಯಕ್ತಿತ್ವವನ್ನು ಅಲುಗಾಡಿಸದೆ, ಸಮಕಾಲೀನ ಸಂದರ್ಭಕ್ಕೆ ಅದನ್ನು ಬೆಸೆಯುತ್ತಾ, ಪ್ರೇಕ್ಷಕವರ್ಗದಲ್ಲಿ ಜಾಗೃತಿ ಮೂಡಿಸಿ ಚಿಂತನೆಗೆ ಹಚ್ಚುವಂತೆ ಮಾಡುತ್ತಿದ್ದ ವಾಕ್ಪಟುತ್ವ, ಭಾವಾಭಿನಯ ಮತ್ತು ನೃತ್ಯಾಭಿನಯ, ಅದಕ್ಕೆ ತಕ್ಕುದಾದ ಕಂಠದ ಹೊಂದಾಣಿಕೆ. ಅದಕ್ಕೂ ಹೆಚ್ಚಾಗಿ ಪಾತ್ರವೊಂದರ ಪೂರ್ವಾಧ್ಯಯನದಲ್ಲಿ ಅವರಿಗಿದ್ದ ಆಸಕ್ತಿ, ಪಾತ್ರವೊಂದನ್ನು ಕಲಾಭಿಮಾನಿಗಳಿಗೆ ಹೇಗೆ ಉಣಬಡಿಸಬಹುದೆಂಬ ಕುರಿತಾದ ಅವರ ಚಿರಂತನ ಚಿಂತನೆ&#8230; ಇವೆಲ್ಲವೂ ಅವರೊಳಗಿನ ಕಲಾವಿದನನ್ನು ಒರೆಗೆ ಹಚ್ಚಿ, ರಂಗದ ಉತ್ತುಂಗಕ್ಕೇರಿಸಿತ್ತು.</p>
<p>ಕಲಾವಿದ ಎಂದರೆ ಕಲೆಯ ಕುಲುಮೆಯಲ್ಲಿ ಬೆಂದು ಬರಬಲ್ಲ ಹೊನ್ನಿನ ಆಭರಣವಿದ್ದಂತೆ. ಲಯಬದ್ಧ ಕುಣಿತ, ಪಾತ್ರಕ್ಕೆ ತಕ್ಕುದಾದ ಕಂಠ ಶ್ರುತಿ, ಪಾತ್ರ ಚಿತ್ರಣಕ್ಕೆ ಸೂಕ್ತವಾದ ನಡೆ-ನುಡಿ, ಒಟ್ಟಿನಲ್ಲಿ ಕಲಾ ಪ್ರೇಕ್ಷಕರನ್ನು ಯಕ್ಷಲೋಕಕ್ಕೇ ಕರೆದೊಯ್ಯಬಲ್ಲ, ಅಥವಾ ಆ ರೀತಿಯಲ್ಲಿ ಸಮ್ಮೋಹಿನಿಗೆ ಒಳಪಡಿಸಬಲ್ಲಂತಹಾ ಪಾತ್ರಾಭಿವ್ಯಕ್ತಿಯ ಸಾಮರ್ಥ್ಯ ಮೂಡುವುದು ಕಲಿತು ಬೆಳೆಯಬೇಕೆಂಬ ತುಡಿತದಿಂದ ಮತ್ತು ಅನುಭವಗಳ ಮೂಸೆಯಿಂದ. ಹೀಗಾಗಿಯೇ ಕೆರೆಮನೆಯಂತಹಾ ಕಲಾತಪಸ್ವಿಗೆ ಈ ಸಾಮರ್ಥ್ಯ ಸಿದ್ಧಿಸಿತ್ತು. ಅದಕ್ಕೆ ಪೂರಕವಾಗಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಧ್ಯಯನ ನಡೆಸಿದ್ದ ಅವರು, ಭಾಗವತರಾಗಿ, ಮದ್ದಳೆವಾದಕರಾಗಿ, ಪುರುಷ ವೇಷಗಳನ್ನಷ್ಟೇ ಅಲ್ಲದೇ ಸ್ತ್ರೀ ಹಾಗೂ ಹಾಸ್ಯವೇಷಗಳಲ್ಲೂ ತಮ್ಮ ಕಲಾಭಿಜ್ಞತೆ ಮೆರೆದವರು. ಒಟ್ಟಿನಲ್ಲಿ ಯಕ್ಷಗಾನ ರಂಗದ ಸವ್ಯಸಾಚಿ.</p>
<p>ಸತ್ವಯುತವಾದ ಪಾತ್ರಪೋಷಣೆಯೊಂದಿಗೆ ನಾಟ್ಯದಲ್ಲಿ ಹಾಗೂ ಅರ್ಥಗಾರಿಕೆಯಲ್ಲಿನ ಸಮನ್ವಯತೆಯೇ ಬಹುಶಃ ಮಹಾಬಲರ ಪಾತ್ರಗಳಿಗೆ ವಿಶೇಷವಾಗಿ ಜೀವ ತುಂಬಿದ್ದು. ಇದಕ್ಕೆ ಪೂರಕವಾಗುವುದು ಬೇರೇನಲ್ಲ, ಪೂರ್ವಾಧ್ಯಯನ ಮತ್ತು ಒಲಿಯದ್ದನ್ನು ಕಲಿಯಬೇಕೆಂಬ ತುಡಿತ, ಹಠ. ಕಲೆಯೆಂದರೆ ಒಣ ಸರಕಲ್ಲ, ಕಬ್ಬಿನ ಜಲ್ಲೆಯಿಂದಲೂ ರಸ ಹಿಂಡಬಹುದಾದ ಪರಿಶ್ರಮದಿಂದ ಕಲೆ ಬೆಳಗುತ್ತದೆ ಮತ್ತು ಅಲ್ಲೊಬ್ಬ ಕಲಾವಿದ ರೂಪುಗೊಳ್ಳುತ್ತಾನೆ ಎಂಬುದನ್ನು ಸಮರ್ಥವಾಗಿ ಅರಿತುಕೊಂು ತೋರಿಸಿಕೊಟ್ಟವರು ಮಹಾಬಲರು.</p>
<p>ಅವರು ಓದಿದ್ದು ನಾಲ್ಕನೇ ತರಗತಿವರೆಗೆ ಮಾತ್ರ. ಆದರೆ ಅವರಿಗಿದ್ದ ಪ್ರಪಂಚ ಜ್ಞಾನ, ಪೌರಾಣಿಕ ಜ್ಞಾನ ಅಗಾಧ. ಎಲ್ಲವನ್ನೂ ಓದಿಯೇ ಕರಗತ ಮಾಡಿಕೊಂಡವರು ಎಂದರೆ, ಯಕ್ಷಗಾನ ಕಲಾವಿದರು ಹೇಗಿರುತ್ತಾರೆ, ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿ ನಿಲ್ಲುತ್ತಾರವರು. ಯಕ್ಷಗಾನದಲ್ಲಿ ವೇಷ ಮಾಡುವುದೆಂದರೆ, ಒಂದಷ್ಟು ಗಟ್ಟಿ ಮಾತಿನಿಂದ, ಚರ್ವಿತ ಚರ್ವಣ ಸೇರಿಸಿ ಮಾತು ಹೆಣೆದು, ಶಬ್ದಾಲಂಕಾರ ಬಳಸಿ ಪ್ರೇಕ್ಷಕರನ್ನು ಮೋಡಿ ಮಾಡುವುದು ಎಂದು ತಿಳಿದವರೇ ಹೆಚ್ಚು. ಆದರೆ ಕೆರೆಮನೆಯವರ ಪಾತ್ರಾಭಿವ್ಯಕ್ತಿಗಳನ್ನೇ ಗಮನಿಸಿದಲ್ಲಿ, ಅವರು ಕಥೆಯ ಭಾವದ ಹಿಂದೆ ಹೋಗಿರುವುದು ವೇದ್ಯವಾಗುತ್ತದೆ. ಈ ಭಾವ ಸಿದ್ಧಿಸಬೇಕಿದ್ದರೆ, ಅದಕ್ಕೆ ತಕ್ಕುದಾದ ಅಧ್ಯಯನವೂ ಅಗತ್ಯ.</p>
<p>ಹೆಗಡೆಯವರಿಗೆ ಈ ಕಲೆಯ ಮೇಲಿನ ಹಿಡಿತ ನೇರವಾಗೇನೂ ಸಿದ್ಧಿಸಿದ್ದಲ್ಲ. ಈ ಕಲಾವಿದನ ರಂಗ ಪಯಣದ ಅನುಭವಜನ್ಯ ಪ್ರಯೋಗಗಳೇ ಎಲ್ಲದಕ್ಕೂ ಮೂಲ ಹೇತು. ಚಿತ್ರಾಪುರದ ಶ್ರೀಪಾದರಾಯರಿಂದ ಪ್ರಾರಂಭಿಕ ಸಂಗೀತಾಭ್ಯಾಸ, ನಂತರ ಧಾರಾವಾಡದ ನಾರಾಯಣ ಮುಜುಂದಾರರಿಂದ ಹೆಚ್ಚಿನ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಶಿಕ್ಷಣ ಪಡೆದರು. ಯಕ್ಷಗಾನದಲ್ಲಿ ಸಂಗೀತವನ್ನು ಪರಂಪರೆಗೆ ಭಂಗ ಬಾರದಂತೆ ಅಳವಡಿಸುವುದರ ಕುರಿತು ಸಾಕಷ್ಟು ಚಿಂತನೆ ಮಾಡಿರುವ ಅವರು, ಅತ್ಯುತ್ತಮ ವಿಮರ್ಶಕರೂ ಹೌದು. ತೂಕ ತಪ್ಪದ ಗತ್ತಿನ ಮಾತು, ಅದ್ಭುತ ರಸ ಸೃಷ್ಟಿಯ ರಂಗಾಭಿನಯ, ಪಾತ್ರೋಚಿತ ಮುಖವರ್ಣಿಕೆ, ಆಭರಣ ಮುಂತಾದವುಗಳ ಧಾರಣೆ ಬಗ್ಗೆ ಸೂಕ್ಷ್ಮಪ್ರಜ್ಞೆ, ರಂಗ ಪ್ರವೇಶ, ನಿಲುವು&#8230; ಈ ರೀತಿ ರಂಗಾಭಿವ್ಯಕ್ತಿಯ ಸಕಲ ಕ್ಷೇತ್ರಗಳಲ್ಲೂ ಅವರಿಗೆ ಅವರೇ ಸಾಟಿ.</p>
<p>ಕಲಾ ಕುಟುಂಬ: ಕೆರೆಮನೆ ಎಂದಾಕ್ಷಣ ಮನಸ್ಸಿಗೆ ಹೊಳೆಯುವುದು ಯಕ್ಷಗಾನ. ತೆಂಕು ತಿಟ್ಟು ಮಾತ್ರವೇ ಯಕ್ಷಗಾನ ಎಂದುಕೊಂಡಿದ್ದ ದಕ್ಷಿಣ ಕನ್ನಡಿಗರಿಗೆ ಬಡಗು ತಿಟ್ಟಿನ ಕಲಾವೈಭವವನ್ನು ಉಣಬಡಿಸಿದ್ದು ಈಗ ವಜ್ರಮಹೋತ್ಸವ (75ನೇ ವರ್ಷ) ಆಚರಿಸುತ್ತಿರುವ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ. ಇದನ್ನು ಸ್ಥಾಪಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆ ಗ್ರಾಮದ ಕೆರೆಮನೆ ಕುಟುಂಬವೇ. ಕೆರೆಮನೆ ಶಿವರಾಮ ಹೆಗಡೆ ಸ್ಥಾಪಿಸಿದ್ದ ಈ ಮಂಡಳಿಯನ್ನು ಅವರ ಪುತ್ರ ಶಂಭು ಹೆಗಡೆ ಯಶಸ್ವಿಯಾಗಿ ನಿಭಾಯಿಸಿ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದರವರು (ಈಗ ಶಂಭು ಹೆಗಡೆ ಮಗ ಶಿವಾನಂದ ಹೆಗಡೆ ಅದನ್ನು ಮುಂದುವರಿಸುತ್ತಿದ್ದಾರೆ). ಅಂತಹಾ ತಂಡದಲ್ಲಿ ಮೆರೆದವರು ಮಹಾಬಲ.</p>
<p>1927ರಲ್ಲಿ ಜನಿಸಿದ ಇವರನ್ನು ಚಿಕ್ಕಪ್ಪ ಕೆರೆಮನೆ ಶಿವರಾಮ ಹೆಗಡೆಯವರೇ ಯಕ್ಷರಂಗಕ್ಕೆ ಎಳೆದು ತಂದವರು. ಇಡಗುಂಜಿ, ಸಾಲಿಗ್ರಾಮ, ಅಮೃತೇಶ್ವರಿ, ಕಮಲಶಿಲೆ, ಬಚ್ಚಗಾರು ಮುಂತಾದ ಮೇಳಗಳಲ್ಲಿ ತಿರುಗಾಟ ನಡೆಸಿದ್ದ ಅವರು, ನಾಟಕ ಕ್ಷೇತ್ರದಲ್ಲಿಯೂ ತಮ್ಮ ಸ್ತ್ರೀಪಾತ್ರಕ್ಕಾಗಿ ಪ್ರಸಿದ್ಧಿ ಗಳಿಸಿದ್ದರು.</p>
<p>ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಗಳು ಅವರ ಕಲಾಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದರೆ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.</p>
<p>ಯಕ್ಷ ರಾತ್ರಿಗಳ ಪರಮೋತ್ಕೃಷ್ಟ ವೈಭವದ ದಿನಗಳು ನೆನಪಾದರೆ ಕಣ್ಣೆದುರಲ್ಲಿ ಮಹಾಬಲ ಹೆಗಡೆಯವರ ಅಮೂರ್ತ ರೂಪ ಬಂದು ನಿಲ್ಲುತ್ತದೆ. ವರ್ತಮಾನದಿಂದ ಪೌರಾಣಿಕ ಲೋಕಕ್ಕೆ ಕರೆದೊಯ್ಯುವ, ಯಕ್ಷಲೋಕದಲ್ಲಿ ನಿಂತು ವರ್ತಮಾನ ಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಅವರ ವಾಕ್ ಸಾಮರ್ಥ್ಯ, ಕಲಾಭಿಜ್ಞತೆ, ಚಿಕಿತ್ಸಕ ದೃಷ್ಟಿ ಎಲ್ಲವೂ ಸ್ಮರಣಾರ್ಹ.</p>
<p>ಇತ್ತೀಚೆಗಷ್ಟೇ ಕೆರೆಮನೆ ಕುಟುಂಬದ ಮತ್ತೊಂದು ಕಿರೀಟ ಕೆರೆಮನೆ ಶಂಭು ಹೆಗಡೆ ಬದುಕಿನ ವೇಷ ಕಳಚಿ, ಯಕ್ಷಗಾನ ಕ್ಷೇತ್ರಕ್ಕೆ ಅಗಾಧ ನಷ್ಟ ತಂದೊಡ್ಡಿದ್ದರು. ಇದೀಗ ಕೆರೆಮನೆಯ ಮತ್ತೊಂದು ಹಿರಿಯ ಕಿರೀಟ ಕಳಚಿಬಿದ್ದಿದೆ. ಯಕ್ಷಗಾನದ ವೈಭವಪೂರ್ಣ ಅಧ್ಯಾಯವೊಂದು ಕೊನೆಗೊಂಡಿದೆ. ಇಂತಹ ಮಹಾನ್ ಕಲಾವಿದನ ಬದುಕಿನ ಮತ್ತು ಕಲೆಯ ಆದರ್ಶಗಳು ಹೊಸ ಕಲಾವಿದರಿಗೆ ಸ್ಫೂರ್ತಿಯಾಗಲಿ, ಯಕ್ಷಗಾನದ ಸವ್ಯಸಾಚಿಯಾಗಿ ಮೆರೆದ ಮಹಾಬಲರ ಹೆಸರು ಚಿರಸ್ಥಾಯಿಯಾಗಲಿ.</p>
<p>ಯಕ್ಷಗಾನಂ ಗೆಲ್ಗೆ ||<br />
(<a href="http://kannada.webdunia.com/newsworld/news/current/0910/29/1091029093_1.htm">ವೆಬ್‌ದುನಿಯಾದಲ್ಲಿ ಪ್ರಕಟಿತ</a>)</p>
  <a rel="nofollow" href="http://feeds.wordpress.com/1.0/gocomments/avisblog.wordpress.com/289/"><img alt="" border="0" src="http://feeds.wordpress.com/1.0/comments/avisblog.wordpress.com/289/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/289/"><img alt="" border="0" src="http://feeds.wordpress.com/1.0/delicious/avisblog.wordpress.com/289/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/289/"><img alt="" border="0" src="http://feeds.wordpress.com/1.0/stumble/avisblog.wordpress.com/289/" /></a> <a rel="nofollow" href="http://feeds.wordpress.com/1.0/godigg/avisblog.wordpress.com/289/"><img alt="" border="0" src="http://feeds.wordpress.com/1.0/digg/avisblog.wordpress.com/289/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/289/"><img alt="" border="0" src="http://feeds.wordpress.com/1.0/reddit/avisblog.wordpress.com/289/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=289&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/10/30/keremane-mahabala-hegade/feed/</wfw:commentRss>
		<slash:comments>0</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>
	</item>
		<item>
		<title>ರಾಜ್ಯ ಬಿಜೆಪಿಗೂ ಜಾಡ್ಯ: ಪ್ರವಾಹದಲ್ಲಿ ಸಿಲುಕಿದ ಕಮಲ</title>
		<link>http://avisblog.wordpress.com/2009/10/30/karnataka-bjp-in-dolldrums/</link>
		<comments>http://avisblog.wordpress.com/2009/10/30/karnataka-bjp-in-dolldrums/#comments</comments>
		<pubDate>Fri, 30 Oct 2009 05:00:05 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/2009/10/30/%e0%b2%b0%e0%b2%be%e0%b2%9c%e0%b3%8d%e0%b2%af-%e0%b2%ac%e0%b2%bf%e0%b2%9c%e0%b3%86%e0%b2%aa%e0%b2%bf%e0%b2%97%e0%b3%82-%e0%b2%9c%e0%b2%be%e0%b2%a1%e0%b3%8d%e0%b2%af-%e0%b2%aa%e0%b3%8d%e0%b2%b0/</guid>
		<description><![CDATA[ಅಧಿಕಾರದ ಮದ ಅಂತೀರೋ ಅಥವಾ ಅಧಿಕಾರ ಚಲಾಯಿಸಲು ಅನುಭವ ಸಾಲದು ಅಂತೀರೋ&#8230; ಇಲ್ಲಾ ಅಧಿಕಾರದ ಅಮಲು ಅಂತೀರೋ&#8230; ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಕೇಸರಿ ಧ್ವಜ ಊರಿದಾಗ, ಹೊಸ ಶಕೆ ಆರಂಭವಾಗುತ್ತದೆ, 60 ವರ್ಷಗಳಿಂದ ಕರ್ನಾಟಕಕ್ಕೆ ಆಗುತ್ತಿದ್ದ ಅನ್ಯಾಯ ಸರಿಯಾಗಬಹುದು ಎಂಬ ಮತದಾರರ ನಿರೀಕ್ಷೆ ಹುಸಿಯಾಗತೊಡಗಿದೆ. ಅಧಿಕಾರವೇರಿದ್ದ ಬಿಜೆಪಿ ಮಂದಿಗೆ ಅಧಿಕಾರವೇ ಶಾಪವಾಗುತ್ತಿದೆ ಮತ್ತು ಪಕ್ಷವನ್ನು ದುರಸ್ತಿ ಮಾಡುವ ಕೆಲಸದಲ್ಲಿ ಅವರಿಗೆ ರಾಜ್ಯದ ಹಿತ ಕಾಯಲು ಸಮಯ ಸಿಗುವಂತೆ ತೋರುತ್ತಿಲ್ಲ.
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಸಂಚು, ನಾಯಕತ್ವ [...]<img alt="" border="0" src="http://stats.wordpress.com/b.gif?host=avisblog.wordpress.com&blog=154345&post=287&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p>ಅಧಿಕಾರದ ಮದ ಅಂತೀರೋ ಅಥವಾ ಅಧಿಕಾರ ಚಲಾಯಿಸಲು ಅನುಭವ ಸಾಲದು ಅಂತೀರೋ&#8230; ಇಲ್ಲಾ ಅಧಿಕಾರದ ಅಮಲು ಅಂತೀರೋ&#8230; ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಕೇಸರಿ ಧ್ವಜ ಊರಿದಾಗ, ಹೊಸ ಶಕೆ ಆರಂಭವಾಗುತ್ತದೆ, 60 ವರ್ಷಗಳಿಂದ ಕರ್ನಾಟಕಕ್ಕೆ ಆಗುತ್ತಿದ್ದ ಅನ್ಯಾಯ ಸರಿಯಾಗಬಹುದು ಎಂಬ ಮತದಾರರ ನಿರೀಕ್ಷೆ ಹುಸಿಯಾಗತೊಡಗಿದೆ. ಅಧಿಕಾರವೇರಿದ್ದ ಬಿಜೆಪಿ ಮಂದಿಗೆ ಅಧಿಕಾರವೇ ಶಾಪವಾಗುತ್ತಿದೆ ಮತ್ತು ಪಕ್ಷವನ್ನು ದುರಸ್ತಿ ಮಾಡುವ ಕೆಲಸದಲ್ಲಿ ಅವರಿಗೆ ರಾಜ್ಯದ ಹಿತ ಕಾಯಲು ಸಮಯ ಸಿಗುವಂತೆ ತೋರುತ್ತಿಲ್ಲ.</p>
<p>ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಸಂಚು, ನಾಯಕತ್ವ ಬದಲಾವಣೆಯ ತಂತ್ರ, ದಿನಕ್ಕೊಂದು ಹೇಳಿಕೆ, ಮರುದಿನವೇ ನಿರಾಕರಣೆ, ಭಿನ್ನ ಮತ ಇದೆ ಎಂದು ಒಂದು ಕಡೆ, ಮತ್ತೊಂದೆಡೆ ಭಿನ್ನಮತವೇನಿಲ್ಲ ಎಂಬ ಸಮಜಾಯಿಷಿಗಳು, ಇಪ್ಪತ್ತನಾಲ್ಕು ಗಂಟೆ ಕರೆಂಟು ಕೊಡ್ತೀವಿ ಅಂತ ಹೇಳಿದ ಮರು ದಿನವೇ ಜನ ಕರೆಂಟಿಲ್ಲದೆ ಪರದಾಟ. ಇದು ಕರ್ನಾಟಕ ರಾಜಕೀಯದ ಸದ್ಯದ ಚಿತ್ರಣ.</p>
<p>ರಾಷ್ಟ್ರ ಮಟ್ಟದಲ್ಲಿಯೇ ಬಿಜೆಪಿ ಪರಿಸ್ಥಿತಿ ಅಯೋಮಯ. ಲೋಕಸಭೆ ಚುನಾವಣೆಯಿಂದಾರಭ್ಯ ಇತ್ತೀಚೆಗಿನ ಚುನಾವಣೆಗಳಲ್ಲೂ ಅದು ಎದ್ದು ಕಂಡಿದೆ. ಇದಕ್ಕೇ ಇರಬೇಕು, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿರುವುದು &#8211; ಬಿಜೆಪಿಗೆ ಸರ್ಜರಿ ಮಾತ್ರವಲ್ಲ, ಕೀಮೋ ಥೆರಪಿಯೇ ಬೇಕಾಗಬಹುದು ಅಂತ. ಒಟ್ಟಿನಲ್ಲಿ ಆಂತರಿಕ ಗೊಂದಲಗಳು, ವ್ಯಕ್ತಿ ಪ್ರತಿಷ್ಠೆ&#8230; ಇವೆಲ್ಲವೂ ಬಿಜೆಪಿಯ ಅಸ್ತಿತ್ವಕ್ಕೇ ಕೊಡಲಿಯೇಟು ಹಾಕುತ್ತಿದೆ ಎಂಬ ಅಂಶದಿಂದ ರಾಜ್ಯ ಮುಖಂಡರು ಕೂಡ ಪಾಠ ಕಲಿತಿಲ್ಲ.</p>
<p>ಹೀಗಾಗಿಯೇ ಕೆಸರೆರಚಾಟ ನಡೆಯುತ್ತಲೇ ಇದೆ. ಇದೀಗ ಎರಚಾಡಿಕೊಳ್ಳುತ್ತಿರುವ ಕೆಸರಿನಲ್ಲಿಯೇ ಇರುವ ಕಮಲ, ರಾಜ್ಯದಲ್ಲಿಯೂ ಮುದುಡುವ ಲಕ್ಷಣಗಳು ದಟ್ಟವಾಗತೊಡಗಿದೆ. ರಾಷ್ಟ್ರೀಯ ಬಿಜೆಪಿಯ ವೈರಸ್ ರಾಜ್ಯ ಬಿಜೆಪಿಗೂ ತಗುಲಿದಂತಿದೆ.</p>
<p>ಅಭಿವೃದ್ಧಿಯೇ ಮೂಲಮಂತ್ರ ಎಂದು ಹೇಳುತ್ತಾ ಮುಖ್ಯಮಂತ್ರಿ ಯಡಿಯೂರಪ್ಪ ಆತ್ಮವಿಶ್ವಾಸದಲ್ಲಿಯೇ ಈ 17 ತಿಂಗಳು ಆಡಳಿತ ಮಾಡುತ್ತಿದ್ದರು. ನಾನು ಪ್ರಾಮಾಣಿಕವಾಗಿದ್ದೇನೆ, ಹೀಗಾಗಿ ಯಾರೇನೇ ಹೇಳಿದರೂ ಕೇರ್ ಮಾಡಲ್ಲ, ತಪ್ಪು ಆಗುವುದು ಸಾಧ್ಯವೇ ಇಲ್ಲ ಎಂಬಂತಹ ಮನೋಭಾವ ಯಡಿಯೂರಪ್ಪರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.</p>
<p>ಅದಕ್ಕೆ ಉದಾಹರಣೆ, ಇತ್ತೀಚೆಗೆ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಟಿವಿ ಚಾನೆಲ್‌ಗಳ ಲೈವ್ ಕಾರ್ಯಕ್ರಮದಲ್ಲಿ, ಅನ್ಯಾಯವಾಗಿರುವುದರ ಕುರಿತು ದೂರುಗಳು ಬಂದಾಗ ಅವರು ಉತ್ತರಿಸುತ್ತಿದ್ದ ರೀತಿ. ತಕ್ಷಣವೇ ಕ್ರಮ ಕೈಗೊಳ್ಳುತ್ತೇನೆ, ವಾರದೊಳಗೆ ಫಲಿತಾಂಶ ಬಾರದಿದ್ದಲ್ಲಿ ನೋಡಿ ಅಂತ ಸವಾಲು ಕೂಡ ಹಾಕಿದ್ದರವರು. ಪತ್ರಿಕಾ ಗೋಷ್ಠಿಗಳಲ್ಲೂ ಇಂಥ ಆತ್ಮವಿಶ್ವಾಸದ ಮಾತುಗಳೇ ಕೇಳಿಬರುತ್ತಿದ್ದವು. ಇಂತಿಪ್ಪ ಯಡಿಯೂರಪ್ಪ ಈಗ ಕಂಗೆಟ್ಟಿದ್ದಾರೆ, ಮನದೊಳಗೆ ಅಳುಕಿದೆ, ಹತಾಶೆಯೂ ಅವರ ಮಾತುಗಳಲ್ಲೇ ವ್ಯಕ್ತವಾಗುತ್ತಿದೆ.</p>
<p>ಭಿನ್ನಮತ ಇಲ್ಲವೆಂದಿಲ್ಲ, ಇದೆ, ಚರ್ಚಿಸಿ ಪರಿಹಾರ ಕೈಗೊಳ್ಳಬೇಕಾಗಿದೆ ಎನ್ನುತ್ತಿದ್ದಾರೆ. ಒಂದು ಕಾರ್ಯಕ್ರಮದಲ್ಲಂತೂ, ಒಳ್ಳೆಯ ಕೆಲಸ ಮಾಡುವುದು ಅಪರಾಧವೇ? ಪ್ರಾಮಾಣಿಕವಾಗಿರುವುದು ತಪ್ಪೇ ಎಂದು ಹೇಳಿಕೊಂಡು ಹತಾಶೆಯನ್ನೂ ಪ್ರದರ್ಶಿಸಿದ್ದರು. ಉತ್ತರ ಕರ್ನಾಟಕದಲ್ಲಿ ಪ್ರವಾಹ ಪೀಡಿತರಿಗೆ ನೆರವು ವಿತರಣೆಯ ನಿಟ್ಟಿನಲ್ಲಿ ಸೂಕ್ತ ಸಹಕಾರ ಸಿಗುತ್ತಿಲ್ಲ ಎಂಬ ಮಾತೂ ಅವರ ಬಾಯಿಂದಲೇ ಬಂದಿದೆ.</p>
<p>ನೆರೆ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ, ಸರಕಾರವನ್ನು ಬೈಪಾಸ್ ಮಾಡಿ, ನಾವೇ ಸಂತ್ರಸ್ತರಿಗೆ ಮನೆ ಕಟ್ಟಿಕೊಡುತ್ತೇವೆ ಎಂಬ ಕ್ರಮಕ್ಕೆ ಅಡ್ಡಿ ಮತ್ತು ಅದಿರು ಲಾರಿಗಳಿಗೆ ಸುಂಕ ಹೇರುವ ನಿರ್ಧಾರಗಳಿಂದಾಗಿ, ಸರಕಾರಕ್ಕೆ &#8216;ಆಪರೇಶನ್ ಕಮಲ&#8217; ಮೂಲಕ ರಾಶಿ ರಾಶಿ ಎಂಎಲ್ಲೆಗಳನ್ನು ತಂದು ಹಾಕಿದ ರೆಡ್ಡಿ ಸಹೋದರರು ಕೆಂಗಣ್ಣು ಬೀರಿದ್ದಾರೆ. ಸರಕಾರದ ಉಳಿವಿಗೆ ತಮ್ಮೆಲ್ಲಾ ರೀತಿಯ &#8216;ಬಲ&#8217;ಗಳನ್ನು ಒಟ್ಟುಗೂಡಿಸಿದ್ದ ರೆಡ್ಡಿ ಸಹೋದರರ ಹಂಗಿನಲ್ಲಿದ್ದಾರೆ ಯಡಿಯೂರಪ್ಪ. ಏನೂ ಮಾಡಲಾರದ ಸ್ಥಿತಿ.</p>
<p>ಅದಿರು ಲಾರಿಗಳಿಗೆ ಹೆಚ್ಚುವರಿ ಸುಂಕ ಹೇರುವ ನಿರ್ಧಾರ ಜನಹಿತದ ದೃಷ್ಟಿಯಿಂದ ಸಂಪೂರ್ಣ ಸ್ವಾಗತಾರ್ಹ. ಯಾಕೆಂದರೆ, ಈ ಯಮಸದೃಶ ಲಾರಿಗಳು ಹೆದ್ದಾರಿಯಲ್ಲಿ ಮಾಡುವ ಅವಾಂತರ, ಅವಘಡಗಳು ಒಂದೇ ಎರಡೆ? ರಾಜ್ಯದ ರಸ್ತೆಗಳಂತೂ ಗಬ್ಬೆದ್ದು ಹೋಗಿದ್ದೇ ಈ ಭಾರದ ಅದಿರು ಲಾರಿಗಳಿಂದ. ಹೀಗಿರುವಾಗ ಆ ರಸ್ತೆಗಳ ಸುಧಾರಣೆಗೆ ಅದಿರು ಲಾರಿಗಳನ್ನೇ ಆಶ್ರಯಿಸಬೇಕಾದ್ದು ಸರಿ.</p>
<p>ಗಣಿ ಧಣಿಗಳೆಂದೇ ಖ್ಯಾತರಾಗಿರುವ ಶ್ರೀರಾಮುಲು, ಕಂದಾಯ ಸಚಿವ ಕರುಣಾಕರ ರೆಡ್ಡಿ, ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಇವರೆಲ್ಲರೂ ಸರಕಾರಕ್ಕೇ, ಮತ್ತು ವಿಶೇಷವಾಗಿ ಮುಖ್ಯಮಂತ್ರಿಗೇ ಸವಾಲೊಡ್ಡಿ, ತಾವೇ ಪರ್ಯಾಯ ಸರಕಾರವೆಂಬಂತೆ ನೆರೆ ಸಂತ್ರಸ್ತರಿಗೆ 500 ಕೋಟಿ ರೂ. ವೆಚ್ಚದಲ್ಲಿ 50 ಸಾವಿರ ಮನೆ ನಿರ್ಮಿಸಿಕೊಡುವ ಯೋಜನೆಗೆ ಚಾಲನೆ ನೀಡಿಯೇ ಸಿದ್ಧ ಎಂದು ಬಹಿರಂಗವಾಗಿ ತೊಡೆ ತಟ್ಟಿದ್ದಾರೆ. ಇದಕ್ಕೆ ಸಚಿವರಾದ ಗೂಳಿಹಟ್ಟಿ ಶೇಖರ್, ಆನಂದ ಅಸ್ನೋಟಿಕರ್, ಬಾಲಚಂದ್ರ ಚಾರಕಹೊಳಿ, ಶಿವನಗೌಡ ನಾಯಕ ಮತ್ತು ಶಿವರಾಜ್ ತಂಗಡಗಿ ದನಿಗೂಡಿಸಿದ್ದಾರೆ. ಇದು ಸರಕಾರದ ಕೆಲಸ. ಹೀಗಾಗಿ ಎಲ್ಲರೂ ಒಟ್ಟಾಗಿ ಮಾಡೋಣ ಎಂಬ ಮುಖ್ಯಮಂತ್ರಿ ಮಾತಿಗೆ ಬೆಲೆ ಕೊಡಲು ಅವರು ಸಿದ್ಧರಿಲ್ಲ. ತಮಗೆ ಬರುವ ಹೆಸರನ್ನು, ಖ್ಯಾತಿಯನ್ನು ತಗ್ಗಿಸಲು ಸಿಎಂ ಯತ್ನಿಸುತ್ತಿದ್ದಾರೆ ಎಂಬುದು ರೆಡ್ಡಿ ಸಹೋದರರ ಅಭಿಮತ. ಈ ಕಾರಣಕ್ಕೆ ಪಕ್ಷದಲ್ಲಿ, ಸರಕಾರದಲ್ಲಿ ಒಡಕು.</p>
<p>ಮತ್ತೊಂದೆಡೆ ರೇಣುಕಾಚಾರ್ಯ ಅವರ ನೇತೃತ್ವದ ಪುಟ್ಟ ಗಡಣವೊಂದು ಬೇರೆಯೇ ಮುಚ್ಚಿದ ಬಾಗಿಲ ಸಭೆ ನಡೆಸಿದೆ. ಹೊರಗೆ ಬಂದ ಮೇಲೆ &#8216;ಇಲ್ಲ, ಇಲ್ಲ, ಭಿನ್ನಮತ ಇಲ್ಲ&#8217; ಎಂಬ ಸಮಜಾಯಿಷಿ. ಒಟ್ಟಿನಲ್ಲಿ ಬಿಜೆಪಿಯ ಪವರ್ ಸೆಂಟರ್ ಗೊಂದಲದ ಗೂಡಾಗಿದೆ. ಯಾರು ಯಾರ ಪರ ಎಂಬುದೇ ಗೊತ್ತಾಗುತ್ತಿಲ್ಲ. ಅಲ್ಲಲ್ಲಿ ಮುಚ್ಚಿದ ಬಾಗಿಲ ಸಭೆಯೂ ಸಂಧಾನ ಸಭೆಗಳೂ ನಡೆಯುತ್ತಿವೆ. ಹೊರಗೆ ಬಂದಾಗ &#8216;ಏನೂ ಇಲ್ಲ, ಇದು ಮಾಮೂಲಿ ಸಭೆ&#8217; ಎಂಬುದೇ ಉತ್ತರ. ನಡು ನಡುವೆ, ಈಗಾಗಲೇ ಭಿನ್ನಮತದ ಕಹಳೆಯೂದಿದ್ದ ಜಗದೀಶ್ ಶೆಟ್ಟರ್, ಈಶ್ವರಪ್ಪ ಹೆಸರುಗಳೂ, ಸಂಸದ ಅನಂತ್ ಕುಮಾರ್ ಹೆಸರುಗಳೂ ಬಂದು ಹೋಗುತ್ತಿವೆ.</p>
<p>ರೆಡ್ಡಿ ಸಹೋದರರು ಮತ್ತು ಇತರ ಸಚಿವ-ಶಾಸಕರ ಅಸಮಾಧಾನಕ್ಕೆ ಕಾರಣವಾದ ಮತ್ತೊಂದು ಅಂಶವೆಂದರೆ ಯಡಿಯೂರಪ್ಪ ಅವರು ಶಾಸಕರನ್ನು ನಿರ್ಲಕ್ಷಿಸುತ್ತಿದ್ದಾರೆ, ಸೂಕ್ತ ಅಧಿಕಾರ ನೀಡುತ್ತಿಲ್ಲ ಎಂಬುದು. ನೆರೆ ಸಂತ್ರಸ್ತರಿಗಾಗಿ ರಾಜ್ಯದ ಜನ ಉದಾರವಾಗಿ ದಾನ ನೀಡುತ್ತಿದ್ದಾರೆ, ಅದು ಕೋಟಿ ಕೋಟಿ ಸಂಗ್ರಹವಾಗುತ್ತಿದೆ ಎಂಬುದನ್ನು ಮತ್ತು ಈ ಅಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ ಏನು ಅಂದುಕೊಳ್ಳಬಹುದು? ಎಂಬುದು ಓದುಗರಿಗೆ ಬಿಟ್ಟ ವಿಚಾರ.</p>
<p>ಊರು ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ ಎಂಬಂತಾಗಿದೆ ರಾಜ್ಯದ ಜನತೆಯ ಸ್ಥಿತಿ. ರಾಜ್ಯ ಹಿಂದೆಂದೂ ಕಂಡು ಕೇಳರಿಯದ ದುರಂತಕ್ಕೆ ಈಡಾಗಿರುವಾಗ ಈ ಕ್ಷುಲ್ಲಕ ರಾಜಕೀಯದಿಂದಾಗಿ ಸರಕಾರದ ಎಲ್ಲ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ, ಅಭಿವೃದ್ಧಿ ಕಾರ್ಯಗಳಿಗೆ ಅಡಚಣೆಯಾಗುತ್ತಿದೆ. ಜನಹಿತ ಕಾರ್ಯಗಳ ಬದಲಾಗಿ, ಪಕ್ಷ ಹಿತ ಕಾರ್ಯಕ್ಕೇ ಸಮಯ ನೀಡಬೇಕಾದ ಅನಿವಾರ್ಯತೆ ಊರಿನ ದೊರೆಗೆ.</p>
<p>ಈ ಪರಿಸ್ಥಿತಿಯಿರುವಾಗ, ಒಂದು ರಾಜ್ಯದ ಜನರ ರಕ್ಷಣೆಯ ಬಹುಮೂಲ್ಯ ಜವಾಬ್ದಾರಿ ಇರುವ ಮಂತ್ರಿಗಳು, ಶಾಸಕರು ಈಗಲಾದರೂ ಜನಹಿತವೇ ಪರಮಗುರಿ ಎಂದು ಬರೇ ಬಾಯಲ್ಲಿ ಹೇಳಿಕೊಂಡು ತಿರುಗುತ್ತಿರುವ ಬದಲು, ಒಂದಿನಿತು ಹೊಣೆಯರಿತು ಕೈಯಲ್ಲಿ ಮಾಡಿ ತೋರಿಸಬೇಕಾಗಿದೆ. ನೆರೆ ಸಂತ್ರಸ್ತರೆಲ್ಲರಿಗೂ ಸೂಕ್ತ ಮನೆ-ಮಠ ದಯವಿಟ್ಟು ಕಲ್ಪಿಸಿಕೊಡಿ ರಾಜಕಾರಣಿಗಳೇ&#8230; ಅದೆಷ್ಟು ಜನ ಬೀದಿಗೆ ಬಿದ್ದಿದ್ದಾರೆ, ಅದೆಷ್ಟು ಜನ ಗುಳೆ ಹೊರಟಿದ್ದಾರೆ&#8230; ಅವರಿಗೆಲ್ಲಾ ಒಂದು ಸೂರು ಅಂತ ಮಾಡಿಕೊಡಿ, ಅಷ್ಟರವರೆಗೆ ನಿಮ್ಮ ಈ ಕ್ಷುಲ್ಲಕ ರಾಜಕೀಯ ದೂರವಿಡಿ. ಉಳಿದದ್ದೆಲ್ಲಾ ಆಮೇಲೆ. ಸ್ವಾರ್ಥಕ್ಕಾಗಿ ರಾಜ್ಯದ ಅಭಿವೃದ್ಧಿ ಬಲಿಯಾಗುವುದು ಸರ್ವಥಾ ಸಲ್ಲದು ಎಂಬುದು ಗಮನಕ್ಕೆ ಬಾರದೇ ಹೋದಲ್ಲಿ ಮತದಾರರು ಕೈಯಲ್ಲಿ ತಮ್ಮ ಅಸ್ತ್ರ ಹಿಡಿದುಕೊಂಡು ಕುಳಿತಿದ್ದಾರೆ, ಮತ್ತೊಂದು ಚುನಾವಣೆ ಬರಲಿ, ಇವರಿಗೆ ಪಾಠ ಕಲಿಸುತ್ತೇವೆ ಎಂಬ ಮನೋಭಾವದೊಂದಿಗೆ!<br />
(<a href="http://kannada.webdunia.com/newsworld/news/current/0910/27/1091027088_1.htm">ವೆಬ್‌ದುನಿಯಾದಲ್ಲಿ ಪ್ರಕಟಿತ</a>)</p>
  <a rel="nofollow" href="http://feeds.wordpress.com/1.0/gocomments/avisblog.wordpress.com/287/"><img alt="" border="0" src="http://feeds.wordpress.com/1.0/comments/avisblog.wordpress.com/287/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/287/"><img alt="" border="0" src="http://feeds.wordpress.com/1.0/delicious/avisblog.wordpress.com/287/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/287/"><img alt="" border="0" src="http://feeds.wordpress.com/1.0/stumble/avisblog.wordpress.com/287/" /></a> <a rel="nofollow" href="http://feeds.wordpress.com/1.0/godigg/avisblog.wordpress.com/287/"><img alt="" border="0" src="http://feeds.wordpress.com/1.0/digg/avisblog.wordpress.com/287/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/287/"><img alt="" border="0" src="http://feeds.wordpress.com/1.0/reddit/avisblog.wordpress.com/287/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=287&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/10/30/karnataka-bjp-in-dolldrums/feed/</wfw:commentRss>
		<slash:comments>0</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>
	</item>
		<item>
		<title>ನೆರೆ ಚಿತ್ರಣ: ಕರ್ನಾಟಕದ ಬಗೆಗೆ ಯಾಕೀ ಅವಜ್ಞೆ?</title>
		<link>http://avisblog.wordpress.com/2009/10/08/flood-in-karnataka/</link>
		<comments>http://avisblog.wordpress.com/2009/10/08/flood-in-karnataka/#comments</comments>
		<pubDate>Thu, 08 Oct 2009 10:16:43 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/?p=285</guid>
		<description><![CDATA[ಕಳೆದ ಕೆಲವಾರು ದಿನಗಳಿಂದ ರಾಷ್ಟ್ರೀಯ ಸುದ್ದಿ ವಾಹಿನಿಗಳನ್ನು, ರಾಷ್ಟ್ರ ಮಟ್ಟದ ಪತ್ರಿಕೆಗಳನ್ನು, ಅಂತರಜಾಲ ಮಾಧ್ಯಮಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ? ಹೌದು. ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳು ನೂರು ವರ್ಷಗಳಲ್ಲಿ ಹಿಂದೆಂದೂ ಕಂಡು ಕೇಳರಿಯದ ಅತಿವೃಷ್ಟಿ, ಪ್ರವಾಹಕ್ಕೆ ತುತ್ತಾಗಿ ಅಪಾರ ಜೀವ ಹಾನಿಯಾಗಿದೆ ಮತ್ತು ಆಸ್ತಿ ಪಾಸ್ತಿ ನಷ್ಟವಾಗಿದೆ ಎಂಬುದನ್ನು ಎಲ್ಲ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಆದರೆ, ಹೆಚ್ಚಿನ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಗಮನಿಸಿದರೆ, ಕರ್ನಾಟಕದ ಸಂಕಷ್ಟವನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದಂತೆ ಕಂಡು ಬರುತ್ತದೆ.
ಸಮಗ್ರ ಸುದ್ದಿಯನ್ನು ಬಿತ್ತರಿದ ಅಥವಾ ಪ್ರಕಟಿಸಿದ ಸಂದರ್ಭ, [...]<img alt="" border="0" src="http://stats.wordpress.com/b.gif?host=avisblog.wordpress.com&blog=154345&post=285&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p>ಕಳೆದ ಕೆಲವಾರು ದಿನಗಳಿಂದ ರಾಷ್ಟ್ರೀಯ ಸುದ್ದಿ ವಾಹಿನಿಗಳನ್ನು, ರಾಷ್ಟ್ರ ಮಟ್ಟದ ಪತ್ರಿಕೆಗಳನ್ನು, ಅಂತರಜಾಲ ಮಾಧ್ಯಮಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ? ಹೌದು. ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳು ನೂರು ವರ್ಷಗಳಲ್ಲಿ ಹಿಂದೆಂದೂ ಕಂಡು ಕೇಳರಿಯದ ಅತಿವೃಷ್ಟಿ, ಪ್ರವಾಹಕ್ಕೆ ತುತ್ತಾಗಿ ಅಪಾರ ಜೀವ ಹಾನಿಯಾಗಿದೆ ಮತ್ತು ಆಸ್ತಿ ಪಾಸ್ತಿ ನಷ್ಟವಾಗಿದೆ ಎಂಬುದನ್ನು ಎಲ್ಲ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.</p>
<p>ಆದರೆ, ಹೆಚ್ಚಿನ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಗಮನಿಸಿದರೆ, ಕರ್ನಾಟಕದ ಸಂಕಷ್ಟವನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದಂತೆ ಕಂಡು ಬರುತ್ತದೆ.</p>
<p>ಸಮಗ್ರ ಸುದ್ದಿಯನ್ನು ಬಿತ್ತರಿದ ಅಥವಾ ಪ್ರಕಟಿಸಿದ ಸಂದರ್ಭ, ಕರ್ನಾಟಕಕ್ಕಿಂತ ಕಡಿಮೆ ನಷ್ಟ ಅನುಭವಿಸಿದ ಆಂಧ್ರಪ್ರದೇಶವನ್ನೇ ಪ್ರಮುಖವಾಗಿರಿಸಿ ವರದಿಯಾಗಿರುವುದನ್ನು ನೀವು ಗಮನಿಸಿರಬಹುದು. ಉದಾಹರಣೆಗೆ &#8220;ಆಂಧ್ರ ಸಹಿತ ದಕ್ಷಿಣ ಭಾರತದಲ್ಲಿ ಪ್ರವಾಹ, ಭಾರೀ ಸಾವು ನೋವು&#8221; ಅಥವಾ &#8220;ಭಾರೀ ನೆರೆ: ಆಂಧ್ರ, ಕರ್ನಾಟಕ ತತ್ತರ&#8221; ಎಂಬರ್ಥದ ತಲೆಬರಹಗಳ ಮೂಲಕ ನೆರೆಯ ರಾಜ್ಯಕ್ಕೆ ಪ್ರಾಧಾನ್ಯತೆ ನೀಡಿರುವ ವರದಿ ಗಮನಿಸಿದರೆ, ಖಂಡಿತವಾಗಿ ಕನ್ನಡಿಗರ ಮನಸ್ಸಿಗೆ ನೋವಾಗದಿರದು.</p>
<p>ಇಲ್ಲ ಸಲ್ಲದ ಸಣ್ಣ ಪುಟ್ಟ ವಿಷಯಕ್ಕೆಲ್ಲಾ ಬ್ರೇಕಿಂಗ್ ನ್ಯೂಸ್ ಎಂಬ ಕೆಂಪು ಪರದೆ ಹಾಕಿಕೊಂಡು, ಪದೇ ಪದೇ ತೋರಿಸಿದ್ದನ್ನೇ ತೋರಿಸುತ್ತಾ, ಜನರಲ್ಲಿ ಸಮೂಹ ಸನ್ನಿ ಸೃಷ್ಟಿಸುತ್ತಿದ್ದ ಮಾಧ್ಯಮಗಳು, ಕರ್ನಾಟಕದ ನೆರೆ ಪೀಡಿತ ಸ್ಥಳಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿದ್ದೇಕೆ ಎಂಬುದು ಅರ್ಥವಾಗದ ಸಂಗತಿ.</p>
<p>ಹೌದು. ಮಾನವೀಯತೆ ದೃಷ್ಟಿಯಿಂದ ನೋಡಿದರೆ, ಆಂಧ್ರದಲ್ಲಿಯೂ ಸಾಕಷ್ಟು ಸಾವು ನೋವು ಸಂಭವಿಸಿದೆ, ಅಲ್ಲಿನ ಸಂತ್ರಸ್ತರಿಗೂ ಸಾಕಷ್ಟು ನೆರವು ದೊರೆಯಬೇಕು, ಅವರೂ ನಮ್ಮ ಅಣ್ಣ ತಮ್ಮಂದಿರಲ್ಲವೇ? ಅವರಿಗೂ ಸಹಾಯದ ಅಗತ್ಯವಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅಲ್ಲಿನ ಸಾವು ನೋವನ್ನು ಸಚಿತ್ರವಾಗಿ ವರದಿ ಮಾಡುವ ಸಂದರ್ಭದಲ್ಲಿ ಅದಕ್ಕಿಂತ ಹೆಚ್ಚು ನಷ್ಟ ಅನುಭವಿಸಿದ ಕರ್ನಾಟಕವನ್ನು ಕಡೆಗಣಿಸಿರುವುದು ಮಾತ್ರ ಸರ್ವಥಾ ತಪ್ಪು.</p>
<p>ಪ್ರವಾಹ ಪೀಡಿತರಿಗೆ ಅಂತಾರಾಷ್ಟ್ರೀಯ ಮಟ್ಟದ ನೆರವು ದೊರೆಯುವಲ್ಲಿ ಈ ರಾಷ್ಟ್ರೀಯ ಮಟ್ಟದ, ಅಂತಾರಾಷ್ಟ್ರೀಯ ಸಹಯೋಗವಿರುವ ಮಾಧ್ಯಮಗಳು ಪ್ರಧಾನ ಪಾತ್ರ ವಹಿಸುತ್ತವೆ ಎಂಬುದನ್ನು ಯಾರೂ ಅಲ್ಲಗಳೆಯಲಾಗದು.</p>
<p>ಈಚೆಗೆ ನಡೆದ ಕೆಲವು ಘಟನೆಗಳು ನೆನಪಿರಬಹುದು. ಪಬ್ ಮೇಲಿನ ದಾಳಿ ಪ್ರಕರಣವಿರಲಿ, ಚರ್ಚ್ ದಾಳಿಯ ಘಟನೆಗಳಿರಲಿ, ಆ ದಿನಗಳನ್ನು ನೆನಪಿಸಿಕೊಂಡರೆ, ನಮ್ಮ ಮಾಧ್ಯಮಗಳ ಶಕ್ತಿ ಎಷ್ಟಿತ್ತೆಂಬುದು ಜಗಜ್ಜಾಹೀರಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಮಾತ್ರವಲ್ಲ, ಭಾರತವನ್ನೇ ಜನರು ಸಂಶಯ ದೃಷ್ಟಿಯಿಂದ ನೋಡುವಂತಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆಗಳು ಕೂಡ ಹರಿದುಬಂದಿದ್ದವು. ಕರ್ನಾಟಕದ ಹೆಸರೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುತ್ತಿತ್ತು. (ಆದರೆ ಅದು ಬೇಡವಾದ ಕಾರಣಕ್ಕೆ ಎಂಬುದು ಬೇರೆ ವಿಷಯ.)</p>
<p>ಈಗ ಕರ್ನಾಟಕದ ಜನರ ಸಂಕಷ್ಟಗಳನ್ನು ಕೂಡ ಅದೇ ಮಾದರಿಯಲ್ಲಿ ಬಿಂಬಿಸಬಹುದಿತ್ತಲ್ಲ? ವಿದೇಶೀ ನೆರವು ಹರಿದುಬರಲು ನೆರವಾಗಬಹುದಿತ್ತಲ್ಲ? ಸರಕಾರೇತರ ಸಂಸ್ಥೆಗಳಿಂದ ಪರಿಹಾರ ಕೇಂದ್ರಗಳು, ಪರಿಹಾರ ಸಾಮಗ್ರಿಗಳು ಸಾಕಷ್ಟು ದೊರೆಯುತ್ತಿತ್ತಲ್ಲವೇ? ನಮ್ಮ ನೊಂದು ಬೆಂದ ಕನ್ನಡಿಗರಿಗೆ ಒಂದಿಷ್ಟು ಬಟ್ಟೆ ಬರೆ, ಹೊಟ್ಟೆಗೆ ಕೂಳು, ಮತ್ತೊಂದಿನಿತು ಸಾಂತ್ವನ ದೊರೆಯುತ್ತಿತ್ತು. ಯೋಚಿಸಿ ನೋಡಿದರೆ, ಹೌದು ಅನ್ನಿಸುವುದಿಲ್ಲವೆ?</p>
<p>ಕೇಂದ್ರ ಸರಕಾರ ಕೂಡ ಕರ್ನಾಟಕದಲ್ಲಿ ಸಂತ್ರಸ್ತರಿಗೆ ಪರಿಹಾರ ನಿಧಿ ವಿತರಣೆಯಲ್ಲಿ ಅನ್ಯಾಯ ಮಾಡಿದೆ, ತಾರತಮ್ಯ ಎಸಗಿದೆ ಎಂಬ ಆರೋಪಗಳ ನಡುವೆಯೇ, ಇದುವರೆಗೆ ಬಿಡುಗಡೆಯಾದ ಹಣ ಹಿಂದೆ ಕಾಡಿದ ಅನಾವೃಷ್ಟಿ ಪರಿಹಾರವೇ ಹೊರತು, ಈಗಿನ ನೆರೆ ಪರಿಹಾರ ಅಲ್ಲ ಎಂದು ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಹೀಗಾಗಿ ಇದು ಈಗ ವಿವಾದವಾಗಿ ಉಳಿದಿಲ್ಲ. ಕಳೆದ ವಾರ ಕೇಂದ್ರವು ಆಂಧ್ರಕ್ಕೆ 420 ಕೋಟಿ ರೂ., ಕರ್ನಾಟಕಕ್ಕೆ 148 ಕೋಟಿ ರೂ. ಮತ್ತು ಬುಧವಾರ ಆಂಧ್ರಕ್ಕೆ 156.84 ಕೋಟಿ, ಕರ್ನಾಟಕಕ್ಕೆ 52.26 ಕೋಟಿ ರೂ. ಬಿಡುಗಡೆಗೊಳಿಸಿದೆ. ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಬೇಕಿರುವ ಹಣವನ್ನು, ಇದೀಗ ನೆರೆ ಪರಿಹಾರಕ್ಕೂ ಉಪಯೋಗಿಸಬಹುದೆಂಬ ಕಾರಣಕ್ಕೆ ಶೀಘ್ರವಾಗಿ ಬಿಡುಗಡೆ ಮಾಡಲಾಗಿದೆ. ಅದು ನೆರೆ ಪರಿಹಾರದ್ದಲ್ಲ, ಕೆಲವು ತಿಂಗಳ ಹಿಂದೆ ಕಾಡಿದ ಬರಕ್ಕೆ ಕೇಂದ್ರದ ಪರಿಹಾರ ಎಂಬ ಕಾರಣಕ್ಕೆ ನಮಗೆ ತಾರತಮ್ಯವಾಗಿಲ್ಲ ಎಂದು ನಾವು ತೃಪ್ತಿಪಟ್ಟುಕೊಳ್ಳಬಹುದು.</p>
<p>ಮಾಧ್ಯಮಗಳ ಈ ರೀತಿಯ ಪ್ರಚಾರದಿಂದಾಗಿಯೋ ಏನೋ, ಕರ್ನಾಟಕವೀಗ ನಿರ್ಲಕ್ಷಿತವಾಗಿದೆ. ಆಂಧ್ರ ಪ್ರದೇಶದಲ್ಲಿ 700ಕ್ಕೂ ಹೆಚ್ಚು ಸೇನಾ ಸಿಬ್ಬಂದಿ, 23 ವಿಶೇಷ ದೋಣಿಗಳು, 11 ಮೋಟಾರು ದೋಣಿ, 11 ಪರಿಹಾರ ತಂಡಗಳು ಮತ್ತು 3 ವೈದ್ಯಕೀಯ ತಂಡಗಳು ಕಾರ್ಯಾಚರಣೆಗಿಳಿದಿದ್ದರೆ, ಕರ್ನಾಟಕಕ್ಕೆ 12 ವಿಶೇಷ ದೋಣಿ, 6 ಮೋಟಾರು ದೋಣಿ, 4 ಪರಿಣತ ಈಜುಗಾರರ ತಂಡಗಳು ಸೇರಿದಂತೆ ಹಲವು ಪರಿಹಾರ ಸಾಮಾಗ್ರಿಗಳನ್ನು ಕೇಂದ್ರ ನೀಡಿದೆ.</p>
<p>ನಷ್ಟದ ಅಂದಾಜು: ಆರಂಭಿಕ ಅಂದಾಜಿನ ಪ್ರಕಾರ, ರಾಜ್ಯದಲ್ಲಾಗಿರುವ ನಷ್ಟದ ಪ್ರಮಾಣ ಸುಮಾರು 16,500 ಕೋಟಿ ರೂ. ರಾಜ್ಯದ 15 ಜಿಲ್ಲೆಗಳಲ್ಲಿ ಸುಮಾರು ಒಂದೂವರೆ ಸಾವಿರ ಹಳ್ಳಿಗಳು ಪ್ರವಾಹದ ಭಯಾನಕತೆಗೆ ಸಾಕ್ಷಿಯಾಗಿದ್ದು, ಸುಮಾರು 3 ಲಕ್ಷ ಮನೆಗಳು ಪೂರ್ಣ ಅಥವಾ ಭಾಗಶಃ ಹಾನಿಗೀಡಾಗಿವೆ. 25 ಲಕ್ಷ ಹೆಕ್ಟೇರ್ ಬೆಳೆ ಸಂಪೂರ್ಣ ನಾಶವಾಗಿದೆ. ಸೇತುವೆಗಳು, ಕುಡಿಯುವ ನೀರಿನ ಟ್ಯಾಂಕುಗಳು, ವಿದ್ಯುತ್ ವಿತರಣೆ ಮುಂತಾದ ಮೂಲಸೌಕರ್ಯಗಳೆಲ್ಲವೂ ಬಹುವಾಗಿ ಹಾನಿಗೀಡಾಗಿದೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 205 ದಾಟಿದೆ. ಅಂದಾಜು 20 ಲಕ್ಷ ಮಂದಿ ನಿರಾಶ್ರಿತರಾಗಿದ್ದು, ನಷ್ಟದ ಅಂದಾಜು ಸುಮಾರು 16,500 ಕೋಟಿ ರೂ.</p>
<p>ಆಂಧ್ರದಲ್ಲಾದ ಹಾನಿಯ ಬಗ್ಗೆ ಗಮನ ಹರಿಸಿದರೆ, 5 ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು, 70ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಒಟ್ಟು 500ರಷ್ಟು ಹಳ್ಳಿಗಳು ಬಾಧೆಗೀಡಾಗಿವೆ. ಸುಮಾರು 15 ಲಕ್ಷ ಮಂದಿ ನಿರಾಶ್ರಿತರಾಗಿದ್ದು, ನಷ್ಟದ ಅಂದಾಜು 12 ಸಾವಿರ ಕೋಟಿ ರೂ.</p>
<p>ಇನ್ನು, ನೆರೆ ಬಂದಾಗ ಪ್ರಧಾನಿ ಮತ್ತು ಕೇಂದ್ರದ ಸಚಿವರು ವೈಮಾನಿಕ ಸಮೀಕ್ಷೆ ನಡೆಸುವುದು ರೂಢಿ. ಆದರೆ, ಇದರಲ್ಲಿಯೂ ಮೊದಲು ಆಂಧ್ರ ಪ್ರದೇಶಕ್ಕೆ, ಆ ಬಳಿಕ ಕರ್ನಾಟಕಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಗೃಹ ಸಚಿವ ಚಿದಂಬರಂ ಮಾಡಿದ್ದೂ ಅದನ್ನೇ. ಅವಸರವಸರವಾಗಿ ಆಂಧ್ರದ ಎಲ್ಲ 5 ನೆರೆ ಪೀಡಿತ ಜಿಲ್ಲೆಗಳ ಸಮೀಕ್ಷೆ ನಡೆಸಿದ್ದ ಅವರು, ಕರ್ನಾಟಕದಲ್ಲಿ ಎರಡು ಜಿಲ್ಲೆಗಳಿಗೆ ಮಾತ್ರವೇ ಭೇಟಿ ನೀಡಿ, ಚುನಾವಣೆ ನಡೆಯುತ್ತಿರುವ ಮಹಾರಾಷ್ಟ್ರಕ್ಕೆ ಧಾವಿಸಿದ್ದರು.</p>
<p>ಇಷ್ಟು ಮಾತ್ರವಲ್ಲದೆ, ಈ ಪರಿ ಸಾವು-ನೋವು-ನಾಶ-ನಷ್ಟ ಸಂಭವಿಸಿದ್ದರೂ ಪ್ರಧಾನಮಂತ್ರಿಯವರ ಸಮೀಕ್ಷಾ ಕಾರ್ಯಕ್ರಮ ಮುಂದೂಡಲಾಗಿದೆ. ಅವರು ಹರ್ಯಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಪೂರ್ವ ನಿಗದಿತ ಕಾರ್ಯಕ್ರಮದ ಪ್ರಕಾರ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಮೊದಲು ಆಂಧ್ರ ಪ್ರದೇಶಕ್ಕೆ ಭೇಟಿ ನೀಡಿ, ಸಂಜೆ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳ ವೈಮಾನಿಕ ಸರ್ವೇಕ್ಷಣೆ ನಡೆಸಲಿದ್ದಾರೆ.</p>
<p>ಈ ಸಣ್ಣ ಪುಟ್ಟ ವಿಷಯಗಳೆಲ್ಲವೂ ಜನರ ಮನಸ್ಸಿನಲ್ಲಿ &#8216;ಆಂಧ್ರಕ್ಕೆ ಪ್ರಾಧಾನ್ಯತೆ&#8217; ನೀಡಲಾಗುತ್ತಿದೆ ಎಂಬ ಭಾವನೆ ಬರಲು ಕಾರಣವಾಗುತ್ತಿದೆ.</p>
<p>ಇದನ್ನು ತಪ್ಪಿಸಬಹುದಾಗಿತ್ತಲ್ಲವೇ? ಮತ್ತು ಕರ್ನಾಟಕಕ್ಕೆ, ಕನ್ನಡಿಗರಿಗೆ ಆಗಿರುವ ಅನ್ಯಾಯ ಸರಿಪಡಿಸುವ ಪ್ರಯತ್ನಕ್ಕೆ ರಾಜಕೀಯ ರಹಿತವಾಗಿ ಚಿಂತಿಸಿ ಕೈಜೋಡಿಸಬಹುದಿತ್ತಲ್ಲವೇ?</p>
<p>ಇನ್ನು ಪ್ರಾದೇಶಿಕ ಮಾಧ್ಯಮಗಳ ಬಗ್ಗೆ ಹೇಳಲೇಬೇಕು. ಆಂಧ್ರ ಮತ್ತು ತಮಿಳುನಾಡು ಮೂಲದ ಟಿವಿ ವಾಹಿನಿಗಳಾದರೂ, ಅವರವರ ಕನ್ನಡ ಚಾನೆಲ್‌ನಲ್ಲಿ ಕರ್ನಾಟಕಕ್ಕೇ ಪ್ರಾಧಾನ್ಯತೆ ನೀಡಿದ್ದವು ಎಂಬುದು ಮೆಚ್ಚುವ ಸಂಗತಿ. ಆದರೆ ಇದೇ ಧ್ವನಿ ಆಂಗ್ಲ ಚಾನೆಲ್‌ಗಳಲ್ಲಿಯೂ ಬಿತ್ತರವಾಗಿದ್ದಿದ್ದರೆ ಅದಕ್ಕೊಂದು ತೂಕ ಬರುತ್ತಿತ್ತು. ಶತಮಾನದಲ್ಲೇ ಅತ್ಯಂತ ಭೀಕರ ಎಂದು ಪರಿಗಣಿಸಲ್ಪಟ್ಟಿರುವ ಈ ಪ್ರಕೃತಿ ವಿಕೋಪವನ್ನು ನಿಭಾಯಿಸಲು ಕನ್ನಡಿಗರಿಗೆ ಶಕ್ತಿ ದೊರೆಯುತ್ತಿತ್ತು.<br />
[<a href="http://kannada.webdunia.com/newsworld/news/current/0910/08/1091008037_1.htm#">ವೆಬ್‌ದುನಿಯಾದಲ್ಲಿ ಪ್ರಕಟಿತ</a>]</p>
  <a rel="nofollow" href="http://feeds.wordpress.com/1.0/gocomments/avisblog.wordpress.com/285/"><img alt="" border="0" src="http://feeds.wordpress.com/1.0/comments/avisblog.wordpress.com/285/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/285/"><img alt="" border="0" src="http://feeds.wordpress.com/1.0/delicious/avisblog.wordpress.com/285/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/285/"><img alt="" border="0" src="http://feeds.wordpress.com/1.0/stumble/avisblog.wordpress.com/285/" /></a> <a rel="nofollow" href="http://feeds.wordpress.com/1.0/godigg/avisblog.wordpress.com/285/"><img alt="" border="0" src="http://feeds.wordpress.com/1.0/digg/avisblog.wordpress.com/285/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/285/"><img alt="" border="0" src="http://feeds.wordpress.com/1.0/reddit/avisblog.wordpress.com/285/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=285&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/10/08/flood-in-karnataka/feed/</wfw:commentRss>
		<slash:comments>0</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>
	</item>
		<item>
		<title>ವಿರೋಧ ಪಕ್ಷವಾಗೋದು ಬೇಡ, ಪ್ರತಿ-ಪಕ್ಷವಾಗಿ!</title>
		<link>http://avisblog.wordpress.com/2009/09/30/opposition_part/</link>
		<comments>http://avisblog.wordpress.com/2009/09/30/opposition_part/#comments</comments>
		<pubDate>Wed, 30 Sep 2009 10:12:59 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/?p=283</guid>
		<description><![CDATA[ಜನ ಸಾಮಾನ್ಯರು ಬಹುಶಃ ರಾಜಕೀಯ ಅನ್ನುವುದನ್ನು ಅರ್ಥೈಸಿಕೊಂಡಿದ್ದೇ ಹೀಗೆ: ಹೊಲಸು, ಗಬ್ಬೆದ್ದು ಹೋದ, ನಾತ ಬೀರುತ್ತಿರುವ ರಾಜಕೀಯ ಮತ್ತು ಇಲ್ಲಿ ಸಭ್ಯರಿಗೆ ಪ್ರವೇಶ ಇಲ್ಲ, ಸಲ್ಲ. ಅದನ್ನೇ ಶಿಷ್ಟ ಭಾಷೆಯಲ್ಲಿ ಹೇಳಬಹುದಾದರೆ ಬೇಜವಾಬ್ದಾರಿ ಜನಪ್ರತಿನಿಧಿಗಳು ಲಂಗುಲಗಾಮಿಲ್ಲದ ನಾಲಿಗೆ ಹರಿಯಬಿಡುವ ಉದ್ಯೋಗ ತಾಣ.
ಹೌದೇ? ಈ ನಮ್ಮನ್ನಾಳುವವರ ಬಾಯಲ್ಲಿ ಕಳೆದೊಂದು ವಾರದಿಂದ ಏನೆಲ್ಲಾ ಪವಿತ್ರ ಶಬ್ದಗಳು ಹೊರಬರುತ್ತಿವೆ ಎಂಬುದನ್ನು ಗಮನಿಸಿದರೆ ಇವರ ವಾದದಲ್ಲಿ ಹುರುಳಿಲ್ಲದಿಲ್ಲ ಎಂಬುದಂತೂ ಮನಸ್ಸಿಗೆ ನಾಟುತ್ತದೆ.
ತಮ್ಮೆಲ್ಲಾ ನಡೆ-ನುಡಿಗಳನ್ನು ತಮ್ಮನ್ನಾರಿಸಿ ಕಳುಹಿಸಿದವರು ಗಮನಿಸುತ್ತಿರುತ್ತಾರೆ ಎಂಬುದನ್ನು ಒಂದಿನಿತು ಯೋಚಿಸುವ ವ್ಯವಧಾನವೂ [...]<img alt="" border="0" src="http://stats.wordpress.com/b.gif?host=avisblog.wordpress.com&blog=154345&post=283&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p>ಜನ ಸಾಮಾನ್ಯರು ಬಹುಶಃ ರಾಜಕೀಯ ಅನ್ನುವುದನ್ನು ಅರ್ಥೈಸಿಕೊಂಡಿದ್ದೇ ಹೀಗೆ: ಹೊಲಸು, ಗಬ್ಬೆದ್ದು ಹೋದ, ನಾತ ಬೀರುತ್ತಿರುವ ರಾಜಕೀಯ ಮತ್ತು ಇಲ್ಲಿ ಸಭ್ಯರಿಗೆ ಪ್ರವೇಶ ಇಲ್ಲ, ಸಲ್ಲ. ಅದನ್ನೇ ಶಿಷ್ಟ ಭಾಷೆಯಲ್ಲಿ ಹೇಳಬಹುದಾದರೆ ಬೇಜವಾಬ್ದಾರಿ ಜನಪ್ರತಿನಿಧಿಗಳು ಲಂಗುಲಗಾಮಿಲ್ಲದ ನಾಲಿಗೆ ಹರಿಯಬಿಡುವ ಉದ್ಯೋಗ ತಾಣ.</p>
<p>ಹೌದೇ? ಈ ನಮ್ಮನ್ನಾಳುವವರ ಬಾಯಲ್ಲಿ ಕಳೆದೊಂದು ವಾರದಿಂದ ಏನೆಲ್ಲಾ ಪವಿತ್ರ ಶಬ್ದಗಳು ಹೊರಬರುತ್ತಿವೆ ಎಂಬುದನ್ನು ಗಮನಿಸಿದರೆ ಇವರ ವಾದದಲ್ಲಿ ಹುರುಳಿಲ್ಲದಿಲ್ಲ ಎಂಬುದಂತೂ ಮನಸ್ಸಿಗೆ ನಾಟುತ್ತದೆ.</p>
<p>ತಮ್ಮೆಲ್ಲಾ ನಡೆ-ನುಡಿಗಳನ್ನು ತಮ್ಮನ್ನಾರಿಸಿ ಕಳುಹಿಸಿದವರು ಗಮನಿಸುತ್ತಿರುತ್ತಾರೆ ಎಂಬುದನ್ನು ಒಂದಿನಿತು ಯೋಚಿಸುವ ವ್ಯವಧಾನವೂ ಇಲ್ಲವೇ? ಅಥವಾ ಅಧಿಕಾರವಿಲ್ಲದೆ ಒಂದರೆಕ್ಷಣವೂ ಇರಲಾಗದ ಚಡಪಡಿಕೆಯೇ ಇದು? ಇಂತಹ ಅಸಹನೆ ಯಾಕೆ? &#8220;ರ‌್ಯಾಸ್ಕಲ್ ಸರಕಾರ, ಚಪ್ಪಲಿಯಲ್ಲಿ ಹೊಡೀಬೇಕು, ಆತ ನಾಲಾಯಕ್, ನಾಲಿಗೆ ಬಿಗಿ ಹಿಡಿದು ಮಾತಾಡಿ, ಸುಳ್ಳುಗಳ ಮಹಾರಾಜ, ಸರಕಾರವೇನು ಅವರಪ್ಪಂದಾ?, ದೇಶ ಕಂಡ ಅತಿ ದುರ್ಬಲ ಮುಖ್ಯಮಂತ್ರಿ, ಪಾಪದ ಕೊಡ ತುಂಬಿದೆ, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ (ವಾಸ್ತವಿಕವಾಗಿ ಹುಚ್ಚ ಎಂದೇ ಅರ್ಥ!)&#8221; ಅಬ್ಬಬ್ಬಾ&#8230;. ಎಂತೆಂತಹಾ ಅಲಂಕಾರಿಕ ಪದಗಳು! ನಾಚಿಕೆಯಾಗಬೇಕು.</p>
<p>ಅದು ಬಿಡಿ, ನಮ್ಮ ನಾಡಿಗೆ ನಾಡೇ ಹೆಮ್ಮೆ ಪಡುವ ವಿಶ್ವವಿಖ್ಯಾತ ಮೈಸೂರು ದಸರಾ ನಡೀತಿದೆ. ನಮ್ಮದೇ ನಾಡ ಹಬ್ಬ. ನಮಗೆ ನಾವೇ ಹೆಮ್ಮೆ ಪಡಬೇಕಾದ ರಾಜ್ಯದ ಹಬ್ಬದಲ್ಲಿ ಭಾಗವಹಿಸದ ಪ್ರತಿಪಕ್ಷದವರದು ಎಂಥಾ ರಾಜಕೀಯ?</p>
<p>ಹಾಗಿದ್ದರೆ ರಾಜ್ಯದ ರಾಜಕೀಯ ಎತ್ತ ಸಾಗುತ್ತಿದೆ? ಕಾಂಗ್ರೆಸ್ ಅಥವಾ ಜನತಾ ದಳ ಆಳ್ವಿಕೆಯ ಅವಧಿಯತ್ತ ಒಂದೊಮ್ಮೆ ಪೂರ್ವಗ್ರಹವಿಲ್ಲದೆ ಕಣ್ಣೋಟ ಹರಿಸಿ ನೋಡಿದರೆ, ಆಗಲೂ ಜನರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ ಎಂಬುದು ಪ್ರತಿಯೊಬ್ಬ ಜನ ಸಾಮಾನ್ಯ ಒಪ್ಪಿಕೊಳ್ಳಬಹುದಾದ ಸತ್ಯ.</p>
<p>ಕಾರಣವಿಷ್ಟೆ. ಇಲ್ಲಿನ ರಾಜಕಾರಣಿಗಳು ಬರೇ ಮೇಲೆ ಹೇಳಿರುವ ವ್ಯಾಖ್ಯಾನವಿರುವ &#8216;ರಾಜಕೀಯ&#8217; ಮಾಡುತ್ತಾರೆಯೇ ಹೊರತು, ಯಾರಿಗೂ ಕೂಡ ರಾಜ್ಯದ ಹಿತ, ಜನರ ಏಳಿಗೆಯ ಬಗ್ಗೆ ಕಾಳಜಿಗಾಗಿ ಇರುವ ರಾಜಕೀಯದ ಪರಿಚಯ ಇಲ್ಲ.</p>
<p>ದಕ್ಷಿಣದ ರಾಜ್ಯದಲ್ಲಿ ಬಿಜೆಪಿ ನೆಲೆಯೂರಿದ್ದಕ್ಕೆ ಒಳಗಿನ ಅಸಹನೆ ಹತ್ತಿಕ್ಕಲಾಗುತ್ತಿಲ್ಲ. ಅದಕ್ಕೆ ತಮ್ಮೊಳಗಿನ ಯಾದವೀ ಕಲಹವೇ ಕಾರಣ ಎಂಬುದರ ಅರಿವೂ ಈ ವಿಪಕ್ಷಗಳಿಗಿಲ್ಲ. ಹೀಗಾಗಿ, ಸರಕಾರಕ್ಕೆ ಕಳಂಕ ತರಬೇಕು ಎಂಬ ಹತಾಶೆಯ ಪ್ರದರ್ಶನವಿದು ಎಂದೇ ಹೇಳಬಹುದು.</p>
<p>ಈ ಹಠವನ್ನು, ಈ ಹತಾಶೆಯನ್ನು, ಈ ಆಕ್ರೋಶವನ್ನು, ಅಸಹನೆಯನ್ನು ರಚನಾತ್ಮಕ ದಿಕ್ಕಿಗೆ ತಿರುಗಿಸಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ತಮ್ಮದೇ ಸರಕಾರದಿಂದ ರಾಶಿಗಟ್ಟಲೆ ಅನುದಾನಗಳನ್ನು ರಾಜ್ಯದ ಅಭಿವೃದ್ಧಿಗಾಗಿ ಹರಿದುಬರುವಂತೆ ಒತ್ತಡ ಹೇರಿ ನೋಡಲಿ. ಖಂಡಿತವಾಗಿಯೂ ಬಿಜೆಪಿ ಸರಕಾರಕ್ಕೆ ಸಾಕಷ್ಟು ನಿಧಿ ಒದಗಿಸಲು ಕೇಂದ್ರೀಯ ನಾಯಕರು ಹಿಂದೆ-ಮುಂದೆ ನೋಡುತ್ತಾರೆ ಎಂಬುದು ನಿಮಗೆ ತಿಳಿದಿದೆ. ಹೀಗಾಗಿ ಬಲವಂತವಾಗಿ ನಿಧಿ ತರಿಸಿಕೊಟ್ಟರೆ, ಅದರ ಶ್ರೇಯಸ್ಸು ಕೂಡ ಪ್ರತಿಪಕ್ಷಗಳಿಗೆ ಸಲ್ಲುತ್ತದೆ. ಅದರ ಸದುಪಯೋಗವಾಗದೇ ಹೋದಾಗ ಬಿಜೆಪಿ ಸರಕಾರದ ಕುತ್ತಿಗೆ ಪಟ್ಟಿ ಹಿಡಿಯಬಹುದು. ಇಂಥ ರಾಜಕೀಯವಿರಲಿ. ಜನರಿಗೂ ಒಳಿತು, ಪ್ರತಿಪಕ್ಷಗಳಿಗೂ ಹೆಮ್ಮೆ.</p>
<p>ಇದು ಬಿಟ್ಟು, ಯಾವ್ಯಾವುದೋ ನೆಪ ಮುಂದಿಟ್ಟುಕೊಂಡು, &#8216;ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ&#8217; ಎಂದು ಗೌರವಾನ್ವಿತ ರಾಜ್ಯಪಾಲರ ಮೂಲಕ ಹೇಳಿಕೆ ಕೊಡಿಸಿ, &#8216;ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ತಬ್ಧವಾಗಿದೆ, ಯಾವುದೇ ಕೆಲಸ ಕಾರ್ಯ ನಡೆಯುತ್ತಿಲ್ಲ&#8217; ಎನ್ನುತ್ತಾ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಪ್ರಯತ್ನ&#8230; ಇದೆಲ್ಲ ಯಾತಕ್ಕೆ? ಪ್ರತಿಭಟನೆ ಮಾಡಿ, ಅಲ್ಲಲ್ಲಿ ಸಭೆಗಳನ್ನು ಆಯೋಜಿಸಿ, ಜನರನ್ನು ಸೇರಿಸಿ, ಯಾತಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದೇವೆ, ಬಿಜೆಪಿ ಸರಕಾರದಿಂದ ಏನು ಅನ್ಯಾಯ ಆಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡುವ ಆಂದೋಲನ ನಡೆಯಲಿ. ಆದರೆ, ಇಂತಹ, ಸುದ್ದಿಗಾಗಿ ಸದ್ದು ಮಾಡುವ ತಂತ್ರಗಳ ಮೂಲಕ, ಆ ಮೂಲಕ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ಭಾವನೆ ಬರುವಂತೆ ಮಾಡುವ ತಂತ್ರಗಳು ಅರ್ಥಹೀನ. ಇವರು ಆಡುವ ಒಂದೊಂದು ಮಾತು ಕೂಡ ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂಬ ಪರಿಜ್ಞಾನವೂ ಇಲ್ಲದಿದ್ದರೆ ಹೇಗೆ? ಇಷ್ಟೊಂದು ದಶಕಗಳಿಂದ ಇವರು ರಾಜಕೀಯದಲ್ಲಿದ್ದು ಸಾಧಿಸಿದ್ದಾದರೂ ಏನನ್ನು? ಈ ರೀತಿ ಅಸಭ್ಯ ಟೀಕೆ ಮಾಡುವುದನ್ನೇ? ಎಂದೇ ಪ್ರಶ್ನಿಸಬೇಕಾಗುತ್ತದೆ.</p>
<p>ಇನ್ನೊಂದು ವಿದ್ಯಮಾನ ಗಮನಿಸಿ. ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರವೇ ಹಲವಾರು ವರ್ಷಗಳ ಹಿಂದೆ ಜಾರಿಗೆ ತಂದಿರುವ ನೀತಿಯಾಗಿರುವ ಜನಸಂಖ್ಯಾ ನಿಯಂತ್ರಣದ ಬಗ್ಗೆ ಮುಖ್ಯಮಂತ್ರಿ ಹೇಳಿಕೆ ನೀಡಿದರೆ, ಅದು &#8216;ಸಮಾಜದ ಒಂದು ವರ್ಗವನ್ನು ಗುರಿಯಾಗಿಸಿಕೊಂಡಿದ್ದಾರೆ&#8217; ಎಂಬ ಆರೋಪ ಬರುತ್ತದೆ. ಅಂದರೆ ಪ್ರತಿಯೊಂದು ವಿಷಯವನ್ನೂ ಕೋಮು ಭಾವನೆಯತ್ತ ಹೊರಳಿಸುವ ಹುನ್ನಾರವಿದೆಂದು ಅರ್ಥವಾಗದೇ?</p>
<p>ಆಹಾರ ಧಾನ್ಯ ಬೆಲೆ ಏರಿಕೆಯಿಂದಾಗಿ ತಿನ್ನಲು ಉಣ್ಣಲು ಜನ ತ್ರಾಸ ಪಡುತ್ತಿದ್ದಾರೆ. ಈ ಬಗ್ಗೆ ಈ ವಿರೋಧ ಪಕ್ಷಗಳೇಕೆ ಪ್ರತಿಭಟಿಸುತ್ತಿಲ್ಲ? ವಿಶ್ವದ ಹಣಕಾಸು ಬಿಕ್ಕಟ್ಟಿನ ಪರಿಣಾಮ ಇಲ್ಲಿದೆಯಾದರೂ, ಅಲ್ಲಲ್ಲಿ ಅಕ್ಕಿ, ಬೇಳೆಯನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡೋ, ಅಥವಾ ಪಡಿತರ ವಿತರಣೆಗೆ ರವಾನೆಯಾಗುವ ಆಹಾರವಸ್ತುಗಳ ಕಳ್ಳ ದಂಧೆಯೋ&#8230;. ಇತ್ಯಾದಿಗಳ ಮೂಲಕವೂ &#8216;ನಕಲಿ ಕೊರತೆ&#8217; ಸೃಷ್ಟಿ ಮಾಡಿ, ಬೆಲೆ ಏರಿಕೆಯ ಬಿಸಿಗೆ ತುಪ್ಪ ಸುರಿಯಲಾಗುತ್ತಿದೆ. ಇದರ ಬಗ್ಗೆ ಹೋರಾಟ ಮಾಡಿದರೆ, ಜನ ಕೂಡ ಮೆಚ್ಚುತ್ತಾರೆ, ಪಕ್ಷಭೇದವಿಲ್ಲದೆ ಬೆಂಬಲವನ್ನೂ ಕೊಡಬಹುದು. ಮಂತ್ರಿಗಳು, ಶಾಸಕರು ತಮ್ಮ ಕ್ಷೇತ್ರಾಭಿವೃದ್ಧಿಯತ್ತ ಗಮನ ಹರಿಸುತ್ತಿಲ್ಲ ಎನ್ನುವುದರ ಬಗ್ಗೆ ಪ್ರತಿಭಟಿಸಬಹುದಲ್ಲ&#8230; ಇನ್ನೊಂದೆಡೆ, ಹಂದಿ ಜ್ವರವು ದೇಶದಲ್ಲೇ ಅತೀ ಹೆಚ್ಚು ಬಲಿ ತೆಗೆದುಕೊಂಡದ್ದು ಬೆಂಗಳೂರಿನಲ್ಲಿ. ಅದಕ್ಕೇನು ಕ್ರಮ ಕೈಗೊಳ್ಳಲಾಗಿದೆ? ಸರಕಾರ ಎಲ್ಲಿ ಎಡವಿದೆ ಅಂತ ಕೂಗೆಬ್ಬಿಸಿ. ಅತ್ತ ಕಡೆ ಊರೂರಲ್ಲಿ ರಸ್ತೆಗಳು ಕುಲಗೆಟ್ಟು ಹೋಗಿವೆ, ಅದಕ್ಕೊಂದು ಪ್ರಬಲ ಪ್ರತಿಭಟನೆ ಮಾಡಿ. ಎಲ್ಲರೂ ಬೆಂಬಲಿಸುತ್ತಾರೆ.</p>
<p>ನಾಡಿನ ಅಭಿವೃದ್ಧಿಗೆ ಆಡಳಿತ ಪಕ್ಷಗಳು ಎಷ್ಟು ಮುಖ್ಯವೋ, ವಿರೋಧ ಪಕ್ಷಗಳಿಗೆ ಅದಕ್ಕಿಂತಲೂ ಹೆಚ್ಚು ಜವಾಬ್ದಾರಿಯಿದೆ. ಹದ್ದಿನ ಕಣ್ಣಿಟ್ಟಿರಬೇಕು ಅವುಗಳು- ಎಲ್ಲಿ ಖಜಾನೆ ಸೋರಿ ಹೋಗುತ್ತದೆ, ಎಲ್ಲೆಲ್ಲಿ ಜನರ ಬೆವರು ಸುರಿಸಿದ ಹಣ ವ್ಯಯವಾಗುತ್ತದೆ ಎಂಬುದನ್ನು ಗಮನಿಸಿ, ಸರಕಾರವನ್ನು ಸರಿದಾರಿಗೆಳೆಯುವ ಅತ್ಯಮೂಲ್ಯ ಕರ್ತವ್ಯವಿದೆ ಅವುಗಳಿಗೆ. ಆದರೆ ನಮ್ಮಲ್ಲೇನಾಗುತ್ತಿದೆ?</p>
<p>ರಾಜ್ಯದ ವಿರೋಧ ಪಕ್ಷಗಳು ಹೀಗಾದರೆ, ಕೇಂದ್ರದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಪ್ರಧಾನ ಪ್ರತಿಪಕ್ಷ ಬಿಜೆಪಿ ಎಂಬುದು ಹೆಸರಿಗೆ ಮಾತ್ರ. ಆಂತರಿಕ ವೈರುಧ್ಯಗಳಿಂದಾಗಿ ದೇಶದ ಆಡಳಿತ ಪಕ್ಷವನ್ನು ಸಮರ್ಥವಾಗಿ ಸರಿದಾರಿಗೆ ತರುವಲ್ಲಿ ಎಡವುತ್ತಿದೆ ಅದು. ಎಡಪಕ್ಷಗಳೇ ಒಂದಷ್ಟು ಪ್ರತಿಪಕ್ಷಗಳ ಕಾರ್ಯ ನಿಭಾಯಿಸುತ್ತಿವೆ. ಜನಪರ ವಿಷಯಗಳಿಗಾಗಿಯಾದರೂ ಅವುಗಳು ಆವಾಗಾವಾಗ ಎದ್ದು ನಿಲ್ಲುತ್ತವೆ.</p>
<p>ರಾಜ್ಯದಲ್ಲಾಗಲೀ, ದೇಶದಲ್ಲಾಗಲೀ ಆಡಳಿತ ಯಂತ್ರವು ಹಳಿ ತಪ್ಪಿದರೂ, ಅದನ್ನು ಸರಿದಾರಿಗೆ ತರುವ ಮನೋಭಾವ ವಿರೋಧ ಪಕ್ಷಗಳಿಗೆ ಇರುವುದಿಲ್ಲ, ಬದಲಾಗಿ ಕಾಲೆಳೆಯುವುದೇ ಪ್ರಮುಖ ಉದ್ದೇಶ ಎಂಬಂತಹ ಮನಸ್ಥಿತಿ ಇರುವುದು ಬೇಸರದ ವಿಷಯ.</p>
<p>ಜನಪ್ರತಿನಿಧಿಗಳು ನಮ್ಮ ನಾಯಕರು. ಭವಿಷ್ಯದ ನಾಯಕರೆಂದು ಪರಿಗಣಿಸಲ್ಪಟ್ಟಿರುವ ನಮ್ಮ ಮಕ್ಕಳು ಅವರನ್ನು ಅನುಸರಿಸುತ್ತಾರೆ. ಆದರೆ ಹೀಗಾದರೆ ಹೇಗೆ?<br />
ಕರ್ನಾಟಕದ ಜನರ ತೆರಿಗೆ ಹಣದಿಂದ ಅವರಿಗೆ ವೇತನ ಕೊಡುವುದು ರಾಜ್ಯದ ಅಭಿವೃದ್ಧಿಗಾಗಿಯೇ ಅಲ್ಲವೇ? &#8216;ರಾಜಕೀಯ&#8217; ಮಾಡಬೇಕಾದಲ್ಲಿ ಮಾಡಬೇಕು. ಆದರೆ ಅದು ರಚನಾತ್ಮಕವಾಗಿರಬೇಕು. ಹೀಗಾಗಿ ಬರೇ ರಾಜಕೀಯಕ್ಕಾಗಿ ರಾಜಕೀಯ ಬೇಡ, ವಿರೋಧಿಸಲೆಂದೇ ರಾಜಕೀಯ ಬೇಡ. ಜನರ ಹಿತ ಗಮನದಲ್ಲಿರಲಿ. ವಿರೋಧಿಸಲೆಂದೇ ಇರುವವರು ವಿರೋಧ ಪಕ್ಷದವರೇ? ಹೀಗಾಗಬಾರದು. ಅವರು ವಿರೋಧಿಗಳಲ್ಲ, ಆಡಳಿತ ಪಕ್ಷಕ್ಕೆ ಸಮರ್ಥವಾದ ಪ್ರತಿಪಕ್ಷವಾಗಬೇಕು. ರಚನಾತ್ಮಕ ಟೀಕೆಯಿರಬೇಕು. ವ್ಯಕ್ತಿಗತ, ಪಕ್ಷಗತವಾದ ಬದ್ಧತೆಗಳನ್ನು ಮೀರಿ ಕರ್ನಾಟಕದ ಪರಿಪೂರ್ಣ ಅಭಿವೃದ್ಧಿಯೇ ಮೂಲ ಮಂತ್ರವಾದಲ್ಲಿ ಜನ ಸಾಮಾನ್ಯರು ಮನಸ್ಸಿನೊಳಗೇ ಮರುಗುವ ಮತ್ತು ಆಕ್ರೋಶದ ಬೆಂಕಿಯನ್ನು ಒಳಗೊಳಗೇ ನುಂಗಿಕೊಳ್ಳಲೇಬೇಕಾದ ಪ್ರಮೇಯ ಬಾರದು. ಅದಕ್ಕೇ ಹೇಳಿದ್ದು, ವಿರೋಧ ಪಕ್ಷ ಆಗೋದು ಬೇಡ, ಆಡಳಿತ ಪಕ್ಷಕ್ಕೆ ಸಮದಂಡಿಯಾದ ಪ್ರತಿ-ಆಡಳಿತ ಪಕ್ಷವಾಗಲಿ!</p>
<p>ಇನ್ನೂ ತಿದ್ದಿಕೊಳ್ಳದಿದ್ದರೆ, ದಾಸರು ಹೇಳಿದ್ದಾರಲ್ಲ, &#8220;ನಿಂದಕರಿರಬೇಕು, ಹಂದಿಯಿದ್ದರೆ ಕೇರಿ ಹೇಗೆ ಶುದ್ಧಿಯೋ&#8230; ಹಾಗೆ&#8221;!<br />
[<a href="http://kannada.webdunia.com/newsworld/news/current/0909/30/1090930022_1.htm">ವೆಬ್‌ದುನಿಯಾದಲ್ಲಿ ಪ್ರಕಟಿತ</a>]</p>
  <a rel="nofollow" href="http://feeds.wordpress.com/1.0/gocomments/avisblog.wordpress.com/283/"><img alt="" border="0" src="http://feeds.wordpress.com/1.0/comments/avisblog.wordpress.com/283/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/283/"><img alt="" border="0" src="http://feeds.wordpress.com/1.0/delicious/avisblog.wordpress.com/283/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/283/"><img alt="" border="0" src="http://feeds.wordpress.com/1.0/stumble/avisblog.wordpress.com/283/" /></a> <a rel="nofollow" href="http://feeds.wordpress.com/1.0/godigg/avisblog.wordpress.com/283/"><img alt="" border="0" src="http://feeds.wordpress.com/1.0/digg/avisblog.wordpress.com/283/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/283/"><img alt="" border="0" src="http://feeds.wordpress.com/1.0/reddit/avisblog.wordpress.com/283/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=283&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/09/30/opposition_part/feed/</wfw:commentRss>
		<slash:comments>0</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>
	</item>
		<item>
		<title>ಇವರ ದುಂದುವೆಚ್ಚದ &#8216;ಮಿತ&#8217;ವ್ಯಯ ಅನಗತ್ಯ!</title>
		<link>http://avisblog.wordpress.com/2009/09/09/austerity/</link>
		<comments>http://avisblog.wordpress.com/2009/09/09/austerity/#comments</comments>
		<pubDate>Wed, 09 Sep 2009 10:09:44 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/?p=281</guid>
		<description><![CDATA[ಇವೆಲ್ಲ ಬೊಗಳೆ, ಬೂಟಾಟಿಕೆ, ಗಿಮ್ಮಿಕ್ ಅಥವಾ ಆಷಾಢಭೂತಿತನ. ಕಳೆದ ಸರಿ ಸುಮಾರು ಒಂಬತ್ತು ತಿಂಗಳಿಂದೀಚೆಗೆ ಜಾಗತಿಕವಾಗಿ ಹಣಕಾಸು ಬಿಕ್ಕಟ್ಟು ಎದುರಾದಾಗಲೇ ನಾವು ಎಚ್ಚೆತ್ತುಕೊಳ್ಳಬೇಕಿತ್ತು. ಆ ಬಳಿಕ ದೇಶದ ಕೆಲವೆಡೆ ಅನಾವೃಷ್ಟಿಯೂ, ಮತ್ತೆ ಕೆಲವೆಡೆ ಅತಿವೃಷ್ಟಿಯೂ ಕಾಣಿಸಿಕೊಂಡು, ದೇಶದ ಬೆನ್ನೆಲುಬಾದ ಅನ್ನದಾತ ರೈತ ಕಂಗಾಲಾಗಿದ್ದಾನೆ. ಒಂದು ಹೊತ್ತಿನ ತುತ್ತು ಉಣ್ಣಲು ಮುಗಿಲು ಮುಟ್ಟಿದ ಅಕ್ಕಿ-ಬೇಳೆ-ತರಕಾರಿ ಬೆಲೆಗಳೇ ಅಡ್ಡಿ. ಇವೆಲ್ಲವುಗಳಿಂದ ಜನ ಜರ್ಝರಿತವಾಗಿರುವಾಗ, ಕೋಟ್ಯಂತರ ರೂಪಾಯಿ ದುಂದುವೆಚ್ಚದ ನಡುವೆ ನೂರಾರು ರೂಪಾಯಿ ಉಳಿಸುವ ಈ ರಾಜಕಾರಣಿಗಳ &#8216;ಇಕಾನಮಿ ಕ್ಲಾಸ್&#8217; ಪ್ರಯಾಣ [...]<img alt="" border="0" src="http://stats.wordpress.com/b.gif?host=avisblog.wordpress.com&blog=154345&post=281&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p>ಇವೆಲ್ಲ ಬೊಗಳೆ, ಬೂಟಾಟಿಕೆ, ಗಿಮ್ಮಿಕ್ ಅಥವಾ ಆಷಾಢಭೂತಿತನ. ಕಳೆದ ಸರಿ ಸುಮಾರು ಒಂಬತ್ತು ತಿಂಗಳಿಂದೀಚೆಗೆ ಜಾಗತಿಕವಾಗಿ ಹಣಕಾಸು ಬಿಕ್ಕಟ್ಟು ಎದುರಾದಾಗಲೇ ನಾವು ಎಚ್ಚೆತ್ತುಕೊಳ್ಳಬೇಕಿತ್ತು. ಆ ಬಳಿಕ ದೇಶದ ಕೆಲವೆಡೆ ಅನಾವೃಷ್ಟಿಯೂ, ಮತ್ತೆ ಕೆಲವೆಡೆ ಅತಿವೃಷ್ಟಿಯೂ ಕಾಣಿಸಿಕೊಂಡು, ದೇಶದ ಬೆನ್ನೆಲುಬಾದ ಅನ್ನದಾತ ರೈತ ಕಂಗಾಲಾಗಿದ್ದಾನೆ. ಒಂದು ಹೊತ್ತಿನ ತುತ್ತು ಉಣ್ಣಲು ಮುಗಿಲು ಮುಟ್ಟಿದ ಅಕ್ಕಿ-ಬೇಳೆ-ತರಕಾರಿ ಬೆಲೆಗಳೇ ಅಡ್ಡಿ. ಇವೆಲ್ಲವುಗಳಿಂದ ಜನ ಜರ್ಝರಿತವಾಗಿರುವಾಗ, ಕೋಟ್ಯಂತರ ರೂಪಾಯಿ ದುಂದುವೆಚ್ಚದ ನಡುವೆ ನೂರಾರು ರೂಪಾಯಿ ಉಳಿಸುವ ಈ ರಾಜಕಾರಣಿಗಳ &#8216;ಇಕಾನಮಿ ಕ್ಲಾಸ್&#8217; ಪ್ರಯಾಣ ಎಂಬ ಮಹಾನ್ ನಾಟಕ! ಅದಕ್ಕೆ &#8216;ಆಸ್ಟೆರಿಟಿ ಡ್ರೈವ್&#8217; ಎಂಬೊಂದು ಭಯಂಕರ ಹೆಸರು!</p>
<p>ಜನರಿಗೆ ಹೇಗಾಗಬೇಡ! ವಿಮಾನ ಬಿಟ್ಟು ರೈಲಿನಲ್ಲಿ ಪ್ರಯಾಣಿಸುವುದು ಮಹಾನ್ ತ್ಯಾಗವೋ ಎಂಬಂತೆ ಬಿಂಬಿಸಲಾಗುತ್ತಿದೆ. ವಾಸ್ತವಿಕವಾಗಿ ಇದು ತ್ಯಾಗವೇ ಅಲ್ಲ. ಜನಸೇವಕರು ಅನ್ನಿಸಿಕೊಳ್ಳುವವರ ಕರ್ತವ್ಯ. ದೇಶದ ಖಜಾನೆಯ ಹಣವನ್ನು ಐಷಾರಾಮದ ಬದಲು ಜನ ಕಲ್ಯಾಣಕ್ಕಾಗಿ ಉಪಯೋಗಿಸುವುದು ರಾಜಕಾರಣಿಗಳ ಬದ್ಧತೆಯ ಸೂಚಕ. ಆದರೆ ಪ್ರತಿ ವರ್ಷವೂ ವೇತನದ ಹೆಸರಲ್ಲಿ, ಭತ್ಯೆಯ ಹೆಸರಲ್ಲಿ ಲಕ್ಷ ಲಕ್ಷ ಆದಾಯ ಹೆಚ್ಚಿಸಿಕೊಳ್ಳುತ್ತಿರುವಾಗ, ನೂರಿನ್ನೂರೋ&#8230; ಹೆಚ್ಚೆಂದರೆ ಒಂದೈದು-ಹತ್ತು ಸಾವಿರ ರೂಪಾಯಿಯೋ&#8230; ಉಳಿಸುವ ಈ ಯೋಜನೆ &#8216;ಕಣ್ಣುಕಟ್ಟು&#8217; ಅಷ್ಟೆ.</p>
<p>ಇದನ್ನು ಈ ರೀತಿ ವ್ಯಾಖ್ಯಾನಿಸದೆ ವಿಧಿಯೇ ಇಲ್ಲ. ಯಾಕೆಂದರೆ, ಸರಾಸರಿ ಹತ್ತು ಲಕ್ಷ ಮಂದಿಯನ್ನು ಪ್ರತಿನಿಧಿಸುವ ಸಂಸತ್ ಸದಸ್ಯನೊಬ್ಬ, ತನ್ನ ಕ್ಷೇತ್ರ ಹೇಗಿದೆ ಅಂತ ನೋಡಲು, ಅದರ ಸ್ಥಿತಿ-ಗತಿ ಬಗ್ಗೆ ತಿಳಿದುಕೊಳ್ಳಲು, ತನಗೆ ಓಟು ನೀಡಿ ಶಾಸನಸಭೆಗೆ ಕಳುಹಿಸಿದವರು ಹೇಗಿದ್ದಾರೆ ಎಂದು ತಿಳಿದುಕೊಳ್ಳಲು ಖಾಸಗಿ ವಿಮಾನ, ಖಾಸಗಿ ಹೆಲಿಕಾಪ್ಟರ್ ಬಳಕೆಯೇ ಅನಗತ್ಯ. ಇದೇನಿದ್ದರೂ ಕರ್ತವ್ಯ ನಿಭಾವಣೆಯಷ್ಟೆ.</p>
<p>ಕರ್ನಾಟಕದ ಅದೆಷ್ಟೋ ಹಳ್ಳಿಗಳನ್ನೇ ನೋಡಿ. ಅಲ್ಲಿಗೆ ರಸ್ತೆ ಮೂಲಕ ಹೋಗುವುದೂ ಅಸಾಧ್ಯ. ಇಂಥ ಪರಿಸ್ಥಿತಿಯಲ್ಲಿ ಜನಸೇವಕರು, ಜನ ನಾಯಕರು, ಜನಪ್ರತಿನಿಧಿಗಳು ಹೆಲಿಕಾಪ್ಟರ್ ಬಳಸಲೇಬೇಕೆಂಬ ಅನಿವಾರ್ಯತೆ. ಯಾಕೆಂದರೆ ಆ ರಸ್ತೆಗಳಲ್ಲಿ ಪ್ರಯಾಣಿಸಿದರೆ ಅವರು ಮರುದಿನ ಮತ್ತೊಂದೂರಿಗೆ ಹೋಗಬೇಕಲ್ಲ! ಅಂಥ ಪರಿಸ್ಥಿತಿ ರಸ್ತೆಗಳದು. (ಈಗ ಇಂಥವನ್ನೆಲ್ಲಾ ನೋಡಲು ಹಳ್ಳಿಗಳೇನೂ ಬೇಕಾಗಿಲ್ಲ, ಒಂದು ಬಾರಿ ಬೆಂಗಳೂರು-ಮಂಗಳೂರು ರಸ್ತೆ ಅಥವಾ ಮಂಗಳೂರು-ಉಡುಪಿ ರಸ್ತೆಯಲ್ಲಿ ಓಡಾಡಿದರೂ ಸಾಕು!) ಇದಕ್ಕೆ ಕಾರಣ ತಮ್ಮದೇ ನಿರ್ಲಕ್ಷ್ಯ ಎಂಬ ಭಾವನೆ ಜನಪ್ರತಿನಿಧಿಗಳಿಗೆ ಬಂದರೆ ಸಾಕು. ಅಲ್ಲಿಂದಲೇ ಲೋಕೋದ್ಧಾರ ಪ್ರಕ್ರಿಯೆ ಆರಂಭವಾಗಬಹುದೇನೋ&#8230;</p>
<p>ಮಿತವ್ಯಯ ಹೆಸರಲ್ಲಿ ದೇಶದ ಖಜಾನೆಯ ಹಣ ಉಳಿಸಲು ಸಾಕಷ್ಟು ಮಾರ್ಗಗಳಿವೆ. ಅದು ಬಿಟ್ಟು ವಿಮಾನ ಪ್ರಯಾಣ ತ್ಯಾಗ ಮಾಡುವುದು, ಹೆಲಿಕಾಪ್ಟರ್ ಯಾನವನ್ನು &#8216;ಬಲಿದಾನ&#8217; ಮಾಡುವುದು ಎಂಬಿತ್ಯಾದಿಯೆಲ್ಲ ಶುದ್ಧ ಗಿಮಿಕ್. ನಿಮ್ಮ ಈ ರೀತಿಯ ಗಿಮಿಕ್‌ಗಳು, ಜನಮರುಳು ತಂತ್ರಗಳು ಜನರಿಗೆ ಬೇಕಾಗಿಲ್ಲ. ಮೊದಲು ಏರಿದ ಬೆಲೆಗಳ ಇಳಿಕೆಗೆ ಕ್ರಮ ಕೈಗೊಂಡರೆ ನಾವು ನಿಮ್ಮನ್ನು ಆರಿಸಿ ಕಳುಹಿಸಿದ್ದು ಸಾರ್ಥಕವಾಗುತ್ತದೆ ಎಂಬ ಕೂಗು ಪ್ರತಿಯೊಬ್ಬ ಜನಸಾಮಾನ್ಯನದು.</p>
<p>ನಮ್ಮ ಸಂಸದರು, ಶಾಸಕರು ಬೃಹತ್ ಬಂಗಲೆಯಂತಹ ಸರಕಾರಿ ಮನೆ ಪಡೆಯುತ್ತಾರೆ. ಅದರ ನವೀಕರಣಕ್ಕೆ, ಅದನ್ನು ತಮ್ಮ ಅಭಿರುಚಿಗೆ ಅನುಗುಣವಾಗಿ, ವಾಸ್ತು ಪ್ರಕಾರ, ಅಥವಾ ಬೇರಾವುದೋ ಕಾರಣಕ್ಕೆ ಬದಲಾಯಿಸಲು ಆಗಾಗ್ಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ, ಅವರಿಗೆ ಪೆಟ್ರೋಲ್ ಭತ್ಯೆ, ಕಾರು ಚಾಲಕ, ಸಹಾಯಕರು, ದೂರವಾಣಿ, ಪ್ರಯಾಣ ಭತ್ಯೆ, ಊಟ-ವಸತಿ, ಪ್ರದೇಶಾಭಿವೃದ್ಧಿ ನಿಧಿ&#8230; ಹೀಗೆ ಅವರಿಗೆ ದೊರೆಯುವ ಭತ್ಯೆಗಳ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಇದರ ಮೇಲೆ ಇಷ್ಟು ಮಾತ್ರ ಎಂದು ಹೇಳಿಕೊಳ್ಳಲು ಒಂದಷ್ಟು ವೇತನ. ಇವೆಲ್ಲ ಸೌಲಭ್ಯ-ಸೌಕರ್ಯಗಳು ಅವರಿಗೆ ದೊರೆಯುವುದು ಜನ ಸಾಮಾನ್ಯರು ತೆರಿಗೆ ನೀಡಿದ ಹಣದಿಂದಾಗಿ ಮತ್ತು ನಾವು ಅವರನ್ನು ಆರಿಸಿ ಕಳುಹಿಸಿದ ಪರಿಣಾಮವಾಗಿ ಎಂಬುದನ್ನು ಅರಿತುಕೊಂಡರೆ ಸಾಕು.</p>
<p>ಸರಿ, ಇಷ್ಟೆಲ್ಲಾ ಸಕಲ ಸವಲತ್ತುಗಳಿದ್ದಾಗ್ಯೂ ಬಡ ಪ್ರಜೆಗಳಿಗೆ ಸಮಾಧಾನ ಎಂಬುದು ದೊರೆಯುತ್ತದೆಯೇ? ಒಂದೊಂದು ಕ್ಷೇತ್ರಕ್ಕೆ ಹೋದಲ್ಲಿ ಒಬ್ಬೊಬ್ಬನದು ಒಂದೊಂದು ಕಥೆ. ಇಲ್ಲಿಯೂ ರಾಜಕೀಯ ಮತ್ತು ಭ್ರಷ್ಟಾಚಾರ.</p>
<p>ಸಂಸತ್ತಿನ ಕಲಾಪಗಳ ಸಂದರ್ಭ ಇಲ್ಲ-ಸಲ್ಲದ ಆರೋಪ-ಪ್ರತ್ಯಾರೋಪಗಳಿಗಾಗಿ ಜಗಳ ಮಾಡಿ ಕಲಾಪ ಮುಂದೂಡಲಾಗುತ್ತದೆ. ಆದರೆ, ಸಂಸದರ ವೇತನ ಏರಿಕೆ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟು, ಕೆಲವೇ ನಿಮಿಷಗಳಲ್ಲಿ ಆ ಕುರಿತ ಮಸೂದೆ ಮಂಡನೆಯಾಗುತ್ತದೆ, ಕಾಯಿದೆಯಾಗಿ ಪರಿವರ್ತನೆಯೂ ಆಗುತ್ತದೆ. ಯಾರೂ ಸೊಲ್ಲೆತ್ತುವುದಿಲ್ಲ. ಅಂದರೆ, ಸಂಸತ್ತಿನಲ್ಲಿ ಯಾವುದೇ ಚರ್ಚೆಯಾಗದೆ, ವಾಗ್ವಿವಾದಗಳಿಲ್ಲದೆ ಅಂಗೀಕಾರಗೊಳ್ಳುವ ಮಸೂದೆ ಜನಪ್ರತಿನಿಧಿಗಳ ವೇತನ-ಭತ್ಯೆ ಹೆಚ್ಚಳ ಮಸೂದೆ ಮಾತ್ರ.</p>
<p>ಸಂಸದರ ವೇತನ, ಭತ್ಯೆಯತ್ತ ಒಂದು ಇಣುಕುನೋಟ ಹರಿಸಿದರೆ:<br />
ಮಾಸಿಕ ವೇತನ 12,000, ಕ್ಷೇತ್ರದ ಖರ್ಚುವೆಚ್ಚಕ್ಕೆ ತಿಂಗಳಿಗೆ 10 ಸಾವಿರ, ಕಚೇರಿ/ಸಿಬ್ಬಂದಿ ವೆಚ್ಚ ತಿಂಗಳಿಗೆ 14 ಸಾವಿರ, ಅಧಿವೇಶನ ಸಂದರ್ಭ ದಿನಕ್ಕೆ 500 ರೂ., ಎಲ್ಲಿಗೇ ಆದರೂ ಎಷ್ಟೇ ಬಾರಿ ಪ್ರಥಮ ದರ್ಜೆ ರೈಲ್ವೇ ಪ್ರಯಾಣ ಉಚಿತ,<br />
ಬಿಸಿನೆಸ್ ಕ್ಲಾಸ್ ವಿಮಾನ ಪ್ರಯಾಣ ವರ್ಷಕ್ಕೆ ಪತ್ನಿ ಅಥವಾ ಸಹಾಯಕನೊಂದಿಗೆ 40 ಟ್ರಿಪ್ ಉಚಿತ, ದೆಹಲಿಯಲ್ಲಿ ಐಷಾರಾಮಿ ಬಂಗಲೆಗೆ ಕೇವಲ 2 ಸಾವಿರ ರೂ. ಮಾಸಿಕ ಬಾಡಿಗೆ, ಆದರೆ ಪೀಠೋಪಕರಣ, ಅವುಗಳ ನಿರ್ವಹಣೆಯೆಲ್ಲವೂ ಸರಕಾರಿ ವೆಚ್ಚದಲ್ಲಿ. ಮನೆಯ ವಿದ್ಯುತ್ ವೆಚ್ಚ 50 ಸಾವಿರ ಯುನಿಟ್‌ವರೆಗೆ ಉಚಿತ, 1.70 ಲಕ್ಷ ಸ್ಥಳೀಯ ದೂರವಾಣಿ ಕರೆಗಳು ಉಚಿತ<br />
. ಒಟ್ಟಾರೆಯಾಗಿ ವರ್ಷಕ್ಕೆ ಸುಮಾರು 32 ಲಕ್ಷ, ಅಂದರೆ ತಿಂಗಳಿಗೆ ಅಂದಾಜು ಎರಡೂವರೆ ಲಕ್ಷ ರೂಪಾಯಿ ಪ್ರತೀ ಸಂಸದನ ಖರ್ಚು ವೆಚ್ಚ. ಇದರ ಜೊತೆಗೆ ತನ್ನ ಕ್ಷೇತ್ರದ ಉದ್ಧಾರಕ್ಕಾಗಿ, ಸಂಸದರ ಪ್ರದೇಶಾಭಿವೃದ್ಧಿ ನಿಧಿಯಡಿ ವಾರ್ಷಿಕ 2 ಕೋಟಿ ರೂ. ಪ್ರತ್ಯೇಕ (ಇದು ಸಂಬಂಧಿತ ಯೋಜನೆಗಳಿಗೆ ನೇರವಾಗಿ ಜಮೆಯಾಗುತ್ತದೆ).</p>
<p>ಇವೆಲ್ಲವೂ ಯಾಕಾಗಿ? ಜನರಿಗೆ ಸಹಾಯವಾಗಲು, ಜನರ ಉದ್ಧಾರವಾಗಲು, ದೇಶದ ಉದ್ಧಾರವಾಗಲು. ಹೀಗಾಗುತ್ತಿದೆಯೇ? ಈ ಪ್ರಶ್ನೆಗೆ ಉತ್ತರ ನಿಮ್ಮ ನಿಮ್ಮ ಊರಿನ ಸ್ಥಿತಿ-ಗತಿ ನೋಡಿದರೆ ತಿಳಿಯಬಹುದು! ಮತ್ತೆ, ಇಷ್ಟೆಲ್ಲ ಸಕಲ ಸೌಲಭ್ಯಗಳು ಸಿಗೋದಿಕ್ಕೆ ಯಾವುದೇ ಅರ್ಹತೆಗಳು ಬೇಕಿಲ್ಲ ಎಂಬುದನ್ನೂ ನಾವು ಗಮನಿಸಬೇಕು. ಚುನಾವಣೆಯಲ್ಲಿ ಗೆಲ್ಲುವುದೊಂದೇ ಅರ್ಹತೆ. ಕಷ್ಟಪಟ್ಟು ಓದಿ, ಲಕ್ಷಗಟ್ಟಲೆ ಡೊನೇಶನ್ ಹೆಸರಿನ ಸುಲಿಗೆ ಶುಲ್ಕ ನೀಡಿ ಪದವಿ ಪಡೆದರೂ, ಸಾಕಷ್ಟು ಪ್ರತಿಭೆ ಇದ್ದರೂ ಇಂತಹ ಒಂದು &#8216;ಉದ್ಯೋಗ&#8217; ದೊರೆಯುವುದು ಸಾಧ್ಯವೇ?</p>
<p>ಲಭ್ಯ ಮಾಹಿತಿ ಪ್ರಕಾರ, ರಾಷ್ಟ್ರಪತಿಯ ವೇತನ ವರ್ಷಕ್ಕೆ 12 ಲಕ್ಷ ಆದರೂ, ಮನೆಯ ನಿರ್ಹಹಣೆಗೆ ವಾರ್ಷಿಕ 7 ಕೋಟಿ, ಉದ್ಯಾನಕ್ಕೆ ವಾರ್ಷಿಕ 2 ಕೋಟಿ, ಕಚೇರಿ ಸಿಬ್ಬಂದಿ ವೇತನಕ್ಕೆ ವಾರ್ಷಿಕ 6 ಕೋಟಿ, ಲಾಂಡ್ರಿ ಕೆಲಸಕ್ಕೆ ತಿಂಗಳಿಗೆ 18 ಲಕ್ಷ, ಊಟ-ಉಪಚಾರಕ್ಕಾಗಿ ವಾರ್ಷಿಕ 64 ಲಕ್ಷ ಮತ್ತು ಹೈದರಾಬಾದ್ ಮತ್ತು ಸಿಮ್ಲಾಗಳಲ್ಲಿರುವ ರಾಷ್ಟ್ರಪತಿ ನಿವಾಸಗಳ ನಿರ್ವಹಣೆಗೆ ವಾರ್ಷಿಕ 1.5 ಕೋಟಿ ಸರಕಾರದಿಂದ ನೀಡಲಾಗುತ್ತದೆ.</p>
<p>ಈ ರೀತಿ ರಾಷ್ಟ್ರಪತಿ, ರಾಜ್ಯಪಾಲರು, ಸಂಸದರು, ಸಚಿವರು, ಶಾಸಕರು ಇವರೆಲ್ಲರ ವೇತನಗಳತ್ತ ಗಮನ ಹರಿಸಿದರೆ ಕಣ್ಣು ಕುಕ್ಕುವುದು ಸಹಜವೇ. ಹೌದು. ರಾಜಕೀಯ ಎಂಬುದು ಅಥವಾ ಜನಸೇವೆಯೆಂಬುದು ಯಥಾರ್ಥಕ್ಕೆ ಬೆಳಗ್ಗೆ 10ರಿಂದ ಸಂಜೆ 6ರವರೆಗಿನ ಉದ್ಯೋಗವಲ್ಲ. ಇದು 24&#215;7 ಕೆಲಸ. ನಮ್ಮನ್ನು ಪ್ರತಿನಿಧಿಸುವವರಿಗೆ ದೇಶವನ್ನು ಕಟ್ಟುವ, ಉತ್ತಮ ಚಿಂತನೆಯ ಮೂಲಕ ದೇಶವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸುವ ಹೊಣೆಗಾರಿಕೆ ಇದೆ. ಇದಕ್ಕಾಗಿ, ಅವರು ತಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದರೆ ಅವರಿಗೆ ಈ ಮಟ್ಟದ ಸೌಲಭ್ಯಗಳು ನೀಡಬೇಕಾದದ್ದು ಸಕಾರಣವೂ, ಸಮ್ಮತವೂ ಹೌದು. ಆದರೆ ಅವರು ತಮ್ಮ ಜವಾಬ್ದಾರಿಯನ್ನು ಎಷ್ಟರ ಮಟ್ಟಿಗೆ ನಿಭಾಯಿಸುತ್ತಿದ್ದಾರೆ? ಆರಿಸಿಹೋದವರೆಲ್ಲರೂ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದೇ ಆಗಿದ್ದರೆ, ದೇಶದ ಜನತೆ ಇಂತಹ ಸಮಸ್ಯೆಯ ಸುಳಿಯಲ್ಲಿ ಸಿಲುಕಬೇಕಿತ್ತೇ? ಎಂದೊಮ್ಮೆ ಯೋಚಿಸಿ ನೋಡಿ.</p>
<p>ಇವರೆಲ್ಲ ದೇಶದ ಜನರ ರಕ್ತ, ಬೆವರು ಬಸಿದು ಬಂದ ಹಣವನ್ನು ವ್ಯಯ ಮಾಡುತ್ತಿರುವುದು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಇವರು ಜನಸೇವಕರೇ ಹೊರತು, ಜನರ ಒಡೆಯರು ಅಲ್ಲ. ವಸ್ತು ಸ್ಥಿತಿ ಹೀಗಿರುವಾಗ, ಅವರು ಪಡೆಯುವ ವೇತನ, ಭತ್ಯೆ ಇತ್ಯಾದಿಗೆ ಹೋಲಿಸಿದರೆ ಪುಡಿಗಾಸು ಎಂದಷ್ಟೇ ಹೇಳಿಕೊಳ್ಳಬಹುದಾದ ವಿಮಾನ ಪ್ರಯಾಣದಲ್ಲಿ ಎಕಾನಮಿ ದರ್ಜೆಯಲ್ಲಿ ಪ್ರಯಾಣ ಮಾಡುತ್ತೇವೆ ಅಥವಾ ಮಾಡಬೇಕು ಎಂಬ ಹೇಳಿಕೆಗಳೆಲ್ಲ ಬರೇ ಬೂಟಾಟಿಕೆಯವು ಅಂತಲೇ ಪರಿಗಣಿಸಬೇಕಾಗುತ್ತದೆ.</p>
<p>ಇವರಿಗೆ ನಿಜಕ್ಕೂ ದೇಶ ಸೇವೆಯ ಬಗ್ಗೆ ಕಾಳಜಿ ಇದ್ದರೆ, ತಮ್ಮನ್ನು ಈ ಸ್ಥಾನಕ್ಕೆ ಏರಿಸಿ, ಆರಿಸಿ ಕಳುಹಿಸಿದ ಜನರು ಪಡಬಾರದ ಪಾಡು ಪಡುತ್ತಿರುವ ಬಗ್ಗೆ ಸ್ವಲ್ಪವಾದರೂ ಕನಿಕರ ಎಂಬುದು ಇದ್ದಿದ್ದರೆ, ಎಲ್ಲರೂ ಕೂಡ ದೆಹಲಿಯಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಕೈಗೊಂಡ ಸಣ್ಣ ಕ್ರಮವನ್ನು ಮತ್ತಷ್ಟು ಮುಂದುವರಿಸಿ ದೇಶದ ಬರ ಪೀಡಿತರಿಗೆ ನೆರವಾಗುವತ್ತ ಯೋಚಿಸಬಹುದು.</p>
<p>ತಮ್ಮೆಲ್ಲ ಸಚಿವರು, ಕಾಂಗ್ರೆಸ್ ಶಾಸಕರು ಕನಿಷ್ಠಪಕ್ಷ ಮುಂದಿನ ಒಂದು ವರ್ಷದವರೆಗೆ ಸ್ವಯಂಸ್ಫೂರ್ತಿಯಿಂದ ಶೇ.20ರಷ್ಟು ವೇತನವನ್ನು ಕಡಿಮೆ ಪಡೆಯುವಂತೆ ಶೀಲಾ ದೀಕ್ಷಿತ್ ಸೂಚಿಸಿದ್ದಾರೆ. ಶಾಸಕರು, ಸಂಸದರ ಸುತ್ತಮುತ್ತ ನಡೆಯುವ ಕೋಟ್ಯಂತರ ರೂಪಾಯಿಯ ಭ್ರಷ್ಟಾಚಾರಕ್ಕೆ ಹೋಲಿಸಿದರೆ ಶೇ.20 ವೇತನ ಯಾವ ಲೆಕ್ಕಕ್ಕೂ ಇಲ್ಲ ಎಂಬುದು ಒತ್ತಟ್ಟಿಗಿರಲಿ. ಇಂಥದ್ದೊಂದು ಕ್ರಮವಿದೆಯಲ್ಲ, ಅದು ಮತ್ತಷ್ಟು ಪೂರಕ ಕ್ರಮಗಳಿಗೆ ನಾಂದಿಯಾಗಬೇಕು.</p>
<p>ಅದೆಷ್ಟೋ ದಶಕಗಳಲ್ಲಿ ಇಲ್ಲದೇಹೋದ, ಮನಬಂದಂತೆ ಶಾಸಕರು/ಸಂಸದರು/ಸಚಿವರ ವೇತನ ಹೆಚ್ಚಿಸುತ್ತಲೇ ಇದ್ದಾಗ ಒಂದಿಷ್ಟೂ ಸುಳಿವಿಲ್ಲದ ಈ &#8216;ಮಿತವ್ಯಯ&#8217; ಎಂಬ ವೇದ ಮಂತ್ರ ಇದುವರೆಗೆ ಎಲ್ಲಿ ಹೋಗಿತ್ತು? ಈಗ ದಿಢೀರ್ ಆಗಿ ಈ ಮಂತ್ರ ಪಠಿಸುವುದೇತಕ್ಕೆ? ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರ ಆಕ್ರೋಶದ ಬೆಂಕಿಯನ್ನು ಶಮನಗೊಳಿಸುವುದಕ್ಕಾಗಿಯೇ? ಮೊದಲು ಈ ಪ್ರಯಾಣದ ಐಷಾರಾಮ ತ್ಯಾಗದ ಬದಲು, ಉಳಿದ ಐಷಾರಾಮಗಳ ತ್ಯಾಗ ಆಗಬೇಕಿದೆ, ಭ್ರಷ್ಟಾಚಾರ ನಿಲ್ಲಬೇಕಿದೆ, ಬೆಲೆ ಏರಿಕೆ ತಡೆಯಬೇಕಿದೆ ಮತ್ತು ಜನಪ್ರತಿನಿಧಿಗಳಿಗೆ ದೇಶದ ಹಣದಲ್ಲಿ ಐಷಾರಾಮ, ದುಂದುವೆಚ್ಚಕ್ಕೆ ಅವಕಾಶವಿಲ್ಲ ಎಂಬ ಕುರಿತ ಕಾನೂನು ಜಾರಿಯಾಗಬೇಕಿದೆ. ಹಾಗಿದ್ದರೆ ಜನ ಒಪ್ಪುತ್ತಾರೆ.</p>
<p>ನೀವೇನಂತೀರಿ?<br />
[<a href="http://kannada.webdunia.com/newsworld/news/current/0909/18/1090918067_1.htm">ವೆಬ್‌ದುನಿಯಾದಲ್ಲಿ ಪ್ರಕಟಿತ</a>]</p>
  <a rel="nofollow" href="http://feeds.wordpress.com/1.0/gocomments/avisblog.wordpress.com/281/"><img alt="" border="0" src="http://feeds.wordpress.com/1.0/comments/avisblog.wordpress.com/281/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/281/"><img alt="" border="0" src="http://feeds.wordpress.com/1.0/delicious/avisblog.wordpress.com/281/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/281/"><img alt="" border="0" src="http://feeds.wordpress.com/1.0/stumble/avisblog.wordpress.com/281/" /></a> <a rel="nofollow" href="http://feeds.wordpress.com/1.0/godigg/avisblog.wordpress.com/281/"><img alt="" border="0" src="http://feeds.wordpress.com/1.0/digg/avisblog.wordpress.com/281/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/281/"><img alt="" border="0" src="http://feeds.wordpress.com/1.0/reddit/avisblog.wordpress.com/281/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=281&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/09/09/austerity/feed/</wfw:commentRss>
		<slash:comments>0</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>
	</item>
		<item>
		<title>ಸರ್ವಜ್ಞನನು ಚೆನ್ನೈಯಲ್ಲಿ ಸ್ವಾಗತಿಸಲು ಬನ್ನಿ!</title>
		<link>http://avisblog.wordpress.com/2009/08/12/sarvajna-in-chennai-2/</link>
		<comments>http://avisblog.wordpress.com/2009/08/12/sarvajna-in-chennai-2/#comments</comments>
		<pubDate>Wed, 12 Aug 2009 03:04:03 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/?p=279</guid>
		<description><![CDATA[20 ಶತಮಾನಗಳಷ್ಟು ಹಿಂದೆಯೇ ಸಮಾನತೆ, ಸೌಹಾರ್ದತೆ ಬೋಧಿಸಿದ ತಮಿಳು ಸಂತ ಕವಿ ತಿರುವಳ್ಳುವರ್ ಮತ್ತು 16ನೇ ಶತಮಾನದಲ್ಲಿ ಇದೇ ಮೌಲ್ಯಗಳ ಬೋಧನೆ ಮೂಲಕ ಕನ್ನಡಿಗರ ಮನದಲ್ಲಿ ಅಜರಾಮರವಾಗಿಬಿಟ್ಟಿರುವ ಸರ್ವಜ್ಞ ಕವಿಯ ಪ್ರತಿಮೆಗಳು ಕಾವೇರಿ ಸೇರಿದಂತೆ ಹಲವಾರು ವಿವಾದಗಳ ಸುಳಿಯಲ್ಲಿ ಕಚ್ಚಾಡುತ್ತಿರುವ ಕನ್ನಡಿಗ ಮತ್ತು ತಮಿಳರನ್ನು ಕೂಡಿಸಿ ಒಲಿಸಲಿ ಎಂಬ ಹಾರೈಕೆಯೊಂದಿಗೆ, ಚೆನ್ನೈಯಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕಿಂತಲೂ ಸುಂದರವಾಗಿಸುವುದೀಗ ಕನ್ನಡಿಗರಿಗೆ ದೊರೆತಿರುವ ಅವಕಾಶ. ಇದಕ್ಕಾಗಿ ಹೆಮ್ಮೆ ಪಡೋಣ. ಬೆಂಗಳೂರಲ್ಲಿ ತಿರುವಳ್ಳುವರ್ ಸ್ಥಾಪನೆಯಾಗಿದೆ, ಇನ್ನುಳಿದಿರುವುದು ಚೆನ್ನೈಯಲ್ಲಿ ಸರ್ವಜ್ಞನನ್ನು [...]<img alt="" border="0" src="http://stats.wordpress.com/b.gif?host=avisblog.wordpress.com&blog=154345&post=279&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p>20 ಶತಮಾನಗಳಷ್ಟು ಹಿಂದೆಯೇ ಸಮಾನತೆ, ಸೌಹಾರ್ದತೆ ಬೋಧಿಸಿದ ತಮಿಳು ಸಂತ ಕವಿ ತಿರುವಳ್ಳುವರ್ ಮತ್ತು 16ನೇ ಶತಮಾನದಲ್ಲಿ ಇದೇ ಮೌಲ್ಯಗಳ ಬೋಧನೆ ಮೂಲಕ ಕನ್ನಡಿಗರ ಮನದಲ್ಲಿ ಅಜರಾಮರವಾಗಿಬಿಟ್ಟಿರುವ ಸರ್ವಜ್ಞ ಕವಿಯ ಪ್ರತಿಮೆಗಳು ಕಾವೇರಿ ಸೇರಿದಂತೆ ಹಲವಾರು ವಿವಾದಗಳ ಸುಳಿಯಲ್ಲಿ ಕಚ್ಚಾಡುತ್ತಿರುವ ಕನ್ನಡಿಗ ಮತ್ತು ತಮಿಳರನ್ನು ಕೂಡಿಸಿ ಒಲಿಸಲಿ ಎಂಬ ಹಾರೈಕೆಯೊಂದಿಗೆ, ಚೆನ್ನೈಯಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕಿಂತಲೂ ಸುಂದರವಾಗಿಸುವುದೀಗ ಕನ್ನಡಿಗರಿಗೆ ದೊರೆತಿರುವ ಅವಕಾಶ. ಇದಕ್ಕಾಗಿ ಹೆಮ್ಮೆ ಪಡೋಣ. ಬೆಂಗಳೂರಲ್ಲಿ ತಿರುವಳ್ಳುವರ್ ಸ್ಥಾಪನೆಯಾಗಿದೆ, ಇನ್ನುಳಿದಿರುವುದು ಚೆನ್ನೈಯಲ್ಲಿ ಸರ್ವಜ್ಞನನ್ನು ಸಾಂಗೋಪಾಂಗವಾಗಿ ಪ್ರತಿಷ್ಠಾಪಿಸುವುದು. ರಾಜಕೀಯವನ್ನು ಒಂದು ಕ್ಷಣ ಮರೆತು, ಈ ಐತಿಹಾಸಿಕ ಹೆಮ್ಮೆಯ, ಗೌರವದ, ಅಭಿಮಾನದ ಕ್ಷಣಗಳನ್ನು ಯಶಸ್ವಿಯಾಗಿಸಲು ಸಕಲರೂ ಪ್ರಯತ್ನಿಸಬೇಕಾಗಿದೆ.</p>
<p><strong>ನಮ್ಮಲ್ಲಿಲ್ಲದ್ದು ಅಲ್ಲಿ:</strong><br />
ಕನ್ನಡದ ಮನಸ್ಸುಗಳು ಹೆಮ್ಮೆ ಪಡುವ ಐತಿಹಾಸಿಕ ಕ್ಷಣಕ್ಕೆ ವೇದಿಕೆಯೊಂದು ತಮಿಳುನಾಡಿನಲ್ಲಿ ಸಿದ್ಧವಾಗುತ್ತಿರುವುದು ವಿಶೇಷ ಮತ್ತು ಹೆಗ್ಗಳಿಕೆಯೂ ಹೌದು. ತಮಿಳುನಾಡಿನಲ್ಲಿ ಅಲ್ಲಲ್ಲಿ ಮಹಾನ್ ಕವಿ ತಿರುವಳ್ಳುವರ್ ಪ್ರತಿಮೆಗಳಿವೆ (ಅದಕ್ಕಾಗಿಯೇ ಸ್ಥಾಪನೆಯಾಗಿರುವ ವಳ್ಳುವರ್ ಕೊಟ್ಟಂ ಎಂಬುದು ಚೆನ್ನೈಯ ಕೇಂದ್ರಸ್ಥಾನದಲ್ಲಿದೆ), ಅಂಥದ್ದೇ ಒಂದು ಪ್ರತಿಮೆಯು ಬೆಂಗಳೂರಿನಲ್ಲೂ ಸ್ಥಾಪನೆಯಾಯಿತು ಎಂದಷ್ಟೇ ಭಾವಿಸಿಕೊಳ್ಳಬಹುದಾದರೆ, ಕನ್ನಡಿಗರು ಈ ತಮಿಳರಿಗಿಂತಲೂ ಹೆಚ್ಚು ಹೆಮ್ಮೆ ಪಡುವ ಸಂಭ್ರಮಕ್ಕೊಂದು ಕಾರಣವಿದೆ. ಬೆಂಗಳೂರಲ್ಲಿಯೂ ಇಲ್ಲದ, ಕಳೆದ ಏಳು ವರ್ಷಗಳಿಂದ ಕನ್ನಡ ಭವನದ ನೆಲಮಾಳಿಗೆಯಲ್ಲಿ ಧೂಳಿನಲ್ಲಿ ಮುಳುಗಿ ಮಲಗಿದ್ದ ಸರ್ವಜ್ಞ ಪ್ರತಿಮೆಯು ತಮಿಳರ ರಾಜಧಾನಿಯಲ್ಲಿ ನೆಲೆಗೊಳ್ಳುತ್ತಿಲ್ಲವೇ? ಅದು ಕೂಡ ಮೂರ್ತಿ ಪೂಜೆಯನ್ನು ವಿರೋಧಿಸುತ್ತಲೇ ರಾಜಕೀಯ ಮಾಡುತ್ತಿರುವ ದ್ರಾವಿಡ ಪಕ್ಷಗಳ ತವರೂರಲ್ಲಿ! ಅದಕ್ಕಾಗಿಯೇ ಚೆನ್ನೈ ಕನ್ನಡಿಗರು ಎಲ್ಲ ನೋವುಗಳನ್ನು ನುಂಗಿ ಸಂಭ್ರಮಿಸುತ್ತಿದ್ದಾರೆ.</p>
<p>ಹೌದು. ಸರ್ವಜ್ಞನಿಗೆ ಅಯನಾವರಂ ಜಾಗ ಪ್ರಶಸ್ತವಲ್ಲ ಮತ್ತು ಚೆನ್ನೈ ಕನ್ನಡಿಗರಿಗೆ ತಮ್ಮ ಕನ್ನಡ ಘನತೆ ಎತ್ತಿ ಹಿಡಿದು ತೋರಿಸುವ ಅವಕಾಶವೊಂದನ್ನು ನೀಡಲಾಗಿಲ್ಲ ಎಂಬ ಕೊರಗು ಬಿಟ್ಟರೆ, ಚೆನ್ನೈ ಕನ್ನಡಿಗ ಹೆಮ್ಮೆಯಿಂದಿದ್ದಾನೆ. ಎದೆಯುಬ್ಬಿಸಿ ನಡೆಯುತ್ತಿದ್ದಾನೆ. ಮೇಲೆ ಹೇಳಿದ ಕಾರಣಕ್ಕೆ ಕನ್ನಡದ ರಾಜಧಾನಿಗಿಂತಲೂ ಹೆಚ್ಚು ಹೆಮ್ಮೆ ಪಡಬೇಕಾದವರು ನಾವು ಎಂದುಕೊಳ್ಳುತ್ತಿದ್ದಾನೆ. ಎಷ್ಟೇ ತಕರಾರು ಇದ್ದರೂ, ಈಗ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಇದೆ, ಆ ಕಾರಣಕ್ಕಾಗಿಯಾದರೂ ಚೆನ್ನೈಯಲ್ಲಿ ಸರ್ವಜ್ಞ ಇರಬೇಕು ಎಂಬ ಧೋರಣೆಯೂ ಜೊತೆಗಿದೆ.</p>
<p>ಕಾವೇರಿ ನೀರಿಗಾಗಿ ದಶಕಗಳ ಕಾಲದಿಂದ ಬಡಿದಾಡಿಕೊಳ್ಳುತ್ತಿದ್ದ ಉಭಯ ರಾಜ್ಯಗಳ ನಡುವೆ ಈ ಪ್ರತಿಮೆ ಸ್ಥಾಪನೆಯಿಂದ ಸೌಹಾರ್ದತೆಯ ಹೊಸ ಮಿಂಚು ಹರಿಯುತ್ತದೆ ಎಂದು ಸರಕಾರವು ಹೇಳುತ್ತಿದೆ ಎಂದಾದರೆ ಯಾರಿಗೆ ಬೇಡ? ಹಾಗಂತ, ತಿರುವಳ್ಳುವರ್ ಪ್ರತಿಮೆಗೆ ಬೆಂಗಳೂರಿನಲ್ಲಿ ವಿರೋಧ ಎದುರಾಗಿ ದೊಡ್ಡ ರಂಪಾಟವೇ ಆಗಿತ್ತು. ಆದರೆ ಚೆನ್ನೈಯಲ್ಲಿ? ತಮಿಳರ‌್ಯಾರೂ ಸರ್ವಜ್ಞ ಪ್ರತಿಮೆಯನ್ನು ವಿರೋಧಿಸಿಲ್ಲ ಎಂಬುದನ್ನು ಕೂಡ ಇಲ್ಲಿ ಗಮನಿಸಬೇಕು. ಮತ್ತು ಸ್ವತಃ ಕರುಣಾನಿಧಿಯೇ ಈ ಕುರಿತು ನೀಡಿರುವ ಭರವಸೆಯ ಮಾತುಗಳನ್ನೂ ಸದ್ಯಕ್ಕೆ ನಂಬಿಕೊಳ್ಳಬೇಕು.<br />
<strong><br />
ವಿಶಾಲ ಸ್ಥಳಕ್ಕೆ ಕಾರ್ಯಕ್ರಮ ವರ್ಗಾವಣೆ:</strong><br />
ಅಷ್ಟು ಮಾತ್ರವೇ ಅಲ್ಲ. ಬೆಂಗಳೂರಿಗೆ ಭೇಟಿ ನೀಡಿದಾಗ ಕನ್ನಡಿಗರು, ಕರ್ನಾಟಕ ಸರಕಾರ ತೋರಿದ ಆದರಾಭಿಮಾನಕ್ಕೆ ತಮಿಳುನಾಡು ಮುಖ್ಯಮಂತ್ರಿಯ ಮನಸ್ಸು ಕರಗಿದಂತೆ ತೋರುತ್ತಿದೆ. ಬೆಂಗಳೂರಿನಲ್ಲಿ ಕನ್ನಡಿಗರು ತೋರಿದ ಹೃದಯ ವೈಶಾಲ್ಯದಿಂದ ಅವರ ಮನಸ್ಸಿನಲ್ಲಿ ಬಹುಶಃ ತಪ್ಪಿತಸ್ಥ ಭಾವನೆ ಮೂಡಿರಬೇಕೇನೋ&#8230; ಅದಕ್ಕೇ ಚೆನ್ನೈಗೆ ಮರಳಿದ ತಕ್ಷಣ, ಸರ್ವಜ್ಞ ಪ್ರತಿಮೆ ಇರುವ ಜಾಗಕ್ಕೆ ಹೋಗಿ, ಇಲ್ಲಿ ಸಭಾ ಕಾರ್ಯಕ್ರಮ ನಡೆಸಲು ಜಾಗ ಸಾಲದು ಎಂದು ಅರಿತುಕೊಂಡಿದ್ದಾರೆ. ಇದಕ್ಕಾಗಿ ಜೀವಾ ಉದ್ಯಾನದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಮತ್ತು ಸಾಕಷ್ಟು ವಿಶಾಲವಾದ ಐಸಿಎಫ್ ಮೈದಾನ (ಆರ್‌ಪಿಎಫ್ ಪೆರೇಡ್ ಮೈದಾನ)ದಲ್ಲಿ ಸಭಾ ಕಾರ್ಯಕ್ರಮಕ್ಕೆ ಏರ್ಪಾಡು ಮಾಡುವಂತೆ ತಕ್ಷಣವೇ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.</p>
<p>ಸರ್ವಜ್ಞ ಪ್ರತಿಮೆಗೆ ಅಯನಾವರಂ ಯಾಕೆ ಪ್ರಶಸ್ತ ಅಲ್ಲ ಎಂದು ವೆಬ್‌ದುನಿಯಾ ಈ ಹಿಂದೆಯೇ ವಿಶ್ಲೇಷಿಸಿತ್ತು. ಇಕ್ಕಟ್ಟಾದ ಓಣಿಗಳ ನಡುವೆ ಬರುವ ಜನಸಂದೋಹ ನಿಯಂತ್ರಿಸುವುದು ಕೂಡ ಕಷ್ಟ ಎಂಬುದು ಕರುಣಾನಿಧಿಗೂ ಅರಿವಾಗಿದೆಯೆಂಬಂತೆ ತೋರುತ್ತಿದೆ. ಇದಕ್ಕಾಗಿ, ಅಗಲವಾದ ರಸ್ತೆಗಳಿಂದ ಆವೃತವಾಗಿರುವ ಪ್ರದೇಶವನ್ನು ಕರ್ನಾಟಕದಿಂದ ಬರುವ ಕನ್ನಡಿಗರೆದುರು ತಮ್ಮ ಹೃದಯವೈಶಾಲ್ಯವನ್ನು ಪ್ರಕಟಿಸಲು ಆಯ್ದುಕೊಂಡಿದ್ದಾರೆ ಕರುಣಾನಿಧಿ. ಅತ್ಯುತ್ತಮ ಕಾರ್ಯಕ್ರಮ ಎಂದು ಕನ್ನಡಿಗರು ಶ್ಲಾಘಿಸುವಂತಾಗಬೇಕು, ಆ ಮೂಲಕ ಜೀವಾ ಉದ್ಯಾನ ಪ್ರಶಸ್ತವಲ್ಲ ಎಂಬ ಕೊರಗನ್ನು ನಿವಾರಿಸಬೇಕೆಂಬ ಉದ್ದೇಶದಲ್ಲಿ ವಿಶಾಲವಾದ ಪೆಂಡಾಲ್ ಒಂದು ಐಸಿಎಫ್ ಮೈದಾನದಲ್ಲಿ ಸಿದ್ಧವಾಗುತ್ತಿದೆ.</p>
<p>ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಬಂದಷ್ಟೇ ಜನಸಾಗರವು ಈ ಅಯನಾವರಂ ಉದ್ಯಾನ ಪ್ರದೇಶದ ಪುಟ್ಟ ಜಾಗದಲ್ಲಿ ಸೇರುವುದು ಖಂಡಿತಾ ಸಾಧ್ಯವಿರಲಿಲ್ಲ ಮತ್ತು ನಮ್ಮ ತವರೂರಾಗಿರುವ ಕರ್ನಾಟಕದಿಂದ ಬರುವ ಕನ್ನಡಿಗರು, ತಮಿಳುನಾಡಿನ ಕನ್ನಡಿಗರನ್ನು ಸೇರಿಕೊಂಡು ಆ ಪ್ರದೇಶವನ್ನೇ ತುಂಬಿ ತುಳುಕುವಂತೆ ಮಾಡಬಲ್ಲರೇ ಎಂಬ ನಿರೀಕ್ಷೆಯೂ ಅವರದ್ದಿರಬಹುದು. ಹೀಗಾಗಿ ವಿಶಾಲ ಮೈದಾನದ ವ್ಯವಸ್ಥೆಯಾಗಿದೆ.</p>
<p><strong>ಜೀವ ತಳೆದ ಜೀವಾ ಪಾರ್ಕ್:</strong><br />
ಕನಿಷ್ಠಪಕ್ಷ ಸರ್ವಜ್ಞನ ಹೆಸರಿನಲ್ಲಾದರೂ ಜೀವಾ ಪಾರ್ಕ್‌ಗೆ ಮರು ಜೀವ ಬಂದಿದೆ. ಕರ್ನಾಟಕದಿಂದ ಬರುವ ಕನ್ನಡಿಗರ ಮನ ತಣಿಸಲೆಂದು ಉದ್ಯಾನವು ಕೂಡ ಇನ್ನಿಲ್ಲದಂತೆ ಸಿಂಗಾರಗೊಳ್ಳುತ್ತಿದೆ. ಆ.11ರ ಮಂಗಳವಾರ ಅಲ್ಲಿಗೆ ಬೆಳಿಗ್ಗೆ ಭೇಟಿ ನೀಡಿದಾಗ ದೊರೆತ ಚಿತ್ರಾವಳಿಗಳನ್ನು <a href="http://avisblog.wordpress.com/2009/08/11/sarvajna-in-chennai/">ಇಲ್ಲಿ </a>ಪ್ರಕಟಿಸಲಾಗಿದೆ. ವಾಕಿಂಗ್ ಪಾತ್, ಹಚ್ಚಹಸುರಿನ ಹುಲ್ಲು ಹಾಸು, ದೀಪಾಲಂಕಾರ, ಕಬ್ಬಿಣದ ಫೆನ್ಸಿಂಗ್ ಇತ್ಯಾದಿ ಕಾರ್ಯಗಳು ಭರದಿಂದ ಸಾಗುತ್ತಿರುವುದನ್ನು ಕಾಣಬಹುದು.</p>
<p>ತಿರುವಳ್ಳುವರ್‌ಗೆ ದೊರೆತಂತಹ ಪ್ರೈಮ್ ಲೊಕೇಶನ್‌ನಲ್ಲಿ ನಾವು ಅವಕಾಶ ಕೊಟ್ಟಿಲ್ಲ ಎಂದು ಕೆಲವೇ ಕೆಲವು ತಮಿಳರು ಒಳಗಿಂದೊಳಗೇ ತಾವೇ ಗೆದ್ದೆವೆಂಬ ಹಮ್ಮಿನಿಂದ ಬೀಗಿದರೂ, 18 ವರ್ಷಗಳಿಂದ ಮುಸುಕು ಸರಿಸಲು ಕಾಯುತ್ತಿದ್ದ ತಿರುವಳ್ಳುವರ್ ಬೆಂಗಳೂರಿನಲ್ಲಿ ಕಣ್ಣು ಬಿಟ್ಟ ಕಾರಣದಿಂದಲಾದರೂ, ಏಳೆಂಟು ವರ್ಷಗಳಿಂದ ಮುಕ್ತಿ ಕಾಣದೆ ಬೆಂಗಳೂರಿನ ಕನ್ನಡ ಭವನದ ನೆಲ ಮಾಳಿಗೆಯಲ್ಲಿ ಬಿದ್ದಿದ್ದ ಸರ್ವಜ್ಞನ ಪ್ರತಿಮೆಗೆ ಕೊನೆಗೂ ಮದರಾಸಿನಲ್ಲಿ ನೆಲೆ ಸಿಕ್ಕಿದೆ ಎಂಬ ಸಂತೃಪ್ತಿಯೂ ಕನ್ನಡಿಗರಲ್ಲಿದೆ.<br />
<strong><br />
ಕನ್ನಡಿಗರು ಹೆಮ್ಮೆ ಪಡುವ ಕಾರ್ಯಕ್ರಮವಾಗಲಿ:</strong><br />
ರಾಜ್ಯಗಳ ಮಧ್ಯೆ ಇರುವ ವಿವಾದಗಳ ಹೊಗೆಯಲ್ಲಿ ಉಭಯ ಭಾಷಿಗರ ನಡುವಿನ ಸಂಬಂಧವೇಕೆ ಹದಗೆಡಬೇಕು ಎಂಬುದರತ್ತ ಯೋಚಿಸಿದರೆ, ಬೆಂಗಳೂರಿನಲ್ಲಾಗಲೀ, ಚೆನ್ನೈಯಲ್ಲಾಗಲೀ ಕನ್ನಡಿಗರು ಮತ್ತು ತಮಿಳರು ಸೌಹಾರ್ದತೆಯಿಂದಲೇ ಜೀವಿಸುತ್ತಿಲ್ಲವೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಹೀಗಾಗಿ, ಇದು ಮನಸ್ಸುಗಳ ನಡುವಣ ದ್ವೇಷವಲ್ಲ, ಇದರ ಹಿಂದೆ ರಾಜಕೀಯದ ಚೆಲ್ಲಾಟವೂ ಇದೆ ಎಂಬುದು ಸಾಮಾನ್ಯ ಕನ್ನಡಿಗನ ಅಭಿಮತ. ಇದೇ ಕಾರಣಕ್ಕೆ, ಕಳೆದ ಲೇಖನಕ್ಕೆ ಕಾಮೆಂಟ್ ಹಾಕಿದ್ದ ವೆಂಕಟೇಶ್ ಹೆಸರಿನ ಕನ್ನಡಿಗರೊಬ್ಬರು, ದಯವಿಟ್ಟು ಚೆನ್ನೈನ ಸರ್ವಜ್ಞ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹೋಗಿ, ನಮ್ಮ ಕನ್ನಡದ ಪೆರ್ಮೆಯನ್ನು ಎತ್ತಿ ಹಿಡಿಯಿರಿ ಅಂತ ಕೋರಿಕೊಂಡಿದ್ದಾರೆ.</p>
<p>ಅವರು ಹೇಳಿರುವಂತೆ, ನಮ್ಮ ಅನೇಕ ಇಲ್ಲಗಳ ಪಟ್ಟಿ ಮಾಡಿ ನೋಡಿದರೂ, ಅತ್ತ ಬಹುಸಂಖ್ಯೆಯ ತಮಿಳರು ತಮಿಳುನಾಡಿನಿಂದ ಬರುತ್ತಿದ್ದಾರೆ. ನಮ್ಮ ಕನ್ನಡಿಗರು ಯಾರನ್ನೋ ಬೈಯುತ್ತಾ ಕಾಲಹರಣ ಮಾಡುತ್ತಿದ್ದೇವೆ. ಯಾರೂ ಕರೆಯುವ ಅಗತ್ಯವಿಲ್ಲ. ನಮ್ಮ ಕನ್ನಡದ ಕೆಲಸ. ಹೋಗಿ ಭಾಗವಹಿಸಿ. ಮುಖ್ಯಮಂತ್ರಿಗಳನ್ನು ಬೈದರೆ ಏನು ಉಪಯೋಗ? ಆಸಕ್ತಿಯೇ ಇಲ್ಲ ಅನ್ನೋ ನಗೆಪಾಟಲಿಗೆ ಗುರಿಯಾಗೋದನ್ನ ತಪ್ಪಿಸಿರಪ್ಪ. ನಮ್ಮ ದಮ್ಮಯ್ಯ. ಹೋಗಿ ಅಟೆಂಡ್ ಮಾಡಿ ಬನ್ನಿ ಅಂತಲೂ ಕಳಕಳಿಯಿಂದ ಕೇಳಿಕೊಂಡಿದ್ದಾರೆ.</p>
<p>ಮತ್ತೊಬ್ಬರು ನಾಗ್ ಹೆಸರಿನಲ್ಲಿ ಮಾಡಿದ ಕಾಮೆಂಟಿನಲ್ಲಿ, ಮೊದಲು ನಾವು ಕನ್ನಡಿಗರು 2 ಲಕ್ಷ ಮಂದಿ ಚೆನ್ನೈಗೆ ಹೋಗಬೇಕು ಮತ್ತು ನಮ್ಮ ಒಗ್ಗಟ್ಟು ತೋರಿಸಬೇಕು ಎಂಬ ಕಳಕಳಿ ವ್ಯಕ್ತಪಡಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಹೆಸರಿನ ಕಾಮೆಂಟಿಗರೊಬ್ಬರಂತೂ, &#8220;ಆತ್ಮೀಯ ಅನಿವಾಸಿ ಕನ್ನಡಿಗರೇ, ನಿಮ್ಮ ಕಷ್ಟ ಸುಖಕ್ಕೆ ನಿಮ್ಮ ನೆಲದ ನಿಮ್ಮ ಸಹೋದರರಾದ ನಾವಿದ್ದೇವೆ, ದೇವರು ನಮ್ಮ ಕನ್ನಡಿಗರಿಗೆ ಎಷ್ಟೇ ಕಷ್ಟ ಕೊಟ್ಟರು ತಾಯಿ ಭುವನೇಶ್ವರಿಯ ಆಶೀರ್ವಾದವಿದೆ&#8221; ಎಂದು ಸ್ಫೂರ್ತಿ ತುಂಬಿದ್ದಾರೆ.</p>
<p>ಈಗ ಆಗಿದ್ದು ಆಗಿದೆ, ದ್ವೇಷ ಮರೆತು ಹೊಸ ಯುಗಕ್ಕೆ ನಾಂದಿ ಹಾಡೋಣ. ಸರ್ವಜ್ಞ ಪ್ರತಿಮೆ ಅನಾವರಣವಾಯಿತೆಂದಾಕ್ಷಣ ಸೌಹಾರ್ದತೆ ಮೂಡಿತು ಎಂದಾಗುವುದಿಲ್ಲ. ಸರ್ವಜ್ಞನ ವಚನಗಳು ಈಗಾಗಲೇ ತಮಿಳಿಗೆ ಭಾಷಾಂತರವಾಗಿದೆ ಅಂತ ಕರುಣಾನಿಧಿ ಹೇಳಿದ್ದಾರೆ. ಅದು ತಮಿಳುನಾಡಿನ &#8220;ಐದನೇ ತರಗತಿವರೆಗೆ ಕಡ್ಡಾಯ ತಮಿಳು&#8221; ಭಾಷೆಯ ಪಠ್ಯದಲ್ಲಿ ಸೇರಿಕೊಳ್ಳಲಿ, ಆ ಬಳಿಕ ತಿರುವಳ್ಳುವರ್ ಅವರ ದ್ವಿಪದಿಗಳ ಸಂಗ್ರಹ ತಿರುಕ್ಕುರಳ್ ಕನ್ನಡಕ್ಕೆ ಭಾಷಾಂತರವಾಗಿ ಕನ್ನಡಿಗರೂ ಅದರ ಸಾರ-ಸತ್ವವನ್ನು ಅರಿತುಕೊಳ್ಳುವಂತಾಗಲಿ. ಹೀಗೆ ಮುಂದಿನ ಪೀಳಿಗೆಯಲ್ಲಿ ಉಭಯ ರಾಜ್ಯಗಳ ಸೌಹಾರ್ದತೆಗೆ ಪೂರಕ ವೇದಿಕೆಯೊಂದು ಅಡಿಪಾಯವಾಗಲಿ. ಬೈಬಲ್ ಮತ್ತು ಕುರಾನ್ ನಂತರ ಅತೀ ಹೆಚ್ಚು ಭಾಷೆಗಳಿಗೆ ಅನುವಾದಗೊಂಡ ತಿರುಕ್ಕುರಳ್ ಕೃತಿಯ ಮಹತ್ವ ಏನೆಂಬುದು ಕನ್ನಡಿಗರಿಗೂ ಅರಿವಾಗಲಿ.</p>
<p><strong>ಆ ಮೇಲೆ ಇದ್ದೇ ಇದೆ ಹೋರಾಟ:</strong><br />
ಕರ್ನಾಟಕಕ್ಕೆ ಸಿಗಬಹುದಾದ ನೆರವಿಗೆ ತಮಿಳುನಾಡು ರಾಜಕಾರಣಿಗಳು ಅಡ್ಡಗಾಲು ಹಾಕುವುದು ನಿಂತರೆ ಮತ್ತು ಎಲ್ಲವೂ ತಮಿಳುನಾಡಿಗೇ ಬೇಕು, ಕರ್ನಾಟಕಕ್ಕೆ ಸಿಗಬಾರದು ಅಂತೆಲ್ಲಾ ಮನೋಭಾವದ ಹಿಂದೆಯೂ ಇರುವುದು ರಾಜಕಾರಣಿಗಳೇ. ಇದಕ್ಕೆ ಉಭಯ ರಾಜ್ಯಗಳ ಜನರ ನಡುವಣ ಸ್ನೇಹ-ಸೌಹಾರ್ದತೆ ಬಲಿಯಾಗಬಾರದು. ತಮಿಳು ರಾಜಕಾರಣಿಗಳು, ಅಧಿಕಾರಿಗಳು ಪಟ್ಟು ಹಿಡಿದು, ಕೇಂದ್ರದ ಕುತ್ತಿಗೆ ಪಟ್ಟಿ ಹಿಡಿದು, ತಮ್ಮ ರಾಜ್ಯಕ್ಕೆ ಬೇಕಾದ್ದನ್ನು ಮಾಡಿಸಿಕೊಳ್ಳುತ್ತಾರೆ. ಅದೇ ರೀತಿ ಕರ್ನಾಟಕಕ್ಕೂ ಸಕಲ ಸೌಲಭ್ಯಗಳು ದೊರೆಯುವಂತೆ ಮಾಡಬೇಕಿರುವುದು ಕರ್ನಾಟಕ ರಾಜಕಾರಣಿಗಳು. ನಮಗೇನಾದರೂ ಅನ್ಯಾಯವಾಗಿದೆ ಎಂದಾದರೆ ಅದು ತಮಿಳು ರಾಜಕಾರಣಿಗಳಿಂದ ಮತ್ತು ಸುಮ್ಮನಿರುವ ನಮ್ಮ ಜನಪ್ರತಿನಿಧಿಗಳಿಂದಲೇ ಹೊರತು ಸಾಮಾನ್ಯ ತಮಿಳರಿಂದ ಅಲ್ಲ ಎಂಬುದನ್ನೂ ಗಮನಿಸಬೇಕು.</p>
<p>ಪ್ರತಿ ಬಾರಿಯೂ ಕಾವೇರಿ ವಿಷಯವು ಕಾವೇರಿದಾಗ ಮೊದಲು ಗುರಿಯಾಗುವುದು ಎರಡೂ ರಾಜ್ಯಗಳ ಬಸ್ಸುಗಳು, ಪರಭಾಷಾ ಚಿತ್ರ ಪ್ರದರ್ಶಿಸುತ್ತಿರುವ ಚಿತ್ರಮಂದಿರಗಳು. ಆದರೆ, ಈಗ ಹೊಸದೊಂದು ಸಾಧ್ಯತೆಯು ಸೇರ್ಪಡೆಯಾಗಿದೆ. ಈ ಪ್ರತಿಮೆಯೂ ಜನರ ಭಾವವಿಕಾರಕ್ಕೆ ಗುರಿಯಾಗದಿರಲಿ, ಪ್ರತಿಮೆಗಳ ರಕ್ಷಣೆಗಳ ಬಗ್ಗೆ ಉಭಯ ರಾಜ್ಯಗಳೂ ಬದ್ಧತೆಯಿಂದ ಕ್ರಮ ಕೈಗೊಳ್ಳಲಿ ಎಂದು ಹಾರೈಸೋಣ.</p>
<p>ಅದೆಲ್ಲ ಆದ ಬಳಿಕ, ನಮ್ಮ ಮುಖ್ಯಮಂತ್ರಿಗಳು ಭರವಸೆ ನೀಡಿದಂತೆ, ಕಾವೇರಿ ವಿವಾದವಾಗಲೀ, ಹೊಗೇನಕಲ್ ವಿವಾದವಾಗಲೀ ಮತ್ತು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವುದಕ್ಕೆ ಚೆನ್ನೈ ಹೈಕೋರ್ಟಿನಲ್ಲಿ ಹೂಡಿರುವ ದಾವೆಯ ಕುರಿತಾಗಲೀ, ಮಾತುಕತೆ ಮೂಲಕ ಪರಿಹಾರ ಕಂಡುಕೊಂಡು, ತಮ್ಮ ಕನ್ನಡದ ಬಗೆಗಿನ ಕಾಳಜಿಯನ್ನು ದೃಢಪಡಿಸಲಿ.</p>
<p>ಸರ್ವಜ್ಞ ಹೇಳಿದ್ದಾನಲ್ಲ&#8230;.:</p>
<blockquote><p>ಮಾತಿಂಗೆ ಮಾತುಗಳು | ಓತು ಸಾಸಿರವುಂಟು |<br />
ಮಾತಾಡಿದಂತೆ ನಡೆದಾತ ಜಗವನ್ನು<br />
ಕೂತಲ್ಲಿ ಆಳ್ವ | ಸರ್ವಜ್ಞ</p></blockquote>
<p>ಇದರ ಅನುಸಾರ, ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಕರುಣಾನಿಧಿ ಅವರು ಉಭಯ ರಾಜ್ಯಗಳ ನಡುವೆ ಕುದಿಯುತ್ತಿರುವ ವಿವಾದವನ್ನು ಮಾತಿನ ಮೂಲವೇ ನ್ಯಾಯಯುತವಾಗಿ ಶಮನಗೊಳಿಸಬಹುದು ಎಂಬ ಮಾತು ಕೊಟ್ಟಿದ್ದಾರೆ. ಮಾತು ಉಳಿಸಿಕೊಂಡರೆ ಅವರು ರಾಜ್ಯವನ್ನು ಆಳಬಹುದು.</p>
<p>ಕಾರ್ಯಕ್ರಮ ಮೊದಲು ಯಶಸ್ವಿಯಾಗಲಿ, ಅನ್ಯಾಯದ ವಿರುದ್ಧ ಹೋರಾಟ ಮತ್ತೆ ಮುಂದುವರಿಸೋಣ.</p>
<p><a href="http://kannada.webdunia.com/newsworld/news/current/0908/11/1090811040_1.htm">(ವೆಬ್‌ದುನಿಯಾದಲ್ಲಿ ಇಲ್ಲಿ ಪ್ರಕಟ)</a></p>
  <a rel="nofollow" href="http://feeds.wordpress.com/1.0/gocomments/avisblog.wordpress.com/279/"><img alt="" border="0" src="http://feeds.wordpress.com/1.0/comments/avisblog.wordpress.com/279/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/279/"><img alt="" border="0" src="http://feeds.wordpress.com/1.0/delicious/avisblog.wordpress.com/279/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/279/"><img alt="" border="0" src="http://feeds.wordpress.com/1.0/stumble/avisblog.wordpress.com/279/" /></a> <a rel="nofollow" href="http://feeds.wordpress.com/1.0/godigg/avisblog.wordpress.com/279/"><img alt="" border="0" src="http://feeds.wordpress.com/1.0/digg/avisblog.wordpress.com/279/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/279/"><img alt="" border="0" src="http://feeds.wordpress.com/1.0/reddit/avisblog.wordpress.com/279/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=279&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/08/12/sarvajna-in-chennai-2/feed/</wfw:commentRss>
		<slash:comments>4</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>
	</item>
		<item>
		<title>ಸರ್ವಜ್ಞ ಪ್ರತಿಮೆ: ಈಗಿನ ತಾಜಾ ಚಿತ್ರಗಳು</title>
		<link>http://avisblog.wordpress.com/2009/08/11/sarvajna-in-chennai/</link>
		<comments>http://avisblog.wordpress.com/2009/08/11/sarvajna-in-chennai/#comments</comments>
		<pubDate>Tue, 11 Aug 2009 06:35:29 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/?p=275</guid>
		<description><![CDATA[ಸಂತ ಕವಿ ಸರ್ವಜ್ಞನ ಪ್ರತಿಮೆ ಅನಾವರಣಕ್ಕೆ ಚೆನ್ನೈಯ ಅಯನಾವರಂನಲ್ಲಿರುವ ಜೀವಾ ಉದ್ಯಾನವನವು ಸಿಂಗಾರಗೊಳ್ಳುತ್ತಿದ್ದು, ಇಂದು (ಆ.11) ಬೆಳಿಗ್ಗೆ ಆ ಸ್ಥಳಕ್ಕೆ ಹೋಗಿ ತೆಗೆದ ತಾಜಾ ಚಿತ್ರಗಳು ವೆಬ್‌ದುನಿಯಾದಲ್ಲಿ ಇಲ್ಲಿ ಪ್ರಕಟವಾಗಿದೆ.
ಇದೀಗ ಸಮಾರಂಭದ ಸ್ಥಳವನ್ನು ಬದಲಾಯಿಸಿದ್ದು, ಕಾರ್ಯಕ್ರಮವು ಉದ್ಯಾನವನದಿಂದ ಒಂದುವರೆ ಕಿಲೋಮೀಟರ್ ದೂರದಲ್ಲಿರುವ ಐಸಿಎಫ್ ಮೈದಾನ ಎಂದೇ ಕರೆಯಲಾಗುವ ಆರ್‌ಪಿಎಫ್ ಪೆರೇಡ್ ಮೈದಾನದಲ್ಲಿ ನಡೆಯಲಿದೆ. ವಿಶಾಲವಾದ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ.
       <img alt="" border="0" src="http://stats.wordpress.com/b.gif?host=avisblog.wordpress.com&blog=154345&post=275&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p>ಸಂತ ಕವಿ ಸರ್ವಜ್ಞನ ಪ್ರತಿಮೆ ಅನಾವರಣಕ್ಕೆ ಚೆನ್ನೈಯ ಅಯನಾವರಂನಲ್ಲಿರುವ ಜೀವಾ ಉದ್ಯಾನವನವು ಸಿಂಗಾರಗೊಳ್ಳುತ್ತಿದ್ದು, ಇಂದು (ಆ.11) ಬೆಳಿಗ್ಗೆ ಆ ಸ್ಥಳಕ್ಕೆ ಹೋಗಿ ತೆಗೆದ ತಾಜಾ ಚಿತ್ರಗಳು ವೆಬ್‌ದುನಿಯಾದಲ್ಲಿ <a href="http://kannada.webdunia.com/newsworld/news/sarvajna/0908/11/1090811022_1.htm">ಇಲ್ಲಿ</a> ಪ್ರಕಟವಾಗಿದೆ.<br />
<div id="attachment_276" class="wp-caption alignright" style="width: 234px"><a href="http://kannada.webdunia.com/newsworld/news/sarvajna/0908/11/1090811022_1.htm"><img src="http://avisblog.files.wordpress.com/2009/08/sarvajna_park2.jpg?w=224&#038;h=300" alt="ಅಯನಾವರಂನ ಜೀವಾ ಪಾರ್ಕ್ ಸರ್ವಜ್ಞನಿಗಾಗಿ ಸಿಂಗಾರಗೊಳ್ಳುತ್ತಿದೆ" title="Sarvajna in Chennai Aynavaram Jeeva Park" width="224" height="300" class="size-medium wp-image-276" /></a><p class="wp-caption-text">ಅಯನಾವರಂನ ಜೀವಾ ಪಾರ್ಕ್ ಸರ್ವಜ್ಞನಿಗಾಗಿ ಸಿಂಗಾರಗೊಳ್ಳುತ್ತಿದೆ</p></div><br />
ಇದೀಗ ಸಮಾರಂಭದ ಸ್ಥಳವನ್ನು ಬದಲಾಯಿಸಿದ್ದು, ಕಾರ್ಯಕ್ರಮವು ಉದ್ಯಾನವನದಿಂದ ಒಂದುವರೆ ಕಿಲೋಮೀಟರ್ ದೂರದಲ್ಲಿರುವ ಐಸಿಎಫ್ ಮೈದಾನ ಎಂದೇ ಕರೆಯಲಾಗುವ ಆರ್‌ಪಿಎಫ್ ಪೆರೇಡ್ ಮೈದಾನದಲ್ಲಿ ನಡೆಯಲಿದೆ. ವಿಶಾಲವಾದ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ.</p>
  <a rel="nofollow" href="http://feeds.wordpress.com/1.0/gocomments/avisblog.wordpress.com/275/"><img alt="" border="0" src="http://feeds.wordpress.com/1.0/comments/avisblog.wordpress.com/275/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/275/"><img alt="" border="0" src="http://feeds.wordpress.com/1.0/delicious/avisblog.wordpress.com/275/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/275/"><img alt="" border="0" src="http://feeds.wordpress.com/1.0/stumble/avisblog.wordpress.com/275/" /></a> <a rel="nofollow" href="http://feeds.wordpress.com/1.0/godigg/avisblog.wordpress.com/275/"><img alt="" border="0" src="http://feeds.wordpress.com/1.0/digg/avisblog.wordpress.com/275/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/275/"><img alt="" border="0" src="http://feeds.wordpress.com/1.0/reddit/avisblog.wordpress.com/275/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=275&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/08/11/sarvajna-in-chennai/feed/</wfw:commentRss>
		<slash:comments>1</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>

		<media:content url="http://avisblog.files.wordpress.com/2009/08/sarvajna_park2.jpg?w=224" medium="image">
			<media:title type="html">Sarvajna in Chennai Aynavaram Jeeva Park</media:title>
		</media:content>
	</item>
		<item>
		<title>&#8216;ಸರ್ವಜ್ಞ&#8217; ಅನಾವರಣ ಕಾರ್ಯಕ್ರಮ ಸ್ಥಳ ಬದಲು</title>
		<link>http://avisblog.wordpress.com/2009/08/10/sarvajna/</link>
		<comments>http://avisblog.wordpress.com/2009/08/10/sarvajna/#comments</comments>
		<pubDate>Mon, 10 Aug 2009 14:31:38 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/?p=273</guid>
		<description><![CDATA[ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ಚೆನ್ನೈ ಅಯನಾವರಂನ ಜೀವಾ ಉದ್ಯಾನವನ ಪ್ರಶಸ್ತ ಜಾಗವಲ್ಲ, ಅಲ್ಲಿ ಸ್ಥಳಾವಕಾಶ ತೀರಾ ಕಡಿಮೆ ಎಂದು ಈ ಹಿಂದೆಯೇ ಹೇಳಿದ್ದೆ.
ಅದಕ್ಕೆ ಪೂರಕವಾಗಿ, ಸ್ವತಃ ತಮಿಳುನಾಡು ಮುಖ್ಯಮಂತ್ರಿ ಸೋಮವಾರ ಆ ಪ್ರದೇಶಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅರಿತುಕೊಂಡಿದ್ದಾರೆ. ಜ್ಞಾನೋದಯವಾಗಲು ಕಾರಣವೇನು ಗೊತ್ತಾಗಿಲ್ಲ. ಇದೀಗ ಪ್ರತಿಮೆ ಅನಾವರಣ ಕಾರ್ಯಕ್ರಮದ ಸ್ಥಳವನ್ನೇ ಬದಲಾಯಿಸಿದ್ದಾರೆ. ಇದೀಗ ಪಕ್ಕದ ವಿಲ್ಲಿವಾಕ್ಕಂ ಐಸಿಎಫ್ ಮೈದಾನಕ್ಕೆ ಈ ಕಾರ್ಯಕ್ರಮ ಸ್ಥಳಾಂತರವಾಗಿದೆ.
ಆದರೆ ಪ್ರತಿಮೆ ಮಾತ್ರ ಅದೇ ಜಾಗದಲ್ಲಿರುತ್ತದೆ.
ಇದರ ನಡುವೆ, ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಬೆದರಿಕೆಗಳು ಇವೆ [...]<img alt="" border="0" src="http://stats.wordpress.com/b.gif?host=avisblog.wordpress.com&blog=154345&post=273&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p>ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ಚೆನ್ನೈ ಅಯನಾವರಂನ ಜೀವಾ ಉದ್ಯಾನವನ ಪ್ರಶಸ್ತ ಜಾಗವಲ್ಲ, ಅಲ್ಲಿ ಸ್ಥಳಾವಕಾಶ ತೀರಾ ಕಡಿಮೆ ಎಂದು ಈ ಹಿಂದೆಯೇ ಹೇಳಿದ್ದೆ.</p>
<p>ಅದಕ್ಕೆ ಪೂರಕವಾಗಿ, ಸ್ವತಃ ತಮಿಳುನಾಡು ಮುಖ್ಯಮಂತ್ರಿ ಸೋಮವಾರ ಆ ಪ್ರದೇಶಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅರಿತುಕೊಂಡಿದ್ದಾರೆ. ಜ್ಞಾನೋದಯವಾಗಲು ಕಾರಣವೇನು ಗೊತ್ತಾಗಿಲ್ಲ. ಇದೀಗ ಪ್ರತಿಮೆ ಅನಾವರಣ ಕಾರ್ಯಕ್ರಮದ ಸ್ಥಳವನ್ನೇ ಬದಲಾಯಿಸಿದ್ದಾರೆ. ಇದೀಗ ಪಕ್ಕದ ವಿಲ್ಲಿವಾಕ್ಕಂ ಐಸಿಎಫ್ ಮೈದಾನಕ್ಕೆ ಈ ಕಾರ್ಯಕ್ರಮ ಸ್ಥಳಾಂತರವಾಗಿದೆ.</p>
<p>ಆದರೆ ಪ್ರತಿಮೆ ಮಾತ್ರ ಅದೇ ಜಾಗದಲ್ಲಿರುತ್ತದೆ.</p>
<p>ಇದರ ನಡುವೆ, ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಬೆದರಿಕೆಗಳು ಇವೆ ಎಂಬ ಊಹಾಪೋಹಗಳಿರುವ ಹಿನ್ನೆಲೆಯಲ್ಲಿ, ಅವರನ್ನು ಈ ಕುರಿತಾಗಿಯೂ ಪ್ರಶ್ನಿಸಲಾಯಿತು. ಆದರೆ, ಬೆದರಿಕೆ ಕಾರಣದಿಂದಲ್ಲ, ಜಾಗದ ಕೊರತೆಯ ಕಾರಣದಿಂದ ಅಂತಾನೇ ಕರುಣಾನಿಧಿ ಸ್ಪಷ್ಟಪಡಿಸಿದ್ದಾರೆ.</p>
<p>ಅಥವಾ, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದ ವಿಶಾಲ ಜಾಗವನ್ನು ನೋಡಿ ಕರುಣಾನಿಧಿಯ ಮನಸ್ಸು ದಿಢೀರ್ ಆಗಿ ಬದಲಾಗಿರಬಹಬಹುದೇ?</p>
<p>ಲೊಕೇಶನ್ ಬದಲಾಗಿರುವ ಕುರಿತು ವೆಬ್‌ದುನಿಯಾ ವರದಿ <a href="http://kannada.webdunia.com/newsworld/news/regional/0908/10/1090810075_1.htm">ಇಲ್ಲಿದೆ.</a></p>
  <a rel="nofollow" href="http://feeds.wordpress.com/1.0/gocomments/avisblog.wordpress.com/273/"><img alt="" border="0" src="http://feeds.wordpress.com/1.0/comments/avisblog.wordpress.com/273/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/273/"><img alt="" border="0" src="http://feeds.wordpress.com/1.0/delicious/avisblog.wordpress.com/273/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/273/"><img alt="" border="0" src="http://feeds.wordpress.com/1.0/stumble/avisblog.wordpress.com/273/" /></a> <a rel="nofollow" href="http://feeds.wordpress.com/1.0/godigg/avisblog.wordpress.com/273/"><img alt="" border="0" src="http://feeds.wordpress.com/1.0/digg/avisblog.wordpress.com/273/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/273/"><img alt="" border="0" src="http://feeds.wordpress.com/1.0/reddit/avisblog.wordpress.com/273/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=273&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/08/10/sarvajna/feed/</wfw:commentRss>
		<slash:comments>2</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>
	</item>
		<item>
		<title>ಸರ್ವಜ್ಞ: ನೋವಿನ ನಡುವೆಯೂ ಚೆನ್ನೈ ಕನ್ನಡಿಗರಿಗೆ ನಲಿವು</title>
		<link>http://avisblog.wordpress.com/2009/08/06/chennai-kannadiga-sarvajna/</link>
		<comments>http://avisblog.wordpress.com/2009/08/06/chennai-kannadiga-sarvajna/#comments</comments>
		<pubDate>Thu, 06 Aug 2009 15:22:10 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/?p=271</guid>
		<description><![CDATA[ಸರ್ವಜ್ಞ ಪ್ರತಿಮೆಯನ್ನು ಚೆನ್ನೈಯಲ್ಲಿ ಪ್ರಶಸ್ತವಲ್ಲದ ಜಾಗದಲ್ಲಿ ಪ್ರತಿಷ್ಠಾಪಿಸುತ್ತಿದ್ದಾರೆ. ಓಕೆ, ತೀರ್ಮಾನ ಮಾಡಿಯಾಗಿದೆ. ಆದರೆ, ಚೆನ್ನೈ ಕನ್ನಡಿಗರನ್ನು ಈ ಪರಿ ನಿರ್ಲಕ್ಷಿಸಿದ್ದು ಸರಿಯೇ
ಬೆಂಗಳೂರಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಒಂದು ಲಕ್ಷ ಜನರಿಗೆ ಅಟ್ಟಣೆ ನಡೆದಿದೆ. ಆದರೆ, ಚೆನ್ನೈಯಲ್ಲಿ? ಅಲ್ಲಿರುವ ಕನ್ನಡಿಗರಿಗೇ ಸರಿಯಾದ ಆಹ್ವಾನವಿಲ್ಲ. ಅರ್ಧ ದಶಕಕ್ಕೂ ಹೆಚ್ಚು ಕಾಲದಿಂದ ಕನ್ನಡ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದ ಕನ್ನಡ ಸಂಘಗಳನ್ನೆಲ್ಲ ಉಪೇಕ್ಷಿಸಲಾಗಿದೆ.
ಛೆ! ಹೊರ ನಾಡ ಕನ್ನಡಿಗರಿಗೆ ಎಂಥ ದುರಂತ ಸ್ಥಿತಿ?
ಈ ಬಗೆಗೊಂದು ವಿಸ್ತೃತ ಲೇಖನ ವೆಬ್‌ದುನಿಯಾದಲ್ಲಿ ಇಲ್ಲಿ ಪ್ರಕಟಿಸಿದ್ದೇನೆ. ನಿಮ್ಮ ಅಭಿಪ್ರಾಯ [...]<img alt="" border="0" src="http://stats.wordpress.com/b.gif?host=avisblog.wordpress.com&blog=154345&post=271&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p>ಸರ್ವಜ್ಞ ಪ್ರತಿಮೆಯನ್ನು ಚೆನ್ನೈಯಲ್ಲಿ ಪ್ರಶಸ್ತವಲ್ಲದ ಜಾಗದಲ್ಲಿ ಪ್ರತಿಷ್ಠಾಪಿಸುತ್ತಿದ್ದಾರೆ. ಓಕೆ, ತೀರ್ಮಾನ ಮಾಡಿಯಾಗಿದೆ. ಆದರೆ, ಚೆನ್ನೈ ಕನ್ನಡಿಗರನ್ನು ಈ ಪರಿ ನಿರ್ಲಕ್ಷಿಸಿದ್ದು ಸರಿಯೇ</p>
<p>ಬೆಂಗಳೂರಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಒಂದು ಲಕ್ಷ ಜನರಿಗೆ ಅಟ್ಟಣೆ ನಡೆದಿದೆ. ಆದರೆ, ಚೆನ್ನೈಯಲ್ಲಿ? ಅಲ್ಲಿರುವ ಕನ್ನಡಿಗರಿಗೇ ಸರಿಯಾದ ಆಹ್ವಾನವಿಲ್ಲ. ಅರ್ಧ ದಶಕಕ್ಕೂ ಹೆಚ್ಚು ಕಾಲದಿಂದ ಕನ್ನಡ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದ ಕನ್ನಡ ಸಂಘಗಳನ್ನೆಲ್ಲ ಉಪೇಕ್ಷಿಸಲಾಗಿದೆ.</p>
<p>ಛೆ! ಹೊರ ನಾಡ ಕನ್ನಡಿಗರಿಗೆ ಎಂಥ ದುರಂತ ಸ್ಥಿತಿ?</p>
<p><a href="http://kannada.webdunia.com/newsworld/news/current/0908/06/1090806083_1.htm">ಈ ಬಗೆಗೊಂದು ವಿಸ್ತೃತ ಲೇಖನ ವೆಬ್‌ದುನಿಯಾದಲ್ಲಿ ಇಲ್ಲಿ ಪ್ರಕಟಿಸಿದ್ದೇನೆ. ನಿಮ್ಮ ಅಭಿಪ್ರಾಯ ತಿಳಿಸಿ.</a></p>
  <a rel="nofollow" href="http://feeds.wordpress.com/1.0/gocomments/avisblog.wordpress.com/271/"><img alt="" border="0" src="http://feeds.wordpress.com/1.0/comments/avisblog.wordpress.com/271/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/271/"><img alt="" border="0" src="http://feeds.wordpress.com/1.0/delicious/avisblog.wordpress.com/271/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/271/"><img alt="" border="0" src="http://feeds.wordpress.com/1.0/stumble/avisblog.wordpress.com/271/" /></a> <a rel="nofollow" href="http://feeds.wordpress.com/1.0/godigg/avisblog.wordpress.com/271/"><img alt="" border="0" src="http://feeds.wordpress.com/1.0/digg/avisblog.wordpress.com/271/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/271/"><img alt="" border="0" src="http://feeds.wordpress.com/1.0/reddit/avisblog.wordpress.com/271/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=271&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/08/06/chennai-kannadiga-sarvajna/feed/</wfw:commentRss>
		<slash:comments>0</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>
	</item>
		<item>
		<title>ಸರ್ವಜ್ಞ ಪ್ರತಿಮೆ ಅಯನಾವರಂನಲ್ಲಿ ಬೇಡ ಯಾಕೆ?</title>
		<link>http://avisblog.wordpress.com/2009/08/04/sarvajna_aynavaram/</link>
		<comments>http://avisblog.wordpress.com/2009/08/04/sarvajna_aynavaram/#comments</comments>
		<pubDate>Tue, 04 Aug 2009 11:37:47 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/?p=266</guid>
		<description><![CDATA[(ವೆಬ್‌ದುನಿಯಾಕ್ಕಾಗಿ ಸಿದ್ಧಪಡಿಸಿದ ಲೇಖನವಿದು.)
ಇದು ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಅಥವಾ ಚೆನ್ನೈಯಲ್ಲಿ ಸರ್ವಜ್ಞ ಕವಿಯ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸುವ ಲೇಖನ ಅಲ್ಲ ಎಂಬುದನ್ನು ಓದುಗರು ಅರ್ಥೈಸಿಕೊಂಡೇ ಮುಂದುವರಿಯಲು ಅರಿಕೆ.
ಮೊದಲನೆಯದಾಗಿ, ಪ್ರತಿಮಾ ಸಂಸ್ಕೃತಿ ಕರ್ನಾಟಕದಲ್ಲಿ ಕಡಿಮೆ. ಅದೇನಿದ್ದರೂ, ದೇವರನ್ನು ವಿರೋಧಿಸುವ ದ್ರಾವಿಡರ ನಾಡಿನಲ್ಲಿ ದೇವಾಲಯಗಳ ಸಂಖ್ಯೆ ಎಷ್ಟು ಅಧಿಕವೋ, ಅಷ್ಟೇ ಪ್ರಮಾಣದಲ್ಲಿ ಗಲ್ಲಿಗೊಂದು ಪ್ರತಿಮೆಗಳು ಕಾಣಸಿಗುತ್ತಿರುವ ತಮಿಳುನಾಡು ರಾಜಧಾನಿ ಚೆನ್ನೈಗಷ್ಟೇ ಹೊಂದಿಕೊಳ್ಳುವ ವಿಚಾರ. ಎಂಜಿಆರ್, ಅಣ್ಣಾದುರೈ, ಅಂಬೇಡ್ಕರ್, ಗಾಂಧೀಜಿ&#8230; ಹೀಗೆ ಸಾಲು ಸಾಲು ಕೈಯೆತ್ತಿ, ಕಿರುಬೆರಳೆತ್ತಿ ದೂರದೃಷ್ಟಿ ನೆಟ್ಟ [...]<img alt="" border="0" src="http://stats.wordpress.com/b.gif?host=avisblog.wordpress.com&blog=154345&post=266&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p><a href="http://kannada.webdunia.com/newsworld/news/current/0908/04/1090804051_1.htm">(ವೆಬ್‌ದುನಿಯಾಕ್ಕಾಗಿ ಸಿದ್ಧಪಡಿಸಿದ ಲೇಖನವಿದು.)</a></p>
<p>ಇದು ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಅಥವಾ ಚೆನ್ನೈಯಲ್ಲಿ ಸರ್ವಜ್ಞ ಕವಿಯ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸುವ ಲೇಖನ ಅಲ್ಲ ಎಂಬುದನ್ನು ಓದುಗರು ಅರ್ಥೈಸಿಕೊಂಡೇ ಮುಂದುವರಿಯಲು ಅರಿಕೆ.</p>
<p><div id="attachment_267" class="wp-caption alignright" style="width: 310px"><img src="http://avisblog.files.wordpress.com/2009/08/cannon-025_400.jpg?w=300&#038;h=225" alt="ಅಯನಾವರಂನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪಿಸಲು ಸಿದ್ಧತೆ" title="ಸರ್ವಜ್ಞ ಪ್ರತಿಮೆ ಸ್ಥಾಪಿಸಲು ಸಿದ್ಧತೆ" width="300" height="225" class="size-medium wp-image-267" /><p class="wp-caption-text">ಅಯನಾವರಂನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪಿಸಲು ಸಿದ್ಧತೆ</p></div>ಮೊದಲನೆಯದಾಗಿ, ಪ್ರತಿಮಾ ಸಂಸ್ಕೃತಿ ಕರ್ನಾಟಕದಲ್ಲಿ ಕಡಿಮೆ. ಅದೇನಿದ್ದರೂ, ದೇವರನ್ನು ವಿರೋಧಿಸುವ ದ್ರಾವಿಡರ ನಾಡಿನಲ್ಲಿ ದೇವಾಲಯಗಳ ಸಂಖ್ಯೆ ಎಷ್ಟು ಅಧಿಕವೋ, ಅಷ್ಟೇ ಪ್ರಮಾಣದಲ್ಲಿ ಗಲ್ಲಿಗೊಂದು ಪ್ರತಿಮೆಗಳು ಕಾಣಸಿಗುತ್ತಿರುವ ತಮಿಳುನಾಡು ರಾಜಧಾನಿ ಚೆನ್ನೈಗಷ್ಟೇ ಹೊಂದಿಕೊಳ್ಳುವ ವಿಚಾರ. ಎಂಜಿಆರ್, ಅಣ್ಣಾದುರೈ, ಅಂಬೇಡ್ಕರ್, ಗಾಂಧೀಜಿ&#8230; ಹೀಗೆ ಸಾಲು ಸಾಲು ಕೈಯೆತ್ತಿ, ಕಿರುಬೆರಳೆತ್ತಿ ದೂರದೃಷ್ಟಿ ನೆಟ್ಟ ಪ್ರತಿಮೆಗಳು ನಿಮಗೆ ಅಲ್ಲಲ್ಲಿ ಕಾಣಸಿಗುತ್ತವೆ.</p>
<p>ತಿರುವಳ್ಳುವರ್ ಒಬ್ಬ ತಮಿಳ ಎಂಬ ಏಕೈಕ ಕಾರಣಕ್ಕೆ ಅವರ ಪ್ರತಿಮೆ ಸ್ಥಾಪನೆ ವಿರೋಧಿಸುವುದು ಜಾಣತನವಲ್ಲ. ಅಥವಾ ಸರ್ವಜ್ಞ ಒಬ್ಬ ಕನ್ನಡಿಗ ಎಂಬ ಕಾರಣಕ್ಕೆ ಆ ಪ್ರತಿಮೆಯನ್ನು ಚೆನ್ನೈಯಲ್ಲಿ ಸ್ಥಾಪಿಸದಂತೆ ತಡೆಯುವುದು ಸಾಧ್ಯವೂ, ಸಾಧುವೂ ಅಲ್ಲ. ಯಾಕೆಂದರೆ ಇಬ್ಬರೂ ಮಹಾಪುರುಷರು ಅನ್ಯತ್ರ ಅಲಭ್ಯವಾದ ಸಾಮಾಜಿಕ ಸೂಕ್ಷ್ಮಗಳನ್ನು ಜನರಿಗೆ ಮನಮುಟ್ಟುವಂತೆ ಮಾಡಿದವರು ಮತ್ತು ಜೀವನಪದ್ಧತಿಯನ್ನು ತಿದ್ದಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಯಲು ದಾರಿ ತೋರಿದವರು.</p>
<p>ಈಗ ವಿಷಯಕ್ಕೆ ಬರೋಣ. ಬೆಂಗಳೂರಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯಾದರೆ, ಚೆನ್ನೈಯಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪಿಸಲು ತಮಿಳುನಾಡು ಸರಕಾರ ಒಪ್ಪಿದೆ. ಬೆಂಗಳೂರಿನಲ್ಲಿ ತಿರುವಳ್ಳುವರ್ ಓಕೆ, ಆದರೆ ಚೆನ್ನೈನ ಅಯ್ನಾವರಂ (ಅಯ್ಯನಾವರಂ ಅಥವಾ ಅಯನಾವರಂ) ಪ್ರದೇಶದಲ್ಲಿ ಸರ್ವಜ್ಞ ಮೂರ್ತಿ ಬೇಡ ಯಾಕೆ?</p>
<p>ಅಲಸೂರು ಕೆರೆ ಪ್ರದೇಶ ಹೇಳಿ ಕೇಳಿ ಬೆಂಗಳೂರಿನ ತಮಿಳು ಸಂಘವೇ ಸ್ಥಾಪನೆಯಾಗಲು ಕಾರಣವಾಗುವಷ್ಟು ತಮಿಳರೇ ಹೆಚ್ಚಾಗಿರುವ ಪ್ರದೇಶ. ಜನನಿಬಿಡ ಪ್ರದೇಶವೂ, ಆ ಪ್ರತಿಮೆಗೆ ತಮಿಳರೇ ಸಮರ್ಥವಾಗಿ ರಕ್ಷಣೆ ಕೊಡಬಲ್ಲ ಸಾಮರ್ಥ್ಯವುಳ್ಳ ಪ್ರದೇಶ. ಬೆಂಗಳೂರಿನಲ್ಲಿ ಅಲಸೂರು/ಹಲಸೂರು ಎಂಬ ಹುಲುಸಾದ ಪ್ರದೇಶದಲ್ಲಿ, ತಮಿಳರ ಸಾಂದ್ರತೆಯೇ ಹೆಚ್ಚಿರುವ ಸರೋವರ ಪ್ರದೇಶದಲ್ಲಿ ತಿರುವಳ್ಳುವರ್ ಪ್ರತಿಮೆ 18 ವರ್ಷಗಳ ಹಿಂದೆ ಅದಾಗಲೇ ಒಂದು ಬಾರಿ ಅನಾವರಣಗೊಂಡಾಗಿದೆ. ಅಂದರೆ 1991ರ ಸೆಪ್ಟೆಂಬರ್ 1ರಂದೇ ಅಂದಿನ ಮುಖ್ಯಮಂತ್ರಿ ಸಾರೇಕೊಪ್ಪ ಬಂಗಾರಪ್ಪನವರು ಅಂದಿನ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣಗೊಳಿಸಿಯಾಗಿದೆ. ಅಚ್ಚರಿ ಬೇಡ. ಹಾಗಂತ ಆ ಪ್ರತಿಮೆಯ ತಳಭಾಗದಲ್ಲಿರುವ ಶಿಲಾಫಲಕ ಜಗತ್ತಿಗೇ ಸಾರುತ್ತಿದೆ!. </p>
<p><strong>ಅಯನಾವರಂ ಪಾರ್ಕ್ ಸ್ಥಿತಿ-ಗತಿ:</strong><br />
ಆದರೆ, ತಮಿಳುನಾಡಿನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪನೆಯಾಗುವ ಸ್ಥಳವನ್ನೊಮ್ಮೆ ಹೀಗೇ ಬಂದು ನೋಡಿದಾಗ ಮನಸ್ಸಿಗೆ ಅನ್ನಿಸಿದ್ದು, ತಮಿಳುನಾಡು ಸರಕಾರ ಹೀಗೂ ಮಾಡುತ್ತದೆಯೇ ಎಂದು. ಅಬ್ಬಬ್ಬಾ ಎಂದರೆ ಸುತ್ತ ಮುತ್ತ ಅಲ್ಲಿ ಏಳೆಂಟು ಕನ್ನಡಿಗರ ಮನೆಗಳಿರಬಹುದು. ಇದು ಸ್ಥಾಪನೆಯಾಗುತ್ತಿರುವ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿದಾಗ ಕಂಡ ದೃಶ್ಯ:</p>
<p>38&#215;38x39 ಮೀಟರ್ ಸುತ್ತಳತೆಯ ತ್ರಿಕೋನಾಕಾರದ ಒಂದು ಪುಟ್ಟ ಪಾರ್ಕ್ ಅದು. ಸುತ್ತಲೂ ಪುಟ್ಟ ರಸ್ತೆಯು ವ್ಯಾಪಿಸಿದೆ. ಒಂದಷ್ಟು ಕಲ್ಲು ಬೆಂಚುಗಳನ್ನು ಇರಿಸಲಾಗುತ್ತಿದೆ. ಮಧ್ಯೆ ಸರ್ವಜ್ಞ ಪ್ರತಿಮೆ ಕೂರಿಸಲು ಪೀಠವೊಂದು ಸಿದ್ಧವಾಗುತ್ತಿದೆ. ಸುತ್ತಲೂ ಆಂಧ್ರಪ್ರದೇಶದ ಕುಪ್ಪಂನಿಂದ ತರಿಸಲಾದ ಬರ್ನ್ಟ್ ಸ್ಟೋನ್ ಲ್ಯಾಬ್‌ಗಳನ್ನು ಹಾಸುವ ಕಾರ್ಯ ಭರದಿಂದ ಸಾಗಿದೆ. ಶಿಲ್ಪಿಗಳು ಇನ್ನೂ ಕೆತ್ತುತ್ತಿದ್ದಾರೆ, ಕ್ರೇನು ಕೂಡ ಕಾರ್ಯವೆಸಗುತ್ತಿದೆ. ಬೆಂಗಳೂರಿನ ಪಿಡಬ್ಲ್ಯುಡಿ ಎಂಜಿನಿಯರುಗಳು ಕೆಲಸದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ವಿಕಾಸ ಸೌಧದ ಕೆತ್ತನೆ ಶಿಲ್ಪಿ ಹೊಸಕೋಟೆ ಶಂಕರ ಸ್ತಪತಿ ಅವರೇ ಪೀಠದ ಸುತ್ತಲಿನ ಕೆತ್ತನೆ ಕಾರ್ಯ ನೆರವೇರಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿಯವರ ಆರೋಗ್ಯ ಸಮಸ್ಯೆಯಿಂದಾಗಿ ಅವರು ರಿಮೋಟ್ ಕಂಟ್ರೋಲ್ ಮೂಲಕ ಆಗಸ್ಟ್ 13ರಂದು ಪ್ರತಿಮೆ ಅನಾವರಣಗೊಳಿಸಲಿದ್ದಾರೆ.</p>
<p>9 ಅಡಿ ಎತ್ತರದ ಸರ್ವಜ್ಞ ಕಂಚಿನ ಪ್ರತಿಮೆಯು ಬೆಂಗಳೂರಿನಿಂದ ಹೊರಟಿದೆ ಎಂದು ಗೊತ್ತಾಗಿದೆ. ಅದು ಈಗ ಕಾಂಚೀಪುರಂನಲ್ಲಿ ಈಗ ಭದ್ರವಾಗಿದೆ ಎಂದು ಮೂಲವೊಂದು ಹೇಳಿದೆ. ಬುಧವಾರ ಅದು ಈ ಉದ್ಯಾನಕ್ಕೆ ಬರುವ ನಿರೀಕ್ಷೆ ಇದೆ.</p>
<p><strong>ಹಾಗಿದ್ದರೆ ಅಯನಾವರಂನಲ್ಲಿ ಯಾಕೆ ಬೇಡ?</strong><br />
ಹೌದು. ಇದು ಚೆನ್ನೈಯೊಳಗಿರುವ ಕನ್ನಡಿಗರ ಒಟ್ಟಾರೆ ಅಭಿಪ್ರಾಯವೂ ಹೌದು. ತಮಿಳು ದಾರ್ಶನಿಕ ಕವಿ ತಿರುವಳ್ಳುವರ್‌ಗೆ ಅದ್ಭುತ ಎನ್ನಬಹುದಾದ ಅಲಸೂರು ಕೆರೆ ಪ್ರದೇಶದಲ್ಲಿ ಅವಕಾಶ ಕೊಟ್ಟಿರುವಾಗ, ಸರ್ವಜ್ಞನನ್ನು ಆ ಒಂದು ಮೂಲೆಯಲ್ಲಿ ತಂದು ನಿಲ್ಲಿಸುವುದು ಎಷ್ಟು ಸರಿ? ಎಂಬುದು ಚೆನ್ನೈ ಕನ್ನಡಿಗರ ಪ್ರಶ್ನೆ.</p>
<p>ಇಲ್ಲಿ ಕನ್ನಡಿಗರ ಸಂಖ್ಯೆಯೂ ಕಡಿಮೆ ಎಂಬುದು ಒತ್ತಟ್ಟಿಗಿರಲಿ. ಆ ಒಂದು ಪುಟ್ಟ ಉದ್ಯಾನವನ್ನು ಅಬ್ಬಬ್ಬಾ ಅಂದರೆ ಎಷ್ಟು ಮಂದಿ ನೋಡಬಹುದು? ಅದೇ ಪ್ರತಿಮೆಯನ್ನು ಅದೆಷ್ಟೋ ಸಂಖ್ಯೆಯ ಪ್ರವಾಸಿಗರು ದಿನವೂ ಬರುತ್ತಿರುವ, ಅಣ್ಣಾ ಸಮಾಧಿ, ಎಂಜಿಆರ್ ಸಮಾಧಿ, ಕಣ್ಣಗಿ, ಗಾಂಧೀಜಿ ಪ್ರತಿಮೆಗಳಿರುವ ವಿಶ್ವವಿಖ್ಯಾತ ಮರೀನಾ ಬೀಚ್‌ನಲ್ಲೋ, ಅಥವಾ ಚೆನ್ನೈಯ ಪ್ರಧಾನ ಶಾಪಿಂಗ್ ಕೇಂದ್ರವಾಗಿರುವ ಟಿ.ನಗರದ ಪಾನಗಲ್ ಪಾರ್ಕ್‌ನಲ್ಲೋ, ಇಲ್ಲವೇ ಚೆನ್ನೈಯ ರಾಜ ಪಥ ಎಂದೇ ಕರೆಸಿಕೊಳ್ಳುವ ಮೌಂಟ್ ರೋಡ್‌ನಲ್ಲೋ ಸ್ಥಾಪಿಸಿದರೆ, ಜನ ಕುತೂಹಲದಿಂದ ಇದು ಯಾರ ಪ್ರತಿಮೆ ಎಂದು ಕೇಳಿ ತಿಳಿದುಕೊಂಡು, ಕನ್ನಡದ ಹೆಮ್ಮೆಯ ಸರ್ವಜ್ಞನ ಹೆಸರು ಚಿರಸ್ಥಾಯಿಯಾಗಬಹುದಿತ್ತು.</p>
<p>ತಿರುವಳ್ಳುವರ್‌ಗೆ ಕನ್ನಡಿಗರು ಪ್ರೈಮ್ ಲೊಕೇಶನ್‌ನಲ್ಲಿ ಸ್ಥಳಾವಕಾಶ ಕೊಟ್ಟರೂ, ತಮಿಳುನಾಡು ಮಾತ್ರ ಈ ಪುಟ್ಟ ಉದ್ಯಾನದಲ್ಲಿ ಸರ್ವಜ್ಞನನ್ನು ಕೂರಿಸಲು ಅವಕಾಶ ಮಾಡಿಕೊಟ್ಟು ಸಣ್ಣತನ ಮೆರೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಪ್ರತಿಮೆ ಸ್ಥಾಪನೆ ಬಗ್ಗೆ ಹೋರಾಟ ಮಾಡುತ್ತಿರುವ ಕನ್ನಡದ ಕಟ್ಟಾಳುಗಳು ಈ ವಿಷಯವನ್ನು ಎತ್ತಲು ಈಗ ಸಮಯಾವಕಾಶವೂ ಇಲ್ಲ. ಯಾಕೆಂದರೆ ಆಗಸ್ಟ್ 13ರಂದು ಪ್ರತಿಮೆ ಅನಾವರಣ ಎಂದೇ ತೀರ್ಮಾನವಾಗಿಬಿಟ್ಟಿದೆ.</p>
<p>ಅಲಸೂರು ಕೆರೆ ಬಳಿ ತಿರುವಳ್ಳುವರ್ ಪ್ರತಿಮೆಗೆ ಪೂಜೆ ಮಾಡುವಷ್ಟು ಮಂದಿ ತಮಿಳರಿದ್ದಾರೆ, ಆದರೆ ಅಯನಾವರಂನಲ್ಲಿ ಸರ್ವಜ್ಞನ ಪ್ರತಿಮೆಯನ್ನು ದಿನಾ ಸಂಭ್ರಮಿಸಲು ಎಷ್ಟು ಕನ್ನಡಿಗರಿದ್ದಾರೆ? ಅದೇ ಪ್ರತಿಮೆಯು ಕನ್ನಡಿಗರ ಬಾಹುಳ್ಯವಿರುವ, ಅಥವಾ ಪ್ರವಾಸಿಗರ ಬಾಹುಳ್ಯವಿರುವ ಪ್ರದೇಶಗಳಲ್ಲಿ ಸ್ಥಾಪನೆಯಾಗುತ್ತಿದ್ದರೆ, ಈ ಬಗ್ಗೆ ಪ್ರತಿಮೆ ಸ್ಥಾಪನೆಯಿಂದ ಸೌಹಾರ್ದತೆ ಸಾಧ್ಯ ಎಂಬ ಸೂತ್ರ ಮುಂದಿಡುವವರು ಯೋಚಿಸಿದ್ದರೆ&#8230;.?</p>
<p><strong>ಸರ್ವಜ್ಞನನ್ನು ರಕ್ಷಿಸುವ ಹೊಣೆ ಯಾರಿಗೆ?</strong><br />
ಆದರೆ ಈ ಪ್ರತಿಮೆಯ ರಕ್ಷಣೆಯ ಹೊಣೆ ಯಾರಿಗೆ? ತಮಿಳುನಾಡು ಸರಕಾರಕ್ಕೆ, ಚೆನ್ನೈಯ ಮಹಾನಗರಪಾಲಿಕೆಗೆ. ಬಹುಶಃ ಇಲ್ಲಿ ಪ್ರತಿಮೆ ಸ್ಥಾಪಿಸುವುದೆಂದರೆ ಸೌಹಾರ್ದತೆಯತ್ತ ಹೊಸ ಹೆಜ್ಜೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಿಸಿಕೊಂಡರೂ, ಇದು ಕೋಲು ಕೊಟ್ಟು ಹೊಡೆಸಿಕೊಳ್ಳುವ ಪ್ರಯತ್ನ ಎಂಬುದು ಇಲ್ಲಿನ ಸ್ಥಿತಿಗತಿ ಬಲ್ಲ ಕನ್ನಡಿಗರ ಅಭಿಪ್ರಾಯ.</p>
<p>ಯಾಕೆಂದರೆ, ಕಾವೇರಿ ನೀರು ಉಭಯ ರಾಜ್ಯಗಳ ಮಧ್ಯೆ ಕಾವು ಏರಿಸಿದಾಗ, ಕರ್ನಾಟಕಕ್ಕೆ ಸಂಬಂಧಿಸಿದ ಹೆಸರಿರುವ ಹೋಟೆಲುಗಳಿಗೆ, ಕರ್ನಾಟಕ ಸಂಘಕ್ಕೆ ಇಲ್ಲಿ ಕಲ್ಲು ಬೀಳುತ್ತದೆ ಎಂಬುದು ಚರಿತ್ರೆ ಕಲಿಸಿದ ಪಾಠ. ಜನಾಕ್ರೋಶವು ಕರ್ನಾಟಕದಲ್ಲೂ ತಮಿಳುನಾಡಿನಲ್ಲಿಯೂ ನಿಯಂತ್ರಣಾತೀತ. ಅದು ಬಿಡಿ, ಅಂತಿಪ್ಪ ರಾಷ್ಟ್ರಪಿತ ಗಾಂಧೀಜಿ ಅಥವಾ ಸಂವಿಧಾನಶಿಲ್ಪಿ ಅಂಬೇಡ್ಕರ್ ಪ್ರತಿಮೆಗಳಿಗೇ ವಿನಾಕಾರಣ ಆಗಾಗ್ಗೆ ಅವಮಾನ ಮಾಡುತ್ತಿರುವ ಅದೆಷ್ಟೋ ಸುದ್ದಿಗಳನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಹೀಗಿರುವಾಗ, ಕಾವೇರಿ ಎಂಬ ಉರಿಯುವ ನೀರಿನ ವಿಷಯ ಒಡಲಲ್ಲಿರುವಾಗ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಲು ಹೈಕೋರ್ಟಿನಲ್ಲಿ ತಡೆಯಾಜ್ಞೆ ಅರ್ಜಿ ಬಾಕಿ ಇರುವಾಗ ಮತ್ತು ಹೊಗೇನಕಲ್‌ನಲ್ಲಿ ಜಂಟಿ ಸಮೀಕ್ಷೆಗೆ ತಮಿಳುನಾಡು ಒಪ್ಪಬೇಕೆಂಬ ಕನ್ನಡ ಮನಸ್ಸುಗಳ ಬೇಡಿಕೆ ಇರುವಾಗ, ಸರ್ವಜ್ಞನನ್ನು ಅಲ್ಲಿ ಬಟಾ ಬಯಲಲ್ಲಿ ನಿಲ್ಲಿಸುವುದು ಎಷ್ಟರ ಮಟ್ಟಿಗೆ ಸರಿ ಮತ್ತು ಸುರಕ್ಷಿತ ಎಂಬ ಪ್ರಶ್ನೆ ಏಳುತ್ತದೆ.</p>
<p>ಅದು ಕೂಡ, ಸರ್ವಜ್ಞ ಪ್ರತಿಮೆ ಸ್ಥಾಪನೆಯಾಗುತ್ತಿರುವುದು ಕನ್ನಡ ಶಾಲೆಯ ಪಕ್ಕದಲ್ಲೇ. ಕಾವೇರಿ ವಿಷಯ ಕಾವೇರುವ ಸಂದರ್ಭದಲ್ಲಿ ಶಾಲೆಯ ರಕ್ಷಣೆಯೇ ಕನ್ನಡಿಗರಿಗೆ ದೊಡ್ಡ ಸಂಗತಿಯಾಗಿಬಿಡುತ್ತದೆ.</p>
<p>ಈಗೇನೋ ಕರ್ನಾಟಕದಲ್ಲಿ ಭರ್ಜರಿ ಎಂಬಂತಿಲ್ಲದಿದ್ದರೂ, ಸಾಕಷ್ಟು ಮಳೆ ಬಂದಿದೆ, ಮೆಟ್ಟೂರು ಜಲಾಶಯದ ಒಳಹರಿವು ಹೆಚ್ಚಾಗಿದೆ, ಹೀಗಾಗಿ ತಮಿಳುನಾಡಿಗೂ ನೀರು ಬಿಡುವ ಸ್ಥಿತಿ ಬಂದಿದೆ. ಇದರಿಂದಾಗಿ ತಮಿಳರು ಸುಮ್ಮನಿದ್ದಾರೆ. ನೀರಿಲ್ಲದೇ ಹೋಗಿದ್ದಿದ್ದರೆ, ಪ್ರತಿಮೆ ಸ್ಥಾಪನೆ ಬಗ್ಗೆ ಯಾವ ಸರಕಾರವೂ ಯೋಚಿಸುತ್ತಿರಲಿಲ್ಲವೇನೋ&#8230;!</p>
<p>ಸದ್ಯದ ಮಾಹಿತಿ ಪ್ರಕಾರ, ಅಯ್ನಾವರಂ ಸಬ್ ಇನ್ಸ್‌ಪೆಕ್ಟರ್ ಹೇಳುವಂತೆ, ಸದ್ಯಕ್ಕೆ ಪ್ರತಿದಿನ ಇಬ್ಬರು ಪೊಲೀಸರು ಪಾಳಿಯಲ್ಲಿ ಇಲ್ಲಿ 24 ಗಂಟೆ ಕಾವಲಿದ್ದಾರೆ. ಈ ವ್ಯವಸ್ಥೆ ಪ್ರತಿಮೆ ಅನಾವರಣವಾದ ಒಂದು ವಾರದವರೆಗೂ ಮುಂದುವರಿಯಲು ಆದೇಶವಿದೆ. ಆ ಬಳಿಕ ಏನೂಂತ ಗೊತ್ತಿಲ್ಲ!</p>
<p><strong>ಹೊರನಾಡ ಕನ್ನಡಿಗರ ವೇದನೆ:</strong><br />
ಕನ್ನಡ, ಕನ್ನಡಿಗರು ಮತ್ತು ಕನ್ನಡ ಮನಸ್ಸುಗಳು ಹೆಮ್ಮೆ ಪಡಬೇಕಾದ ಸಂಗತಿಯೊಂದು ತಮಿಳು ರಾಜಧಾನಿಯಲ್ಲಿ ನಡೆಯುತ್ತಿದೆ ಎಂದಾದಾಗ ಯಾವ ಕನ್ನಡಿಗನ ಮನಸ್ಸು ತಾನೇ ಹುಚ್ಚೆದ್ದು ಕುಣಿಯದು? ಆದರೆ ಇಲ್ಲಿನ ಕನ್ನಡಿಗರ ಮನಸ್ಸಿನ ಆಳದಲ್ಲಿ ವೇದನೆಯ ಗೆರೆಯೊಂದು ಛಳಕ್ಕನೆ ಸುಳಿದು ಮಾಯವಾಗುತ್ತದೆ.</p>
<p>ಚೆನ್ನೈಯಲ್ಲಿ ಮುಖ್ಯವಾಗಿ ಟಿ.ನಗರದ ಕರ್ನಾಟಕ ಸಂಘ, ಅಯನಾವರಂ ಕನ್ನಡ ಸಂಘ, ಚೆನ್ನೈ ಕನ್ನಡ ಬಳಗ, ಬೆಸೆಂಟ್ ನಗರ ಕನ್ನಡ ಕೂಟ ಎಂಬ ನಾಲ್ಕು ಪ್ರಮುಖ ಸಂಘಗಳಿವೆ. ಅದಲ್ಲದೆ ಬಂಟರ ಸಂಘ, ಹವ್ಯಕರ ಸಂಘ, ಐಐಟಿ ಮದ್ರಾಸ್ ಕನ್ನಡ ಸಾಂಸ್ಕೃತಿಕ ಸಂಘ ಮುಂತಾದವುಗಳು ಕೂಡ ಇವೆ. ಈ ಯಾವುದೇ ಸಂಘಗಳನ್ನು ಕೊನೆಯ ಕ್ಷಣದವರೆಗೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಯನಾವರಂ ಪಾರ್ಕ್‌ನಲ್ಲಿ ಸರ್ವಜ್ಞ ಪ್ರತಿಮೆ ನಿಲ್ಲಿಸಲು ಹೊರಟಿರುವಾಗ ಹೊರನಾಡ ಕನ್ನಡಿಗರಿಗೆ ಅದೆಷ್ಟು ವೇದನೆಯಾಗಬೇಡ!</p>
<p>ಬೆಂಗಳೂರಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಕಾರ್ಯಕ್ರಮಕ್ಕೆ ಎಲ್ಲ ತಮಿಳರು ಬರಬೇಕು ಎಂದು ಅಲ್ಲಿನ ತಮಿಳು ಸಂಘವು ಪತ್ರಿಕಾ ಹೇಳಿಕೆಯನ್ನೂ ಹೊರಡಿಸಿದೆ. ಆದರೆ ಚೆನ್ನೈ ಕನ್ನಡಿಗರಿಗೆ ಸರ್ವಜ್ಞ ಪ್ರತಿಮೆ ಅನಾವರಣ ಕಾರ್ಯಕ್ರಮ ಏನು, ಯಾವಾಗ, ಎಷ್ಟು ಹೊತ್ತಿಗೆ, ಎಲ್ಲಿ, ಕರ್ನಾಟಕದಿಂದ ಯಾರೆಲ್ಲಾ ಬರುತ್ತಾರೆ&#8230; ಎಂಬುದೆಲ್ಲಾ ಇದುವರೆಗೆ ಗೊತ್ತಾಗಿಲ್ಲ. ಎಲ್ಲ ಕನ್ನಡಿಗರೂ ಸಂಭ್ರಮಿಸುವ ಕ್ಷಣವದು. ವಿಶೇಷವಾಗಿ ಹೊರನಾಡ ಕನ್ನಡಿಗರು ಆಸ್ಥೆಯಿಂದ ಪಾಲುಗೊಳ್ಳಬೇಕಾದ ಸಂದರ್ಭವದು. ಆದರೆ, ಇದು ಕೇವಲ ರಾಜಕಾರಣದ ಕಾರ್ಯಕ್ರಮವಾಗಿಬಿಟ್ಟದ್ದು ವ್ಯವಸ್ಥೆಯ ದುರಂತ.</p>
<p>ಈಗಾಗಲೇ ಕನ್ನಡಿಗರ ಮೇಲೆ ಜಗಳಗಂಟರು ಎಂಬ ಅಪವಾದ ಬಂದಿದೆ. ಹೌದು. ನಾವು ನ್ಯಾಯ ಸಿಗಬೇಕೆಂದು ಹೋರಾಡುತ್ತಿದ್ದರೂ, ಅನ್ಯಾಯವೇ ಆಗುತ್ತಿರುವಾಗ, ಜಗಳಗಂಟರೆಂಬ ಅಪವಾದ ಬರುತ್ತದೆ ಎಂದು ಸುಮ್ಮನೆ ಕೂರುವುದೂ ಸಾಧ್ಯವಿಲ್ಲ. ಆದರೆ, ಈ ಪ್ರತಿಮೆ ಬಗೆಗಿನ ರಾಜಕೀಯವಿದೆಯಲ್ಲ, ಅದು ವ್ಯರ್ಥ, ವ್ಯರ್ಥ, ವ್ಯರ್ಥ.</p>
<p>ಕನ್ನಡಿಗರು, ತಮಿಳರು ಬೇರೆಬೇರೆಯಲ್ಲ. ಕಾವೇರಿಯ ನೀರು ಹಂಚಿಕೊಂಡು ಬದುಕುವವರು. ರಾಜಕೀಯ ಮತ್ತು ಭೌಗೋಳಿಕ ಕಾರಣಗಳಿಂದಾಗಿ ಅವರಿಬ್ಬರೂ ದಾಯಾದಿಗಳಂತೆ ಹೊಡೆದಾಡಿಕೊಳ್ಳುತ್ತಿದ್ದಾರೆ. ಸಮಾನತೆ ಇರಲಿ, ತಿರುವಳ್ಳುವರ್‌ಗೆ ಕೊಟ್ಟ ಸ್ಥಾನವನ್ನೇ ಸರ್ವಜ್ಞನಿಗೂ ಇಲ್ಲಿ ಕಲ್ಪಿಸಲಿ.</p>
<p><strong>ಕೊನೆಗೊಂದು ಮಾತು:</strong></p>
<p>ಕೊನೆಗೂ ಅಯನಾವರಂ ಪಾರ್ಕಿನಲ್ಲೇ ಸರ್ವಜ್ಞ ಪ್ರತಿಮೆ ಅನಾವರಣಗೊಳ್ಳುತ್ತದೆಯೆಂದಾದರೆ, ಕೆಟ್ಟವರ ನಡುವೆ ಬಾಳುವುದು ಹೇಗೆಂಬುದನ್ನು ಸರ್ವಜ್ಞನೇ ಹೇಳಿಕೊಟ್ಟಿದ್ದು ಹೀಗೆ:</p>
<p><strong>ದಂತ ಪಂಕ್ತಿಯ ನಡುವೆ ಎಂತಿಪ್ಪುದದು ಜಿಹ್ವೆ<br />
ಅಂತು ದುರ್ಜನರ ಬಳಸಿನಲಿ ಸಜ್ಜನನು<br />
ನಿಂತಿಹನು ನೋಡ ಸರ್ವಜ್ಞ!</strong></p>
  <a rel="nofollow" href="http://feeds.wordpress.com/1.0/gocomments/avisblog.wordpress.com/266/"><img alt="" border="0" src="http://feeds.wordpress.com/1.0/comments/avisblog.wordpress.com/266/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/266/"><img alt="" border="0" src="http://feeds.wordpress.com/1.0/delicious/avisblog.wordpress.com/266/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/266/"><img alt="" border="0" src="http://feeds.wordpress.com/1.0/stumble/avisblog.wordpress.com/266/" /></a> <a rel="nofollow" href="http://feeds.wordpress.com/1.0/godigg/avisblog.wordpress.com/266/"><img alt="" border="0" src="http://feeds.wordpress.com/1.0/digg/avisblog.wordpress.com/266/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/266/"><img alt="" border="0" src="http://feeds.wordpress.com/1.0/reddit/avisblog.wordpress.com/266/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=266&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/08/04/sarvajna_aynavaram/feed/</wfw:commentRss>
		<slash:comments>7</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>

		<media:content url="http://avisblog.files.wordpress.com/2009/08/cannon-025_400.jpg?w=300" medium="image">
			<media:title type="html">ಸರ್ವಜ್ಞ ಪ್ರತಿಮೆ ಸ್ಥಾಪಿಸಲು ಸಿದ್ಧತೆ</media:title>
		</media:content>
	</item>
		<item>
		<title>ಬಲೂಚಿಸ್ತಾನ ಬ್ಲಂಡರ್, ಶೇಮ್ ಮತ್ತು ಶರಮ್ ಎಲ್ ಶೇಖ್</title>
		<link>http://avisblog.wordpress.com/2009/07/30/baluchistan_india_pak/</link>
		<comments>http://avisblog.wordpress.com/2009/07/30/baluchistan_india_pak/#comments</comments>
		<pubDate>Thu, 30 Jul 2009 14:17:16 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/?p=263</guid>
		<description><![CDATA[ಬದುಕಿ ಮತ್ತು ಬದುಕಲು ಬಿಡಿ ಎಂಬ ಅಮೂಲ್ಯ ಧ್ಯೇಯದಿಂದ ಬಾಳುತ್ತಿರುವವರು ಭಾರತೀಯರು. ಆದರೆ ಪಾಕಿಸ್ತಾನದೊಳಗಿರುವವರ ಮನಸ್ಥಿತಿಯನ್ನೇ ನೋಡಿ&#8230; ಭಾರತದಲ್ಲಿ ಇಷ್ಟೊಂದು ಮಂದಿಯನ್ನು ಕೊಂದರೂ ಕೂಡ ಯಾವುದೇ ಎಗ್ಗಿಲ್ಲದೆ, ನಮ್ಮೂರಲ್ಲಿ ನಡೀತಾ ಇರೋ ಹಿಂಸಾಚಾರದಲ್ಲಿ ಭಾರತದ ಕೈವಾಡವಿದೆ ಎಂದು ಏನೂ ಆಗದಂತೆ ಹೇಳಿಬಿಡುತ್ತದೆ, ಅದಕ್ಕೆ ನಮ್ಮ ಪ್ರಧಾನ ಮಂತ್ರಿಗಳು ಕಣ್ಣು ಮುಚ್ಚಿ ಸಹಿ ಹಾಕಿ, ಆ ಆರೋಪಕ್ಕೊಂದು ಅಧಿಕೃತ ರೂಪ ಕೊಡುತ್ತಾರೆ ಎಂದಾದರೆ, ಅಷ್ಟೊಂದು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ ಎಂಬ ಪುಟ್ಟ ಸಾಮಾನ್ಯ ಜ್ಞಾನವೂ ಇಲ್ಲವಾಯಿತೇಕೆ?
ತಪ್ಪು ಮಾಡಿದ್ದು [...]<img alt="" border="0" src="http://stats.wordpress.com/b.gif?host=avisblog.wordpress.com&blog=154345&post=263&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p>ಬದುಕಿ ಮತ್ತು ಬದುಕಲು ಬಿಡಿ ಎಂಬ ಅಮೂಲ್ಯ ಧ್ಯೇಯದಿಂದ ಬಾಳುತ್ತಿರುವವರು ಭಾರತೀಯರು. ಆದರೆ ಪಾಕಿಸ್ತಾನದೊಳಗಿರುವವರ ಮನಸ್ಥಿತಿಯನ್ನೇ ನೋಡಿ&#8230; ಭಾರತದಲ್ಲಿ ಇಷ್ಟೊಂದು ಮಂದಿಯನ್ನು ಕೊಂದರೂ ಕೂಡ ಯಾವುದೇ ಎಗ್ಗಿಲ್ಲದೆ, ನಮ್ಮೂರಲ್ಲಿ ನಡೀತಾ ಇರೋ ಹಿಂಸಾಚಾರದಲ್ಲಿ ಭಾರತದ ಕೈವಾಡವಿದೆ ಎಂದು ಏನೂ ಆಗದಂತೆ ಹೇಳಿಬಿಡುತ್ತದೆ, ಅದಕ್ಕೆ ನಮ್ಮ ಪ್ರಧಾನ ಮಂತ್ರಿಗಳು ಕಣ್ಣು ಮುಚ್ಚಿ ಸಹಿ ಹಾಕಿ, ಆ ಆರೋಪಕ್ಕೊಂದು ಅಧಿಕೃತ ರೂಪ ಕೊಡುತ್ತಾರೆ ಎಂದಾದರೆ, ಅಷ್ಟೊಂದು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ ಎಂಬ ಪುಟ್ಟ ಸಾಮಾನ್ಯ ಜ್ಞಾನವೂ ಇಲ್ಲವಾಯಿತೇಕೆ?</p>
<p>ತಪ್ಪು ಮಾಡಿದ್ದು ಆಗಿದೆ. ಶರಮ್ ಎಲ್ ಶೇಖ್‌ನಲ್ಲಿ ಬಿಡುಗಡೆ ಮಾಡಲಾದ ಜಂಟಿ ಹೇಳಿಕೆ ಮತ್ತು ಆ ಬಳಿಕ ತಕ್ಷಣವೇ ಪ್ರಧಾನಿ ಮನಮೋಹನ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ತಡವರಿಸುತ್ತಾ, ಪಾಕಿಸ್ತಾನವು ಕ್ರಮ ಕೈಗೊಳ್ಳುವವರೆಗೂ ಸಮಗ್ರ ಮಾತುಕತೆ ಇಲ್ಲ ಎಂದು ಹೇಳಿದ್ದು ಎಷ್ಟು ನಿಜವೋ, ಅಂತಾರಾಷ್ಟ್ರೀಯ ಸಮುದಾಯದಲ್ಲಿ ಭಾರತದ ಮಾನಕ್ಕೆ, ಅದರ ಹೊಣೆಗಾರಿಕೆಗೆ ಚ್ಯುತಿ ಬಂದದ್ದು ಕೂಡ ಅಷ್ಟೇ ನಿಜ.</p>
<p>ಅದಕ್ಕೇ ಮಾಜಿ ವಿದೇಶಾಂಗ ಸಚಿವ ಯಶವಂತ ಸಿನ್ಹಾ ಅವರು ಬುಧವಾರ ಸಂಸತ್ತಿನಲ್ಲಿ ಪ್ರಧಾನಿ ವಿರುದ್ಧ ಹರಿಹಾಯ್ದದ್ದು. ಉಭಯ ದೇಶಗಳ ನಡುವಣ ಸಂಬಂಧದ ಕುರಿತ ಜಂಟಿ ಹೇಳಿಕೆಯ ಅಲ್ಪವಿರಾಮ, ಅರ್ಧವಿರಾಮ, ಪೂರ್ಣವಿರಾಮಗಳೂ ಅತ್ಯಂತ ಮುಖ್ಯವಾದದ್ದು. ಅಟಲ್ ಬಿಹಾರಿ ವಾಜಪೇಯಿಯವರಂತೂ ಜಂಟಿ ಹೇಳಿಕೆ ನೀಡುವಾಗ, ಆ ಪ್ಯಾರಾ ಇಲ್ಲಿರಬೇಕು, ಇಲ್ಲಿ ಅಲ್ಪವಿರಾಮ ಹಾಕಬೇಕು ಎಂಬುದಾಗಿ ಸೂಚಿಸುತ್ತಿದ್ದುದನ್ನು ಸಿನ್ಹಾ ನೆನಪಿಸಿಕೊಂಡರು. ಸತ್ಯವೂ ಕೂಡ. ಇದು ಅಂತಾರಾಷ್ಟ್ರೀಯ ಸಂಬಂಧಗಳ ವಿಷಯ, ಭಾರತದ ಪ್ರತಿಷ್ಠೆಯ ವಿಷಯವೂ ಹೌದಲ್ಲವೇ? ಅದಕ್ಕೇ ಹೇಳಿದ್ದು ಅವರು, ಈಜಿಪ್ಟಿನಲ್ಲಿ ಭಾರತಕ್ಕಾದ ಮುಖಭಂಗವನ್ನು ಸಪ್ತಸಾಗರದಲ್ಲಿ ತೊಳೆದರೂ ಶುಭ್ರಗೊಳಿಸುವುದು ಸಾಧ್ಯವಿಲ್ಲವೆಂಬುದಾಗಿ!</p>
<p><strong>ಬಲೂಚಿಸ್ತಾನದ ಬಗ್ಗೆ ಒಂದಿಷ್ಟು:</strong><br />
ಇದು ಭಾರತ-ಆಫ್ಘಾನಿಸ್ತಾನ ಗಡಿಯಲ್ಲಿರುವ ಪಾಕಿಸ್ತಾನೀ ಪ್ರದೇಶ. ಗಾತ್ರದಲ್ಲಿ ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವೂ, ಅತೀ ಹೆಚ್ಚು ಅಶಾಂತಿಯುಳಅಳ ಪ್ರದೇಶವೂ ಹೌದು. ಅಲ್ಲಿನ ಜನರಲ್ಲಿ ಹೆಚ್ಚಿನವರಿಗೆ ಪಾಕ್ ಸರಕಾರದ ಬಗ್ಗೆ ಅಸಮಾಧಾನ. ಅಲ್ಲಿನ ಪ್ರಕೃತಿ ಸಂಪತ್ತನ್ನು ಲೂಟಿಮಾಡುವ ಸರಕಾರ, ತಮಗೆ ಏನೂ ಆರ್ಥಿಕ, ರಾಜಕೀಯ ಬೆಂಬಲ ನೀಡುತ್ತಿಲ್ಲವೆಂಬುದು ಅವರ ಆರೋಪ. ಹೀಗಾಗಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಹುಟ್ಟಿಕೊಂಡು, ಪ್ರತ್ಯೇಕತೆಯ ಹೋರಾಟ ನಡೆಸುತ್ತಿದೆ. ಬಲೂಚಿಸ್ತಾನದಲ್ಲಿ ಭಾರತ ಮತ್ತು ಅದರ ಬೇಹುಗಾರಿಕಾ ಸಂಸ್ಥೆ &#8216;ರಾ&#8217; ಕೈವಾಡವಿದೆ ಎಂದು ಪಾಕ್ ಹಿಂದಿನಿಂದಲೂ ಆರೋಪಿಸುತ್ತಾ ಬಂದಿದೆ, ಭಾರತವು ಅದನ್ನು ನಿರಾಕರಿಸುತ್ತಲೇ ಬಂದಿದೆ. ಆದರೆ, ಜಂಟಿ ಹೇಳಿಕೆಯಲ್ಲಿ ಈ ವಿಷಯವನ್ನು ಪಾಕಿಸ್ತಾನವು ಏಕಪಕ್ಷೀಯವಾಗಿ ಉಲ್ಲೇಖಿಸಿರುವುದು ಭಾರತೀಯರನ್ನು ಕೆರಳಿಸಿದೆ.</p>
<p>ಈಜಿಪ್ಟಿನಲ್ಲಿ ಬಿಡುಗಡೆಗೊಳಿಸಲಾದ ಭಾರತ-ಪಾಕ್ ಜಂಟಿ ಹೇಳಿಕೆಯಲ್ಲಿ ಬಲೂಚಿಸ್ತಾನದ ಪ್ರಕ್ಷುಬ್ದತೆಯಲ್ಲಿ ಭಾರತದ ಕೈವಾಡವಿದೆ ಎಂಬ ಅಂಶವನ್ನು ಸೇರಿಸಿದ್ದು ಯಾಕೆ ಮತ್ತು ಉಗ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ &#8216;ಸಮಗ್ರ&#8217; ಮಾತುಕತೆಯಿಲ್ಲ ಎಂಬ ಭಾರತದ ನಿಲುವಿನಿಂದ ಹಿಂದೆ ಸರಿದದ್ದು ಯಾಕೆ ಎಂಬ ಕಾರಣಕ್ಕಷ್ಟೇ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಸರಕಾರದ ಮೇಲೆ ಹರಿಹಾಯ್ದದ್ದು.</p>
<p><strong>ಏಕಪಕ್ಷೀಯವಾದ &#8216;ಜಂಟಿ&#8217; ಹೇಳಿಕೆ:</strong><br />
ಬಲೂಚಿಸ್ತಾನ ಆಂತರಿಕ ವಿಷಯದಲ್ಲಿ ಭಾರತದ ಕೈವಾಡವಿರುವ ಕುರಿತ ಉಲ್ಲೇಖಕ್ಕೆ ಜಂಟಿ ಹೇಳಿಕೆಯಲ್ಲಿ ಅವಕಾಶ ಮಾಡಿಕೊಟ್ಟದ್ದೇ ತಪ್ಪು. ಇರಲಿ, ರಾಜತಾಂತ್ರಿಕ ಕಾರಣಗಳಿಗಾಗಿ, ಭಾರತ-ಪಾಕ್ ಬಾಂಧವ್ಯ ವೃದ್ಧಿಯಾಗಬೇಕೆಂಬ ಆಶಯದಲ್ಲಿ ಅದನ್ನು ಅಳವಡಿಸಲೇಬೇಕಾದ ಅನಿವಾರ್ಯತೆ ಇತ್ತು ಎಂದಿಟ್ಟುಕೊಳ್ಳೋಣ, ಹಾಗಿದ್ದರೆ, &#8216;ಇಲ್ಲ, ಭಾರತಕ್ಕೂ ಬಲೂಚಿಸ್ತಾನಕ್ಕೂ ಏನೂ ಸಂಬಂಧವಿಲ್ಲ&#8217; ಎಂಬ ಒಂದು ನಿರಾಕರಣೆ ವಾಕ್ಯವನ್ನಾದರೂ ಅದರಲ್ಲಿ ಸೇರಿಸಿಕೊಳ್ಳಬಹುದಿತ್ತಲ್ಲವೇ ಎಂಬುದು ಭಾರತೀಯರ ಪ್ರಶ್ನೆ.</p>
<p>ದಿನಕ್ಕೊಂದು ಹೇಳಿಕೆ ಬದಲಿಸುತ್ತಾ, ಹಾಗೆ ಮಾಡಿಯೇ ಇಲ್ಲ, ಹೇಳಲೇ ಇಲ್ಲ ಎಂಬಿತ್ಯಾದಿ ಎಡಬಿಡಂಗಿ ನುಡಿಗಳನ್ನು ಹೊರಬಿಡುತ್ತಿರುವುದು ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ಕಾಶ್ಮೀರದೊಳಗೆ ಉಗ್ರಗಾಮಿಗಳನ್ನು ನುಸುಳಿಸಿದಷ್ಟೇ ಸಲೀಸಾಗಿಬಿಟ್ಟಿದೆ. ಆದರೆ ಭಾರತವೂ ಇದೇ ರೀತಿ ಸ್ಪಷ್ಟನೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಸಿಕೊಂಡು ಯಾಕೆ ತಲೆ ತಗ್ಗಿಸುವಂತಾಯಿತು? ಜಂಟಿ ಹೇಳಿಕೆಯ ಕರಡು ರೂಪಿಸುವಾಗ ಮತ್ತು ಅದಕ್ಕೆ ಸಹಿ ಹಾಕುವಾಗ ತೋರಿದ್ದ ನಿರ್ಲಕ್ಷ್ಯದಿಂದಲೇ ಅಲ್ಲವೇ? ಇದನ್ನೇ ಪ್ರಧಾನಮಂತ್ರಿ ಅವರು ಲೋಕಸಭೆಯಲ್ಲಿ ಸಮರ್ಥಿಸಿಕೊಳ್ಳುತ್ತಾರಾದರೆ ಮತ್ತು &#8216;ವಿದೇಶಾಂಗ ನೀತಿ ಬಗ್ಗೆ ವಿರೋಧ ಪಕ್ಷಗಳಿಂದ ಕಲಿಯಬೇಕಾದುದೇನೂ ಇಲ್ಲ&#8217; ಎಂಬ ಉಡಾಫೆ ಮಾತನಾಡುತ್ತಾರೆ ಎಂದರೆ ಅದಕ್ಕೆ ಖಂಡಿತಾ ಸಮರ್ಥನೆಯಿಲ್ಲ.</p>
<p><strong>ಮೂವರು ಭಾರತೀಯ ಕಸಬ್‌ಗಳು!</strong><br />
2009ರ ಜುಲೈ 16ರಂದು, ಈಜಿಪ್ಟಿನ ಶರಮ್ ಎಲ್ ಶೇಕ್‌ನಲ್ಲಿ ಅಲಿಪ್ತ ರಾಷ್ಟ್ರಗಳ ಶೃಂಗ ಸಮಾವೇಶದ ಪಾರ್ಶ್ವದಲ್ಲಿ, ಸಿಂಗ್-ಯೂಸುಫ್ ರಾಜಾ ಗಿಲಾನಿ ಕೈಕುಲುಕಿ, ಜಂಟಿ ಹೇಳಿಕೆಯನ್ನು ಬಿಡುಗಡೆಗೊಳಿಸಿದಾಗ, ಎಲ್ಲಕ್ಕೂ ಹೆಚ್ಚಾಗಿ ಬೆಚ್ಚಿ ಬಿದ್ದವರು ಭಾರತೀಯ ಪತ್ರಕರ್ತರು. ಯಾಕೆಂದರೆ ಇತರ ಭಾರತೀಯರಂತೆ, ಬಲೂಚಿಸ್ತಾನದಲ್ಲಿ ನಿಜಕ್ಕೂ ಏನು ನಡೆಯುತ್ತಿದೆ ಎಂಬುದರ ಅರಿವು ಅವರಿಗೂ ಇರಲಿಲ್ಲ. ಸಂಬಂಧವೇ ಇಲ್ಲದ ವಿಷಯದಲ್ಲಿ ಭಾರತೀಯರ ಕೈವಾಡವಿದೆ ಎಂಬ ಅಂಶ ಉಲ್ಲೇಖಿಸಿ, ಅದನ್ನು ಭಾರತದ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರ ಸಹಿ ಬೀಳುವಂತೆ ಮಾಡುವಲ್ಲಿ ಪಾಕಿಸ್ತಾನವು ಹೇಗೆ ಯಶಸ್ವಿಯಾಯಿತು ಎಂಬುದನ್ನು ತಿಳಿಯಬೇಕಿದ್ದರೆ, ಪಾಕಿಸ್ತಾನದ ಜಿಯೋ ಟಿವಿಯ ಕಾರ್ಯನಿರ್ವಾಹಕ ಸಂಪಾದಕ ಹಮೀದ್ ಮೀರ್ ಅವರು ಅಂಕಣವೊಂದರಲ್ಲಿ ಹೇಳಿದ್ದನ್ನು ಕೇಳಬೇಕು.</p>
<p>&#8220;ಎರಡು ದಿನಗಳ ಮೊದಲು, ಅಂದರೆ ಜುಲೈ 14ರಂದು ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳಾದ ಭಾರತದ ಶಿವಶಂಕರ್ ಮೆನನ್ ಮತ್ತು ಪಾಕಿಸ್ತಾನದ ಸಲ್ಮಾನ್ ಬಶೀರ್ ನಡುವೆ ಮಾತುಕತೆ ನಡೆದಿತ್ತು. ಬಲೂಚಿಸ್ತಾನದ ಮೇಲೆಯೇ ಚರ್ಚೆ ಕೇಂದ್ರೀಕೃತವಾಗಿತ್ತು. ಆ ಮಾತುಕತೆಯಲ್ಲಿ, ಭಾರತವು ಶಾಂತಿ ಮಾತುಕತೆಯಿಂದ &#8220;ಭಯೋತ್ಪಾದನೆಯ ಮೇಲೆ ಕ್ರಮ ಕೈಗೊಳ್ಳುವ ವಿಷಯ&#8221;ವನ್ನು ಹೊರಗಿಡಬೇಕು, ಇಲ್ಲವಾದಲ್ಲಿ, ಬಲೂಚಿಸ್ತಾನದ ಪ್ರಕ್ಷುಬ್ಧತೆಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗಿರುವ ಮೂರು ಮಂದಿ &#8220;ಭಾರತೀಯ ಕಸಬ್‌ಗಳನ್ನು&#8221; ಅಂತಾರಾಷ್ಟ್ರೀಯ ಮಾಧ್ಯಮದ ಮುಂದೆ ಬಹಿರಂಗಪಡಿಸಬೇಕಾದೀತು. ಮತ್ತು ಬಲೂಚಿಸ್ತಾನ ವಿಮೋಚನಾ ಸೇನೆ (ಬಿಎಲ್ಎ) ಭಯೋತ್ಪಾದನೆ ಚಟುವಟಿಕೆಗಳಿಗೆ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯೇ ನಿಯಂತ್ರಣ ಕೇಂದ್ರ ಎಂಬುದನ್ನು ಸಾಬೀತುಪಡಿಸುವುದು ಪಾಕಿಸ್ತಾನಕ್ಕೆ ಕಷ್ಟವೇನಲ್ಲ ಎಂಬೊಂದು ಸಂದೇಶವು ಬಶೀರ್‌ರಿಂದ ಮೆನನ್‌ಗೆ ತಲುಪಿತ್ತು&#8221; ಎಂದಿದ್ದಾರೆ ಶರಮ್ ಎಲ್ ಶೇಖ್‌ನಲ್ಲೇ ಇದ್ದ ಹಮೀದ್ ಮೀರ್!</p>
<p>ಹೇಗಿದ್ದರೂ ಸುಳ್ಳನ್ನು ಸತ್ಯ ಎಂದು ತೋರಿಸಿಕೊಡಲು ಹೆಣಗಾಡುವುದರಲ್ಲಿ, ಆ ಮೂಲಕ ಯಾವುದೇ ಒಂದು ಸಮಸ್ಯೆಯ ಗಂಭೀರತೆಯನ್ನು ತಿಳಿಗೊಳಿಸುತ್ತಾ, ಅಂತಾರಾಷ್ಟ್ರೀಯ ಗಮನ ಬೇರೆಡೆ ಸೆಳೆಯುವುದರಲ್ಲಿ ಪಾಕಿಸ್ತಾನವು ನಿಪುಣನೇ ಅಲ್ಲವೇ? ಭಾರತವೂ ಈ ರೀತಿಯ ಬೆದರಿಕೆಗೆ ಬಗ್ಗಿತೇ?</p>
<p>ಪಾಕಿಸ್ತಾನಿ ಅಧಿಕಾರಿಗಳು ಹೇಳುವಂತೆ, ಪಾಕಿಸ್ತಾನವು ಮೂವರನ್ನು &#8216;ಭಾರತೀಯರನ್ನು&#8217; ಬಲೂಚಿಸ್ತಾನದಲ್ಲಿ ಬಂಧಿಸಿದ್ದು, ಅವರು ಬಲೂಚಿಸ್ತಾನದಲ್ಲಿ ಕಾರ್ಯನಿರತರಾಗಿದ್ದರು ಎಂಬುದಕ್ಕೆ ನಿರಾಕರಿಸಲಾಗದ ಸಾಕ್ಷ್ಯಾಧಾರಗಳಿವೆಯಂತೆ. ಇದಲ್ಲದೆ, 2004ರಲ್ಲಿ ಗ್ವಡಾರ್‌ನಲ್ಲಿ ಚೀನೀ ಇಂಜಿನಿಯರುಗಳ ಮೇಲಿನ ದಾಳಿಯಲ್ಲೂ ಭಾರತೀಯರ ಕೈವಾಡವಿರುವ ಸಾಕ್ಷ್ಯಾಧಾರಗಳಿರುವುದರಿಂದ, ಇದರ ಬಗ್ಗೆ ಮಾತೆತ್ತಿದರೆ ಭಾರತದ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ ಎಂದು ಬಶೀರ್ ಅವರು ಮೆನನ್‌ಗೆ ಮನವರಿಕೆ ಮಾಡಿದ್ದರಂತೆ.</p>
<p>ಒಟ್ಟಿನಲ್ಲಿ, ದ್ವಿಪಕ್ಷೀಯವಾಗಿದ್ದ ಕಾಶ್ಮೀರ ವಿವಾದವನ್ನು ಯಾವ ರೀತಿ ಅಂತಾರಾಷ್ಟ್ರೀಯ ಸಂಗತಿಯಾಗಿ ಮಾಡುವಲ್ಲಿ ಪಾಕಿಸ್ತಾನ ಸಫಲವಾಗಿದೆಯೋ, ಆಂತರಿಕ ಬಿಕ್ಕಟ್ಟಾಗಿರುವ ಬಲೂಚಿಸ್ತಾನವನ್ನು ಅಂತಾರಾಷ್ಟ್ರೀಕರಣಗೊಳಿಸುವಲ್ಲಿ ಪಾಕಿಸ್ತಾನ ಸಫಲವಾಗಿದೆ. ಈ ಮೂಲಕ, &#8220;ನಾವು ಕೂಡ ಭಯೋತ್ಪಾದನೆ ಬಲಿಪಶುಗಳು&#8221; ಎಂದು ಜೋರಾಗಿಯೇ ಕೂಗಲು ಪಾಕಿಸ್ತಾನಕ್ಕೆ ಮತ್ತಷ್ಟು ಶಕ್ತಿ ನೀಡಿದಂತಾಗಿದೆ ಎಂಬುದನ್ನು ಮರೆಯುವಂತಿಲ್ಲ.</p>
<p>ವಸ್ತು ಸ್ಥಿತಿ ಹೀಗಿರುವಾಗ ಪ್ರಧಾನ ಮಂತ್ರಿಗಳು ಕಣ್ಣು ಮುಚ್ಚಿ ಸಹಿ ಹಾಕಿದರಲ್ಲ, ಇದಕ್ಕೇನನ್ನೋಣ? ಜಂಟಿ ಹೇಳಿಕೆಯಲ್ಲಿ ಮಾತ್ರವೇ &#8220;ಸಮಗ್ರ ಮಾತುಕತೆಗೆ ಒಪ್ಪಿಗೆ&#8221; ನೀಡಿ, ಹೊರಗೆ ಬಂದು ಪತ್ರಿಕಾಗೋಷ್ಠಿಯಲ್ಲಾಗಲೀ, ಸಂಸತ್ತಿನ ಒಳಗೆ, ಹೊರಗೆ &#8220;ಪಾಕ್ ಕ್ರಮ ಕೈಗೊಳ್ಳುವವರೆಗೂ ಸಮಗ್ರ ಮಾತುಕತೆಯಿಲ್ಲ, ಭಯೋತ್ಪಾದನೆಗೂ ಮಾತುಕತೆಗೂ ಸಂಬಂಧ ಕಡಿದುಕೊಂಡಿಲ್ಲ&#8221; ಎಂದು ವಾದ ಹೂಡಿದರೆ ಯಾರು ಕೇಳಬೇಕು? ಅಂತಾರಾಷ್ಟ್ರೀಯ ಸಮುದಾಯಕ್ಕೆ ಮುಖ್ಯವಾಗಿರುವುದು ಲಿಖಿತ ಜಂಟಿ ಹೇಳಿಕೆಯೇ ಹೊರತು, ಪ್ರಧಾನಮಂತ್ರಿಗಳ ಈ ಸ್ಪಷ್ಟೀಕರಣವೋ, ನಿರಾಕರಣೆಯೋ ಅಥವಾ ಸಮ್ಮತಿಯೋ ಆಗಿರುವ ಹೇಳಿಕೆಯಂತೂ ಖಂಡಿತಾ ಅಲ್ಲ ಎಂಬುದನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಖಂಡಿತಾ ಮನಗಾಣಬೇಕಿತ್ತು.</p>
<p>ಎರಡು ವರ್ಷಗಳ ಹಿಂದೆ ಹವಾನಾದಲ್ಲಿ ಇದೇ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು, &#8216;ಪಾಕಿಸ್ತಾನವೂ ಭಯೋತ್ಪಾದನೆಯ ಬಲಿಪಶು&#8217; ಎಂಬ ಹೇಳಿಕೆ ನೀಡಿದ್ದರು. ಆವಾಗಲೇ ಭಾರತೀಯರು ಧ್ವನಿಯೆತ್ತಿದ್ದರು. ಆ ಬಳಿಕ, ಮುಂಬೈ ಮೇಲೆ ದಾಳಿ ನಡೆದ ಬಳಿಕ, ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಭೇಟಿಯ ಸಂದರ್ಭದಲ್ಲಿ, ಧೈರ್ಯವಾಗಿಯೇ ಮೊದಲು ನಿಮ್ಮ ನೆಲದಿಂದ ಭಾರತದ ಮೇಲಾಗುತ್ತಿರುವ ಭಯೋತ್ಪಾದನಾ ಚಟುವಟಿಕೆಗಳನ್ನು ನಿಲ್ಲಿಸಿ ಎಂದು ಹೇಳಿದರೂ, ಈಜಿಪ್ಟಿನಲ್ಲಿ, ಜಂಟಿ ಹೇಳಿಕೆಯ ಮೂಲಕ ಮತ್ತೆ ಎಡವಿದರು.</p>
<p>ಹೌದು, ಮಾತುಕತೆಯ ಮೂಲಕವೇ ಪರಿಹಾರ ಸಾಧ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಇದು ರಾಜತಾಂತ್ರಿಕ ನೀತಿಯೂ ಹೌದು. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲೀಗ ನಾವು ಮೇಲುಗೈ ಹೊಂದಿದ್ದೇವೆ. ಹೇಗಾದರೂ ಮಾಡಿ ಪಾಕಿಸ್ತಾನದಲ್ಲಿ ಉಗ್ರಗಾಮಿಗಳ ಹುಟ್ಟಡಗಿಸಲು ಮತ್ತಷ್ಟು ಒತ್ತಡ ಹೇರಬೇಕಾದದ್ದು ಭಾರತದ, ಏಷ್ಯಾದ ಮತ್ತು ವಿಶೇಷವಾಗಿ ಪಾಕಿಸ್ತಾನದ ಒಳಿತಿಗೂ ಪೂರಕ ಎಂಬುದು ಕೂಡ ಶತಃಸಿದ್ಧ. ಇಂಥ ಒಂದು ಅವಕಾಶವನ್ನು ಭಾರತ ಕಳೆದುಕೊಳ್ಳಬಾರದಿತ್ತು, ಮೃದು ನಿಲುವಿನ ರಾಷ್ಟ್ರ ಎಂಬ ಹೆಸರಿಗೆ ಮತ್ತೆ ಮರಳಬಾರದು.</p>
<blockquote><p>ಸಂಸತ್ತಿನಲ್ಲಿ ಪ್ರಧಾನಿಯವರು ಏನೇ ಸ್ಪಷ್ಟನೆ ನೀಡಲಿ, ಜಂಟಿ ಹೇಳಿಕೆಯಲ್ಲಿ ಉಲ್ಲೇಖವಾಗಿರುವ ಅಂಶಗಳ ಆಧಾರದಲ್ಲಿ ಹೇಳಬಹುದಾದರೆ, ಒಂದನೆಯದಾಗಿ, &#8216;ಮಾತುಕತೆಯೇ ಇಲ್ಲ&#8217; ಎಂದು ಹೇಳುತ್ತಿದ್ದ ಭಾರತ ಮಾತುಕತೆಯ ಮೇಜಿನೆದುರು ಬರುವಂತೆ ಮಾಡುವಲ್ಲಿ ಪಾಕಿಸ್ತಾನ ಸಫಲವಾಗಿದೆ. ಎರಡನೆಯದು, ಬಲೂಚಿಸ್ತಾನದಲ್ಲಿ ಭಾರತದ ಕೈವಾಡ ಎಂಬ ಅಂಶವನ್ನು ಉಲ್ಲೇಖಿಸುವ ಮೂಲಕ, &#8220;ನಾವು ಕೂಡ ಭಯೋತ್ಪಾದನೆಯ ಬಲಿಪಶುಗಳು, ನಮಗೂ ಅನುಕಂಪ ಬೇಕು&#8221; ಎಂಬ ಭಾವನೆ ಸೃಷ್ಟಿಸುವಲ್ಲಿ ಪಾಕಿಸ್ತಾನವು ಯಶಸ್ವಿಯಾಗಿದೆ. ಮತ್ತು ಭಾರತವೊಂದು ಮೃದು ರಾಷ್ಟ್ರ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಂತಾಗಿದೆ. ಹಾಗೂ ಕೊನೆಯದಾಗಿ, ಮುಂಬೈ ದಾಳಿಯ ಕುರಿತ ಬಿಸಿಯನ್ನು ಸ್ವಲ್ಪಮಟ್ಟಿಗೆ ತಂಪು ಮಾಡಿ, ಭಾರತ-ಪಾಕ್ ಮಾತುಕತೆಯೊಂದೇ ಎಲ್ಲದಕ್ಕೂ ಪರಿಹಾರ ಎಂಬ ಭಾವನೆ ಬರಿಸುವ ಮೂಲಕ, ಉಭಯ ರಾಷ್ಟ್ರಗಳ ಮಾತುಕತೆಯ ಮೇಲೆ ಗಮನ ಕೇಂದ್ರೀಕರಿಸುವಂತೆ ಮಾಡುವಲ್ಲಿ, ಈ ಮೂಲಕ ಭಯೋತ್ಪಾದನೆ ಮೇಲಿನ ಜಾಗತಿಕ ಗಮನವನ್ನು ಬೇರೆಡೆ ತಿರುಗಿಸುವಲ್ಲಿ ಪಾಕ್ ಯಶಸ್ವಿಯಾಗಿದೆ. ಇದು ಭಾರತಕ್ಕೆ ಹಿನ್ನಡೆಯಲ್ಲದೆ ಮತ್ತಿನ್ನೇನು?</p></blockquote>
<p>ಆದರೆ ಈ ರೀತಿಯ &#8216;ಎಚ್ಚರ ತಪ್ಪುವಿಕೆ&#8217;ಗಳ ಮೂಲಕ, ಮುಂಬೈ ದಾಳಿಗಳ ಬಳಿಕ ಪಾಕಿಸ್ತಾನದ ಉಗ್ರಗಾಮಿ ಚಟುವಟಿಕೆಗಳ ಮೇಲೆ ಭಾರತವು ಸಾಧಿಸಿದ್ದ ಅಂತಾರಾಷ್ಟ್ರೀಯ ಒತ್ತಡದ ಫಲವನ್ನು ತಗ್ಗಿಸಿದಂತಾಗಿದೆ ಅನ್ನಿಸುತ್ತಿದೆಯೇ? ವಿಷಯವೇ ಅಲ್ಲ ಎಂಬಂತಿದ್ದ ಬಲೂಚಿಸ್ತಾನವನ್ನು ಅಂತಾರಾಷ್ಟ್ರೀಯ ವಿಷಯವಾಗಿಸುವಲ್ಲಿ ಪಾಕ್ ಸಫಲವಾಗಿದೆ ಅನ್ನಿಸುತ್ತಿಲ್ಲವೇ? ಇರಲಿ, ಎಡವಿದ್ದಾಗಿದೆ, ಆದರೆ, &#8220;ಪಾಕ್ ತಕ್ಕ ಕ್ರಮ ಕೈಗೊಳ್ಳುವವರೆಗೂ ಮಾತುಕತೆಯಿಲ್ಲ, ಬಲೂಚಿಸ್ತಾನದಲ್ಲಿ ಭಾರತ ಕೈವಾಡವಿಲ್ಲವೇ ಇಲ್ಲ&#8221; ಎಂದು ಈಗ ಎಷ್ಟೇ ಹೇಳಿದರೂ, ಜಂಟಿ ಲಿಖಿತ ಹೇಳಿಕೆಗೆ ಸಹಿ ಬಿದ್ದಾಗ ಭಾರತದ ಕ್ರೆಡಿಬಿಲಿಟಿಗೆ ಆದ ಹಾನಿ ಸರಿಯಾಗುತ್ತದೆಯೇ? ನೀವೇನು ಹೇಳುತ್ತೀರಿ?</p>
<p>(<a href="http://kannada.webdunia.com/newsworld/news/current/0907/29/1090729097_1.htm">ಇಲ್ಲಿಯೂ ಪ್ರಕಟ</a>)</p>
  <a rel="nofollow" href="http://feeds.wordpress.com/1.0/gocomments/avisblog.wordpress.com/263/"><img alt="" border="0" src="http://feeds.wordpress.com/1.0/comments/avisblog.wordpress.com/263/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/263/"><img alt="" border="0" src="http://feeds.wordpress.com/1.0/delicious/avisblog.wordpress.com/263/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/263/"><img alt="" border="0" src="http://feeds.wordpress.com/1.0/stumble/avisblog.wordpress.com/263/" /></a> <a rel="nofollow" href="http://feeds.wordpress.com/1.0/godigg/avisblog.wordpress.com/263/"><img alt="" border="0" src="http://feeds.wordpress.com/1.0/digg/avisblog.wordpress.com/263/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/263/"><img alt="" border="0" src="http://feeds.wordpress.com/1.0/reddit/avisblog.wordpress.com/263/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=263&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/07/30/baluchistan_india_pak/feed/</wfw:commentRss>
		<slash:comments>6</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>
	</item>
		<item>
		<title>&#8216;ಭಯೋತ್ಪಾದನೆ&#8217; ಇಲ್ಲದಿರೆ ಮಾತುಕತೆ &#8220;ಸಮಗ್ರ&#8221;ವೆಂತು?</title>
		<link>http://avisblog.wordpress.com/2009/07/17/terror-indo-pak/</link>
		<comments>http://avisblog.wordpress.com/2009/07/17/terror-indo-pak/#comments</comments>
		<pubDate>Fri, 17 Jul 2009 12:02:16 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/?p=260</guid>
		<description><![CDATA[ಇದು ನಿಜಕ್ಕೂ ಅಚ್ಚರಿ ಮತ್ತು ಮುಂಬೈ ದಾಳಿಯಲ್ಲಿ ಹುತಾತ್ಮರಾದವರಿಗೆ ಮಾಡಿದ ಅವಮಾನ. ಭಾರತದ ಮೇಲೆ ಅದೆಷ್ಟೋ ವರ್ಷಗಳಿಂದ ಭಯೋತ್ಪಾದಕರ ಮೂಲಕ ಛಾಯಾ ಸಮರ ಸಾರುತ್ತಲೇ ಬಂದಿದ್ದ ಪಾಕಿಸ್ತಾನ ಯಾವಾಗ ವಾಣಿಜ್ಯ ನಗರಿ ಮುಂಬೈ ಮೇಲೆಯೇ ತನ್ನ ವಕ್ರದೃಷ್ಟಿ ಬೀರಿತೋ, ಅಂದು ಎಚ್ಚರಗೊಂಡಂತೆ ಕಂಡುಬಂದಿದ್ದ ಭಾರತ ಸರಕಾರ, &#8220;ಭಯೋತ್ಪಾದನೆ ವಿರುದ್ಧ ನಿರ್ಣಾಯಕ ಮತ್ತು ನಿರ್ದಿಷ್ಟ ಕ್ರಮ ಕೈಗೊಂಡಿದ್ದು ಸಾಬೀತಾಗುವವರೆಗೂ&#8221; ಪಾಕಿಸ್ತಾನ ಜೊತೆ ಯಾವುದೇ ಶಾಂತಿ-ಸಂಧಾನ ಮಾತುಕತೆ ಇಲ್ಲ ಎಂದು ಘೋಷಿಸಿತ್ತು. ಅದನ್ನೇ ಯುಪಿಎ-II ಸರಕಾರದ ಹೊಸ ವಿದೇಶಾಂಗ ಮಂತ್ರಿಯಾಗಿ [...]<img alt="" border="0" src="http://stats.wordpress.com/b.gif?host=avisblog.wordpress.com&blog=154345&post=260&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p>ಇದು ನಿಜಕ್ಕೂ ಅಚ್ಚರಿ ಮತ್ತು ಮುಂಬೈ ದಾಳಿಯಲ್ಲಿ ಹುತಾತ್ಮರಾದವರಿಗೆ ಮಾಡಿದ ಅವಮಾನ. ಭಾರತದ ಮೇಲೆ ಅದೆಷ್ಟೋ ವರ್ಷಗಳಿಂದ ಭಯೋತ್ಪಾದಕರ ಮೂಲಕ ಛಾಯಾ ಸಮರ ಸಾರುತ್ತಲೇ ಬಂದಿದ್ದ ಪಾಕಿಸ್ತಾನ ಯಾವಾಗ ವಾಣಿಜ್ಯ ನಗರಿ ಮುಂಬೈ ಮೇಲೆಯೇ ತನ್ನ ವಕ್ರದೃಷ್ಟಿ ಬೀರಿತೋ, ಅಂದು ಎಚ್ಚರಗೊಂಡಂತೆ ಕಂಡುಬಂದಿದ್ದ ಭಾರತ ಸರಕಾರ, &#8220;ಭಯೋತ್ಪಾದನೆ ವಿರುದ್ಧ ನಿರ್ಣಾಯಕ ಮತ್ತು ನಿರ್ದಿಷ್ಟ ಕ್ರಮ ಕೈಗೊಂಡಿದ್ದು ಸಾಬೀತಾಗುವವರೆಗೂ&#8221; ಪಾಕಿಸ್ತಾನ ಜೊತೆ ಯಾವುದೇ ಶಾಂತಿ-ಸಂಧಾನ ಮಾತುಕತೆ ಇಲ್ಲ ಎಂದು ಘೋಷಿಸಿತ್ತು. ಅದನ್ನೇ ಯುಪಿಎ-II ಸರಕಾರದ ಹೊಸ ವಿದೇಶಾಂಗ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾಗ ಎಸ್.ಎಂ.ಕೃಷ್ಣ ಅವರೂ ಪುನರುಚ್ಚರಿಸಿದ್ದರು.</p>
<p>ಆದರೆ ಗುರುವಾರ ಈಜಿಪ್ಟ್‌ನ ಶರಮ್ ಎಲ್‌ಶೇಖ್‌ನಲ್ಲಿ ಸಿಂಗ್-ಯೂಸುಫ್ ರಜಾ ಗಿಲಾನಿ ಪರಸ್ಪರ ಕೈಕುಲುಕಿದ ಬಳಿಕ ಹೊರಡಿಸಲಾದ ಜಂಟಿ ಹೇಳಿಕೆಯು ಜಗಜ್ಜಾಹೀರಾದಾಗ ಅತ್ತ ಪಾಕಿಸ್ತಾನವು &#8220;ಭಾರತವನ್ನು ತಗ್ಗಿಬಗ್ಗುವಂತೆ&#8221; ಮಾಡಿದೆನೆಂಬ ಧೋರಣೆಯಲ್ಲಿ ಹಿರಿಹಿರಿ ಹಿಗ್ಗುತ್ತಿದ್ದರೆ, ಭಾರತವು ಆಂತರಿಕವಾಗಿ ತಲೆ ತಗ್ಗಿಸಬೇಕಾದ ಸ್ಥಿತಿ.</p>
<p>ಹಾಗಿದ್ದರೆ ಸಮಗ್ರ ಮಾತುಕತೆಗೂ ಭಯೋತ್ಪಾದನೆ ಮೇಲಿನ ಕ್ರಮಕ್ಕೂ ಥಳುಕು ಹಾಕಲಾಗದು ಎಂಬ ಜಂಟಿ ಹೇಳಿಕೆಯ ಹಿಂದಿರುವ ಗೂಢಾರ್ಥವೇನು? ಮಾತ್ರವಲ್ಲ, ಪ್ರಸಕ್ತ ಪಾಕಿಸ್ತಾನಿ ಸರಕಾರವು ಭಯೋತ್ಪಾದನೆಯಲ್ಲಿ ಸಕ್ರಿಯವಾಗಿ ತೊಡಗಿದೆ ಎಂದು ಭಾರತ ಆರೋಪಿಸುವುದಿಲ್ಲ ಎನ್ನುವ ಮೂಲಕ ಪ್ರಧಾನಿ ಸಿಂಗ್ ಅವರು ಪಾಕಿಸ್ತಾನವನ್ನು ಬಹುತೇಕ &#8216;ನಿರ್ದೋಷಿ&#8217; ಎಂದು ಘೋಷಿಸಿದ್ದು ಹೇಗೆ? ಭಾರತ-ಪಾಕ್ ನಡುವೆ ಮಾತುಕತೆ ಏರ್ಪಡಿಸುವ ಅಮೆರಿಕದ ಒತ್ತಡ ಇಲ್ಲಿ ಕೆಲಸ ಮಾಡಿದೆಯೇ? ಕೈರೋ ಭೇಟಿಯಲ್ಲಿ ಗೆದ್ದವರು ಯಾರು? ಅಥವಾ ಗೆದ್ದು ಸೋತವರು ಯಾರು? ಈ ಪ್ರಶ್ನೆಗಳು ಹುಟ್ಟುತ್ತವೆ.</p>
<p>ಅತ್ತ ಗಿಲಾನಿ &#8220;ನಾವು ಜಯ ಸಾಧಿಸಿದೆವು, ಮೇಲುಗೈ ಸಾಧಿಸಿದೆವು&#8221; ಎಂಬ ಭಾವದಲ್ಲಿ ಮಾಧ್ಯಮಗಳೆದುರು ಎದೆಯುಬ್ಬಿಸಿ ಮಾತನಾಡುತ್ತಿದ್ದರೆ, ಇತ್ತ ಪ್ರಧಾನಿ ಮನಮೋಹನ್ ಸಿಂಗ್ ಅವರು ಪತ್ರಕರ್ತರ ಪ್ರಶ್ನಾವಳಿಗೆ ಶಬ್ದ ಹುಡುಕಲು ತಡಕಾಡುತ್ತಿದ್ದರು. ನೀವೇ ಹೇಳಿ, ಭಾರತ-ಪಾಕ್ ನಡುವಣ ಸಂಧಾನ ಮಾತುಕತೆಗಳಲ್ಲಿ &#8220;ಭಯೋತ್ಪಾದನೆ&#8221; ಎಂಬ ವಿಷಯವನ್ನೇ ಕಿತ್ತು ಹಾಕಿದರೆ, ಮಾತನಾಡಲು ಉಳಿದಿರುವುದಾದರೂ ಏನು? ಇಡೀ ದೇಶವನ್ನು ಮತ್ತು ಈ ಉಪಖಂಡವನ್ನು ಇಂದು ಸುಡುತ್ತಿರುವುದು ಉಗ್ರವಾದವೆಂಬ ಪಿಡುಗು. ಈ ಬರ್ನಿಂಗ್ ಇಶ್ಯೂವನ್ನು ಮಾತುಕತೆಯಲ್ಲಿ ಅಳವಡಿಸದೇ ಹೋದರೆ, ಸಂಧಾನ ಎಂಬುದು ಪರಿಪೂರ್ಣವಾಗುತ್ತದೆಯೇ? ಖಂಡಿತಾ ಇಲ್ಲ.</p>
<p>ಮುಂಬೈ ಮೇಲೆ ದಾಳಿ ನಡೆದು ಏಳು ತಿಂಗಳೇ ಕಳೆದರೂ, ಭಾರತಕ್ಕೆ ಪಾಕಿಸ್ತಾನವನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸುವುದು ಸಾಧ್ಯವಾಗಿಲ್ಲ. ಪಾಕಿಸ್ತಾನದ ನೆಲದಲ್ಲಿ ಉತ್ಪತ್ತಿಯಾಗುತ್ತಿರುವ ಭಯೋತ್ಪಾದನೆ ನಿಲ್ಲದ ಹೊರತು ಮಾತುಕತೆ ಅಸಾಧ್ಯ ಎಂಬ ಕಠಿಣವಾದ ನಿಲುವನ್ನು ಭಾರತ ಸಡಿಲಗೊಳಿಸಿದೆ. ಇದು ಭಯೋತ್ಪಾದಕರ ವಿರುದ್ಧ ಧೈರ್ಯ ಸಾಹಸದಿಂದ ಹೋರಾಡಿ ವೀರಮರಣವನ್ನಪ್ಪಿದ ಹುತಾತ್ಮರಿಗೆ ಮಾಡಿದ ಅವಮಾನ ಎಂದು ಹೇಳದೇ ವಿಧಿಯಿಲ್ಲ. ಮುಂಬೈ ದಾಳಿಯಲ್ಲಿ ಬಲಿಯಾದವರ ಆತ್ಮಗಳು ಚಿರನಿದ್ರೆಯಲ್ಲೇ ಕನಲುತ್ತಿದ್ದಿರಬಹುದು.</p>
<p>ಇದುವರೆಗೆ ಈ ದೇಶದ ಪ್ರಧಾನಮಂತ್ರಿ ಡಾಕ್ಟರ್ ಮನಮೋಹನ್ ಸಿಂಗ್ ಸಾಹೇಬರು ಭಯೋತ್ಪಾದನೆ ವಿಷಯಕ್ಕೆ ಸಂಬಂಧಿಸಿದಂತೆ, ಅದರಲ್ಲೂ ಉಗ್ರವಾದವೆಂದರೆ ಪಾಕಿಸ್ತಾನ ಎಂಬಷ್ಟರ ಮಟ್ಟಿಗೆ ಕುಖ್ಯಾತಿ ಪಡೆದಿರುವ ಆ ರಾಷ್ಟ್ರಕ್ಕೆ ಸಂಬಂಧಿಸಿದಂತೆ ಒಂದಾದರೂ ಎದೆಗಾರಿಕೆಯ, ಕಟುವಾದ ನಿಲುವನ್ನಾಗಲೀ, ಎಚ್ಚರಿಕೆಯ ಸಂದೇಶವನ್ನಾಗಲೀ ನೀಡಿದ್ದಾರೆಯೇ? ಚುನಾವಣೆಗೆ ಮುನ್ನ, 26/11 ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ವಿರುದ್ಧ ಕಟುವಾದ ನಿರ್ಣಯ ಕೈಗೊಳ್ಳದಿದ್ದಲ್ಲಿ, ಖಂಡಿತವಾಗಿಯೂ ಈ ಬಾರಿ ಮತದಾರರು ತಮಗೆ ಪಾಠ ಕಲಿಸುತ್ತಾರೆ ಎಂಬ ಏಕೈಕ ಕಾರಣದಿಂದಲೋ ಎಂಬಂತೆ ಮನಮೋಹನ್ ಸಿಂಗ್ ಅವರು ಮಾತುಕತೆ ಸ್ಥಗಿತ ಬಗ್ಗೆ ಅನಿವಾರ್ಯವಾಗಿ ಘೋಷಣೆ ಹೊರಡಿಸಿದ್ದು ಬಿಟ್ಟರೆ, ಆ ಬಳಿಕದ ವಿದ್ಯಮಾನಗಳನ್ನೆಲ್ಲಾ ಅವಲೋಕಿಸಿ ನೋಡಿ.</p>
<p>ಮಾತುಕತೆ ಇಲ್ಲ ಎಂದು ಹೇಳಿದ್ದ ಇದೇ ಪ್ರಧಾನಮಂತ್ರಿಯವರು ಕಳೆದ ತಿಂಗಳು ರಷ್ಯಾದಲ್ಲಿ ಹೋಗಿ ಪಾಕಿಸ್ತಾನಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯ ಕೈ ಕುಲುಕಿ ಬಂದರು. ಆಗ ಕೆಲಸ ಮಾಡಿದ್ದು ಅದೇ ವಿಶ್ವದ ಹಿರಿಯಣ್ಣ ಅನ್ನಿಸಿಕೊಂಡು ಈಗ ಆರ್ಥಿಕ ಬಿಕ್ಕಟ್ಟಿನಿಂದ ತಲೆಯೆತ್ತಲು ಹೆಣಗಾಡುತ್ತಿರುವ ಅಮೆರಿಕ. ಈ ಭೇಟಿಗೆ ಕೆಲವೇ ಕ್ಷಣಗಳ ಮೊದಲು ಅಮೆರಿಕ ವಿದೇಶಾಂಗ ಅಧೀನ ಕಾರ್ಯದರ್ಶಿ ವಿಲಿಯಂ ಬರ್ನ್ಸ್ ಅವರು ಒಬಾಮಾ ಸಂದೇಶದೊಂದಿಗೆ ಭಾರತದ ಪ್ರಧಾನಿಗೊಂದು ಪತ್ರ ಕೊಟ್ಟಿದ್ದರು. ಅದರೊಳಗೇನಿತ್ತು ಎಂಬುದು ಇನ್ನೂ ನಿಖರ ಮಾಹಿತಿ ಹೊರಬಿದ್ದಿಲ್ಲ. ಬಹುಶಃ ಅದರಲ್ಲಿ ಮಾತುಕತೆ ಮುಂದುವರಿಸಬೇಕು ಎಂಬ ಸಂದೇಶವಿತ್ತೇ ಎಂಬ ಶಂಕೆ ಇನ್ನೂ ನಿವಾರಣೆಯಾಗಿಲ್ಲ.</p>
<p>ಆ ನಂತರ ಈಗ ಗುರುವಾರ ಈಜಿಪ್ಟ್‌ನಲ್ಲಿ ಅಲಿಪ್ತ ರಾಷ್ಟ್ರಗಳ ಶೃಂಗ ಸಭೆಯ ಪಾರ್ಶ್ವದಲ್ಲಿ ತಮ್ಮ ಇಡೀ ಭಾರತೀಯ ನಿಯೋಗವನ್ನು ಸೇರಿಸಿ ಪಾಕಿಸ್ತಾನ ನಿಯೋಗದೊಂದಿಗೆ ಗುರುವಾರ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕ್ ಪ್ರಧಾನಿ ಯೂಸುಫ್ ರಜಾ ಗಿಲಾನಿಯೊಂದಿಗೆ ಚರ್ಚೆ ನಡೆಸಿದರು! ಇದೇನು ಮಾತುಕತೆಯಾಗಿರಲಿಲ್ಲವೇ? ಇದರ ಹಿಂದೆಯೂ ಒಂದು ಶಂಕೆ ಕಾಡತೊಡಗಿದೆ. ಅಮೆರಿಕದ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಅವರು ಶುಕ್ರವಾರ ಭಾರತಕ್ಕೆ ಬರುವ ಕಾರ್ಯಕ್ರಮ. ಈ ಸಂದರ್ಭದಲ್ಲಿ ಅಮೆರಿಕವನ್ನು ಓಲೈಸುವ ತಂತ್ರವೇ ಇದು ಎಂಬ ಸಂದೇಹ ಹುಟ್ಟಿಕೊಂಡಿದೆ.</p>
<p>ಮುಂಬೈ ದಾಳಿಕೋರರನ್ನು ದಂಡನೆಗೆ ಗುರಿಪಡಿಸುವ ತನಕ ಯಾವುದೇ ಮಾತಿಲ್ಲ ಅಂತ ಘೋಷಿಸಿದ್ದರೆ ಗಂಟೇನು ಹೋಗುತ್ತಿತ್ತು? ಅತ್ತ ಮುಂಬೈ ದಾಳಿಯ ರೂವಾರಿ ಎಂದು ಭಾರತ ಸರಕಾರವು ಪುಟಗಟ್ಟಲೇ ಸಾಕ್ಷ್ಯಾಧಾರಗಳನ್ನು ಒದಗಿಸಿ ಹೆಸರಿಸಿದ ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಬಿಡುಗಡೆಗೊಳಿಸಲು ಪಾಕಿಸ್ತಾನದೊಳಗೆ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿದ್ದರೂ ಭಾರತ ಮೌನವಾಗಿಯೇ ಕುತೂಹಲದಿಂದ ಈ ವಿದ್ಯಮಾನಗಳನ್ನು ವೀಕ್ಷಿಸುತ್ತಿರುವುದೇಕೆ?</p>
<p>ಅದು ಒತ್ತಟ್ಟಿಗಿರಲಿ, ಕೈರೋದಲ್ಲಿ ಭಾರತ-ಪಾಕ್ ಜಂಟಿ ಹೇಳಿಕೆಯಲ್ಲಿ &#8220;ಬಲೂಚಿಸ್ತಾನದ ಗಂಡಾಂತರಕಾರಿ ವಿದ್ಯಮಾನದಲ್ಲಿ ಭಾರತವೂ ಸಕ್ರಿಯ&#8221; ಎಂಬ ಬಗ್ಗೆ ಧ್ವನಿಯೆತ್ತಲಾಯಿತು ಎಂಬ ಅಂಶವನ್ನು ಸೇರಿಸಲು ಒಪ್ಪಿಬಿಟ್ಟರಲ್ಲ ಪ್ರಧಾನಿ! ಭಯೋತ್ಪಾದನೆಯೇ ಈಗ ವಿಶ್ವವನ್ನು, ವಿಶೇಷವಾಗಿ ಭಾರತವನ್ನು ಕಾಡುತ್ತಿರುವ ಅತಿದೊಡ್ಡ ಪೀಡೆ. ಅದರ ಮೂಲ ಬೇರು ಪಾಕಿಸ್ತಾನದಲ್ಲಿದೆ ಎಂಬುದನ್ನು ಭಾರತ, ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಹಲವಾರು ರಾಷ್ಟ್ರಗಳು ತಮ್ಮ ಗುಪ್ತಚರ ವಿಭಾಗಗಳಿಂದ ಸ್ವತಃ ತನಿಖೆ ನಡೆಸಿ ಕಂಡುಕೊಂಡಿವೆ. ಹೀಗಿರುವಾಗ ಭಯೋತ್ಪಾದನೆಯ ವಿಷಯವಿಲ್ಲದೆ ಅದು &#8220;ಸಮಗ್ರ&#8221; ಮಾತುಕತೆ ಹೇಗಾದೀತು? &#8220;ಅನಾದಿಕಾಲದಿಂದಲೂ ಬಾಕಿಯುಳಿದಿದ್ದ ವಿವಾದಗಳೂ ಸೇರಿದಂತೆ ಭಾರತವು ಪಾಕಿಸ್ತಾನದೊಂದಿಗಿನ ಸಮಗ್ರ ವಿಷಯಗಳ ಕುರಿತು ಮಾತುಕತೆಗೆ ಸಿದ್ಧವಾಗಿದೆ&#8221; ಎಂಬ ಪ್ರಧಾನಿ ಹೇಳಿಕೆಯ ಹಿಂದಿರುವ ಪ್ರೇರಣಾ ಶಕ್ತಿಯ ಬಗ್ಗೆ ಸಂದೇಹ ಮೂಡುವುದಂತೂ ಸಹಜ.</p>
<p>ಇಲ್ಲ, ಇಲ್ಲ, ಭಯೋತ್ಪಾದನೆ ಬಗ್ಗೆ ನಿಖರ ಕ್ರಮ ಕೈಗೊಳ್ಳುವ ಹೊರತು ಮಾತುಕತೆ ಇಲ್ಲ ಎಂದು ಪ್ರಧಾನಿ ಸಿಂಗ್ ಅವರು, ಈ ಜಂಟಿ ಹೇಳಿಕೆ ಬಿಡುಗಡೆಯ ಬಳಿಕದ ಪತ್ರಿಕಾಗೋಷ್ಠಿಯಲ್ಲಿ ತಡವರಿಸುವಂತಾಗಿದ್ದೇಕೆ? ಭಯೋತ್ಪಾದನೆ ಬಗ್ಗೆ ಕೇಂದ್ರದ ಯುಪಿಎ ಸರಕಾರ ಮೃದು ಧೋರಣೆ ತಳೆಯುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಮತ್ತಷ್ಟು ಪುಷ್ಟಿ ಕೊಡುವ ಈ ಕ್ರಮ, ಚುನಾವಣಾ ಪ್ರಚಾರ ಸಂದರ್ಭ &#8220;ದುರ್ಬಲ ಪ್ರಧಾನಿ&#8221; ಎಂದೆಲ್ಲಾ ಕರೆಸಿಕೊಂಡ ಮಾದರಿಯಲ್ಲಿ ತಾವಾಗಿಯೇ ಸೃಷ್ಟಿಸಿಕೊಂಡ ವಿದ್ಯಮಾನವಲ್ಲವೇ? ಅಥವಾ ಪರಮಾಣು ಒಪ್ಪಂದಾನಂತರದ ಕಾಲದಲ್ಲಿ ಭಾರತವು ಅಮೆರಿಕದ ಕೈಗೊಂಬೆಯಾಗಿರಬೇಕಾಗುತ್ತದೆ ಎಂಬ ಎಡಪಕ್ಷಗಳ ಟೀಕೆಗೂ, ಅಮೆರಿಕ ಹಾಕುವ ತಾಳದ ಲಯದಲ್ಲೇ ಭಾರತ ಮುನ್ನಡೆಯುತ್ತಿರುವುದಕ್ಕೂ ಸಂಬಂಧವಿದೆಯೇ?</p>
<p>ಭಯೋತ್ಪಾದನೆ ಕುರಿತ ಕ್ರಮಗಳನ್ನು ಮಾತುಕತೆಯಿಂದ ಹೊರಗಿರಿಸಬೇಕು ಎಂಬಲ್ಲಿ ಮಾತ್ರವೇ ಭಾರತ ಎಡವಿದ್ದಲ್ಲ. ಕೇವಲ ಒಂದು ಆಂತರಿಕ ವಿಷಯವಾಗಿದ್ದ ಬಲೂಚಿಸ್ತಾನದ ಬಿಕ್ಕಟ್ಟನ್ನು ಇದೀಗ ಭಾರತ-ಪಾಕ್ ಬಿಕ್ಕಟ್ಟು ಎಂದು ಅಲ್ಪಮಟ್ಟಿಗೆ ಒಪ್ಪಿಕೊಂಡದ್ದು ಕೂಡ ಮತ್ತೊಂದು ದುರಂತ. ಜಂಟಿ ಹೇಳಿಕೆಯಲ್ಲಿ ಇದಕ್ಕೆ ಅವಕಾಶ ಕೊಟ್ಟದ್ದು ಖಂಡಿತಾ ತಪ್ಪು. ಯಾಕೆಂದರೆ ಇದರಿಂದ ಪಾಕಿಸ್ತಾನಕ್ಕೆ ಭಾರಿ ಲಾಭವೇ ಆಗಿದೆ. ಬಲೂಚಿಸ್ತಾನದ ಅಶಾಂತಿಯಲ್ಲಿ ಭಾರತದ ಕೈವಾಡವಿದೆ ಎಂಬ ಹೇಳಿಕೆಗೆ ಪುಷ್ಟಿಯೂ ದೊರೆತ ಹುಮ್ಮಸ್ಸಿನಲ್ಲಿದೆ ಪಾಕ್. ಈ ಬಳಿಕ, ಸೆಪ್ಟೆಂಬರ್ ತಿಂಗಳಲ್ಲಿ ಪುನಃ ಸಿಂಗ್-ಗಿಲಾನಿ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಅದುವರೆಗೆ ವಿದೇಶಾಂಗ ಕಾರ್ಯದರ್ಶಿಗಳು ಮಾತುಕತೆ ಮುಂದುವರಿಸಲಿದ್ದಾರೆ.</p>
<p>ಒಟ್ಟಿನಲ್ಲಿ, ಅತ್ಯಂತ ಗಂಭೀರವಾದ ವಿಷಯದ ಗಂಭೀರತೆಯನ್ನೇ ಅಳಿಸಿಹಾಕಲಾಗಿದೆ. ಮಾತುಕತೆಯೇ ಇಲ್ಲ ಎಂದು ವಿಶ್ವಸಮುದಾಯದೆದುರು ಢಾಣಾಡಂಗುರ ಸಾರಿದ್ದ ಭಾರತವು ಕೂಡ, ಪದೇ ಪದೇ ಹೇಳಿಕೆಗಳನ್ನು ಬದಲಿಸುತ್ತಲೇ ವಿಶ್ವದೆದುರು ಕುಬ್ಜತೆ ಪ್ರದರ್ಶಿಸಿದ ಪಾಕಿಸ್ತಾನದ ಸಾಲಿಗೇ ಸೇರುತ್ತದೆಯೇ? ಮುಂಬೈ ಮೇಲಿನ ಉಗ್ರರ ದಾಳಿಯಲ್ಲಿ ಬಲಿಯಾದವರಿಗೆ, ಅವರ ಕುಟುಂಬವರ್ಗಕ್ಕೆ ಮತ್ತು ಭಯೋತ್ಪಾದನೆಯ ಕರಿನೆರಳಲ್ಲೇ ಜೀವನ ತೇಯುತ್ತಿರುವ ಪ್ರಜೆಗಳಿಗೆ ಉತ್ತರಿಸುವ ಜವಾಬ್ದಾರಿ ಕೇಂದ್ರ ಸರಕಾರಕ್ಕಿದೆ.<br />
<a href="http://kannada.webdunia.com/newsworld/news/current/0907/17/1090717049_1.htm">(ವೆಬ್‌ದುನಿಯಾ)</a></p>
  <a rel="nofollow" href="http://feeds.wordpress.com/1.0/gocomments/avisblog.wordpress.com/260/"><img alt="" border="0" src="http://feeds.wordpress.com/1.0/comments/avisblog.wordpress.com/260/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/260/"><img alt="" border="0" src="http://feeds.wordpress.com/1.0/delicious/avisblog.wordpress.com/260/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/260/"><img alt="" border="0" src="http://feeds.wordpress.com/1.0/stumble/avisblog.wordpress.com/260/" /></a> <a rel="nofollow" href="http://feeds.wordpress.com/1.0/godigg/avisblog.wordpress.com/260/"><img alt="" border="0" src="http://feeds.wordpress.com/1.0/digg/avisblog.wordpress.com/260/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/260/"><img alt="" border="0" src="http://feeds.wordpress.com/1.0/reddit/avisblog.wordpress.com/260/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=260&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/07/17/terror-indo-pak/feed/</wfw:commentRss>
		<slash:comments>2</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>
	</item>
		<item>
		<title>ಸಂಗೀತ &#8216;ಭೈರವಿ&#8217; ಡಿ.ಕೆ. ಪಾಟ್ಟ್ ಅಮ್ಮಾಳ್</title>
		<link>http://avisblog.wordpress.com/2009/07/17/pattammal/</link>
		<comments>http://avisblog.wordpress.com/2009/07/17/pattammal/#comments</comments>
		<pubDate>Fri, 17 Jul 2009 11:56:57 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/?p=256</guid>
		<description><![CDATA[ಅದೊಂದು ಕಾಲವಿತ್ತು. ಕರ್ನಾಟಕ ಶಾಸ್ತ್ರೀಯ ಸಂಗೀತ ಜಗತ್ತನ್ನು ಪುರುಷರೇ ಆಳುತ್ತಿದ್ದರು. ಮಹಿಳಾ ಕಲಾವಿದರು ತೀರಾ ಖಾಸಗಿ, ಮನೆ ಸಮಾರಂಭದ ಹಾಡುಗಾರಿಕೆಗೆ ಮಾತ್ರವೇ ಸೀಮಿತವಾಗಿದ್ದ ಕಾಲವದು. ಅಂಥ ಸಂದರ್ಭದಲ್ಲಿ ಈ ಪುರುಷ ಪ್ರಾಧಾನ್ಯ ಕ್ಷೇತ್ರದಲ್ಲಿ ಮಹಿಳಾ ಪಾರುಪತ್ಯಕ್ಕೆ ಮುನ್ನುಡಿ ಹಾಡಿದವರು ಡಿ.ಕೆ.ಪಟ್ಟಮ್ಮಾಳ್. ಅಂಥ ಮಹಾನ್ ಕಲಾವಿದೆ, ಸಂಗೀತ ಸರಸ್ವತಿ ಗುರುವಾರ ಚೆನ್ನೈಯ ಕೊಟ್ಟೂರುಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಜೀವನದ ಸಂಗೀತ ಕಛೇರಿಗೆ ಮಂಗಳ ಹಾಡಿದ್ದಾರೆ.
ಕರ್ನಾಟಕ ಸಂಗೀತದ ಪಿತಾಮಹ ಎಂದೇ ಕರೆಯಲಾಗುವ ದಿವಂಗತ ಸೆಮ್ಮಂಗುಡಿ ಶ್ರೀನಿವಾಸ್ ಅಯ್ಯರ್ ಅವರೇ ಒಂದೊಮ್ಮೆ &#8220;ಪಟ್ಟಮ್ಮಾಳ್ [...]<img alt="" border="0" src="http://stats.wordpress.com/b.gif?host=avisblog.wordpress.com&blog=154345&post=256&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p><div id="attachment_258" class="wp-caption alignright" style="width: 210px"><img src="http://avisblog.files.wordpress.com/2009/07/pattammal_200.jpg?w=200&#038;h=272" alt="Pattamal" title="Pattammal" width="200" height="272" class="size-full wp-image-258" /><p class="wp-caption-text">Pattamal</p></div>ಅದೊಂದು ಕಾಲವಿತ್ತು. ಕರ್ನಾಟಕ ಶಾಸ್ತ್ರೀಯ ಸಂಗೀತ ಜಗತ್ತನ್ನು ಪುರುಷರೇ ಆಳುತ್ತಿದ್ದರು. ಮಹಿಳಾ ಕಲಾವಿದರು ತೀರಾ ಖಾಸಗಿ, ಮನೆ ಸಮಾರಂಭದ ಹಾಡುಗಾರಿಕೆಗೆ ಮಾತ್ರವೇ ಸೀಮಿತವಾಗಿದ್ದ ಕಾಲವದು. ಅಂಥ ಸಂದರ್ಭದಲ್ಲಿ ಈ ಪುರುಷ ಪ್ರಾಧಾನ್ಯ ಕ್ಷೇತ್ರದಲ್ಲಿ ಮಹಿಳಾ ಪಾರುಪತ್ಯಕ್ಕೆ ಮುನ್ನುಡಿ ಹಾಡಿದವರು ಡಿ.ಕೆ.ಪಟ್ಟಮ್ಮಾಳ್. ಅಂಥ ಮಹಾನ್ ಕಲಾವಿದೆ, ಸಂಗೀತ ಸರಸ್ವತಿ ಗುರುವಾರ ಚೆನ್ನೈಯ ಕೊಟ್ಟೂರುಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಜೀವನದ ಸಂಗೀತ ಕಛೇರಿಗೆ ಮಂಗಳ ಹಾಡಿದ್ದಾರೆ.</p>
<p>ಕರ್ನಾಟಕ ಸಂಗೀತದ ಪಿತಾಮಹ ಎಂದೇ ಕರೆಯಲಾಗುವ ದಿವಂಗತ ಸೆಮ್ಮಂಗುಡಿ ಶ್ರೀನಿವಾಸ್ ಅಯ್ಯರ್ ಅವರೇ ಒಂದೊಮ್ಮೆ &#8220;ಪಟ್ಟಮ್ಮಾಳ್ ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ಮೊದಲ ಮಹಿಳೆ&#8221; ಎಂದಿರುವುದು ಅವರ ಸಾಧನೆಗೆ ಸಾಕ್ಷಿ.</p>
<p>ಶತಮಾನದ ಅಧಿಕಾಂಶ ಭಾಗದಲ್ಲಿ ಸಂಗೀತ ರಸಿಕರ ಮನ ತುಂಬಿ, ಮನೆಯೊಳಗೂ ಕ್ಯಾಸೆಟ್‌ಗಳ ಮೂಲಕ ಸದಾ ಅನುರಣಿಸುತ್ತಿರುವ ಎಂ.ಎಸ್.ಸುಬ್ಬುಲಕ್ಷ್ಮಿ, ಎಂ.ಎಲ್.ವಸಂತಕುಮಾರಿ ಅವರೊಂದಿಗೆ ಪಟ್ಟಮ್ಮಾಳ್ ಕೂಡ ಸೇರಿಕೊಂಡು ಕರ್ನಾಟಕ ಸಂಗೀತದ &#8220;ತ್ರಿದೇವಿಯರು&#8221; ಎಂದೇ ಜನಜನಿತರಾಗಿ ಮೆರೆದವರು..</p>
<p>ಸಂಗೀತಗಾರ ಕುಟುಂಬದಲ್ಲಿ ಜನಿಸದಿದ್ದರೂ ಅಂದರೆ ರಕ್ತದಲ್ಲಿ ಸಂಗೀತ ಇಲ್ಲದಿದ್ದರೂ, ಅಲ್ಲಿ ಸಂಗೀತದ ನಾದವಿತ್ತು, ಸುವಾಸನೆಯಿತ್ತು. ತಂದೆ ತಾಯಿ ಸಂಗೀತ ಪ್ರೇಮಿಗಳಾಗಿದ್ದರು. ಅದುವೇ ಡಿ.ಕೆ.ಪಟ್ಟಮ್ಮಾಳ್ ಅವರಿಗೆ ಯಶಸ್ಸಿನ ಉತ್ತುಂಗವೇರುವ ಏಣಿಯ ಮೊದಲ ಮೆಟ್ಟಿಲಾಯಿತು. ದಿನಂಪ್ರತಿ ಪೂಜೆ ಸಂದರ್ಭ ತಮ್ಮ ತಂದೆ ಉಚ್ಚರಿಸುತ್ತಿದ್ದ ಸಂಸ್ಕೃತ ಮತ್ತು ತಮಿಳು ಶ್ಲೋಕಗಳತ್ತ ಗಮನವಿಟ್ಟು ಕೇಳುತ್ತಿದ್ದ ಪಟ್ಟಮ್ಮಾಳ್ ಅವರಲ್ಲಿ ಅದಾಗಲೇ ಸಂಗೀತ ಪ್ರತಿಭೆಯೊಂದು ಅರಳುತ್ತಿತ್ತು.</p>
<p>ಸಂಕೀರ್ಣವಾದ ಪಲ್ಲವಿಗಳನ್ನು, ಅದಕ್ಕೂ ಹೆಚ್ಚಾಗಿ ಸಂಗೀತದ ಲಯವನ್ನು ಆವಾಹಿಸಿಕೊಂಡರು. ಸಂಸ್ಕೃತ ಮತ್ತು ತೆಲುಗು ಮೇಲಿನ ಹಿಡಿತವು ಅವರ ಭಕ್ತಿ ಗೀತೆಗಳಿಗೆ ಮತ್ತಷ್ಟು ಭಕ್ತಿಯ ರಸವನ್ನು ನೀಡಿತು ಮತ್ತು ಭಕ್ತಿಯ ಸಾಗರದಲ್ಲಿ ಮಿಂದು, ಅನುಭವಿಸಿ ಹಾಡಲು ಕಲಿತರು ಪಟ್ಟಮ್ಮಾಳ್.</p>
<p>ಕಾಂಚಿಪುರಂ ರೇಷ್ಮೆ ಸೀರೆ, ಹಣೆಯಲ್ಲಿ ಕೆಂಪು ಬೊಟ್ಟು, ವಜ್ರದ ಮೂಗುತಿ ಮತ್ತು ಕಿವಿಯೋಲೆಗಳು- ಪಕ್ಕಾ ಮದ್ರಾಸಿ ಸಾಂಪ್ರದಾಯಿಕ ಮಹಿಳೆಯಾಗಿ ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಪಟ್ಟಮ್ಮಾಳ್.</p>
<p>ಅಲಮೇಲು ಪಾಟ್ಟ್ ಅಮ್ಮಾಳ್ ಆಗಿದ್ದು ಹೇಗೆ?<br />
1919ರ ಮಾರ್ಚ್ 28ರಂದು ಕಾಂಚಿಪುರದ ಸಂಪ್ರದಾಯವಾದಿ ಬ್ರಾಹ್ಮಣ ಕುಟುಂಬದ ಸಂಗೀತ ಪ್ರೇಮಿ ತಂದೆ ದಮಲ್ ಕೃಷ್ಣಸ್ವಾಮಿ ದೀಕ್ಷಿತರ್ ಹಾಗೂ ತಾಯಿ, ಸ್ವತಃ ಹಾಡುಗಾರ್ತಿಯಾಗಿದ್ದ ಕಾಂತಿಮತಿಗೆ ಜನಿಸಿದ್ದ ಪಟ್ಟಮ್ಮಾಳ್, 1939ರಲ್ಲಿ ಈಶ್ವರನ್ ಅಯ್ಯರ್‌ರನ್ನು ವಿವಾಹವಾದರು. ಕರ್ನಾಟಕ ಸಂಗೀತ ಲೋಕಕ್ಕೆ ಅಧಿಕಾರಯುತವಾಗಿ ಕಾಲಿರಿಸಿದ ಮೊದಲ ಮಹಿಳೆ ಎಂದು ಕರ್ನಾಟಕ ಸಂಗೀತದ ಮೇರು ಕಲಾವಿದ, ದಿವಂಗತ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಿಂದ ಕರೆಸಿಕೊಂಡಿದ್ದರು.</p>
<p>10ರ ಹರೆಯದಲ್ಲೇ ಮೊದಲ ಬಾರಿಗೆ ರೇಡಿಯೋದಲ್ಲಿ (ಅಂದಿನ ಮದ್ರಾಸ್ ಕಾರ್ಪೊರೇಶನ್ ರೇಡಿಯೋ, ಈಗ ಆಲ್ ಇಂಡಿಯಾ ರೇಡಿಯೋ) ಕಛೇರಿ ನೀಡಿದ್ದ ಅವರು, ಮೂರು ವರ್ಷದ ಬಳಿಕ ಅಂದರೆ 1932ರಲ್ಲಿ ಅವರು ಮದ್ರಾಸ್ ರಸಿಕ ರಂಜನಿ ಸಭಾದಲ್ಲಿ ಮೊದಲ ಸಾರ್ವಜನಿಕ ಕಛೇರಿ ನೀಡಿದರು. ಬಳಿಕ ಚೆನ್ನೈಗೇ ತಮ್ಮ ನಿವಾಸ ಬದಲಾಯಿಸಿದ ಅವರು, ಮೊದಲ ಬಾರಿ ಚೆನ್ನೈ ಎಗ್ಮೋರ್ ಲೇಡಿಸ್ ಕ್ಲಬ್‌ನ &#8216;ಮಹಿಳಾ ಸಮಾಜಂ&#8217;ನಲ್ಲಿ ಮೊದಲ ಕಛೇರಿ ನೀಡಿದರು.</p>
<p>ಆ ಕಾಲದಲ್ಲಿ ತಾಯಿ ಕಾಂತಿಮತಿಗೆ ಕೂಡ ಬಹಿರಂಗವಾಗಿ ಹಾಡುವ ಅವಕಾಶವಿರಲಿಲ್ಲ. ಅಷ್ಟೊಂದು ಸಂಪ್ರದಾಯವಾದಿ ಕುಟುಂಬವಾಗಿತ್ತದು. ಆದರೆ ಸಹೋದರರಾದ ಡಿ.ಕೆ.ಜಯರಾಮನ್ ಮತ್ತು ಡಿ.ಕೆ. ರಂಗನಾಥನ್ ಅವರೊಂದಿಗೆ ತಾವೂ ಒಬ್ಬ ಸಂಗೀತ ಪ್ರತಿಭೆಯಾಗಿ ಬೆಳೆದ ಅಲಮೇಲು ಅವರಿಗೆ ಕಾಲಾನಂತರದಲ್ಲಿ ಪಾಟ್ಟ್ (ಹಾಡುವ) ಅಮ್ಮಾಳ್ (ಅಮ್ಮ-ದೇವತೆ ಎಂಬರ್ಥದಲ್ಲಿ) ಎಂದು ಹೆಸರಿಟ್ಟದ್ದು ಬೇರಾರೂ ಅಲ್ಲ, ತಮಿಳಿನ ಖ್ಯಾತ ಕವಿ ಮತ್ತು ಗೀತೆ ರಚನೆಕಾರ ವೈರಮುತ್ತು.</p>
<p>ಕರ್ನಾಟಕ ಸಂಗೀತದಲ್ಲಿ ಅತ್ಯಂತ ಕ್ಲಿಷ್ಟಕರವಾಗಿದ್ದ &#8220;ರಾಗಂ, ತಾನಂ, ಪಲ್ಲವಿ&#8221;ಯನ್ನು ಸಂಗೀತ ಕಛೇರಿಗಳಲ್ಲಿ ಬಳಸಿದ ಮೊದಲ ಮಹಿಳಾರತ್ನ ಎಂಬ ಹೆಗ್ಗಳಿಕೆಯೂ ಪಟ್ಟಮ್ಮಾಳ್ ಅವರಿಗಿದೆ ಮಾತ್ರವಲ್ಲದೆ ಕ್ಲಿಷ್ಟ ತಾಳಗಳ ಸಂಕೀರ್ಣ ಪಲ್ಲವಿಗಳನ್ನು ಹಾಡುವಲ್ಲಿನ ನೈಪುಣ್ಯತೆಯು ಪುರುಷ ವಿದ್ವಾಂಸರೂ ಮೂಗಿಗೆ ಬೆರಳಿಡುವಂತೆ ಮಾಡಿತ್ತು.</p>
<p>ಸಂಗೀತ ಲೋಕದಲ್ಲಿ ಭೈರವಿ ರಾಗದ ಅದ್ಭುತ ಸ್ವರ ಸಂಚಾರ, ಸ್ವರವಿಸ್ತಾರಗಳಿಗೆ ಪ್ರಸಿದ್ಧಿ ಪಡೆದಿದ್ದರು ಪಟ್ಟಮ್ಮಾಳ್. ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಅವರು ವಿಶೇಷವಾಗಿ ಭೈರವಿ ರಾಗದಲ್ಲಿಯೇ ನೀಡಿದ ಅದ್ಭುತ ಕಛೇರಿಯು ಆಕೆಗೆ ಭೈರವಿ ರಾಗದ ಮೇಲಿದ್ದ ಹಿಡಿತಕ್ಕೆ ಸಾಕ್ಷಿಯಾಯಿತು. </p>
<p>ಸಂಗೀತದ ಸಂಪ್ರದಾಯಕ್ಕೆ ಒಂದಿನಿತೂ ಚ್ಯುತಿ ಬಾರದಂತೆ, ಜನ ರಂಜನೆಗಾಗಿ ಯಾವುದೇ ಪ್ರಯೋಗಗಳಿಗೆ ತಮ್ಮ ಗಾಯನವನ್ನು ಒಡ್ಡಿಕೊಳ್ಳದೆ, ಗುಣಮಟ್ಟದ ಮತ್ತು ಶುದ್ಧ, ಪಾರಂಪರಿಕ ಶಾಸ್ತ್ರೀಯ ಸಂಗೀತಕ್ಕೆ ಒತ್ತು ನೀಡಿದವರು ಅವರು. ಮುತ್ತುಸ್ವಾಮಿ ದೀಕ್ಷಿತರ್, ಪಾಪನಾಶಂ ಶಿವಂ ಮುಂತಾದವರ ಕೃತಿಗಳಿಗೆ ರಾಗ ರಸ ಸೇರಿಸಿ ಅವರು ಸಂಗೀತ ರಸಿಕರಿಗೆ ಉಣಬಡಿಸಿದವರು. ಸ್ಪಷ್ಟ ಉಚ್ಛಾರ, ಸಾಹಿತ್ಯಕ್ಕೆ ಚ್ಯುತಿಯಾಗದ ಗಾಯನ, ಲಯದ ಮೇಲಿನ ಅದ್ಭುತ ಹಿಡಿತ ಇವು ಪಟ್ಟಮ್ಮಾಳ್‌ಗೆ ಅನನ್ಯತೆ ತಂದುಕೊಟ್ಟ ವಿಷಯಗಳು.</p>
<p>ಕೃತಿ ರಚನೆಕಾರ ಪಾಪನಾಶಂ ಶಿವಂ ಅವರು ಪಟ್ಟಮ್ಮಾಳ್‌ರನ್ನು ಚಲನಚಿತ್ರ ರಂಗಕ್ಕೂ ಪರಿಚಯಿಸಿದರು. ಆದರೆ ಆಕೆ ಒಪ್ಪಿಕೊಂಡದ್ದು ಭಕ್ತಿ ಸಂಗೀತ ಮತ್ತು ದೇಶಭಕ್ತಿ ಗಾಯನಗಳನ್ನು ಹಾಡುವುದಕ್ಕೆ ಮಾತ್ರ. ತ್ಯಾಗ ಭೂಮಿ ಮತ್ತು ನಾಮ್ ಇರುವರ್ ಚಿತ್ರಗಳಲ್ಲಿ ಹಾಡಿದ್ದ ಪಟ್ಟಮ್ಮಾಳ್, ಸುಬ್ರಹ್ಮಣ್ಯ ಭಾರತಿ ಅವರ ದೇಶಭಕ್ತಿ ಹುಟ್ಟಿಸುವ ಗಾಯನಗಳನ್ನೂ ಜನಪ್ರಿಯಗೊಳಿಸಿ, ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಬ್ರಿಟಿಷರ ಕೆಂಗಣ್ಣಿಗೂ ಗುರಿಯಾಗಿದ್ದರು.</p>
<p>ಮೊದಲ ಹೆಜ್ಜೆ:<br />
ತಂದೆ ಹೇಳಿಕೊಟ್ಟ ಸಂಸ್ಕೃತ ಶ್ಲೋಕಗಳನ್ನು ರಾಗವತ್ತಾಗಿ ಹಾಡುತ್ತಿದ್ದ ಅಲಮೇಲು ಒಳಗಿದ್ದ ಕಲಾವಿದೆಯನ್ನು ಗುರುತಿಸಿದ್ದು ಅವರ ಶಾಲೆಯ ಮುಖ್ಯೋಪಾಧ್ಯಾಯಿನಿ. ಶಾಲೆಯ ನಾಟಕವೊಂದರಲ್ಲಿ ಆಕೆಗೂ ಒಂದು ಪಾತ್ರ ನೀಡಿದ್ದರು. ಹಾಡುವ ಪಾತ್ರವಾಗಿತ್ತದು. ಈ ಬಾಲಕಿ ವೇದಿಕೆಯಲ್ಲಿ ಹಾಡುತ್ತಿದ್ದರೆ, ಅಲ್ಲೇ ಇದ್ದ ಪ್ರೇಕ್ಷಕರೊಬ್ಬರು ಎಷ್ಟು ಪ್ರಭಾವಿತರಾದರೆಂದರೆ, ಅವರು ತಕ್ಷಣವೇ ಎದ್ದು ನಿಂತು ಈ ಹುಡುಗಿಗೆ ಚಿನ್ನದ ಪದಕ ಕೊಡುವುದಾಗಿ ಘೋಷಿಸಿದರು. ಮರು ದಿನ ಆತ ಚಿನ್ನದ ಪದಕದೊಂದಿಗೆ ಬಂದಾಗ, ಮುಖ್ಯೋಪಾಧ್ಯಾಯಿನಿಯಂತೂ ಸಂತಸಭರಿತರಾಗಿ, ಪತ್ರಿಕೆಗಳಿಗೂ ಮಾಹಿತಿ ನೀಡಿದರು. ಹಿಂದು ಪತ್ರಿಕೆಯು ಪಟ್ಟಮ್ಮಾಳ್ ಫೋಟೋ ಸಹಿತ ಮುಖಪುಟದಲ್ಲಿ ಸುದ್ದಿ ಪ್ರಕಟಿಸಿಬಿಟ್ಟಿತು.</p>
<p>ಇದು ತಂದೆ ಕೃಷ್ಣಸ್ವಾಮಿ ದೀಕ್ಷಿತರಿಗೆ ಚಿಂತೆಯ ವಿಷಯವಾಗಿತ್ತು. ಇನ್ನು ನನ್ನ ಮಗಳನ್ನು ಯಾರು ಮದುವೆಯಾಗುತ್ತಾರೆ ಎಂಬುದು ಚಿಂತೆ. ನನ್ನ ಮಗಳ ಜೀವನ ಹಾಳು ಮಾಡಿದಿರಿ ಅಂತ ಮುಖ್ಯೋಪಾಧ್ಯಾಯಿನಿಯನ್ನು ತರಾಟೆಗೂ ತೆಗೆದುಕೊಂಡು ಬಿಟ್ಟರು. ಕೊನೆಗೂ ಮುಖ್ಯೋಪಾಧ್ಯಾಯಿನಿ ಮತ್ತು ಸ್ಥಳೀಯ ಕಾಂಗ್ರೆಸ್ ಮುಖಂಡರಾಗಿದ್ದ ಡಾ.ಡಿ.ಪಿ.ಶ್ರೀನಿವಾಸನ್ ಎಂಬವರು ತಂದೆಯ ಮನವೊಲಿಸಿದರು. ಅಷ್ಟು ಹೊತ್ತಿಗೆ ಈ ಬಾಲ ಪ್ರತಿಭೆಗೆ ಪ್ರಚಾರ ಸಿಕ್ಕಿತ್ತು. ಕೊಲಂಬಿಯಾ ಗ್ರಾಮಾಫೋನ್ ಕಂಪನಿಯವರು ಈಕೆಯ ಹಾಡುಗಳನ್ನು ರೆಕಾರ್ಡ್ ಮಾಡಲೆಂದು ಕಾಂಚಿಪುರಕ್ಕೆ ಬಾಲ ಪ್ರತಿಭೆಯನ್ನು ಹುಡುಕಿಕೊಂಡು ಬಂದರು. ತಂದೆ ಮತ್ತೆ ಬೆಚ್ಚಿದರು, ಬೆದರಿದರು. ಆಗ ಶ್ರೀನಿವಾಸನ್, ನೀವು ನಿಮ್ಮ ಮಗಳ ಭವಿಷ್ಯದ ಬಗ್ಗೆ ಅಷ್ಟೊಂದು ಹೆದರುತ್ತೀರಾದರೆ, ಭಯ ಬೇಡ. ಅವಳಿಗೆ ಪ್ರಾಪ್ತ ವಯಸ್ಸಾದಾಗ ನಾನೇ ನನ್ನ ಸಹೋದರಿಯ ಮಗನಿಗೆ ಮದುವೆ ಮಾಡಿಸುತ್ತೇನೆ ಎಂದು ವಾಗ್ದಾನ ನೀಡಿದರು. ಅಂತೆಯೇ ಅಲಮೇಲುಗೆ 20 ವರ್ಷವಾದಾಗ ಶ್ರೀನಿವಾಸನ್ ಅವರ ಸೋದರ ಸಂಬಂಧಿ ಈಶ್ವರನ್ ಅಯ್ಯರ್ ಜೊತೆಗೆ ವಿವಾಹವೂ ಆಯಿತು.</p>
<p>ಈಶ್ವರನ್ ಅಯ್ಯರ್ ಅವರು ಪತ್ನಿಯ ಸಂಗೀತಕ್ಕೆ ಭರ್ಜರಿ ಪ್ರೋತ್ಸಾಹ ನೀಡಿದರು. ಸಂಪ್ರದಾಯವಾದಿಗಳಿಗೆ ಬೆಲೆ ಕೊಡಲಿಲ್ಲ. ತಮ್ಮ ಉದ್ಯೋಗಕ್ಕೂ ತಿಲಾಂಜಲಿ ನೀಡಿ ಪತ್ನಿಯ ಕಾರ್ಯಕ್ರಮಗಳ ಮ್ಯಾನೇಜರ್ ಆಗಿ ಕೆಲಸ ಮಾಡಲಾರಂಭಿಸಿದರು.</p>
<p>1961ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಪಡೆದ ಪಟ್ಟಮ್ಮಾಳ್‌ಗೆ &#8216;ಸಂಗೀತ ಸರಸ್ವತಿ&#8217; ಎಂಬ ಅನ್ವರ್ಥ ಬಿರುದು ಲಭ್ಯವಾಗಿದೆ. ಅದೇ ರೀತಿ, 1971ರಲ್ಲಿ ಪದ್ಮಭೂಷಣ, 1998ರಲ್ಲಿ ದೇಶದ 2ನೇ ಅತ್ಯಂತ ಶ್ರೇಷ್ಠ ಪೌರ ಪ್ರಶಸ್ತಿಯಾದ ಪದ್ಮ ವಿಭೂಷಣ, ಸಂಗೀತ ಸಾಗರ ರತ್ನ, ಸಂಗೀತ ಕಲಾನಿಧಿ ಬಿರುದುಗಳು ಅವರನ್ನು ಅಲಂಕರಿಸಿವೆ.</p>
<p>ಕೊನೆಯುಸಿರಿರುವವರೆಗೂ ಹಾಡಬೇಕೆಂಬ ಮಹದಾಸೆ ಹೊಂದಿದ್ದ ಅವರು ಅದೊಮ್ಮೆ ನೋವಿನಿಂದ ಹೇಳಿದ್ದರು: &#8220;ಇಂದು ಸಂಗೀತವನ್ನು ಉದ್ಯೋಗವಾಗಿಸಿಕೊಳ್ಳುವುದು ಬಹಳ ಸುಲಭ, ಕಛೇರಿಯ ಶುಲ್ಕಗಳು ಕೂಡ ಗಗನಕ್ಕೇರಿವೆ. ಆದರೆ ಗುಣಮಟ್ಟ ಕುಸಿಯುತ್ತಿದೆ. ಸಾಧನೆ ಇಲ್ಲ, ರಾಗ, ತಾಳ, ಲಯಗಳ ಜ್ಞಾನದ ಆರ್ಜನೆಯ ಹಪಹಪಿ ಇಲ್ಲ. ಎಲ್ಲವೂ ಇಂದು ಮಾರುಕಟ್ಟೆಯಲ್ಲಿ ಸುಲಭವಾಗಿಯೇ ಸಿಗುತ್ತದೆ&#8221;.</p>
<p>ಸತತ ಸಂಗೀತಾಭ್ಯಾಸ ನಿರತರಾಗಿದ್ದ ಅವರು ಪ್ರತಿಯೊಂದು ಕಛೇರಿಗೆ ಮುನ್ನ ಸಾಕಷ್ಟು ಅಭ್ಯಾಸ ಮಾಡಿಕೊಳ್ಳುತ್ತಿದ್ದರು. ಅದೇ ರೀತಿ ಹಲವಾರು ಶಿಷ್ಯರಿಗೂ ತಮ್ಮ ಪ್ರತಿಭೆ ಧಾರೆಯೆರೆದ ಅವರ ಶಿಷ್ಯ ವರ್ಗದಲ್ಲಿ ಸಹೋದರ ಡಿ.ಕೆ.ಜಯರಾಮನ್ ಮತ್ತು ಮೊಮ್ಮಗಳು ನಿತ್ಯಶ್ರೀ ಮಹದೇವನ್ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಇತರ ಪ್ರಸಿದ್ಧ ಶಿಷ್ಯರೆಂದರೆ, ಲಲಿತಾ ಶಿವಕುಮಾರ್, ಗೀತಾ ರಾಜಶೇಖರ್, ಭವದಾರಿಣಿ ಅನಂತರಾಮನ್ ಮತ್ತು ಖ್ಯಾತ ಭರತನಾಟ್ಯ ಕಲಾವಿದೆ, ಚಿತ್ರ ಕಲಾವಿದೆ ವೈಜಯಂತಿಮಾಲಾ ಬಾಲಿ.</p>
<p>ದೇಶ ವಿದೇಶಗಳಲ್ಲಿ ಸಂಗೀತ ಸುಧೆ ಹರಿಸಿ ಕಲಾ ರಸಿಕರ ಮನದಲ್ಲಿ ಅಚ್ಚಳಿಯದ ಸ್ಥಾನ ಸೃಷ್ಟಿಸಿ, ಹಾಡುವ ದೇವಿಯೇ ಆಗಿ ತಮ್ಮದೇ ಅನನ್ಯತೆ ಉಳಿಸಿ ಹೋದ ಈ &#8220;ಸಂಗೀತ ಸರಸ್ವತಿ&#8221;ಗೆ ಹೃದಯ ತುಂಬಿದ ಶ್ರದ್ಧಾಂಜಲಿ.<br />
(<a href="http://kannada.webdunia.com/newsworld/news/current/0907/16/1090716091_1.htm">ವೆಬ್‌ದುನಿಯಾ</a>)</p>
  <a rel="nofollow" href="http://feeds.wordpress.com/1.0/gocomments/avisblog.wordpress.com/256/"><img alt="" border="0" src="http://feeds.wordpress.com/1.0/comments/avisblog.wordpress.com/256/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/256/"><img alt="" border="0" src="http://feeds.wordpress.com/1.0/delicious/avisblog.wordpress.com/256/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/256/"><img alt="" border="0" src="http://feeds.wordpress.com/1.0/stumble/avisblog.wordpress.com/256/" /></a> <a rel="nofollow" href="http://feeds.wordpress.com/1.0/godigg/avisblog.wordpress.com/256/"><img alt="" border="0" src="http://feeds.wordpress.com/1.0/digg/avisblog.wordpress.com/256/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/256/"><img alt="" border="0" src="http://feeds.wordpress.com/1.0/reddit/avisblog.wordpress.com/256/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=256&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/07/17/pattammal/feed/</wfw:commentRss>
		<slash:comments>0</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>

		<media:content url="http://avisblog.files.wordpress.com/2009/07/pattammal_200.jpg" medium="image">
			<media:title type="html">Pattammal</media:title>
		</media:content>
	</item>
		<item>
		<title>ಉತ್ತರ ಪ್ರದೇಶ &#8216;ಮಾಯಾ&#8217; ಜಾಲ: ತತ್ತರಿಸುತ್ತಿದೆ ಪ್ರಜಾಪ್ರಭುತ್ವ</title>
		<link>http://avisblog.wordpress.com/2009/07/17/mayawati/</link>
		<comments>http://avisblog.wordpress.com/2009/07/17/mayawati/#comments</comments>
		<pubDate>Fri, 17 Jul 2009 11:55:33 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/?p=254</guid>
		<description><![CDATA[ಮಾಯಾವತಿಗೆ ಏನಾಗಿದೆ? ಅಂತ ಇಡೀ ದೇಶವೇ ಕೇಳತೊಡಗಿದೆ. ದಲಿತರ ಉದ್ಧಾರಕ್ಕಾಗಿ ಹೋರಾಡಿದ ತನ್ನ ರಾಜಕೀಯ ಗುರು ಕಾನ್ಶೀರಾಂ, ಬಾಬಾ ಸಾಹೇಬ್ ಅಂಬೇಡ್ಕರ್ ಜೊತೆಗೆ ತನ್ನದೂ ಸೇರಿದಂತೆ, ಪ್ರತಿಮೆಗಳನ್ನು ನಿರ್ಮಿಸಿ ಈಗಷ್ಟೇ ಸಾರ್ವಜನಿಕರ ಖಜಾನೆಯಿಂದ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿರುವ ಈ &#8220;ದಲಿತೋದ್ಧಾರಕಿ&#8221; ಎಂದು ಕರೆಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಮಾಯಾವತಿ ತಾನೇನು ಮಾಡುತ್ತಿದ್ದೇನೆ ಎಂಬುದು ಬಹುಶಃ ಅವರಿಗೇ ಅರಿವಿಲ್ಲವೋ?
ಮಾಯಾವತಿಯ ಪ್ರಧಾನಿಯಾಗಬೇಕೆಂಬ ಕನಸಿನ ತುಣುಕು, ವ್ಯಕ್ತಿಪೂಜೆಯ ಪ್ಯಾಶನ್ ಮತ್ತು ಫ್ಯಾಶನ್ ಒತ್ತಟ್ಟಿಗಿರಲಿ. ಇದಕ್ಕಾಗಿ ಸಾರ್ವಜನಿಕರ ಹಣ ಪೋಲು ಮಾಡುವುದೇಕೆ ಎಂಬ ಪ್ರಶ್ನೆಗಳಿಗೆ [...]<img alt="" border="0" src="http://stats.wordpress.com/b.gif?host=avisblog.wordpress.com&blog=154345&post=254&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p>ಮಾಯಾವತಿಗೆ ಏನಾಗಿದೆ? ಅಂತ ಇಡೀ ದೇಶವೇ ಕೇಳತೊಡಗಿದೆ. ದಲಿತರ ಉದ್ಧಾರಕ್ಕಾಗಿ ಹೋರಾಡಿದ ತನ್ನ ರಾಜಕೀಯ ಗುರು ಕಾನ್ಶೀರಾಂ, ಬಾಬಾ ಸಾಹೇಬ್ ಅಂಬೇಡ್ಕರ್ ಜೊತೆಗೆ ತನ್ನದೂ ಸೇರಿದಂತೆ, ಪ್ರತಿಮೆಗಳನ್ನು ನಿರ್ಮಿಸಿ ಈಗಷ್ಟೇ ಸಾರ್ವಜನಿಕರ ಖಜಾನೆಯಿಂದ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿರುವ ಈ &#8220;ದಲಿತೋದ್ಧಾರಕಿ&#8221; ಎಂದು ಕರೆಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಮಾಯಾವತಿ ತಾನೇನು ಮಾಡುತ್ತಿದ್ದೇನೆ ಎಂಬುದು ಬಹುಶಃ ಅವರಿಗೇ ಅರಿವಿಲ್ಲವೋ?</p>
<p>ಮಾಯಾವತಿಯ ಪ್ರಧಾನಿಯಾಗಬೇಕೆಂಬ ಕನಸಿನ ತುಣುಕು, ವ್ಯಕ್ತಿಪೂಜೆಯ ಪ್ಯಾಶನ್ ಮತ್ತು ಫ್ಯಾಶನ್ ಒತ್ತಟ್ಟಿಗಿರಲಿ. ಇದಕ್ಕಾಗಿ ಸಾರ್ವಜನಿಕರ ಹಣ ಪೋಲು ಮಾಡುವುದೇಕೆ ಎಂಬ ಪ್ರಶ್ನೆಗಳಿಗೆ ಉತ್ತರ ದೊರೆಯುವ ಮೊದಲೇ, ತನ್ನ ಬಗ್ಗೆ, ತನ್ನ ಕಾರ್ಯವೈಖರಿ ಬಗ್ಗೆ ಧ್ವನಿಯೆತ್ತಿದವರನ್ನು ಜೈಲಿಗಟ್ಟುತ್ತಿರುವುದು ಈಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ.</p>
<p>ಡಿಜಿಪಿಯೊಬ್ಬರನ್ನು ಹೆಲಿಕಾಪ್ಟರ್‌ನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಳುಹಿಸಿ, ಅತ್ಯಾಚಾರಕ್ಕೀಡಾದ ಒಬ್ಬ ದಲಿತ ಮಹಿಳೆಗೆ ಕೇವಲ 25 ಸಾವಿರ ರೂ. ಪರಿಹಾರ ಕೊಡಿಸಿದ್ದನ್ನು ರಾಜ್ಯ ಕಾಂಗ್ರೆಸ್ ಮುಖ್ಯಸ್ಥೆ ರೀಟಾ ಬಹುಗುಣ ಜೋಷಿ ಆಕ್ಷೇಪಿಸಿದ್ದರು. ಒಬ್ಬ ಮಹಿಳೆಯಾಗಿ, ಮಾಯಾವತಿ ಅವರು ಶೀಲಕ್ಕೆ ಕಟ್ಟಿದ ಬೆಲೆಯೇ ಇದು? ಮತ್ತು ಅದು ಆಕೆಗಾದ ಅನ್ಯಾಯಕ್ಕೆ ಸಾಂತ್ವನ ನೀಡಬಹುದೇ ಎಂದು ರೀಟಾ ಪ್ರಶ್ನಿಸಿದ್ದರು. ಮಾತ್ರವಲ್ಲದೆ ಕೋಪದ ಭರದಲ್ಲಿ, ಮಾಯಾವತಿಗೂ ಹೀಗೇ ಆದರೆ ಒಂದು ಕೋಟಿ ರೂ. ಪರಿಹಾರ ನೀಡಲು ಸಿದ್ಧ ಎಂದೂ ಘೋಷಿಸಿದ್ದರು. ಆದರೆ, ತನ್ನ ಮಾತಿನ ಉದ್ದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರೆ ಕ್ಷಮೆ ಯಾಚಿಸುವುದಾಗಿಯೂ ಆನಂತರ ಹೇಳಿದ್ದರು. ಆದರೂ ರೀಟಾ ಮೇಲೆ ಜಡಿಯಲಾದ ಕೇಸಾದರೂ ಎಂಥದ್ದು? ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆಯ ಕಠಿಣ ಕಾಯಿದೆ ಪ್ರಯೋಗ!</p>
<p>ಇತ್ತೀಚೆಗೆ ಫಿಲಿಬಿಟ್‌ನಲ್ಲಿ ಬಿಜೆಪಿಯ ಯುವ ನೇತಾರ ವರುಣ್ ಗಾಂಧಿಯ ಮೇಲೆ ದೇಶದ್ರೋಹಿಗಳ ಮೇಲೆ ವಿಧಿಸುವಂತಹ ರಾಷ್ಟ್ರೀಯ ಭದ್ರತಾ ಕಾಯ್ದೆ ಹೇರಿ, ದೇಶಾದ್ಯಂತ ಟೀಕೆಗಳು ಕೇಳಿಬಂದಾಗ, &#8220;ಅದು ನಾನಲ್ಲ, ನನ್ನ ಕೈಯಲ್ಲಿಲ್ಲ, ಕೇಂದ್ರ ಸರಕಾರವೇ ಅದಕ್ಕೆ ಅನುಮೋದನೆ ನೀಡಿದ್ದು&#8221; ಎಂದೆಲ್ಲಾ ಹೇಳಿ ತಪ್ಪಿಸಿಕೊಂಡಿದ್ದ ಇದೇ ಮಾಯಾವತಿ, ಮತ್ತೆ ತಮ್ಮ ಸರ್ವಾಧಿಕಾರತ್ವ ಮೆರೆದಿದ್ದಾರೆ ಎಂಬುದು ಜನಾಕ್ರೋಶ.</p>
<p>ಕಳೆದ ವಾರ ನಡೆದ ಇನ್ನೊಂದು ಘಟನೆ ನೋಡಿ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ, ನೆಹರೂ-ಗಾಂಧಿ ಕುಟುಂಬದ ಸಾಂಪ್ರದಾಯಿಕ ನೆಲೆ ಹಾಗೂ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿರುವ ಅಮೇಠಿ ಕ್ಷೇತ್ರದಲ್ಲಿ ದಿನಕ್ಕೆ 16 ಗಂಟೆ ವಿದ್ಯುತ್ ಇಲ್ಲ ಎಂಬ ಕಾರಣಕ್ಕೆ ಕಾಂಗ್ರೆಸಿಗರು ಪ್ರತಿಭಟನೆ ನಡೆಸುತ್ತಿದ್ದರು. ಅವರು ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದರು ಎಂದು ಹೇಳಲಾಗುತ್ತಿದ್ದರೂ, ಅಲ್ಲಿರುವ ಜನಾಕ್ರೋಶವನ್ನು ಕೂಡ ನಾವು ಮರೆಯುವಂತಿಲ್ಲ. ಮಾಯಾವತಿ ಉದ್ದೇಶಪೂರ್ವಕವಾಗಿ ರಾಹುಲ್ ಕ್ಷೇತ್ರಕ್ಕೆ ಅನ್ಯಾಯ ಎಸಗುತ್ತಿದ್ದಾರೆ ಎಂಬ ಕೋಪವೊಂದು ಕಡೆ. ಅಲ್ಲಿ ಲಾಠಿ ಚಾರ್ಜ್ ನಡೆಸಲಾಯಿತು. ಹಲವು ಪ್ರತಿಭಟನಾಕಾರರು ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಈ ಪ್ರತಿಭಟನೆ ಬಗ್ಗೆ ಹಿಂದೆ-ಮುಂದೆ ನೋಡದೆ ಮಾಯಾವತಿ ನ್ಯಾಯಾಂಗ ತನಿಖೆಗೆ ಆದೇಶಿಸಿಬಿಟ್ಟಿದ್ದಾರೆ.</p>
<p>ಈ ಪ್ರತಿಮೆಗಳ ಸ್ಥಾಪನೆಗೆ ದುಂದುವೆಚ್ಚ, ಲಾಠಿ ಚಾರ್ಜ್, ರೀಟಾ ಮನೆಗೆ ಬೆಂಕಿ ಹಚ್ಚಿದ್ದು, ಅದಕ್ಕೂ ಹಿಂದೆ ವರುಣ್ ಗಾಂಧಿ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ ಹೇರಿದ್ದು&#8230; ಇವೆಲ್ಲವೂ ಮಾಯಾವತಿಯ ದುಡುಕಿನ, ದ್ವೇಷ ರಾಜಕಾರಣದ ಪ್ರತೀಕವಷ್ಟೆ ಎಂದು ಹೇಳದಿರಲು ಸಾಧ್ಯವಿಲ್ಲ.</p>
<p><em>ಹಾಗಿದ್ದರೆ ವಸ್ತು ಸ್ಥಿತಿ ಏನಿದ್ದೀತು?</em></p>
<p>ಉತ್ತರ ಪ್ರದೇಶ ಹೇಳಿ ಕೇಳಿ &#8220;ಗೂಂಡಾ ರಾಜ್&#8221; ಎಂದೇ ಕುಪ್ರಸಿದ್ಧಿ ಪಡೆದಿದೆ. ಹಿಂದಿನ ಕಲ್ಯಾಣ್ ಸಿಂಗ್ ಸರಕಾರವಿರಲಿ, ಬಿಎಸ್ಪಿ-ಬಿಜೆಪಿ ಮೈತ್ರಿ ಸರಕಾರವಿರಲಿ, ಮಾಯಾವತಿ, ಮುಲಾಯಂ ಸಿಂಗ್ ಸರಕಾರಗಳೇ ಇರಲಿ, ಇಲ್ಲಿ ಪಕ್ಕದ ಬಿಹಾರದ ಮಾದರಿಯಲ್ಲಿ ರಾಜಕೀಯದಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದ್ದವರು ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿಗಳೇ. ರಾಜಕೀಯ ಪ್ರವೇಶವು ಕೂಡ ಅವರಿಗೆ ಸುಲಲಿತ. ಧನ, ಜನ ಮತ್ತು ತೋಳ್ ಬಲವಿರುವರಿಗೆ ಇಲ್ಲಿ ರಾಜಕೀಯವೆಂದರೆ ಮಕ್ಕಳಾಟ.</p>
<p>ಹೀಗಾಗಿ ದೇಶದ ಅತೀ ಹೆಚ್ಚು ಜನಸಾಂದ್ರತೆಯ, ಅತಿ ದೊಡ್ಡ ರಾಜ್ಯದ, ಅತೀ ಹೆಚ್ಚು ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳುಳ್ಳ ರಾಜ್ಯದೊಳಗೆ ರಾಜಕೀಯದಲ್ಲಿ ಇಂತಹ ತಂತ್ರ-ಪ್ರತಿತಂತ್ರ-ಕುತಂತ್ರಗಳು ಸಾಮಾನ್ಯವೇ ಆಗಿಬಿಟ್ಟಂತಾಗಿರುವುದು ಪ್ರಜಾಪ್ರಭುತ್ವದ ದುರಂತ.</p>
<p>ಯಾಕೆಂದರೆ, ರೀಟಾ ಮನೆಗೆ ಕಾಂಗ್ರೆಸಿಗರು ತಾವಾಗಿಯೇ ಬೆಂಕಿ ಹಚ್ಚಿ ದಾಂಧಲೆ ಎಬ್ಬಿಸಿದ್ದಾರೆ ಎಂಬುದು ಬಿಎಸ್ಪಿ ಆರೋಪ. ಮಾತ್ರವಲ್ಲ, ವಿದ್ಯುತ್ ಒದಗಿಸಬೇಕಾಗಿರುವುದು ಕೇಂದ್ರ ಸರಕಾರ, ಅದು ಉತ್ತರ ಪ್ರದೇಶಕ್ಕೆ ಬೇಕಾದಷ್ಟು ಪ್ರಮಾಣದಲ್ಲಿ ವಿದ್ಯುತ್ ಒದಗಿಸುತ್ತಿಲ್ಲ, ಈ ಕಾರಣಕ್ಕೆ ಅಮೇಠಿಯಲ್ಲಿಯೂ ತೊಂದರೆಯಾಗಿದೆ ಎನ್ನುತ್ತಾರೆ ಮಾಯಾವತಿ. ಇದು ಕಾಂಗ್ರೆಸ್ ಮತ್ತು ಬಿಎಸ್ಪಿ ನಡುವಣ ನಾಟಕ ಎನ್ನುತ್ತದೆ ಬಿಜೆಪಿ. ಹಾಗಿದ್ದರೆ ನಂಬುವುದು ಯಾರನ್ನು?</p>
<p>ವರುಣ್ ಪ್ರಕರಣ, ರೀಟಾ ಘಟನೆಗಳು ಇಂಥದ್ದೇ ಹೊಲಸು ರಾಜಕೀಯಕ್ಕೆ ಹೊರತಾದುದೇನೂ ಅಲ್ಲ. ಇಲ್ಲಿ ಈ ರೀತಿಯ ರಾಜಕೀಯ ಮಾಡುವುದು ರಾಜಕೀಯ ಪಕ್ಷಗಳಿಗೆ ಅಸ್ತಿತ್ವ ಉಳಿಸಿಕೊಳ್ಳಲು ಅನಿವಾರ್ಯವೂ ಆಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುವ ಅಂಶ.</p>
<p>ಹೀಗಾಗಿ, ಇವುಗಳೆಲ್ಲವೂ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆಯಾದರೂ, ಇಂಥ ಕೆಲವೊಂದು &#8216;ಸಣ್ಣಪುಟ್ಟ&#8217; ಘಟನೆಗಳಿಗಾಗಿ ಜನರಿಂದ ಆಯ್ಕೆಯಾದ ಒಂದು ಸರಕಾರವನ್ನೇ ವಜಾಗೊಳಿಸಿ ಎಂಬ ಕೂಗಿಗೆ ಅರ್ಥವಿಲ್ಲ ಅನ್ನಿಸುತ್ತದೆ. ಯಾಕೆಂದರೆ, ಇದಕ್ಕಿಂತ ದೊಡ್ಡದಾದ ಸಾವಿರ ಕೋಟಿ ರೂ. ಮೊತ್ತದ ಖಜಾನೆ ಲೂಟಿ, ಹಗರಣಗಳು, ಹಣ ಪೋಲು ಇತ್ಯಾದಿ ಆರೋಪಗಳು ಸಾಕಷ್ಟಿವೆ! ತಾಜ್ ಕಾರಿಡಾರ್ ಹಗರಣದ ಸಿಬಿಐ ಕೇಸು, ಪಾರ್ಟಿ ಫಂಡ್‌ಗೆ ಸಂಸದರ ನಿಧಿಯಿಂದ ಹಣ ಕೊಡುವಂತೆ ಆದೇಶಿಸಿದ್ದು, ಕೊಡಲೊಪ್ಪದ , ಕೋಟ್ಯಂತರ ರೂ. ಖರ್ಚು ಮಾಡಿ ಬರ್ತ್‌ಡೇ ಆಚರಣೆ, ಇತ್ತೀಚೆಗಿನ 2000 ಕೋಟಿ ರೂ. ವೆಚ್ಚದ &#8216;ಪ್ರತಿಮಾ ಅಭಿಯಾನ&#8217; ಹಾಗೂ ಆದಾಯದ ಮೂಲಕ್ಕಿಂತ ಹೆಚ್ಚು ಶ್ರೀಮಂತಿಕೆ&#8230; ಇತ್ಯಾದಿ ಪ್ರಕರಣಗಳಿರುವಾಗ! ಸರಕಾರ ವಜಾಗೊಳಿಸುವುದು ಕೊನೆಯ ಅಸ್ತ್ರ.</p>
<p>ಜಾತಿ ಲೆಕ್ಕಾಚಾರದ ರಾಜಕೀಯದಲ್ಲಿಯೇ ಅಧಿಕಾರಕ್ಕೇರಿರುವ ಮಾಯಾವತಿ, ಪ್ರಧಾನಿ ಪಟ್ಟದ ಮೇಲೂ ಕಣ್ಣಿಟ್ಟಿರುವುದು ಹೊಸ ವಿಷಯವಲ್ಲ. ಆದರೆ 2007-08ರ ಹಣಕಾಸು ವರ್ಷದಲ್ಲಿ ಈ ದಲಿತರ ನಾಯಕಿ ಕಟ್ಟಿದ ಆದಾಯ ತೆರಿಗೆ ನಮ್ಮ ಫೋರ್ಬ್ಸ್ ಪಟ್ಟಿಯಲ್ಲಿ ಹೆಸರಿರುವ ಭಾರತದ ಶ್ರೀಮಂತ ಉದ್ಯಮಿ ಅನಿಲ್ ಅಂಬಾನಿಗಿಂತಲೂ ಹೆಚ್ಚು ಎಂಬುದು ಎಷ್ಟು ಮಂದಿಗೆ ಗೊತ್ತಿದೆ?</p>
<p>ಇಲ್ಲೀಗ, ರೀಟಾ ಪ್ರಕರಣದಲ್ಲಿ ಮಾಯಾವತಿ ಕೈಗೊಂಡಿರುವ ಕ್ರಮ ಎಷ್ಟು ಸರಿ ಎಂಬ ಜಿಜ್ಞಾಸೆಗಿಂತಲೂ ಮುಖ್ಯವಾಗುವುದು ಇದೇ ರೀತಿ ದ್ವೇಷ ರಾಜಕಾರಣ ಮುಂದುವರಿದಲ್ಲಿ, ಆ ರಾಜ್ಯದಲ್ಲಿ ಪ್ರಜಾಪ್ರಭುತ್ವದ ಸ್ಥಿತಿ ಮತ್ತು ಗತಿ ಏನಾಗಬೇಡ!<br />
<a href="http://kannada.webdunia.com/newsworld/news/current/0907/16/1090716051_1.htm">(ವೆಬ್‌ದುನಿಯಾ)</a></p>
  <a rel="nofollow" href="http://feeds.wordpress.com/1.0/gocomments/avisblog.wordpress.com/254/"><img alt="" border="0" src="http://feeds.wordpress.com/1.0/comments/avisblog.wordpress.com/254/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/254/"><img alt="" border="0" src="http://feeds.wordpress.com/1.0/delicious/avisblog.wordpress.com/254/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/254/"><img alt="" border="0" src="http://feeds.wordpress.com/1.0/stumble/avisblog.wordpress.com/254/" /></a> <a rel="nofollow" href="http://feeds.wordpress.com/1.0/godigg/avisblog.wordpress.com/254/"><img alt="" border="0" src="http://feeds.wordpress.com/1.0/digg/avisblog.wordpress.com/254/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/254/"><img alt="" border="0" src="http://feeds.wordpress.com/1.0/reddit/avisblog.wordpress.com/254/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=254&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/07/17/mayawati/feed/</wfw:commentRss>
		<slash:comments>0</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>
	</item>
		<item>
		<title>ಕರ್ನಾಟಕ ಸಂಗೀತ ಸಾಮ್ರಾಜ್ಞಿ ಪಟ್ಟಮ್ಮಾಳ್ ಇನ್ನಿಲ್ಲ</title>
		<link>http://avisblog.wordpress.com/2009/07/16/%e0%b2%aa%e0%b2%9f%e0%b3%8d%e0%b2%9f%e0%b2%ae%e0%b3%8d%e0%b2%ae%e0%b2%be%e0%b2%b3%e0%b3%8d-%e0%b2%a8%e0%b2%bf%e0%b2%a7%e0%b2%a8/</link>
		<comments>http://avisblog.wordpress.com/2009/07/16/%e0%b2%aa%e0%b2%9f%e0%b3%8d%e0%b2%9f%e0%b2%ae%e0%b3%8d%e0%b2%ae%e0%b2%be%e0%b2%b3%e0%b3%8d-%e0%b2%a8%e0%b2%bf%e0%b2%a7%e0%b2%a8/#comments</comments>
		<pubDate>Thu, 16 Jul 2009 13:18:53 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/?p=250</guid>
		<description><![CDATA[ಕರ್ನಾಟಕ ಸಂಗೀತ ಸಾಮ್ರಾಜ್ಞಿ ಪಟ್ಟಮ್ಮಾಳ್ ಇನ್ನಿಲ್ಲ 
ಕರ್ನಾಟಕ ಸಂಗೀತ ಲೋಕದ ಮಹಾನ್ ಕಲಾವಿದೆ, ಪದ್ಮವಿಭೂಷಣ ಡಿ.ಕೆ.ಪಟ್ಟಮ್ಮಾಳ್ (90) ಗುರುವಾರ ಚೆನ್ನೈಯ ಕೊಟ್ಟೂರುಪುರಂನ ತಮ್ಮ ನಿವಾಸದಲ್ಲಿ ನಿಧನರಾದರು.
1919ರ ಮಾರ್ಚ್ 28ರಂದು ಕಾಂಚಿಪುರದ ಸಂಪ್ರದಾಯವಾದಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಪಟ್ಟಮ್ಮಾಳ್, ಕರ್ನಾಟಕ ಸಂಗೀತ ಲೋಕಕ್ಕೆ ಅಧಿಕಾರಯುತವಾಗಿ ಕಾಲಿರಿಸಿದ ಮೊದಲ ಮಹಿಳೆ ಎಂದು ಕರ್ನಾಟಕ ಸಂಗೀತದ ಮೇರು ಕಲಾವಿದ, ದಿವಂಗತ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಿಂದ ಕರೆಸಿಕೊಂಡಿದ್ದರು.
ಕರ್ನಾಟಕ ಸಂಗೀತದ ತ್ರಿವಳಿ ಸ್ತ್ರೀರತ್ನಗಳಲ್ಲಿ ಎಂ.ಎಸ್.ಸುಬ್ಬುಲಕ್ಷ್ಮಿ, ಎಂ.ಎಲ್.ವಸಂತಕುಮಾರಿಯವರೊಂದಿಗೆ ಸೇರಿಕೊಂಡಿದ್ದ ಪಟ್ಟಮ್ಮಾಳ್ ಅವರ ಮೂಲ ಹೆಸರು [...]<img alt="" border="0" src="http://stats.wordpress.com/b.gif?host=avisblog.wordpress.com&blog=154345&post=250&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p><a href="http://kannada.webdunia.com/newsworld/news/national/0907/16/1090716063_1.htm">ಕರ್ನಾಟಕ ಸಂಗೀತ ಸಾಮ್ರಾಜ್ಞಿ ಪಟ್ಟಮ್ಮಾಳ್ ಇನ್ನಿಲ್ಲ </a></p>
<p>ಕರ್ನಾಟಕ ಸಂಗೀತ ಲೋಕದ ಮಹಾನ್ ಕಲಾವಿದೆ, ಪದ್ಮವಿಭೂಷಣ ಡಿ.ಕೆ.ಪಟ್ಟಮ್ಮಾಳ್ (90) ಗುರುವಾರ ಚೆನ್ನೈಯ ಕೊಟ್ಟೂರುಪುರಂನ ತಮ್ಮ ನಿವಾಸದಲ್ಲಿ ನಿಧನರಾದರು.</p>
<p>1919ರ ಮಾರ್ಚ್ 28ರಂದು ಕಾಂಚಿಪುರದ ಸಂಪ್ರದಾಯವಾದಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಪಟ್ಟಮ್ಮಾಳ್, ಕರ್ನಾಟಕ ಸಂಗೀತ ಲೋಕಕ್ಕೆ ಅಧಿಕಾರಯುತವಾಗಿ ಕಾಲಿರಿಸಿದ ಮೊದಲ ಮಹಿಳೆ ಎಂದು ಕರ್ನಾಟಕ ಸಂಗೀತದ ಮೇರು ಕಲಾವಿದ, ದಿವಂಗತ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಿಂದ ಕರೆಸಿಕೊಂಡಿದ್ದರು.</p>
<p>ಕರ್ನಾಟಕ ಸಂಗೀತದ ತ್ರಿವಳಿ ಸ್ತ್ರೀರತ್ನಗಳಲ್ಲಿ ಎಂ.ಎಸ್.ಸುಬ್ಬುಲಕ್ಷ್ಮಿ, ಎಂ.ಎಲ್.ವಸಂತಕುಮಾರಿಯವರೊಂದಿಗೆ ಸೇರಿಕೊಂಡಿದ್ದ ಪಟ್ಟಮ್ಮಾಳ್ ಅವರ ಮೂಲ ಹೆಸರು ಅಲಮೇಲು. 65 ವರ್ಷಗಳ ಕಾಲ ಕರ್ನಾಟಕ ಸಂಗೀತದಲ್ಲಿ ತಮ್ಮ ಛಾಪು ಮೂಡಿಸಿದ ಪಟ್ಟಮ್ಮಾಳ್, 10 ಹರೆಯದಲ್ಲೇ ಮೊದಲ ಬಾರಿಗೆ ರೇಡಿಯೋದಲ್ಲಿ (ಅಂದಿನ ಮದ್ರಾಸ್ ಕಾರ್ಪೊರೇಶನ್ ರೇಡಿಯೋ, ಈಗ ಆಲ್ ಇಂಡಿಯಾ ರೇಡಿಯೋ) ಕಛೇರಿ ನೀಡಿದ್ದರು. ಮೂರು ವರ್ಷದ ಬಳಿಕ ಅಂದರೆ 1932ರಲ್ಲಿ ಅವರು ಮದ್ರಾಸ್ ರಸಿಕ ರಂಜನಿ ಸಭಾದಲ್ಲಿ ಮೊದಲ ಸಾರ್ವಜನಿಕ ಕಛೇರಿ ನೀಡಿದರು.</p>
<p>ಕರ್ನಾಟಕ ಸಂಗೀತದಲ್ಲಿ ಅತ್ಯಂತ ಕ್ಲಿಷ್ಟಕರವಾಗಿದ್ದ &#8220;ರಾಗಂ, ತಾನಂ, ಪಲ್ಲವಿ&#8221;ಯನ್ನು ಸಂಗೀತ ಕಛೇರಿಗಳಲ್ಲಿ ಬಳಸಿದ ಮೊದಲ ಮಹಿಳಾರತ್ನ ಎಂಬ ಹೆಗ್ಗಳಿಕೆಯೂ ಪಟ್ಟಮ್ಮಾಳ್ ಅವರಿಗಿದೆ. (ವೆಬ್‌ದುನಿಯಾ)</p>
  <a rel="nofollow" href="http://feeds.wordpress.com/1.0/gocomments/avisblog.wordpress.com/250/"><img alt="" border="0" src="http://feeds.wordpress.com/1.0/comments/avisblog.wordpress.com/250/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/250/"><img alt="" border="0" src="http://feeds.wordpress.com/1.0/delicious/avisblog.wordpress.com/250/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/250/"><img alt="" border="0" src="http://feeds.wordpress.com/1.0/stumble/avisblog.wordpress.com/250/" /></a> <a rel="nofollow" href="http://feeds.wordpress.com/1.0/godigg/avisblog.wordpress.com/250/"><img alt="" border="0" src="http://feeds.wordpress.com/1.0/digg/avisblog.wordpress.com/250/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/250/"><img alt="" border="0" src="http://feeds.wordpress.com/1.0/reddit/avisblog.wordpress.com/250/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=250&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/07/16/%e0%b2%aa%e0%b2%9f%e0%b3%8d%e0%b2%9f%e0%b2%ae%e0%b3%8d%e0%b2%ae%e0%b2%be%e0%b2%b3%e0%b3%8d-%e0%b2%a8%e0%b2%bf%e0%b2%a7%e0%b2%a8/feed/</wfw:commentRss>
		<slash:comments>2</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>
	</item>
		<item>
		<title>ವಿಶ್ವದ ಅತ್ಯಂತ ಹಿರಿಯ ಬ್ಲಾಗರ್‌ನಿಂದ ಕನ್ನಡಕ್ಕೆ ಕಾಮೆಂಟ್!</title>
		<link>http://avisblog.wordpress.com/2009/07/08/butisinghcomment/</link>
		<comments>http://avisblog.wordpress.com/2009/07/08/butisinghcomment/#comments</comments>
		<pubDate>Wed, 08 Jul 2009 04:24:42 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/?p=248</guid>
		<description><![CDATA[ವಿಶ್ವದ ಅತ್ಯಂತ ಹಿರಿಯ ಬ್ಲಾಗರ್ ಎಂಬ ಹೆಗ್ಗಳಿಕೆಯುಳ್ಳ ಬೂಟಿ ಸಿಂಗ್ ಬಗ್ಗೆ ಕಳೆದ ವರ್ಷದ ಜೂನ್ 28ರಂದು ಒಂದು ಪೋಸ್ಟ್ ಹಾಕಿದ್ದೆ. ಹೆಚ್ಚಿನವರು ಓದಿರಲಿಕ್ಕಿಲ್ಲ. ಆ ಲೇಖನದ ಲಿಂಕ್ ಇಲ್ಲಿದೆ.
ಅವರು ಅದು ಹೇಗೋ ಹುಡುಕಿಕೊಂಡು ಬಂದು ನನ್ನ ಬ್ಲಾಗಿಗೂ ಕಾಮೆಂಟ್ ಹಾಕಿದ್ದಾರೆ. ಅದಕ್ಕಾಗಿ ಈ ದಿನ ಖುಷಿ.
ಅವರು ಹುಟ್ಟಿದ್ದು ಗಯಾನದ ಬಕ್ಸ್‌ಟನ್‌ನಲ್ಲಿ. ಭಾರತದಿಂದ ವಲಸೆ ಹೋದ ಕುಟುಂಬಕ್ಕೆ ಸೇರಿದವರಾಗಿದ್ದರೂ, ಎಂದಿಗೂ ಭಾರತಕ್ಕೆ ಭೇಟಿ ನೀಡಿಲ್ಲವಂತೆ. ಮಹಾತ್ಮಗಾಂಧಿಯ ಪರಮ ಅನುಯಾಯಿ. ಮಹಾತ್ಮ ಗಾಂಧಿ ಮೃತಪಟ್ಟಾಗ ಕಣ್ಣೀರಿಟ್ಟಿದ್ದರಂತೆ.
ಹೆಲೆನ್ ಕೆಲ್ಲರ್ ಜೀವನದಿಂದ [...]<img alt="" border="0" src="http://stats.wordpress.com/b.gif?host=avisblog.wordpress.com&blog=154345&post=248&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p>ವಿಶ್ವದ ಅತ್ಯಂತ ಹಿರಿಯ ಬ್ಲಾಗರ್ ಎಂಬ ಹೆಗ್ಗಳಿಕೆಯುಳ್ಳ ಬೂಟಿ ಸಿಂಗ್ ಬಗ್ಗೆ ಕಳೆದ ವರ್ಷದ ಜೂನ್ 28ರಂದು ಒಂದು ಪೋಸ್ಟ್ ಹಾಕಿದ್ದೆ. ಹೆಚ್ಚಿನವರು ಓದಿರಲಿಕ್ಕಿಲ್ಲ. <a href="http://avisblog.wordpress.com/2008/06/28/butisingh/">ಆ ಲೇಖನದ ಲಿಂಕ್ ಇಲ್ಲಿದೆ.</a></p>
<p>ಅವರು ಅದು ಹೇಗೋ ಹುಡುಕಿಕೊಂಡು ಬಂದು ನನ್ನ ಬ್ಲಾಗಿಗೂ ಕಾಮೆಂಟ್ ಹಾಕಿದ್ದಾರೆ. ಅದಕ್ಕಾಗಿ ಈ ದಿನ ಖುಷಿ.</p>
<p>ಅವರು ಹುಟ್ಟಿದ್ದು ಗಯಾನದ ಬಕ್ಸ್‌ಟನ್‌ನಲ್ಲಿ. ಭಾರತದಿಂದ ವಲಸೆ ಹೋದ ಕುಟುಂಬಕ್ಕೆ ಸೇರಿದವರಾಗಿದ್ದರೂ, ಎಂದಿಗೂ ಭಾರತಕ್ಕೆ ಭೇಟಿ ನೀಡಿಲ್ಲವಂತೆ. ಮಹಾತ್ಮಗಾಂಧಿಯ ಪರಮ ಅನುಯಾಯಿ. ಮಹಾತ್ಮ ಗಾಂಧಿ ಮೃತಪಟ್ಟಾಗ ಕಣ್ಣೀರಿಟ್ಟಿದ್ದರಂತೆ.</p>
<p>ಹೆಲೆನ್ ಕೆಲ್ಲರ್ ಜೀವನದಿಂದ ಪ್ರಭಾವಿತರಾಗಿ ಮೂರು ಕವನ ಸಂಕಲನ ಹೊರತಂದಿದ್ದಾರೆ. 96ರಲ್ಲೂ ಬತ್ತದ ಜೀವನೋತ್ಸಾಹ. ಹಿಂದಿ, ಉರ್ದು ಚೆನ್ನಾಗಿ ಗೊತ್ತಿದೆ. ಅದ್ಭುತ ಎನಿಸಬಹುದಾದ ಭಾಷಾ ಪ್ರೇಮಿ ಅವರು.<br />
ಹೆಚ್ಚು ಹೇಳಿದರೆ ಅವರ ಬಗೆಗೆ ನಿಮ್ಮ ಅನಿಸಿಕೆಗಳು ಡೈವರ್ಟ್ ಆಗಲೂ ಬಹುದು. ಹೀಗಾಗಿ ನೀವೇ ನೋಡಿಬಿಡಿ. ಬ್ಲಾಗಿನ URL ಇಲ್ಲಿದೆ: <a href="http://randallbutisingh.wordpress.com/">http://randallbutisingh.wordpress.com/</a></p>
  <a rel="nofollow" href="http://feeds.wordpress.com/1.0/gocomments/avisblog.wordpress.com/248/"><img alt="" border="0" src="http://feeds.wordpress.com/1.0/comments/avisblog.wordpress.com/248/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/248/"><img alt="" border="0" src="http://feeds.wordpress.com/1.0/delicious/avisblog.wordpress.com/248/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/248/"><img alt="" border="0" src="http://feeds.wordpress.com/1.0/stumble/avisblog.wordpress.com/248/" /></a> <a rel="nofollow" href="http://feeds.wordpress.com/1.0/godigg/avisblog.wordpress.com/248/"><img alt="" border="0" src="http://feeds.wordpress.com/1.0/digg/avisblog.wordpress.com/248/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/248/"><img alt="" border="0" src="http://feeds.wordpress.com/1.0/reddit/avisblog.wordpress.com/248/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=248&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/07/08/butisinghcomment/feed/</wfw:commentRss>
		<slash:comments>3</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>
	</item>
		<item>
		<title>ಸಿಂಗ್-ಜರ್ದಾರಿ ಭೇಟಿ: ಅಮೆರಿಕ &#8216;ಒತ್ತಡ&#8217; ತಂತ್ರದ ಫಲವೇ?</title>
		<link>http://avisblog.wordpress.com/2009/06/20/indo-pak-us/</link>
		<comments>http://avisblog.wordpress.com/2009/06/20/indo-pak-us/#comments</comments>
		<pubDate>Sat, 20 Jun 2009 07:20:42 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/?p=246</guid>
		<description><![CDATA[ಇತ್ತೀಚಿನ ಕೆಲವೊಂದು ವಿದ್ಯಮಾನಗಳತ್ತ ಕಣ್ಣೋಟ ಹಾಯಿಸಿದರೆ, ಅಮೆರಿಕವು ಒಮ್ಮೆ ಭಾರತದತ್ತ, ಮಗದೊಮ್ಮೆ ಪಾಕಿಸ್ತಾನದತ್ತ ವಾಲುತ್ತಾ, ಈ ಜಾಗತಿಕ ಆರ್ಥಿಕ ಸಂಕಷ್ಟ ದಿನಗಳಲ್ಲಿಯೂ ಜಗತ್ತಿನ ಪ್ರಬಲ ಶಕ್ತಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತವನ್ನು ಅಸ್ಥಿರಗೊಳಿಸಲು ಒಳಗಿಂದೊಳಗೆಯೇ ಕಾರ್ಯತಂತ್ರ ರೂಪಿಸುತ್ತಿದೆಯೇ ಎಂಬ ಬಗ್ಗೆ ಶಂಕೆ ಮೂಡುತ್ತಿವುದು ಸಹಜ.
ಇದಕ್ಕೆ ಕಾರಣವೂ ಇಲ್ಲದಿಲ್ಲ. ಅಮೆರಿಕದ ಆರ್ಥಿಕ ಸ್ಥಿತಿ ಸಪಾಟಾಗಿ ಹೋಗಿದೆ. ಅಲ್ಲಿನ ಕಂಪನಿಗಳ ಲಾಭಕೋರ ಮನಸ್ಥಿತಿಯಿಂದ, ಸ್ವಯಂಕೃತಾಪರಾಧದಿಂದಾಗಿ ಆರ್ಥಿಕ ಸಂಕಷ್ಟವು ಅಮೆರಿಕಕ್ಕೆ, ಆ ಮೂಲಕ ವಿಶ್ವಕ್ಕೇ ಹಂದಿ ಜ್ವರದ ವೈರಸ್ ರೀತಿ ಹರಡಿ ಅಲ್ಲೋಲ [...]<img alt="" border="0" src="http://stats.wordpress.com/b.gif?host=avisblog.wordpress.com&blog=154345&post=246&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p>ಇತ್ತೀಚಿನ ಕೆಲವೊಂದು ವಿದ್ಯಮಾನಗಳತ್ತ ಕಣ್ಣೋಟ ಹಾಯಿಸಿದರೆ, ಅಮೆರಿಕವು ಒಮ್ಮೆ ಭಾರತದತ್ತ, ಮಗದೊಮ್ಮೆ ಪಾಕಿಸ್ತಾನದತ್ತ ವಾಲುತ್ತಾ, ಈ ಜಾಗತಿಕ ಆರ್ಥಿಕ ಸಂಕಷ್ಟ ದಿನಗಳಲ್ಲಿಯೂ ಜಗತ್ತಿನ ಪ್ರಬಲ ಶಕ್ತಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತವನ್ನು ಅಸ್ಥಿರಗೊಳಿಸಲು ಒಳಗಿಂದೊಳಗೆಯೇ ಕಾರ್ಯತಂತ್ರ ರೂಪಿಸುತ್ತಿದೆಯೇ ಎಂಬ ಬಗ್ಗೆ ಶಂಕೆ ಮೂಡುತ್ತಿವುದು ಸಹಜ.</p>
<p>ಇದಕ್ಕೆ ಕಾರಣವೂ ಇಲ್ಲದಿಲ್ಲ. ಅಮೆರಿಕದ ಆರ್ಥಿಕ ಸ್ಥಿತಿ ಸಪಾಟಾಗಿ ಹೋಗಿದೆ. ಅಲ್ಲಿನ ಕಂಪನಿಗಳ ಲಾಭಕೋರ ಮನಸ್ಥಿತಿಯಿಂದ, ಸ್ವಯಂಕೃತಾಪರಾಧದಿಂದಾಗಿ ಆರ್ಥಿಕ ಸಂಕಷ್ಟವು ಅಮೆರಿಕಕ್ಕೆ, ಆ ಮೂಲಕ ವಿಶ್ವಕ್ಕೇ ಹಂದಿ ಜ್ವರದ ವೈರಸ್ ರೀತಿ ಹರಡಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಅಮೆರಿಕ ಯಾವ ಪರಿ ಹೊಡೆತ ತಿಂದಿದೆಯೆಂದರೆ, ಅಲ್ಲಿ ಸಾವಿರಾರು ಜನ ಬೀದಿಗೆ ಬಿದ್ದಿದ್ದಾರೆ. ವಿಶ್ವದ ಹಿರಿಯಣ್ಣ ಎಂಬ ಪಟ್ಟವಂತೂ ಕುಸಿದು ಬಿದ್ದು ನರಳಾಡುತ್ತಿದೆ.</p>
<p>ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರಿಗೆ ಇದರ ಅರಿವಿದೆ. ಅಂತೆಯೇ, ತಮ್ಮ ರಾಷ್ಟ್ರಕ್ಕೆ ಈ ಪರಿ ಹೊಡೆತ ಬಿದ್ದರೂ ಚೀನಾ ಮತ್ತು ಭಾರತಗಳು ಎದೆ ಸೆಟೆದು ನಿಂತಿರುವುದನ್ನು ನೋಡುವುದು ಅಮೆರಿಕಕ್ಕೆ ಆಗುತ್ತಿಲ್ಲ. ಹೀಗಾಗಿ, ಏನಾದರೂ ಮಾಡಿ ಈ ಉಪಖಂಡದ ಬೆಳವಣಿಗೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಅಮೆರಿಕವೂ ಕಾರ್ಯತಂತ್ರ ಹೆಣೆಯುತ್ತಿದೆಯೇ ಎಂಬ ಪ್ರಶ್ನಾರ್ಥಕ ಚಿಹ್ನೆ ದಪ್ಪವಾಗಿಯೇ ಎದ್ದುಗಾಣುತ್ತಿರುವುದು ಸುಳ್ಳಲ್ಲ.</p>
<p>ಒಂದು ಬಾರಿ ಹಿಂದೆ ತಿರುಗಿ ನೋಡಿ. ಇತ್ತೀಚೆಗೆ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಬಾಯಿಂದ ದಿಟ್ಟ ನಿರ್ಧಾರವೊಂದು ಬಂದಿತ್ತು. ಪಾಕಿಸ್ತಾನವು ಭಾರತವಿರೋಧಿ ಭಯೋತ್ಪಾದಕ ಬಣಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮತ್ತಷ್ಟು ನಿಖರ ಸಾಕ್ಷ್ಯಾಧಾರ ದೊರೆಯದ ಹೊರತು, 26/11 ಮುಂಬೈ ದಾಳಿ ಬಳಿಕ ನಿಂತು ಹೋಗಿದ್ದ ಶಾಂತಿ ಮಾತುಕತೆ ಮುಂದುವರಿಕೆಯ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಘೋಷಿಸಿದ್ದರವರು.</p>
<p>ಮೊನ್ನೆ ಮೊನ್ನೆ ಅಮೆರಿಕದ ವಿದೇಶಾಂಗ ಅಧೀನ ಕಾರ್ಯದರ್ಶಿ ವಿಲಿಯಂ ಬರ್ನ್ಸ್ ಭಾರತಕ್ಕೆ ಬಂದಿದ್ದರಲ್ಲ, ಅವರು ಬಂದು, ನಮ್ಮ ಪ್ರಧಾನಿ ಕೈಗೆ ಕೊಟ್ಟ &#8216;ಒಬಾಮ ಸಂದೇಶ&#8217; ಪತ್ರದಲ್ಲಿ ಏನಿದ್ದಿರಬಹುದು ಎಂಬ ಕುತೂಹಲವೇ ಭಾರತೀಯ ಸುದ್ದಿ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದನ್ನು ನಮ್ಮ ಪ್ರಿಯ ಓದುಗರೂ ಗಮನಿಸಿದ್ದಿರಬಹುದು. ಅದರಲ್ಲಿ &#8216;ಪಾಕಿಸ್ತಾನ ಜೊತೆಗೆ ಮಾತುಕತೆ ಮುಂದುವರಿಸಿ&#8217; ಎಂಬ ಒತ್ತಡ ತಂತ್ರವೂ ಒಳಗೊಂಡಿತ್ತೇ ಎಂಬ ಬಗ್ಗೆ ಕೇಂದ್ರವೂ ಬಾಯಿ ಬಿಡುತ್ತಿಲ್ಲ. ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಹೇಳುವ ಪ್ರಕಾರ, ಅದರಲ್ಲಿ ಕೆಲವೊಂದು &#8220;ಸಲಹೆ&#8221;ಗಳಿದ್ದವು. ಯಾವುದೇ ಒತ್ತಡ ಇರಲಿಲ್ಲವಂತೆ.</p>
<p>ಆ ಬಳಿಕದ ಬೆಳವಣಿಗೆ, ರಷ್ಯಾದಲ್ಲಿ ನಡೆದ ಬ್ರಿಕ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾಗಳ ಮೊದಲಕ್ಷರ) ರಾಷ್ಟ್ರಗಳ ಸಮಾವೇಶದ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಪಾಕ್ ಅಧ್ಯಕ್ಷ ಜರ್ದಾರಿ ಕೈಕುಲುಕಾಟದ ಭೇಟಿ! ಮತ್ತೆ, ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು, ಹೋರಾಡಲು ಪಾಕಿಸ್ತಾನವು ಸಮಯಾವಕಾಶ ಕೇಳಿರುವುದರಿಂದ ನಾವು ಅದಕ್ಕೆ ಅವಕಾಶ ಕೊಟ್ಟಿದ್ದೇವೆ ಎಂದು ಬುಧವಾರ ಸಿಂಗ್ ರಷ್ಯಾದಿಂದ ಮರಳುವ ಹಾದಿಯಲ್ಲಿ ಘೋಷಿಸಿಬಿಟ್ಟಿದ್ದಾರೆ.</p>
<p>ಮಾತುಕತೆಯೇ ಇಲ್ಲ ಎಂದವರ ನಿಲುವು ಮೃದುವಾಯಿತೇ? ಎಂಬ ಶಂಕೆಗೂ ಕಾರಣವಿದೆ. ಸಿಂಗ್-ಜರ್ದಾರಿ ಮೊನ್ನೆ ಮಾತನಾಡಿದರು. ಮುಂದಿನ ತಿಂಗಳು ಈಜಿಪ್ಟ್‌ನಲ್ಲಿ ನಡೆಯುವ ಅಲಿಪ್ತ ರಾಷ್ಟ್ರಗಳ ಸಮಾವೇಶದ ಪಾರ್ಶ್ವದಲ್ಲಿ ಮತ್ತೊಮ್ಮೆ ಭೇಟಿಯಾಗಲು ಇಬ್ಬರೂ ನಿರ್ಧರಿಸಿದ್ದಾರೆ, ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಯೂ ರಷ್ಯಾದಲ್ಲಿ ನಡೆದಿದ್ದು, ಅದು ಕೂಡ ಮುಂದುವರಿಯಲಿದೆ. ಇದು ಭಾರತ-ಪಾಕ್ ನಡುವಣ ಶಾಂತಿ ಮಾತುಕತೆಯ ಮುಂದುವರಿಕೆಯೇ ಅಲ್ಲವೇ? ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ನೀಡಿದ ಉತ್ತರ &#8216;ಅಲ್ಲ&#8217;. ಪಾಕಿಸ್ತಾನ ಏನು ಮಾಡಿದೆ, ನಾವೇನು ಮಾಡಬಹುದು ಎಂಬುದರ ಕುರಿತು ಮಾಹಿತಿ ವಿನಿಮಯ ಮಾತ್ರವಂತೆ.</p>
<p>2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಬಳಿಕ ಭಾರತ ಕಷ್ಟಪಟ್ಟು ಸಂಗ್ರಹಿಸಿದ್ದ ಸ್ಪಷ್ಟ ಸಾಕ್ಷ್ಯಾಧಾರಗಳನ್ನೆಲ್ಲಾ ಪಾಕಿಸ್ತಾನವು, ಒಪ್ಪಿಕೊಳ್ಳುವಂತೆ ಜಾಗತಿಕ ಒತ್ತಡದ ಹೊರತಾಗಿಯೂ, &#8216;ಇದು ಸಾಕಾಗುವುದಿಲ್ಲ&#8217; ಎಂದು ಝಾಡಿಸಿ ಒದ್ದುಬಿಡುವಷ್ಟರ ಮಟ್ಟಕ್ಕೆ ತಲೆ ಎತ್ತಿ ನಿಂತದ್ದು ಹೇಗೆ? ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಒಬಾಮ ನಡುವೆ ನಡೆದ ಮಾತುಕತೆಯ ಫಲಶ್ರುತಿ ಇದು ಆಗಿರಬಹುದೇ?</p>
<p>ಭಾರತದ ಬಳಿ ದಿಟ್ಟವಾದ, ಬಲವಾದ ಸಾಕ್ಷ್ಯಾಧಾರಗಳಿವೆ. ಹೀಗಾಗಿ, ಮೊನ್ನೆ ಮೊನ್ನೆಯಷ್ಟೇ ರಚನೆಗೊಂಡ ಯುಪಿಎ-II ಸರಕಾರವು, &#8220;ಪಾಕಿಸ್ತಾನ ಭಯೋತ್ಪಾದನೆ ನಿಲ್ಲಿಸದೆ ಮಾತುಕತೆಯೇ ಇಲ್ಲ&#8221; ಎಂದು ಸ್ಪಷ್ಟ ಶಬ್ದಗಳಲ್ಲಿ ಉಚ್ಚರಿಸಿತ್ತು. ಇದು ಪಾಕಿಸ್ತಾನವನ್ನು ಕಂಗೆಡಿಸಿತು. ಅಮೆರಿಕಕ್ಕೆ ದೂರು ಹೋಗಿದ್ದಿರಲೂಬಹುದು. ಕಾಶ್ಮೀರ ವಿವಾದ ಪ್ರಸ್ತಾಪಿಸಿ, ಉಭಯ ರಾಷ್ಟ್ರಗಳ ನಡುವೆ ಕಾಶ್ಮೀರ ವಿವಾದವೇ ದೊಡ್ಡ ಅಡ್ಡಿ ಎಂದು ಈ ಸಮಸ್ಯೆಯನ್ನು ಅಂತಾರಾಷ್ಟ್ರೀಕರಣಗೊಳಿಸಲು ಮತ್ತೊಮ್ಮೆ ಪ್ರಯತ್ನವನ್ನೂ ಪಾಕ್ ಮಾಡಿತು.</p>
<p>ಭಾರತ ಈ ಬಾರಿ ಬಿಡುವುದಿಲ್ಲ ಎಂಬುದು ಬಹುಶಃ ಅಮೆರಿಕಕ್ಕೂ ಮನದಟ್ಟಾಗಿದ್ದಿರಬಹುದು. ತನ್ನ ಬಳಿ ಬೇರೆ ದೇಶಗಳಿಗೆ ಉದಾರ &#8216;ನೆರವು&#8217; ನೀಡುವಷ್ಟು ನಿಧಿ ಇಲ್ಲ ಎಂಬ ಅರಿವಿದ್ದರೂ, ಪಾಕಿಸ್ತಾನದಲ್ಲಿ ತಾಲಿಬಾನ್, ಅಲ್ ಖಾಯಿದಾ ಮುಂತಾದ ಅದೆಷ್ಟೋ ರಾಶಿ ರಾಶಿ ಉಗ್ರರನ್ನು ಮಟ್ಟ ಹಾಕಲು ಪಡೆಗಳನ್ನು ಮತ್ತು ಹಣಕಾಸು ಪ್ಯಾಕೇಜ್‌ಗಳನ್ನು ಕೂಡ ಘೋಷಿಸತೊಡಗಿತು. ಅಂದರೆ ಮುಂದಿನ ಐದು ವರ್ಷಗಳ ಕಾಲ ಪಾಕಿಸ್ತಾನಕ್ಕೆ ವಾರ್ಷಿಕವಾಗಿ ಒಂದೂವರೆ ಶತಕೋಟಿ ಡಾಲರ್ ಹಣ! (ಪಾಕಿಸ್ತಾನ ಜೊತೆಗೆ ಸಂವರ್ಧಿತ ಪಾಲುದಾರಿಕೆ ಕಾಯ್ದೆ, ಇದು ಸೆನೆಟರ್‌ಗಳಾದ ಜಾನ್ ಎಫ್.ಕೆರಿ ಮತ್ತು ರಿಚರ್ಡ್ ಲೂಗರ್ ಸಿದ್ಧಪಡಿಸಿರುವುದರಿಂದ ಕೆರಿ-ಲೂಗರ್ ಕಾಯ್ದೆ ಎಂಬ ಹೆಸರೂ ಇದೆ). ಒಂದು ಮಾಹಿತಿಯ ಪ್ರಕಾರ, ಅಮೆರಿಕವು ಪಾಕಿಸ್ತಾನಕ್ಕೆ ಈಗಾಗಲೇ 3.2 ಶತಕೋಟಿ ಡಾಲರ್ ನೆರವು ರವಾನಿಸಿ ಆಗಿದೆ.</p>
<p>ಅದೆಲ್ಲ ಒತ್ತಟ್ಟಿಗಿರಲಿ. ಭಾರತ-ಪಾಕ್ ನಡುವೆ ಶಾಂತಿ ನೆಲಸುವುದು ಅಮೆರಿಕಕ್ಕೆ ಬೇಕಿಲ್ಲ. ಶಾಂತಿ ನೆಲೆಸಿದ್ದೇ ಆದಲ್ಲಿ, ಭಾರತವಂತೂ ವಿಶ್ವ ಶಕ್ತಿಯಾಗಿ ರೂಪುಗೊಳ್ಳುತ್ತದೆ. ಈ ಸಂಭಾವ್ಯ ರಾಜತಾಂತ್ರಿಕ ಒಗ್ಗಟ್ಟಿನ ಬಲವನ್ನು ಮೂಲದಲ್ಲೇ ಚಿವುಟಬೇಕಿದ್ದರೆ ಇಂಥ ರಾಜಕೀಯ ಆಟಗಳನ್ನು ಆಡಲೇಬೇಕು ಎಂಬುದು ಅಮೆರಿಕಕ್ಕೆ ತಿಳಿದಿದೆ ಎಂಬ ವಾದಕ್ಕೆ ಹುರುಳಿಲ್ಲದಿಲ್ಲ.</p>
<p>ಭಾರತದ ಧ್ವನಿ ಜೋರಾಗುತ್ತಿದೆ ಎಂದಾದಾಗ ಪಾಕಿಸ್ತಾನವು ಒಮ್ಮೆ ತಾಲಿಬಾನ್ ಜೊತೆ ಶಾಂತಿ ಒಪ್ಪಂದ ನಡೆಸಿ ಗಮನ ಬೇರೆಡೆ ಸೆಳೆದರೆ, ಮತ್ತೊಂದು ಬಾರಿ ತಾಲಿಬಾನ್ ಮೇಲೆ ಮುಗಿಬೀಳುವುದಾಗಿ ಘೋಷಿಸುತ್ತಿದೆ. ಒಮ್ಮೆ ಜಮಾತ್ ಉದ್ ದಾವಾ ಮುಖ್ಯಸ್ಥ, ಮುಂಬೈಯ ಪ್ರಧಾನ ಸಂಚುಕೋರ ಹಫೀಸ್ ಸಯೀದ್ ಮತ್ತಿತರ ಉಗ್ರರನ್ನು ಬಂಧಿಸುತ್ತದೆ, ಬಳಿಕ ಬಿಡುಗಡೆ ಮಾಡುತ್ತದೆ. ಸಹಾಯ ಮಾಡೀ ಎಂದು ಅಮೆರಿಕದೆದುರು ಹೋಗಿ ಕೈ-ಬಾಯಿ ಬಿಟ್ಟು ನಿಲ್ಲುತ್ತದೆ. ಅಲ್ಲಿಗೆ ಮುಂಬೈ ದಾಳಿ ಎಂಬ ವಿಷಯದ ಸದ್ದು ಮೂಲೆಗೆ ಸರಿಯುತ್ತದೆ. ಭಾರತವು ಮುಂಬೈ ದಾಳಿ ವಿಷಯ ಎತ್ತಿದಾಗಲೆಲ್ಲಾ, ಪಾಕಿಸ್ತಾನವು &#8220;ನಾವು ಕೂಡ ಭಯೋತ್ಪಾದನೆ-ಪೀಡಿತರು, ತಾಲಿಬಾನ್‌ಗಳು ನಮಗೆ ತೀರಾ ಕಿರಿಕಿರಿ ಮಾಡುತ್ತಿದ್ದಾರೆ&#8221; ಎನ್ನುತ್ತಾ, ವಿಷಯಾಂತರ ಮಾಡುತ್ತಲೇ ಇದೆ, ಅದರಲ್ಲಿ ಯಶಸ್ವಿಯೂ ಆಗುತ್ತಿದೆ.</p>
<p>ಅತ್ತ ಅಮೆರಿಕವೂ ಕೂಡ, ತಾಲಿಬಾನ್, ಅಲ್ ಖಾಯಿದಾ ಮೇಲೆ ಕ್ರಮ ಕೈಗೊಳ್ಳಿ, ಇಲ್ಲವಾದಲ್ಲಿ ನಾವೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಒಮ್ಮೆ ಎಚ್ಚರಿಕೆಯ ಗಂಟೆ ಬಾರಿಸುತ್ತದೆ. ಆ ಮಾತು ಮುಗಿಸುವ ಮುನ್ನವೇ ಪಾಕಿಸ್ತಾನದ ಬಗ್ಗೆ ಮೃದು ನಿಲುವು ತಳೆದು, ಸಹಾಯಧನ, ನೆರವಿನ ಮಹಾಪೂರ ಹರಿಸುತ್ತಾ, ಭಾರತವು ನೇರಾನೇರ ಎಗರಿಬೀಳದಂತೆ ನೋಡಿಕೊಳ್ಳುತ್ತದೆ. ಪಾಕಿಸ್ತಾನ ಹಾಗೂ ಈ ಅಮೆರಿಕದ ದ್ವಂದ್ವ ನಿಲುವುಗಳ ಬಗ್ಗೆ ಯುಪಿಎ ಸರಕಾರ ಎಚ್ಚೆತ್ತುಕೊಂಡೀತೇ? ಯಾವುದೇ ಕಾರಣಕ್ಕೂ ಮುಂಬೈ ದಾಳಿಯ ಸಂಚುಕೋರರು ಪಾಕಿಸ್ತಾನದಲ್ಲಿದ್ದಾರೆ ಎಂಬ ಅಂಶದಿಂದ ವಿಷಯಾಂತರ ಮಾಡದಂತೆ ನೋಡಿಕೊಳ್ಳಬೇಕಾಗಿದೆ. </p>
<p>ಮುಂಬೈ ದಾಳಿ ನಡೆದು ಏಳೆಂಟು ತಿಂಗಳುಗಳೇ ಕಳೆದರೂ, ಪಾಕಿಸ್ತಾನಿ ಮೂಲದ ಸಂಚುಕೋರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಒತ್ತಡ ಹೇರಲು ಭಾರತ ಸರಕಾರ ವಿಫಲವಾಗಿದೆಯಲ್ಲಾ ಎಂದು ಭಾರತೀಯರಂತೂ ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾರೆ.</p>
<p>ಇದು ನಮ್ಮನ್ನಾಳುವವರಿಗೆ ಕೇಳಿಸುತ್ತದೆಯೇ?<br />
<a href="http://kannada.webdunia.com/newsworld/news/current/0906/17/1090617108_1.htm">(ವೆಬ್‌ದುನಿಯಾ)</a></p>
  <a rel="nofollow" href="http://feeds.wordpress.com/1.0/gocomments/avisblog.wordpress.com/246/"><img alt="" border="0" src="http://feeds.wordpress.com/1.0/comments/avisblog.wordpress.com/246/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/246/"><img alt="" border="0" src="http://feeds.wordpress.com/1.0/delicious/avisblog.wordpress.com/246/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/246/"><img alt="" border="0" src="http://feeds.wordpress.com/1.0/stumble/avisblog.wordpress.com/246/" /></a> <a rel="nofollow" href="http://feeds.wordpress.com/1.0/godigg/avisblog.wordpress.com/246/"><img alt="" border="0" src="http://feeds.wordpress.com/1.0/digg/avisblog.wordpress.com/246/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/246/"><img alt="" border="0" src="http://feeds.wordpress.com/1.0/reddit/avisblog.wordpress.com/246/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=246&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/06/20/indo-pak-us/feed/</wfw:commentRss>
		<slash:comments>0</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>
	</item>
		<item>
		<title>ವಿರೋಧಿಗಳನ್ನು ನಿರುತ್ತರರಾಗಿಸೋದು ಹೇಗೆ?</title>
		<link>http://avisblog.wordpress.com/2009/06/10/%e0%b2%b5%e0%b2%bf%e0%b2%b0%e0%b3%8b%e0%b2%a7%e0%b2%bf%e0%b2%97%e0%b2%b3%e0%b2%a8%e0%b3%8d%e0%b2%a8%e0%b3%81-%e0%b2%a8%e0%b2%bf%e0%b2%b0%e0%b3%81%e0%b2%a4%e0%b3%8d%e0%b2%a4%e0%b2%b0%e0%b2%b0%e0%b2%be/</link>
		<comments>http://avisblog.wordpress.com/2009/06/10/%e0%b2%b5%e0%b2%bf%e0%b2%b0%e0%b3%8b%e0%b2%a7%e0%b2%bf%e0%b2%97%e0%b2%b3%e0%b2%a8%e0%b3%8d%e0%b2%a8%e0%b3%81-%e0%b2%a8%e0%b2%bf%e0%b2%b0%e0%b3%81%e0%b2%a4%e0%b3%8d%e0%b2%a4%e0%b2%b0%e0%b2%b0%e0%b2%be/#comments</comments>
		<pubDate>Wed, 10 Jun 2009 07:22:31 +0000</pubDate>
		<dc:creator>Avinash</dc:creator>
				<category><![CDATA[myworld]]></category>

		<guid isPermaLink="false">http://avisblog.wordpress.com/2009/06/10/%e0%b2%b5%e0%b2%bf%e0%b2%b0%e0%b3%8b%e0%b2%a7%e0%b2%bf%e0%b2%97%e0%b2%b3%e0%b2%a8%e0%b3%8d%e0%b2%a8%e0%b3%81-%e0%b2%a8%e0%b2%bf%e0%b2%b0%e0%b3%81%e0%b2%a4%e0%b3%8d%e0%b2%a4%e0%b2%b0%e0%b2%b0%e0%b2%be/</guid>
		<description><![CDATA[ಗಾಂಧಿಗಿರಿ ಬಗ್ಗೆ ಕೇಳಿದ್ದೀರಿ. ಎದುರಾಳಿಯನ್ನು ಮತ್ತು ವಿರೋಧಿಸುವವರನ್ನು ಪ್ರೀತಿಯಿಂದಲೇ ಗೆಲ್ಲುವುದು ಹೇಗೆಂಬುದು ಈ ಗಾಂಧಿಗಿರಿಯ ಹಿಂದಿನ ಮರ್ಮ. ಆದರೆ, ಚಾಣಾಕ್ಷತೆಯಿದ್ದರೆ ಎದುರಾಳಿಗಳ ಮನ ಗೆಲ್ಲಲಾಗದಿದ್ದರೂ, ಅವರಿಂದ ಮೇಲುಗೈ ಸಾಧಿಸಬಹುದಲ್ಲವೇ?
ವೃತ್ತಿ ಜೀವನದಲ್ಲಿ ಉನ್ನತ ಮಟ್ಟಕ್ಕೇರಿದವರ ಬಗ್ಗೆ, ಪ್ರಸಿದ್ಧಿಗೆ ಬಂದವರ ಬಗ್ಗೆ ಸಹವರ್ತಿಗಳಲ್ಲಿ, ಕುಟುಂಬಿಕರಲ್ಲಿ, ನಾನೂ ಆ ಮಟ್ಟಕ್ಕೇರಲಿಲ್ಲವಲ್ಲಾ ಎಂದು ಹಲುಬುವವರು ಬಹಳಷ್ಟು ಮಂದಿ. ಯಾಕೆಂದರೆ ಹೊಟ್ಟೆ ಕಿಚ್ಚು, ಅಸೂಯೆ, ಮತ್ಸರ ಎಂಬಿತ್ಯಾದಿಗಳು ಮಾನವಸಹಜ ಗುಣಗಳು ಅಲ್ವಾ?
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ಣುಡಿ ಕೇಳಿದ್ದೀರಿ. ಇದು [...]<img alt="" border="0" src="http://stats.wordpress.com/b.gif?host=avisblog.wordpress.com&blog=154345&post=245&subd=avisblog&ref=&feed=1" />]]></description>
			<content:encoded><![CDATA[<div class='snap_preview'><br /><p>ಗಾಂಧಿಗಿರಿ ಬಗ್ಗೆ ಕೇಳಿದ್ದೀರಿ. ಎದುರಾಳಿಯನ್ನು ಮತ್ತು ವಿರೋಧಿಸುವವರನ್ನು ಪ್ರೀತಿಯಿಂದಲೇ ಗೆಲ್ಲುವುದು ಹೇಗೆಂಬುದು ಈ ಗಾಂಧಿಗಿರಿಯ ಹಿಂದಿನ ಮರ್ಮ. ಆದರೆ, ಚಾಣಾಕ್ಷತೆಯಿದ್ದರೆ ಎದುರಾಳಿಗಳ ಮನ ಗೆಲ್ಲಲಾಗದಿದ್ದರೂ, ಅವರಿಂದ ಮೇಲುಗೈ ಸಾಧಿಸಬಹುದಲ್ಲವೇ?</p>
<p>ವೃತ್ತಿ ಜೀವನದಲ್ಲಿ ಉನ್ನತ ಮಟ್ಟಕ್ಕೇರಿದವರ ಬಗ್ಗೆ, ಪ್ರಸಿದ್ಧಿಗೆ ಬಂದವರ ಬಗ್ಗೆ ಸಹವರ್ತಿಗಳಲ್ಲಿ, ಕುಟುಂಬಿಕರಲ್ಲಿ, ನಾನೂ ಆ ಮಟ್ಟಕ್ಕೇರಲಿಲ್ಲವಲ್ಲಾ ಎಂದು ಹಲುಬುವವರು ಬಹಳಷ್ಟು ಮಂದಿ. ಯಾಕೆಂದರೆ ಹೊಟ್ಟೆ ಕಿಚ್ಚು, ಅಸೂಯೆ, ಮತ್ಸರ ಎಂಬಿತ್ಯಾದಿಗಳು ಮಾನವಸಹಜ ಗುಣಗಳು ಅಲ್ವಾ?</p>
<p>ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ಣುಡಿ ಕೇಳಿದ್ದೀರಿ. ಇದು ನೆನಪಾದಾಗ ಅಕ್ಬರ-ಬೀರಬಲ್ಲರ ಕಥೆಯೊಂದು ಕೂಡ ನೆನಪಿಗೆ ಬರುತ್ತದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಓದಿ:</p>
<p>ಅಕ್ಬರನ ಆಸ್ಥಾನದಲ್ಲಿ ಬೀರಬಲ್‌ನ ಚಾಣಾಕ್ಷ ತಂತ್ರಗಳು ಸರ್ವ ವಿದಿತ. ಬೀರಬಲ್ಲನ ಸಿದ್ಧಿ-ಪ್ರಸಿದ್ಧಿಯನ್ನು ಸಹಿಸದೆ ಒಳಗಿಂದೊಳಗೆ ಕುದಿಯುತ್ತಿರುವವರಿಗೇನೂ ಕೊರತೆಯಿರಲಿಲ್ಲ. ದರ್ಬಾರಿನಲ್ಲಿದ್ದ ಮುಸ್ತಾಫನಿಗೂ ಬೀರಬಲ್ಲನನ್ನು ಕಂಡರೆ ಹೊಟ್ಟೆ ಕಿಚ್ಚು. ಆಸ್ಥಾನದಲ್ಲಿ ಅವನ ನಿರ್ಭಾವುಕ ಮುಖವು ಸ್ವತಃ ಅಕ್ಬರನಿಗೂ ಅಚ್ಚರಿ ತಂದಿತ್ತು. ಒಂದು ದಿನ ಆತ ಆಸ್ಥಾನದಲ್ಲಿ ಘೋಷಿಸಿದ. ಮುಸ್ತಾಫ ಏನು ಯೋಚಿಸುತ್ತಿದ್ದಾನೆ ಎಂಬುದನ್ನು ಹೇಳಿದವರಿಗೆ ಐನೂರು ವರಹಗಳನ್ನು ಬಹುಮಾನವಾಗಿ ನೀಡುತ್ತೇನೆ ಅಂತ.</p>
<p>ಊಹೂಂ, ಆಸ್ಥಾನ ವಿದ್ವಾಂಸರೆಲ್ಲರಿಗೂ ಇದು ಅಸಾಧ್ಯದ ಮಾತು. ಯಾರೂ ಉತ್ತರಿಸಲಾರದ್ದನ್ನು ಕಂಡು ಅಕ್ಬರನ ಮುಖ ಬಾಡುವಷ್ಟರಲ್ಲಿ, ಬೀರಬಲ್ಲ ಎದ್ದುನಿಂತ. ಬೀರಬಲ್ ಎದ್ದು ನಿಂತದ್ದು ನೋಡಿ ಮುಸ್ತಾಫನಿಗೆ ಖುಷಿಯೋ ಖುಷಿ. ಬೀರಬಲ್ ಏನು ಹೇಳುತ್ತಾನೋ, ಅದನ್ನು ನಿರಾಕರಿಸಿದರಾಯಿತು ಎಂದುಕೊಂಡು ಮುಖವನ್ನು ಮತ್ತಷ್ಟು ಗಂಟಿಕ್ಕಿಕೊಂಡ.</p>
<p>ಬೀರಬಲ್ ಹೇಳಿದ: &#8220;ಬಾದಷಾ, ಮುಸ್ತಾಫ ಏನು ಯೋಚಿಸ್ತಾನೆ ಎಂಬುದು ನನಗೊತ್ತಿದೆ&#8221; ಎಂದ.</p>
<p>ಇಡೀ ಆಸ್ಥಾನದಲ್ಲಿ ಕುತೂಹಲಭರಿತ ಮೌನ. ಎಲ್ಲರೂ ಬೀರಬಲ್ಲನನ್ನೇ ತದೇಕಚಿತ್ತರಿಂದ ನೋಡುವವರೆ. ಅವನನ್ನು ಕಂಡರೆ ಹೊಟ್ಟೆಯುರಿಯುತ್ತಿದ್ದವರೆಲ್ಲರೂ, ಈ ಬಾರಿ ಬೀರಬಲ್ಲನಿಗೆ ಸೋಲು ಕಾದಿದೆ ಎಂದೇ ಮನಸ್ಸಿನಲ್ಲಿ ಮಂಡಿಗೆ ಮೆಲ್ಲುತ್ತಿದ್ದರು.</p>
<p>ಆತ್ಮವಿಶ್ವಾಸದಿಂದ ದಿರಿಸು ಸರಿಪಡಿಸಿಕೊಳ್ಳುತ್ತಾ ಬೀರಬಲ್ಲ, &#8216;ಸ್ವಾಮಿನ್, ಇವನೇನೂ ಯೋಚಿಸ್ತಾನೆಂದರೆ&#8230;. ನೀವು ಯಾವತ್ತೂ ಆರೋಗ್ಯವಂತರಾಗಿ, ಸದಾ ಖುಷಿಯಿಂದಿರಬೇಕು. ಮತ್ತು ನೀವು ದೀರ್ಘಾಯುಷಿಯಾಗಬೇಕು ಎಂದು ಯೋಚಿಸುತ್ತಿದ್ದಾನೆ&#8217;!</p>
<p>ಇಡೀ ಸಭೆಯಲ್ಲಿ ವ್ಹಾ ವ್ಹಾ ಎಂಬ ಘೋಷಣೆಯೇ ಜೋರಾಗಿ ಕೇಳಿಬಂತು! ಮುಸ್ತಾಫನ ಮುಖವಂತೂ ತೀರಾ ಬಿಳಿಚಿಕೊಂಡಿತ್ತು, &#8220;ಇಲ್ಲ ಇಲ್ಲ, ಬೀರಬಲ್ ಹೇಳಿದ್ದು ಸುಳ್ಳು&#8221; ಎಂದು ಹೇಳೋಣವೆಂದು ಬಾಯ್ತೆರೆದು ನಿಂತಿದ್ದವನಿಗೆ ಬಾಯಿ ಕಟ್ಟಿಯೇ ಹೋಯಿತು.</p>
<p>&#8220;ಇ&#8230;ಇ&#8230; ಹೌದು ಸ್ವಾಮಿ, ಬೀರಬಲ್ ಸರಿಯಾಗಿಯೇ ಹೇಳಿದ್ದಾನೆ&#8221; ಎಂದುತ್ತರಿಸಿ, ಬೆವರೊರೆಸಿಕೊಳ್ಳುತ್ತಾ ಕೂತನವ. ಅಬ್ಬಾ, ಇಲ್ಲ ಎಂದುಬಿಟ್ಟರೆ, ನಾನು ಬಾದಶಹಾರ ಒಳಿತನ್ನೇ ಬಯಸುತ್ತಿರಲಿಲ್ಲ ಎಂದಾಗುತ್ತಿತ್ತಲ್ಲವೇ? ಎಂದು ನೆನಪಿಸಿಕೊಂಡ ಆತ ಥರಗುಟ್ಟಿಹೋಗಿದ್ದ.</p>
<p>ಅಕ್ಬರನಂತೂ ಬೀರಬಲ್ಲನ ಬುದ್ಧಿಮತ್ತೆಗೆ ವಂದಿಸಿದ. ಎಷ್ಟು ಚತುರತೆಯಿಂದ ಮುಸ್ತಾಫನನನ್ನು ಮಟ್ಟ ಹಾಕಿದನಲ್ಲ ಎಂದುಕೊಂಡ. ಆದರೂ, ಬೀರಬಲ್ಲನನ್ನು ಮತ್ತಷ್ಟು ಪರೀಕ್ಷಿಸಬೇಕೆನಿಸಿತು.</p>
<p>ಕೇಳಿದ: &#8220;ಹಾಗಿದ್ರೆ ಈಗ ಹೇಳು, ನಾನೇನು ಯೋಚಿಸುತ್ತಿದ್ದೇನೆ ಅಂತ&#8221;&#8230;</p>
<p>ಬೀರಬಲ್ಲ ಬಹುಶಃ ಇಂಥಹ ಪ್ರಶ್ನೆ ನಿರೀಕ್ಷಿಸಿದ್ದನೇನೋ&#8230; ಒಂದಿಷ್ಟೂ ವಿಚಲಿತನಾಗದೆ ಉತ್ತರಿಸಿದ:</p>
<p>&#8220;ಬಾದಶಹಾ, ಸ್ವರ್ಗ ಲೋಕದಲ್ಲಿರುವ ನಿಮ್ಮ ಎಲ್ಲಾ ಪಿತೃಗಳು ಆರಾಮವಾಗಿ ನೆಮ್ಮದಿಯ ಜೀವನ ಸವೆಸುತ್ತಿರಬೇಕೆಂದು ಯೋಚಿಸಿದ್ದೀರಲ್ಲಾ&#8221; ಎಂದು ಕೇಳಿಬಿಟ್ಟ.</p>
<p>ಅಕ್ಬರ್ ಮನಸ್ಸಿನಲ್ಲೇ ಶಹಭಾಸ್ ಎಂದುಕೊಂಡು ಮರು ಮಾತಾಡದೆ ಐನೂರು ವರಹಗಳನ್ನು ನೀಡಿದ.</p>
<p>ಮೌನವಾಗಿಯೇ ಕೆಲಸ ಸಾಧಿಸುವುದು ಹೀಗೆ! ಏನಂತೀರಿ?</p>
  <a rel="nofollow" href="http://feeds.wordpress.com/1.0/gocomments/avisblog.wordpress.com/245/"><img alt="" border="0" src="http://feeds.wordpress.com/1.0/comments/avisblog.wordpress.com/245/" /></a> <a rel="nofollow" href="http://feeds.wordpress.com/1.0/godelicious/avisblog.wordpress.com/245/"><img alt="" border="0" src="http://feeds.wordpress.com/1.0/delicious/avisblog.wordpress.com/245/" /></a> <a rel="nofollow" href="http://feeds.wordpress.com/1.0/gostumble/avisblog.wordpress.com/245/"><img alt="" border="0" src="http://feeds.wordpress.com/1.0/stumble/avisblog.wordpress.com/245/" /></a> <a rel="nofollow" href="http://feeds.wordpress.com/1.0/godigg/avisblog.wordpress.com/245/"><img alt="" border="0" src="http://feeds.wordpress.com/1.0/digg/avisblog.wordpress.com/245/" /></a> <a rel="nofollow" href="http://feeds.wordpress.com/1.0/goreddit/avisblog.wordpress.com/245/"><img alt="" border="0" src="http://feeds.wordpress.com/1.0/reddit/avisblog.wordpress.com/245/" /></a> <img alt="" border="0" src="http://stats.wordpress.com/b.gif?host=avisblog.wordpress.com&blog=154345&post=245&subd=avisblog&ref=&feed=1" /></div>]]></content:encoded>
			<wfw:commentRss>http://avisblog.wordpress.com/2009/06/10/%e0%b2%b5%e0%b2%bf%e0%b2%b0%e0%b3%8b%e0%b2%a7%e0%b2%bf%e0%b2%97%e0%b2%b3%e0%b2%a8%e0%b3%8d%e0%b2%a8%e0%b3%81-%e0%b2%a8%e0%b2%bf%e0%b2%b0%e0%b3%81%e0%b2%a4%e0%b3%8d%e0%b2%a4%e0%b2%b0%e0%b2%b0%e0%b2%be/feed/</wfw:commentRss>
		<slash:comments>6</slash:comments>
	
		<media:content url="http://0.gravatar.com/avatar/6afc94ff2f93257506a669cdaa575585?s=96&#38;d=wavatar" medium="image">
			<media:title type="html">avisblog</media:title>
		</media:content>
	</item>
	</channel>
</rss>